ಸೋಮವಾರ, ಏಪ್ರಿಲ್ 30, 2012

ಹೇಳಿದರೆ ಸಾಲದು, ಮಾಡಿ ತೋರಿಸಿ


ಸಮಾಜದೊಂದಿಗೆ ನಾವು ಹೇಳುವ ವಿಚಾರಗಳು ಯಶಸ್ವಿಯಾಗಬೇಕಾದರೆ, ಸಮಾಜದ ಮಂದಿ ಕಿವಿಗೊಟ್ಟು ಆಲಿಸಬೇಕಾದರೆ ಹಲವಾರು ನಿಬಂಧನೆಗಳ ನಿವ್ರಹಣೆಯು ಅನಿವಾರ್ಯವಾಗಿದೆ. ಅವುಗಳ ಪೈಕಿ ಮಾದರಿ ಜೀವನವು ಪ್ರಮುಖವಾದುದಾಗಿದೆ. ಓರ್ವನು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರುವುದಾದರೆ ಅವನ ಜೀವನವು ಉತ್ತಮವಾಗಿರಬೇಕು. ಅವನ ವರ್ತನೆಗಳು ಮಾದರಿ ಯೋಗ್ಯವಾಗಿರಬೇಕು. ಒಳಿತನ್ನು ಸ್ಥಾಪಿಸಲು ಬಯಸುವವನ ಜೀವನವು ಒಳಿತಿನಿಂದ ಕೂಡಿರಬೇಕು. ಸಮಾಜದಿಂದ ಕೆಡುಕನ್ನು ಅಳಿಸಲು ಹೊರಟವನ ಜೀವನವು ಕೆಡುಕುಗಳಿಂದ ಮುಕ್ತವಾಗಿರಬೇಕು. ಮಧ್ಯದ ಬಾಟಲಿಯನ್ನು ಜೇಬಲ್ಲಿರಿಸಿ ತನ್ನ ಶಿಷ್ಯರಿಗೆ ಮಧ್ಯಪಾನದ ಕೆಡುಕುಗಳನ್ನೂ, ಅದನ್ನು ಕುಡಿಯುವುದರಿಂದಾಗುವ ಅನಾಹುತಗಳನ್ನೂ ವಿವರಿಸಿ ಮುನ್ನೆಚ್ಚರಿಕೆ ನೀಡುವ ಅಧ್ಯಾಪಕನ ಕುರಿತೊಮ್ಮೆ ಆಲೋಚಿಸಿ ನೋಡಿ. ಇದು ಎಂತಹ ಅನರ್ಥವಾಗಿರಬಹುದು. ಇಂದು ಕೂಡಾ ನಡೆಯುತ್ತಿರುವುದು ಇದೇ ಆಗಿದೆ. ಜನರಿಗೆ ಉಪದೇಶ ನೀಡುವುದರಲ್ಲಿ ಸದಾ ಮುಂದಿರುವ ಕೆಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಆ ಯಾವುದೇ ಅಂಶಗಳು ಇರುವುದಿಲ್ಲ. ಸ್ವಂತ ಜೀವನವು ಕೆಡುಕಿನಿಂದ ಕೂಡಿದ್ದರೂ ಜನರಿಗೆ ಉಪದೇಶ ನೀಡುವುದರಲ್ಲಿ ಚುರುಕಾಗಿರುತ್ತಾರೆ.
ಈ ರೀತಿಯ ಜನರನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಕುರಾನ್   ಹೇಳುತ್ತದೆ. “ಓ ಸತ್ಯ ವಿಶ್ವಾಸಿಗಳೇ, ನೀವು ಮಾಡದ್ದನ್ನು ಆಡುತ್ತೀರೇಕೆ? ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಅತ್ಯಂತ ಅಪ್ರಿಯ ಕೃತ್ಯವಾಗಿದೆ.” (ಅಸ್ಸಫ್ಫ್  - 2,3) ಅದೇ ರೀತಿ ಸೂರಃ ಅಕರಾದ 44ನೇ ಸೂಕ್ತದಲ್ಲಿ ಅಲ್ಲಾಹನು ಕೇಳುತ್ತಾನೆ, “ನೀವು ಇತರರಿಗೆ ಸನ್ಮಾರ್ಗವನ್ನನುಸರಿಸಲು ಉಪದೇಶ ನೀಡುತ್ತೀರಿ. ಆದರೆ ನಿಮ್ಮನ್ನು ನೀವು ಮರೆತು ಬಿಡುತ್ತೀರಾ? ವಸ್ತುತಃ ನೀವು ದಿವ್ಯ ಗ್ರಂಥವನ್ನು ಪಠಿಸುತ್ತೀರಿ. ನೀವು ಒಂದಿಷ್ಟೂ ಯೋಚಿಸುವುದಿಲ್ಲವೇ?”
ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದ ವಿಚಾರಗಳನ್ನು ಇತರರಿಗೆ ಬೋಧಿಸುವುದು ಅಲ್ಲಾಹನಿಗೆ ಕೋಪ ಬರಿಸುವ ಕೆಲಸವಾಗಿದೆ. ಉಳಿದ ಬೆರಳುಗಳು ನಮ್ಮನ್ನೇ ಬೆಟ್ಟು ಮಾಡುತ್ತಿವೆ ಎಂಬ ಪ್ರಜ್ಞೆ ಇರಬೇಕು. ಇತರರ ತಪ್ಪಿಗೆ ಬೆರಳು ತೋರಿಸುವಾಗ ಇಂಥವರ ಸ್ಥಿತಿಯು ನಾಳೆ ಪರಲೋಕದಲ್ಲಿ ಹೇಗಿರುತ್ತದೆ ಎಂದು ಪ್ರವಾದಿಯವರು(ಸ) ತಿಳಿಸಿರುತ್ತಾರೆ. “ಅಂತ್ಯ ದಿನದಲ್ಲಿ ಓರ್ವನನ್ನು ತರಲಾಗುವುದು. ಬಳಿಕ ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳು ಹೊರ ಬೀಳುತ್ತದೆ. ಕತ್ತೆ ಗಾಣಕ್ಕೆ ಸುತ್ತುವಂತೆ ಅವನು ಆ ಕರುಳಿನೊಂದಿಗೆ ಸುತ್ತುವನು. ಆ ವೇಳೆ ಅವನ ಬಳಿ ನರಕ ವಾಸಿಗಳು ಸೇರುವರು. ಬಳಿಕ ಅವರು ಕೇಳುವರು. “ಓ ಮನುಜ, ನಿನಗೇನು ಸಂಭವಿಸಿದೆ. ನೀನು ನಮಗೆ ಒಳಿತನ್ನು ಬೋಧಿಸುತ್ತಿರಲಿಲ್ಲವೇ! ಕೆಡುಕನ್ನು ತಡೆಯುತ್ತಿದ್ದಿರಲ್ಲವೇ?” ಆಗ ಅವನು ಹೇಳುವನು, “ಹೌದು, ನಾನು ನಿಮಗೆ ಒಳಿತನ್ನು ಉಪದೇಶಿಸುತ್ತಿದ್ದೆನು. ಆದರೆ ಅದರಂತೆ ನಾನು ಜೀವನ ನಡೆಸಲಿಲ್ಲ. ನಿಮ್ಮನ್ನು ನಾನು ಕೆಡುಕಿನಿಂದ ತಡೆಯುತ್ತಿದ್ದೆ. ಆದರೆ ಆ ಕೆಡುಕನ್ನು ನಾನು ಮಾಡುತ್ತಿದ್ದೆ. (ಬುಖಾರಿ, ಮುಸ್ಲಿಮ್)
ಓವ್ರ ಧಮ್ರ ಪ್ರಚಾರಕನಲ್ಲಿ ಜನರು ಇಷ್ಟಪಡುವಂತಹ ಹಲವಾರು ಗುಣಗಳಿರಬೇಕು. ಉತ್ತಮ ಸ್ವಭಾವ, ಚಾರಿತ್ರ್ಯ, ಸತ್ಯಸಂಧತೆ, ಕರುಣೆ, ಸಹನೆ, ಸಮಾಜ ಸೇವೆಯ ಗುಣ, ತ್ಯಾಗ, ಹೃದಯ ವೈಶಾಲ್ಯತೆ, ದೇವಭಯ ವೊದಲಾದ ಗುಣಗಳು ಜನರಲ್ಲಿ ಪ್ರಭಾವ ಬೀರುತ್ತವೆ. ನಾವು ಹೇಳುವ, ಉಪದೇಶಿಸುವ ವಿಚಾರಗಳನ್ನು ಜನರು ಆಲಿಸಬೇಕಾದರೆ ಈ ಎಲ್ಲಾ ಗುಣಗಳು ನಮ್ಮಲ್ಲಿರಬೇಕಾದುದು ಅನಿವಾಯ್ರವಾಗಿದೆ. ಓವ್ರನು ಜನರಿಗೆ ಉಪದೇಶ ಮಾಡುವಾಗ ಆ ವಿಚಾರವು ಅವನ ಜೀವನದಲ್ಲಿದೆಯೇ ಎಂದು ನೋಡುವುದು ಇಂದಿನ ಜನರ ಮನಸ್ಥಿತಿಯಾಗಿದೆ. ಧರ್ಮ ಪ್ರಚಾರಕನು ಇತರರಿಗೆ ಮಾದರಿಯಾದಾಗ ಮಾತ್ರ ಜನರು ಅವನನ್ನು ಅನುಸರಿಸಲು ಮುಂದಾಗುತ್ತಾರೆ. “ನೀನು ವೊದಲು ಸರಿಯಾಗು. ಬಳಿಕ ನಮಗೆ ಉಪದೇಶ ಮಾಡು” ಎಂದು ಹೇಳಲು ಜನರಿಗೆ ಅವಕಾಶ ನೀಡಬಾರದು. ಪ್ರವಾದಿಯವರ(ಸ) ಕಾಲದಲ್ಲಿ, ಅವತೀರ್ಣ ಗೊಳ್ಳುವ ಕುರಾನ್ ಸೂಕ್ತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿದ ನಂತರವೇ ಸಹಾಬಿಗಳು ಅದನ್ನು ಜನರಿಗೆ ಉಪದೇಶಿಸುತ್ತಿದ್ದರು. ಅವರು ಒಳಿತುಗಳನ್ನು ಮಾಡಿ ತೋರಿಸಿ ಜನರಿಗೆ ಮಾದರಿಯಾಗುತ್ತಿದ್ದರು. ಇಂತಹ ಗುಣಗಳಿಂದಾಗಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳು ಅನಾಗರಿಕ ಅರಬರನ್ನು ಒಂದು ಉತ್ತಮ, ಶ್ರೇಷ್ಠ ಸಂಸ್ಕ್ರತಿಯ ಮನುಷ್ಯರನ್ನಾಗಿ ಮಾರ್ಪಡಿಸಿದರು. ಜೀವನದ ನೈಜ ಗುರಿಯನ್ನು ಅವರಿಗೆ ಮನಗಾಣಿಸಿದರು. ದೊಡ್ಡ ದೊಡ್ಡ ಭಾಷಣ, ಹಾಳೆಗಟ್ಟಲೆ ಲೇಖನಮಾಲೆ, ಅತ್ಯಾಧುನಿಕ ಆಯುಧಗಳು ನಿರ್ವಹಿಸಲು ಸಾಧ್ಯವಾಗದ್ದನ್ನು ಹೃದಯದ ಅಂತರಾಳದಿಂದ ಬರುವ ಒಂದು ಮುಗುಳ್ನಗೆಯು ಸಾಧಿಸಬಹುದು. ಈ ಒಂದು ಆಯುಧವು ಎಂತಹ ಜನರನ್ನು ಮಂತ್ರ ಮುಗ್ಧರನ್ನಾಗಿಸುವ ಶಕ್ತಿ ಹೊಂದಿದೆ. ಇಂತಹ ಹಲವು ಘಟನೆಗಳಿಗೆ ಇತಿಹಾಸವು ಮೂಕ ಸಾಕ್ಷಿಯಾಗಿದೆ.
ಧಮ್ರ ಪ್ರಚಾರಕನಲ್ಲಿ ಸ್ವಾರ್ತತೆ, ಕಪಟತನ, ವಂಚನೆ, ವಿಶ್ವಾಸ ದ್ರೋಹ ವೊದಲಾದ ದುರ್ಗುಣ ಗಳಿದ್ದರೆ ಅವನ ಮಾತಿಗೆ ಸಮಾಜದಲ್ಲಿ ಯಾವುದೇ ಬೆಲೆ ಇರುವುದಿಲ್ಲ. ಅವನ ಮಾತಿಗೆ ಜನರು ಎದುರಾಡಲು ಪ್ರಾರಂಭಿಸುತ್ತಾರೆ. ಮಾತ್ರವಲ್ಲ ಇಂತಹ ಜನರ ದುಷ್ಟ ಮುಖವನ್ನು ಜನರು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಹೇಸುವುದಿಲ್ಲ. ಧರ್ಮ  ಪ್ರಚಾರಕ ಕೊನೆಗೆ ಮುಖ ಭಂಗ ಅನುಭವಿಸುತ್ತಾರೆ.
ಮಾಲಿಕ್ ಬಿನ್ ದೀನಾರ್, ಶರಫ್ ಬಿನ್ ಮಾಲಿಕ್, ಮಾಲಿಕ್ ಬಿನ್ ಹಬೀಬ್ ವೊದಲಾದ ಶ್ರೇಷ್ಠರು ಭಾರತದಲ್ಲಿ ಇಸ್ಲಾಮನ್ನು ಪ್ರಚಾರ ಪಡಿಸಿದರು. ಅವರ ಧರ್ಮ  ಪ್ರಚಾರದಿಂದಾಗಿ ಹಲವರು ಇಸ್ಲಾಮ್ ಸ್ವೀಕಾರ ಮಾಡಿದರು. ಕೇವಲ ಅರಬಿ ಭಾಷೆ ಮಾತ್ರ ತಿಳಿದಿರುವ ಇವರಿಂದ ಇಲ್ಲಿನ ಜನರು ಇಸ್ಲಾಮನ್ನು ಹೇಗೆ ಕಲಿತುಕೊಂಡರು? ಅವರು ಇಲ್ಲಿ ಬಂದು ಗಂಟೆಗಟ್ಟಲೆ ಭಾಷಣ ಮಾಡಲಿಲ್ಲ,ಪುಟಗಟ್ಟಲೆ ಲೇಖನಗಳನ್ನು ಬರೆಯಲಿಲ್ಲ. ಇಂದು ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಮಾಧ್ಯಮಗಳನ್ನು ಬಳಸಿಕೊಳ್ಳಲಿಲ್ಲ. ಹಾಗಾದರೆ ಜನರು ಹೇಗೆ ಸತ್ಯಧರ್ಮಕ್ಕೆ ಆಗಮಿಸಿದರು? ಅವರ ವರ್ತನೆಯಿಂದಲೂ ಸ್ವಭಾವದಿಂದಲೂ ಜನರು ಸತ್ಯವನ್ನು ಅರಿತರು ಎಂಬುದು ಇತಿಹಾಸದತ್ತ ಕಣ್ಣೋಡಿಸಿದರೆ ಮನದಟ್ಟಾಗಬಹುದು. ಜನರ ಸಾಮಾನ್ಯ ಜೀವನ ಶೈಲಿಗಿಂತ ಭಿನ್ನವಾಗಿ ಅವರ ಜೀವನ ಶೈಲಿಯು ಗೋಚರವಾಯಿತು. ಅವರ ನಿಷ್ಕಳಂಕ ಪ್ರಾಮಾಣಿಕ ಜೀವ ಶೈಲಿಯು ಜನರನ್ನು ಆಕಷ್ರಿಸಿತು. ಇದು ಜನರಿಗೆ ಇಸ್ಲಾಮ್ ಸ್ವೀಕರಿಸಲು ಪ್ರೇರಕವಾಯಿತು.
ಖ್ಯಾತ ವಿದ್ವಾಂಸರೂ ಲೇಖಕರೂ ಆದ ಶೈಕ್ ಮುಹಮ್ಮದ್ ಹಸನ್ “ನಾಯಕತ್ವದ ಗೊಂದಲಗಳು ಮತ್ತು ಪರಿಹಾರ” ಎಂಬ ತನ್ನ ಗ್ರಂಥದಲ್ಲಿ ಈ ರೀತಿ ಬರೆಯುತ್ತಾರೆ. “ಅನುಯಾಯಿಗಳು ತಮ್ಮ ನಾಯಕರನ್ನು ಗೌರವದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಅವರು ನಾಯಕರಿಂದ ಬಯಸುವುದು ಉತ್ತಮ ಮಾದರಿಯನ್ನಾಗಿದೆ. ಚಿಂತನೆ, ಸ್ವಭಾವ,ವರ್ತನೆ ವೊದಲಾದವುಗಳಲ್ಲಿ ಮಾದರಿಯು ಅವರ ಬಯಕೆಯಾಗಿದೆ. ಆದರೆ ಜನರ   ಆಕಾಂಕ್ಷೆಗಳಿಗೆ ವಿರುದ್ಧವಾಗಿ ನಾಯಕರು ವರ್ತಿಸುವುದಾದರೆ ಜನರನ್ನು ನಿರಾಶೆಯು ಆವರಿಸುತ್ತದೆ. ಅದು ಕೆಲವರಲ್ಲಿ ನಿಷ್ಕ್ರಿಯತೆಯನ್ನು ಉಂಟು ಮಾಡಿದರೆ ಇನ್ನು ಕೆಲವರನ್ನು ಸಂಘಟನೆಯಿಂದಲೇ ದೂರ ಸರಿಸುತ್ತದೆ.”
ಓರ್ವ ಧರ್ಮ  ಪ್ರಚಾರಕನಿಗೆ ಹಲವಾರು ಒತ್ತಡಗಳು, ಸಮಸ್ಯೆಗಳು ಎದುರಾಗಬಹುದು. ಈ ರಂಗವು ಐಶಾರಾಮದ ರಂಗವಲ್ಲ. ಈ ರಂಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಖಂಡಿತವಾಗಿಯೂ ಲಭಿಸುತ್ತದೆ. ಧರ್ಮ  ಪ್ರಚಾರದ ರಂಗದಲ್ಲಿ ಸಹನೆಯು ಅತಿ ಪ್ರಧಾನವಾಗಿದೆ. ಜನರನ್ನು ಧಮ್ರಕ್ಕೆ ಆಹ್ವಾನಿಸುವಾಗ ಅವರು ಬರುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಅಥವಾ ಅವರ ಕೆಡುಕುಗಳಲ್ಲಿ ತಾವು ಕೂಡಾ ಭಾಗಿಯಾಗುವಂತಿಲ್ಲ. ಇಂದು ಜನರನ್ನು ಕೆಡುಕುಗಳಿಂದ ತಡೆಯಲು ಪ್ರಯತ್ನಿಸಿ ಅವರು ಅದರಿಂದ ಹಿಂದೆ ಸರಿಯದಿದ್ದರೆ ತಡೆದವರು ನಿರಾಶರಾಗಿ ಆ ಜನರೊಂದಿಗೆ ಸೇರಿಕೊಳ್ಳುವ ಘಟನೆಗಳು ನಡೆಯುತ್ತಿವೆ. ಆದರೆ ಇದು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಂತಹ ಕೆಲಸವಾಗಿದೆ.
ಪ್ರವಾದಿಯವರು(ಸ) ಹೇಳಿದರು, “ಇಸ್ರಾಈಲ್ ಸಂತತಿಗಳು ದೇವಧಿಕ್ಕಾರ ಪ್ರದರ್ಶಿಸಲು ಪ್ರಾರಂಭಿಸಿದಾಗ ಅವರ ವಿದ್ವಾಂಸರು ಅವರನ್ನು ಅದರಿಂದ ತಡೆದರು. ಆದರೆ ಜನರು ಅದರಿಂದ ಹಿಂದೆ ಸರಿಯಲಿಲ್ಲ. ಆಗ ಆ ವಿದ್ವಾಂಸರು ಅವರ ವೇದಿಕೆಗಳಲ್ಲಿ ಕುಳಿತುಕೊಳ್ಳ ತೊಡಗಿದರು ಮತ್ತು ಅವರೊಂದಿಗೆ ತಿನ್ನಲು, ಕುಡಿಯಲು ಪ್ರಾರಂಭಿಸಿದರು. ಆದ್ದರಿಂದ ಅಲ್ಲಾಹನು ಅವರೆಲ್ಲರ ಹೃದಯಗಳನ್ನು ಕಲ್ಲಾಗಿಸಿದನು. ಬಳಿಕ ದಾವೂದ್(ಅ) ಮತ್ತು ಈಸಾರ(ಅ) ನಾಲಗೆಯಿಂದ ಅವರನ್ನು ಶಪಿಸಿದನು. ಅವರು ತಪ್ಪೆಸಗಿದ ಹಾಗೂ ಅಲ್ಲಾಹನ ಆಜ್ನೋಲ್ಲಂಘನೆ ಮಾಡಿದುದರ ಪರಿಣಾಮವಾಗಿ ಈ ಶಾಪವು ಅವರ ಮೇಲೆರಗಿತು. (ವರದಿಗಾರರು ಹೇಳುತ್ತಾರೆ) ಆಗ ಪ್ರವಾದಿಯವರು(ಸ) ಒರಗಿ ಕುಳಿತಿದ್ದರು. ಅವರು ನೇರವಾಗಿ ಕುಳಿತು ಹೇಳಿದರು. “ನನ್ನ ಆತ್ಮವು ಯಾರ ಕೈಯಲ್ಲಿರುವುದೋ ಅವನಾಣೆ! ಖಂಡಿತವಾಗಿಯೂ ನೀವು ಒಳಿತನ್ನು ಸಂಸ್ಥಾಪಿಸಬೇಕು ಮತ್ತು ಕೆಡುಕನ್ನು ವಿರೋಧಿಸಬೇಕು. ನೀವು ಅಕ್ರಮಿಯ ಕೈ ಹಿಡಿದು ಅವನನ್ನು ಸತ್ಯಕ್ಕೆ ಮುನ್ನಡೆಸಬೇಕು. ಇಲ್ಲದಿದ್ದರೆ ನಿಮ್ಮೆಲ್ಲರ ಹೃದಯಗಳನ್ನು ಅಲ್ಲಾಹನು ಕಲ್ಲಾಗಿಸುವನು. ಬಳಿಕ ಅಲ್ಲಾಹನು ಅವರನ್ನು ನಾಶಪಡಿಸಿದಂತೆ ನಿಮ್ಮನ್ನೂ ನಾಶ ಪಡಿಸುವನು.”
ಆದ್ದರಿಂದ ನಾವು ಧರ್ಮ  ಪ್ರಚಾರದ ರಂಗಕ್ಕಿಳಿಯುವಾಗ ನಾವು ನಮ್ಮನ್ನೇ ಸಂಸ್ಕರಿಸಿಕೊಳ್ಳಬೇಕು. ಆ ಬಳಿಕವೇ ಜನರಿಗೆ ಉಪದೇಶ ನೀಡಬೇಕು. ನಮ್ಮ ಜೀವನವು ಹೊಲಸಾಗಿ ಇತರರಿಗೆ ಮಾತ್ರ ಒಳಿತನ್ನು ಉಪದೇಶಿಸುವಂತಾಗಬಾರದು. ನಮ್ಮ ಧಮ್ರ ಪ್ರಚಾರ ಕಾರ್ಯಗಳಿಂದಾಗಿ ಜನರು ಸನ್ಮಾರ್ಗಕ್ಕೆ ಬರಬೇಕೇ ಹೊರತು ಅದರಿಂದ ವಿಮುಖರಾಗುವಂತಾಗಬಾರದು.

ಸೋಮವಾರ, ಏಪ್ರಿಲ್ 23, 2012

ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದರಾದೀತೇ?


ಕುರ್ಆನ್ ಮಾನವ ಕುಲದ ಮಾರ್ಗದರ್ಶನಕ್ಕೆ ಬಂದಂತಹ ಗ್ರಂಥವಾಗಿದೆ. ಕಷ್ಟ ಅನುಭವಿಸುವ ಮನುಷ್ಯರಿಗೆ ಸಾಂತ್ವನದ ಸೆಲೆಯಾಗಿ ಅಂತಿಮ ಪ್ರವಾದಿ ಮುಹಮ್ಮದರವರ(ಸ) ಮೂಲಕ ಅವತೀಣ್ರಗೊಂಡಿತು. ಕುರ್ಆನ್ ಮನುಷ್ಯರ ಎಲ್ಲಾ ಸಮಸ್ಯೆಗಳಿಗೆ ಬೆಳಕು ಚೆಲ್ಲಿದೆ. ಕುರ್ಆನ್ ಕೇವಲ ಮುಸ್ಲಿಮರಿಗಾಗಿ ಅವತೀಣ್ರಗೊಂಡ ಗ್ರಂಥವಲ್ಲ. ಅದು ಸಕಲ ಮಾನವ ಕೋಟಿಗೆ ಮಾರ್ಗದರ್ಶಿಯಾಗಿದೆ. ಕುರ್ಆನ್ ಪಾರಾಯಣ ಮಾಡುವಾಗ ಅದರ ಪ್ರತೀ ಅಕ್ಷರಕ್ಕೂ ಪ್ರತಿಫಲವಿದೆ. ಕುರ್ಆನನ್ನು ಕಲಿತು ಅದರ ಪ್ರಕಾರ ಜೀವನವನ್ನು ಸಂಸ್ಕರಿಸಿಕೊಂಡವರಿಗೆ ನಾಳೆ ಪರಲೋಕದಲ್ಲಿ ಶ್ರೇಷ್ಠ ಪ್ರತಿಫಲವಿದೆ.
ಅಲ್ಲಾಹನ ವಚನಗಳಾದ ಈ ಕುರ್ಆನನ್ನು ಸೂಕ್ತ ರೀತಿಯಲ್ಲಿ ಗೌರವಿಸುವುದು ಕುರ್ಆನಿನೊಂದಿಗಿನ ವಿಶ್ವಾಸಿಗಳ ಪ್ರಥಮ ಹೊಣೆಗಾರಿಕೆಯಾಗಿದೆ. ಆ ಕುರ್ಆನನ್ನು ಓದುವುದು ಮತ್ತು ಅದನ್ನು ಇತರರಿಗೆ ಕಲಿಸುವುದು ಪ್ರತಿಫಲಾಹ್ರ ಕಮ್ರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ನಿಮ್ಮಲ್ಲಿ ಅತ್ಯಂತ ಶ್ರೇಷ್ಠರು ಕುರ್ಆನನ್ನು ಕಲಿಯುವವರು ಮತ್ತು ಅದನ್ನು ಇತರರಿಗೆ ಕಲಿಸುವವರಾಗಿದ್ದಾರೆ.” ಅಬೂ ಹುರೈರ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ. “ಯಾರಾದರೂ ಅಲ್ಲಾಹನ ಭವನದಲ್ಲಿ ಒಟ್ಟು ಸೇರಿ ದೈವಿಕ ಗ್ರಂಥವನ್ನು ಪಾರಾಯಣ ಮಾಡಿ  ಚರ್ಚೆ ನಡೆಸಿ ಅಧ್ಯಯನ ನಡೆಸಿದರೆ ಅವರ ಮೇಲೆ ಅಲ್ಲಾಹನ ಕರುಣೆ ಮತ್ತು ಶಾಂತಿಯುವರ್ಷಿಸುವುದು. ಮಲಕ್ ಗಳು  ಅವರನ್ನು ಸುತ್ತುವರಿದಿರುವರು. ಅಲ್ಲಾಹನು ತನ್ನ ಬಳಿ ಇರುವವರೊಂದಿಗೆ ಅವರ ಕುರಿತು ಹೊಗಳುವನು.” ಅದೇ ರೀತಿ ಕುರ್ಆನ್ ಪಾರಾಯಣ ನಡೆಸಲ್ಪಡುವ ಮನೆಗಳಲ್ಲಿ ಅಲ್ಲಾಹನ ಅನುಗ್ರಹಗಳು ತುಂಬುತ್ತವೆ ಮತ್ತು ಪಿಶಾಚಿಗಳು ಅಲ್ಲಿಂದ ಓಡಿ ಹೋಗುತ್ತವೆ ಎಂದು ಬುಖಾರಿ, ಮುಸ್ಲಿಮ್ ಹದೀಸ್ ಗ್ರಂಥಗಳಲ್ಲಿ ಬಂದಿದೆ.
ಕುರ್ಆನ್ ಪಾರಾಯಣದಂತೆ ಅದನ್ನು ಕಂಠಪಾಠ ಮಾಡುವುದು ಸಹ ಶ್ರೇಷ್ಠ ಹಾಗೂ ಪುಣ್ಯದಾಯಕ ಕೆಲಸವಾಗಿದೆ. ಹೃದಯದಲ್ಲಿ ಅಲ್ಪವಾದರೂ ಕುರ್ಆನ್ ಇಲ್ಲದವರನ್ನು ಪ್ರವಾದಿಯವರು(ಸ) ಧ್ವಂಸಗೊಂಡ ಜನವಾಸವಿಲದ ಮನೆಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು. “ಕುರ್ಆನಿನ ಯಾವುದೇ ಅಂಶವು ಹೃದಯದಲ್ಲಿಲ್ಲ್ಲದವರು ಶೂನ್ಯವಾದ ಭವನಕ್ಕೆ ಸಮಾನವಾಗಿದ್ದಾರೆ.” ಜನವಾಸವಲ್ಲದ ಶೂನ್ಯ ಭವನವು ಕಸಕಡ್ಡಿ, ಧೂಳಿನಿಂದ ತುಂಬಿರುತ್ತದೆ. ಅಲ್ಲಿ ಸ್ವಚ್ಛತೆ ಇರುವುದಿಲ್ಲ. ಹಲವು ಜಂತುಗಳು ಅಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ಹೃದಯದಲ್ಲಿ ಕೂಡಾ ಕುರ್ಆನ್ ಇಲ್ಲದಿದ್ದರೆ ಕೆಡುಕುಗಳು ಮನೆಮಾಡಿಕೊಳ್ಳುತ್ತವೆ. ಅವನ ಜೀವನವೇ ನೆಮ್ಮದಿ ರಹಿತವಾಗುತ್ತದೆ. ಆದ್ದರಿಂದ ಕುರ್ಆನನ್ನು ಹೃದ್ಯಸ್ತಗೊಳಿಸಬೇಕು. ಅನಸ್ ಬಿನ್ ಮಾಲಿಕ್(ರ) ವರದಿ ಮಾಡುತ್ತಾರೆ, ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನಿಗೆ ಪ್ರೀತಿ ಪಾತ್ರರಾದ ಕೆಲವರಿದ್ದಾರೆ.” ಆಗ ಸಹಾಬಿಗಳು ಕೇಳಿದರು, “ಪ್ರವಾದಿಯವರೇ(ಅ) ಅವರು ಯಾರು?” ಆಗ ಪ್ರವಾದಿಯವರು(ಸ) ಹೇಳಿದರು, “ಅವರು ಕುರ್ಆನಿನವರಾಗಿದ್ದಾರೆ. ಅಲ್ಲಾಹನು ಪ್ರತ್ಯೇಕ ಪರಿಗಣನೆ ನೀಡುವುದು ಅವರಿಗಾಗಿದೆ.”
ಕುರ್ಆನನ್ನು ಕೇವಲ ಪಾರಾಯಣ ಮಾಡಿದರೆ ಸಾಲದು. ನಿಯಮ ನಿದ್ರೇಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುರ್ಆನ್ ನೀಡಿರುವ ಆಜ್ಞೆಗಳು, ಆದೇಶಗಳು, ಸಲಹೆಗಳು ಕೇವಲ ಅದರ ಹಾಳೆಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರವಾದಿಯವರ(ಸ) ಕಾಲದಲ್ಲಿ ಸಹಾಬಿಗಳು ಕುರ್ಆನಿನ ಸೂಕ್ತಗಳನ್ನು ಕಲಿತಾಗ ಅದನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದಿನ ಸೂಕ್ತವನ್ನು ಕಲಿಯುತ್ತಿದ್ದರು. ಆದ್ದರಿಂದಲೇ ಅವರ ಜೀವನವು ಕುರ್ಆನಿನ ಪ್ರಕಾರವಾಗಿತ್ತು. ಅಬ್ದುಲ್ಲಾ ಬಿನ್ ಮಸ್ಊದ್(ರ) ವರದಿ ಮಾಡಿದ್ದಾರೆ. “ನಾವು ಪ್ರವಾದಿವಯವರಿಂದ(ಸ) 10 ಸೂಕ್ತಗಳನ್ನು ಕಲಿತು ಅದರಲ್ಲಿರುವ ಕಮ್ರಗಳನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದೆ ಅವತೀಣ್ರಗೊಳ್ಳುವ ಹತ್ತು ಸೂಕ್ತಗಳನ್ನು ಕಲಿಯುತ್ತಿದ್ದೇವು.” ಇನ್ನೊಮ್ಮೆ ಅವರು ಹೀಗೆ ಹೇಳಿದರು, “ಕುರ್ಆನ್ ಅವತೀಣ್ರಗೊಂಡಿರುವುದು ಜನರು ಅದರನುಸಾರ ಜೀವಿಸುವುದಕ್ಕಾಗಿದೆ. ಆದರೆ ಜನರು ಅದರ ಪಾರಾಯಣವನ್ನೇ ಒಂದು ಕೆಲಸವಾಗಿ ಸ್ವೀಕರಿಸಿದ್ದಾರೆ. ನೀವು ಕುರ್ಆನನ್ನು ಒಂದು ಅಕ್ಷರವೂ ತಪ್ಪಿಲ್ಲದೆ ಪೂರ್ತಿಯಾಗಿ ಓದಿ ಮುಗಿಸುತ್ತೀರಿ. ಆದರೆ ಅದಕ್ಕನುಸಾರವಾಗಿ ಜೀವಿಸಲು ತಯಾರಾಗುತ್ತಿಲ್ಲ.”
ಇದೊಂದು ವಾಸ್ತವಿಕತೆಯಾಗಿದೆ. ಇಂದು ಕುರ್ಆನ್ ಪಾರಾಯಣವನ್ನು ಒಂದು ಕಸುಬಾಗಿ ಸ್ವೀಕರಿಸಿದವರಿದ್ದಾರೆ. ಮರಣ ಹೊಂದಿದ ಶ್ರೀಮಂತರ ಗೋರಿಯ ಮೇಲೆ ನಿರಂತರವಾಗಿ ಹಲವು ದಿನಗಳ ವರಗೆ ಕುರ್ಅನ್ ಪಾರಾಯಣ ಮಾಡಿಸಲಾಗುತ್ತದೆ. ಇಂತಹ ಪಾರಾಯಣಕ್ಕಾಗಿಯೇ ಕಾದು ನಿಂತ ಹಲವರಿದ್ದಾರೆ. ಇವರ ಕಸುಬು ಕುರ್ಆನ್ ಪಾರಾಯಣವಾಗಿರುತ್ತದೆ. ಹೀಗೆ ಕುರ್ಆನ್ ಪಾರಾಯಣ ನಡೆಸಿ ಐಹಿಕ ಪ್ರತಿಫಲ ಲಭಿಸಬಹುದೇ ಹೊರತು ಪರಲೋಕದಲ್ಲಿ ಪ್ರತಿಫಲವು ಶೂನ್ಯವಾಗಿರುತ್ತದೆ.
ಕುರ್ಆನ್ ಸ್ವತಃ ಕಲಿತು ಇತರರನ್ನು ಕಲಿಯಲು ಪ್ರೇರೇಪಿಸಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಐಹಿಕ ಲಾಭಕ್ಕಾಗಿ ಶಿಕ್ಷಣ ನೀಡಬಾರದು. ಧಾಮ್ರಿಕ ಮಹತ್ವ ನೀಡಬೇಕು. ಧಾಮ್ರಿಕತೆಯ ಗಂಧಗಾಳಿಯೂ ಸೋಕದೆ ಕೇವಲ ಭೌತಿಕ ಶಿಕ್ಷಣ ಪಡೆದವರ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಧಾಮ್ರಿಕ ಶಿಕ್ಷಣದ ಅನಿವಾಯ್ರತೆಯು ಮನದಟ್ಟಾಗಬಹುದು. ಇಂದು ವೈದ್ಯನು ರೋಗಿಗಳ ಕಿಡ್ನಿ ತೆಗೆದು ವ್ಯಾಪಾರ ಮಾಡುವ ಘಟನೆಗಳು ನಡೆಯುತ್ತವೆ. ಅಧ್ಯಾಪಕನು ವಿದ್ಯಾಥ್ರಿನಿಯರಿಗೆ ಶಾರೀರಿಕ ಕಿರುಕುಳ ನೀಡುವ ಕೃತ್ಯಗಳು ನಡೆಯುತ್ತವೆ. ವಿದ್ಯಾವಂತರಾಗಿ ದೊಡ್ಡ ದೊಡ್ಡ ನೌಕರಿಯಲ್ಲಿರುವವರು ತಮ್ಮ ಮುದಿ ತಂದೆ-ತಾಯಿಗಳನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇವೆಲ್ಲವೂ ನಡೆಯುತ್ತಿರುವುದು ಧಾಮ್ರಿಕ ಪ್ರಜ್ಞೆಯ ಕೊರತೆಯಿಂದಾಗಿದೆ. ಧಾಮ್ರಿಕ ಶಿಕ್ಷಣದ ಬಲವಿಲ್ಲದೆ ಕೇವಲ ಭೌತಿಕ ಶಿಕ್ಷಣವನ್ನು ಪಡೆದುದರ ಫಲವಾಗಿದೆ.
ಹೆತ್ತವರು ತಮ್ಮ ಮಕ್ಕಳಿಗೆ ಕುರ್ಆನನ್ನು ಕಲಿಸಬೇಕು. ಅದರ ಪ್ರಕಾರ ಜೀವಿಸಲು ಪ್ರಾಯೋಗಿಕವಾಗಿ ತೋರಿಸಬೇಕು. ಮಕ್ಕಳು ಕುರ್ಆನ್ ಕಲಿತರೆ ಅದರ ಪ್ರತಿಫಲವು ಕೇವಲ ಮಕ್ಕಳಿಗೆ ಮಾತ್ರ ಸಿಗುವುದಲ್ಲ. ಬದಲಾಗಿ ಹೆತ್ತವರಿಗೂ ಸಿಗುತ್ತದೆ. ಬುರೈದಾ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಓರ್ವ ನು ಕುರ್ಆನನ್ನು ಓದಿ ಕಲಿತು ಅದರನುಸಾರ ಜೀವನ ನಡೆಸಿದರೆ ಅಂತ್ಯದಿನದಲ್ಲಿ ಸೂರ್ಯ ನಂತೆ ಪ್ರಕಾಶಿಸುವ ಒಂದು ಕಿರೀಟವನ್ನು ಅವನಿಗೆ ತೊಡಿಸಲಾಗುವುದು. ಅವನ ಹೆತ್ತವರಿಗೆ ಎರಡು ಜೋಡಿ ವಸ್ತ್ರವನ್ನು ತೊಡಿಸಲಾಗುವುದು. ಐಹಿಕ ಲೋಕವನ್ನು ಪೂರ್ತಿಯಾಗಿ ತೆಗೆದರೂ ಅವುಗಳಿಗೆ ಸಮಾನವಾಗಲಿಕ್ಕಿಲ್ಲ. ಆಗ ಅವರು ಕೇಳುವರು. “ನಮಗೆ ಈ ವಸ್ತ್ರವನ್ನು ಯಾಕೆ ತೊಡಿಸಲಾಯಿತು.” ಆಗ ಅವರಲ್ಲಿ ಹೇಳಲಾಗುವುದು. “ನಿಮ್ಮ ಮಕ್ಕಳು ಕುರ್ಆನ್ ಕಲಿತ ಕಾರಣದಿಂದ.”
ಅನಸ್ ಬಿನ್ ಮಾಲಿಕ್(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನ ಹೀಗಿದೆ. ಪ್ರವಾದಿಯವರು(ಸ) ಹೇಳಿದರು, “ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಓದಲು ಕಲಿಸಿದರೆ ಅವನ ಕಳೆದ ಹಾಗೂ ಬರಲಿಕ್ಕಿರುವ ಎಲ್ಲಾ ಪಾಪಗಳ್ನು ಅಲ್ಲಾಹನು ಕ್ಷಮಿಸುವನು. ಇನ್ನು ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಕಂಠಪಾಠ ಮಾಡಿಸುವುದಾದರೆ ಅಂತ್ಯದಿನದಲ್ಲಿ ಅವನನ್ನು ಹುಣ್ಣಿಮೆ ಚಂದ್ರನಂತೆ ಎಬ್ಬಿಸಲಾಗುತ್ತದೆ. ಬಳಿಕ ಅವನ ಮಗನೊಂದಿಗೆ ಹೇಳಲಾಗುವುದು. “ನೀನು ಕುರ್ಆನ್ ಪಾರಾಯಣ ಮಾಡು.” ಪ್ರತೀ ಸೂಕ್ತವು ಓದಿದಂತೆ ಆ ತಂದೆಯ ಪದವಿಯನ್ನು ಉನ್ನತಿಗೇರಿಸುತ್ತಿರುವನು. ಹಾಗೆ ಅವನು ಕುರ್ಆನನ್ನು ಪೂರ್ತಿಯಾಗಿ ಪಾರಾಯಣ ಮಾಡುವವರೆಗೆ ಅದು ಮುಂದುವರಿಯುವುದು.
ಅಲ್ಲಾಹನು ಇಷ್ಟೆಲ್ಲಾ ಅನುಗ್ರಹಗಳನ್ನು ವಿೂಸಲಿಟ್ಟಿರುವಾಗ ಇಂದು ಕುರ್ಆನಿನ ಕುರಿತು ಅನಾಸ್ಥೆ ತೋರಲಾಗುತ್ತದೆ. ಐಹಿಕ ಜೀವನದ ಗಳಿಕೆಗಾಗಿರುವ ನಾಗಾಲೋಟದಲ್ಲಿ ಕುರ್ಆನ್ ಮೂಲೆಗುಂಪಾಗುತ್ತಿದೆ. ಎಲ್ಲರಿಗೂ ಮಾರ್ಗದರ್ಶಿಯಾಗಿರುವ ಕುರ್ಆನನ್ನು ಬದಿಗಿರಿಸಿ ಸ್ವಂತ ಇಚ್ಛೆಯಂತೆ ಮುಂದೆ ಸಾಗಿದರೆ ಅವನೆಂದೂ ಯಶಸ್ವಿಯಾಗಲಾರ. ಲೌಕಿಕತೆಯ ಬಿಸಿಲು ಕುದುರೆಯೇರಿ ಮುಂದುವರಿಯುವಾಗ ಕುರ್ಆನಿನ ಆಜ್ಞೆಗಳು, ಆದೇಶಗಳು, ಸಲಹೆಗಳು, ಉದ್ಬೋಧೆಗಳೆಲ್ಲಾ ಅವನಿಗೆ ವಿರುದ್ಧವಾಗಿ ಗೋಚರವಾಗುತ್ತದೆ. ಹಾಗೆ ಅವನು ಕುರ್ಆನಿನ ಸಹವಾಸವೇ ಬೇಡ ಎಂದು  ತೀರ್ಮಾನಿಸಿ  ಬಿಟ್ಟಿದ್ದಾನೆ.
ಹಿಂದೆಲ್ಲಾ ಮಗ್ರಿಬ್ನ ವೇಳೆಯಲ್ಲಿ ಎಲ್ಲಾ ಮನೆಗಳಿಂದಲು ಕುರ್ಆನ್ ಪಾರಾಯಣ ಕೇಳಿಬರುತ್ತಿತ್ತು. ಆದರೆ ಇಂದು ಆ ಸ್ಥಾನವನ್ನು ಟಿ.ವಿ. ಚಾನೆಲ್ಗಳ ಹಲವು ಧಾರಾವಾಹಿಗಳು ಆಕ್ರಮಿಸಿಕೊಂಡಿವೆ. ಧಾರಾವಾಹಿಗಳು ಆಕ್ರಮಿಸಿಕೊಂಡಿವೆ ಎಂದು ಹೇಳುವುದಕ್ಕಿಂತ ಅವುಗಳ ಮನೆಗೆ ಪ್ರವೇಶಿಸಲು ನಾವು ಸೌಕರ್ಯ  ಒದಗಿಸಿದ್ದೇವೆ ಎಂದು ಹೇಳುವುದೇ ಸೂಕ್ತವಾಗಿರುತ್ತದೆ.
ಮಹಾ ಕವಿ ಅಲ್ಲಾಮಾ ಇಕ್ಬಾಲ್ ಹಾಡಿದರು “ಒಂದು ಕಾಲದಲ್ಲಿ ನಾವು ಮುಸ್ಲಿಮರು ಎಂದು ಹೇಳಿ ಹೆಮ್ಮೆ ಪಟ್ಟು ಕೊಳ್ಳುತ್ತಿದ್ದೇವು. ಆದರೆ ಇಂದು ನಾವು ಕುರ್ಆನನ್ನು ಉಪೇಕ್ಷಿಸಿ ಎಲ್ಲರ ಮುಂದೆ ನಿಕೃಷ್ಟರಾಗಿದ್ದೇವೆ.” ಇದು ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವೆನಿಸಿರುವ ಅಲ್ಲಾಮಾ ಇಕ್ಬಾಲ್ರ ದೂರ ದೃಷ್ಟಿಯ ಫಲಶ್ರುತಿಯಾಗಿದೆ. ಇಂದು ನಾವು ಕುರ್ಆನನನ್ನು ಬದಿಗಿರಿಸಿರುವುದರಿಂದ ಇತರರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದೊದಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಪರಾಧ ಕೃತ್ಯಗಳ ಕಡೆಗೆ ಕಣ್ಣೋಡಿಸಿದರೆ ಅದರ ಭೀಕರತೆಯು ತಿಳಿದು ಬರುತ್ತದೆ. ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದಂತೆ ಇಂದು ನಾವು ಕುರ್ಆನನ್ನು ಕೈಯಲ್ಲಿಡಿದು ಪರಿಹಾರಕ್ಕಾಗಿ ಹುಡುಕುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಕುರ್ಆನ್ ನಿದ್ರೇಶಿಸಿರುವ ಮಾಗ್ರವನ್ನು ವಿೂರಿ ಅಡ್ಡ ಮಾಗ್ರವನ್ನು ಹಿಡಿಯುತ್ತಿದ್ದೇವೆ. ಮನಃಶಾಂತಿಗಾಗಿ ಹಲವು ನಕಲಿ ಬಾಬಾಗಳ ಹಾಗೂ ಅವರು ನೀಡುವ ತಾಯಿತಗಳ ವೊರೆಹೋಗುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಉಗುಳಿದ ನೀರಿಗೆ ಮುಗಿಬೀಳುವಾಗ ಹರಾಜಾಗುತ್ತಿರುವುದು ಇಸ್ಲಾಮಿನ ಮಾನವಾಗಿದೆ ಎಂಬ ಸಾಮಾನ್ಯ ಪ್ರಜ್ಞೆ ಯು ನಮ್ಮಲ್ಲಿ ಜಾಗೃತವಾಗಿರಬೇಕು.
ಎಲ್ಲದರಲ್ಲ್ಲೂ ಶ್ರೇಷ್ಠವಾಗಿರುವ ಕುರ್ಆನ್ ನಮ್ಮ ಕೈಯಲ್ಲಿರುವಾಗ ಆಧುನಿಕತೆಯ ಅನಾಚಾರಗಳಿಗೂ ಮೂಢನಂಬಿಕೆಗಳಿಗೂ ಕೊಚ್ಚಿ ಹೋಗಬಾರದು. ನಮ್ಮ ಆದಶ್ರಗಳನ್ನು ಇತರರ ಮುಂದೆ ಪಣಕ್ಕಿಟ್ಟು ಅತ್ಯಂತ ನಿಕೃಷ್ಟರಾಗಿ ಬಾಳಬಾರದು. ಕುರ್ಆನಿನ ಪ್ರಕಾರ ಪ್ರವಾದಿಯವರು(ಸ) ಜೀವಿಸಿ ತೋರಿಸಿದ ಪ್ರಕಾರ ಜೀವಿಸಿ ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವಂತಾಗಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಏಪ್ರಿಲ್ 16, 2012

ಅವರು ಶರಬತ್ತಿನಂತೆ ಸಲೀಸಾಗಿ ಕುಡಿಯುತ್ತಾರೆ.


3 ರಂಗಗಳಿಗೆ ಸಂಬಂಧಿಸಿದ ಕೆಡುಕುಗಳ ಕುರಿತು ಪ್ರವಾದಿಯವರು(ಸ) ಹೇಳಿದರು, “ನಿನ್ನ ಅಂಗಾಗಳನ್ನು ಕಡಿದರೂ, ನಿನ್ನನ್ನು ಬೆಂಕಿಯಲ್ಲಿ ಸುಟ್ಟರೂ ನೀನು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿ ಮಾಡಬಾರದು. ನೀನು ಕಡ್ಡಾಯ ನಮಾಝನ್ನು ಮನಃ ಪೂರ್ವಕವಾಗಿ ಉಪೇಕ್ಷಿಸಬಾರದು. ಮನಃ ಪೂರ್ವಕವಾಗಿ ಉಪೇಕ್ಷಿಸಿದರೆ ನಾನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರಬರುವೆ. ನೀನು ಮದ್ಯಪಾನ ಮಾಡಬಾರದು. ಕಾರಣ ಅದು ಎಲ್ಲಾ ಕೆಡುಕುಗಳ ಕೀಲಿ ಕೈಯಾಗಿದೆ.”
ಇಲ್ಲಿ ಪ್ರವಾದಿಯವರು(ಸ) ನಂಬಿಕೆ, ಆರಾಧನೆ ಮತ್ತು 
ಸಂಸ್ಕ್ರತಿಗೆ  ಸಂಬಂಧಿಸಿದ ಮೂರು ಕೆಡುಕುಗಳ ಕುರಿತು ಪ್ರಸ್ತಾಪಿಸಿದ್ದಾರೆ. ಏಕದೇವ ವಿಶ್ವಾಸವು ವಿಶ್ವಾಸ ಕರ್ಮಗಳ ಪೈಕಿ ಪ್ರಥಮವಾದುದಾಗಿದೆ. ಧರ್ಮ  ಬುನಾದಿಯಲ್ಲಿಯೂ ಪ್ರಥಮವಾದುದಾಗಿದೆ. ಅಲ್ಲಾಹನ ಶಕ್ತಿ ಸಾಮಥ್ಯ್ರವನ್ನೂ ಸ್ಥಾನವನ್ನೂ ಇತರರಿಗೆ ಕಲ್ಪಿಸದಿರುವುದು ಏಕದೇವ ವಿಶ್ವಾಸದ ಬೇಡಿಕೆಯಾಗಿದೆ. ಇದನ್ನು ಅರಿತೂ ಕೂಡಾ ಮಾತು, ಕೃತಿಗಳ ಮೂಲಕ ಆ ರೀತಿ ಮಾಡುವುದು ಮಹಾ ಪಾಪವಾಗಿದೆ. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸಬಹುದು. ಆದರೆ ಅವನಿಗೆ ಸಹಭಾಗಿಗಳನ್ನಾಗಿ ಮಾಡುವ ಈ ದುಷ್ಟ ಕೃತ್ಯವನ್ನು ಅವನು ಎಂದಿಗೂ ಕ್ಷಮಿಸಲಾರ. ಇದನ್ನು ಸ್ವತಃ ಅಲ್ಲಾಹನೇ ಸ್ಪಷ್ಟ ಪಡಿಸಿದಾನೆ.
“ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು.” (ಅನ್ನಿಸಾ: 48)
ಶಿರ್ಕನ್ನು(ಬಹುದೇವಾರಾಧನೆ ) ಇಸ್ಲಾಮ್ ನಖಶಿಖಾಂತ ವಿರೋಧಿಸಿದೆ. ಶಿರ್ಕ್ ಆಹ್ವಾನವೀಯುವ ಎಲ್ಲಾ ಬಾಗಿಲುಗಳನ್ನೂ ಅದು ಮುಚ್ಚಿದೆ. ತೋರಿಕೆಗಾಗಿ ಮಾಡುವ ಕಮ್ರಗಳನ್ನು ಪ್ರವಾದಿಯವರು(ಸ) ಅತ್ಯಂತ ಸಣ್ಣ  ಶಿರ್ಕ್  ಎಂದಿದ್ದಾರೆ. ಒಳಿತುಗಳೆಲ್ಲವೂ ಅಲ್ಲಾಹನಿಗಾಗಿ ನಿರ್ವಹಿಸಬೇಕಾದದ್ದಾಗಿದೆ. ಅಲ್ಲಾಹನಿಗಾಗಿ ನಿರ್ವ ಹಿಸಬೇಕಾದ ಕರ್ಮಗಳನ್ನು ಇತರರು ಕಾಣಲಿ ಎಂಬ ಉದ್ದೇಶದಿಂದ ನಿರ್ವಹಿಸುವಾಗ ಅವು ತನ್ನ ಗುರಿಯನ್ನು ಕಳಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಮ್ರಗಳನ್ನೆಸಗುವವರು ಅಲ್ಲಾಹನನ್ನು ಮರೆತು ನೋಡುಗರನ್ನು ಮಾತ್ರ ಪರಿಗಣಿಸುತ್ತಾರೆ. ಆಗ ಸ್ವಾಭಾವಿಕವಾಗಿ ಕರ್ಮಗಳೂ ಕೂಡಾ ಇತರರಿಗಾಗಿ ನಿವ್ರಹಿಸಿದಂತಾಗುತ್ತದೆ. ಆದ್ದರಿಂದ ಈ ತೋರಿಕೆಗಾಗಿ ಮಾಡುವ ಕರ್ಮಗಳು  ಶಿರ್ಕ್ ಗೆ ಕೊಂಡೊಯ್ಯುವುದರಿಂದ ಪ್ರವಾದಿಯವರು(ಸ) ಅದನ್ನು ವಿರೋಧಿಸಿದ್ದಾರೆ.
ಯಾವುದೇ ಸಂದ
ರ್ಭದಲ್ಲಿ ಏಕದೇವ ವಿಶ್ವಾಸವನ್ನು ಕೈಬಿಡಬಾರದೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಇಂದು ಸಮಾಜದಲ್ಲಿ  ಶಿರ್ಕ್   ವ್ಯಾಪಕವಾಗುತ್ತಿದೆ. ಪುರೋಹಿತರೆಂದೆನಿಸಿಕೊಂಡವರು ತಮ್ಮ ಹೊಟ್ಟೆಪಾಡಿಗಾಗಿ ಅರಸಿಕೊಂಡಿರುವ ಕಸುಬು  ಶಿರ್ಕ್   ಆಗಿದೆ. “ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ” ಎಂದು ಅಲ್ಲಾಹನು ಕುರ್ಆನಿನಲ್ಲಿ ಸ್ಪಷ್ಟವಾಗಿ ಹೇಳಿರುವಾಗ ಇತರರೊಂದಿಗೆ ಪ್ರಾರ್ಥಿಸಲು ಪ್ರೇರೇಪಿಸುವವರು, ಅದಕ್ಕಾಗಿ ವ್ಯವಸ್ಥೆ ಕಲ್ಪಿಸಿ ಕೊಡುವವರು ತಮ್ಮ ಕರ್ಮಗಳಿಗೆ ಲಭಿಸುವ ಪ್ರತಿಫಲವೇನು ಎಂಬುದನ್ನಾದರೂ ಯೋಚಿಸಬಾರದೇ? ಅಲ್ಲಾಹನು ಯಾವುದಾದರೂ ತೀಮ್ರಾನ ಕೈಗೊಳ್ಳುವಾಗ ಓರ್ವ ವಿದ್ವಾಂಸರಲ್ಲಿ ಕೇಳಿದ ಬಳಿಕವೇ ತೀರ್ಮಾನಿಸುತ್ತಾನೆ ಎಂದು ಈ ಸಮಾಜದಲ್ಲಿ ಪ್ರಚಾರ ಪಡಿಸಿದವರಿದ್ದಾರೆ. (ಮಆದಲ್ಲಾಹ್) ಇವರು ಮಕ್ಕಾದ ಮುಶ್ರಿಕರಿಗಿಂತಲೂ ಅಧಃಪತನ ಹೊಂದಿದವರಿದ್ದಾರೆ. ಕಾರಣ ಮಕ್ಕಾದ ಮುಶ್ರಿಕರು ಮಳೆ ಬರಿಸುವುದು ಯಾರೆಂದು ಕೇಳಿದರೆ `ಅಲ್ಲಾಹು’ ಎಂದು ಉತ್ತರಿಸುತ್ತಿದ್ದರು. ಆದರೆ ಇಂದಿನ ವಿದ್ವಾಂಸರೂ, ಪುರೋಹಿತರೂ ಆ ಸ್ಥಾನವನ್ನು ಮನುಷ್ಯರಿಗೆ ನೀಡಿದ್ದಾರೆ. ಅಲ್ಲಾಹನು  ಶಿರ್ಕ್ ನ್ನು ಒಮ್ಮೆಯೂ ಕ್ಷಮಿಸುವುದಿಲ್ಲ ಎಂದು ಕುರಾನ್ ಪದೇ ಪದೇ ಎಚ್ಚರಿಸಿದ್ದನ್ನು ಈ ಮಂದಿ ಕಂಡಿಲ್ಲವೇ?
ಎರಡನೆಯದಾಗಿ ಪ್ರವಾದಿಯವರು(ಸ) ಆರಾಧನೆಗೆ ಸಂಬಂಧಿಸಿದ ಕೆಡುಕೆಂದು ಹೇಳಿರುವುದು ನಮಾಝನ್ನು ಉಪೇಕ್ಷಿಸುವುದಾಗಿದೆ. ಅಲ್ಲಾಹನಿಗಿರುವ ಆರಾಧನಾ ಕರ್ಮಗಳ ಪೈಕಿ ಅತ್ಯಂತ ಮಹತ್ವವಾದ ಆರಾಧನೆ ನಮಾಝ್ ಆಗಿದೆ. ನಾಳೆ ಪರಲೋಕದಲ್ಲಿ ನಮಾಝಿನ ಕುರಿತು ಪ್ರಶ್ನಿಸಲ್ಪಡದೆ ಯಾವುದೇ ವ್ಯಕ್ತಿ ಒಂದು ಹೆಜ್ಜೆಯೂ ಮುಂದಿಡಲಾರ. ಪ್ರವಾದಿಯವರು(ಸ), “ನಮಾಝಿಲ್ಲದೆ ಧರ್ಮವಿಲ್ಲ. ಶರೀರದಲ್ಲಿ ತಲೆಗಿರುವ ಸ್ಥಾನವು ಧಮ್ರದಲ್ಲಿ ನಮಾಝಿಗಿದೆ” ಎಂದು ಹೇಳಿದ್ದಾರೆ.
ನಮಾಝನ್ನು ಉಪೇಕ್ಷಿಸುವುದು  ಶಿರ್ಕ್    ಹಾಗೂ ಕುಫ್ರ್ (
  ದೇವ ನಿಷೇಧ )  ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಪ್ರವಾದಿಯವರ(ಸ) ಕಾಲದಲ್ಲಿ ನಮಾಝ್ ನಿವ್ರಹಿಸದವರನ್ನು ಕಾಫಿರ್ಗಳೆಂಬ ರೀತಿಯಲ್ಲಿ ಜನರು ನೋಡುತ್ತಿದ್ದರು. “ಯಾರಾದರೂ ಮನಃಪೂರ್ವಕವಾಗಿ ಒಂದು ನಮಾಝನ್ನು ಉಪೇಕ್ಷಿಸಿದರೆ ಅವನು ಸ್ಪಷ್ಟವಾದ ಕುಫ್ರ್  ಎಸಗಿದನು” ಎಂದು ಪ್ರವಾದಿಯವರು(ಸ) ಎಚ್ಚರಿಸಿದ್ದಾರೆ. 
ನಮಾಝನ್ನು ಎಲ್ಲಾ ಸಂದಭ್ರಗಳಲ್ಲೂ ನಿವ್ರಹಿಸಲು ಪ್ರವಾದಿಯವರು(ಸ) ಹೇಳಿದ್ದಾರೆ. ಆದರೆ ಅದು ಸನ್ನಿವೇಶಗಳಿಗೆ ಅನುಗುಣವಾಗಿ ವಿವಿಧ ರೂಪದಲ್ಲಿರಬಹುದು. ಆದರೂ ನಮಾಝ್ ನಿವ್ರಹಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಮನಃಪೂರ್ವ ಕವಾಗಿ ನಮಾಝನ್ನು ಉಪೇಕ್ಷಿಸುವವನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರದಬ್ಬಲ್ಪಡುತ್ತಾನೆ ಎಂದು ಪ್ರವಾದಿಯವರು(ಸ) ಬಹಳ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾನೆ. ಇದರ ತಾತ್ಪಯ್ರವು ಅವನು ಧರ್ಮ ದಿಂದಲೂ ಮುಸ್ಲಿಮ್ ಸಮುದಾಯದಿಂದಲೂ ಹೊರ ಹೋಗುತ್ತಾನೆ ಎಂದಾಗಿದೆ. ಓರ್ವ  ಮುಸ್ಲಿಮನನ್ನು ಮತ್ತು ಕಾಫಿರನನ್ನು ಪ್ರತ್ಯೇಕಿಸುವುದು ಕೂಡಾ ನಮಾಝ್ ಆಗಿದೆ. ಇಂದು ನಮಾಝಿನ ಕುರಿತು ನಮ್ಮಲ್ಲಿ ಅನಾಸ್ಥೆ ಉಂಟಾಗಿದೆ. ಅಲ್ಲಾಹನಿಗಾಗಿ ನಮ್ಮ ಕೆಲವು ಕ್ಷಣಗಳನ್ನು
ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಸಮಯದ ಅಭಾವದಿಂದಲೋ ಅಹಂಕಾರದ ಪರಾಕಾಷ್ಟೆಯಿಂದಲೋ ನಮಾಝನ್ನು ಮೂರು ವೇಳೆಗಳಿಗೆ ಸೀಮಿತಗೊಳಿಸಿದವರೂ ಇದ್ದಾರೆ. ಆದ್ದರಿಂದ ನಾವು ಅಲ್ಲಾಹನಿಗಿರುವ ಸಮಯದ ವಿಷಯದಲ್ಲಿ ಜಿಪುಣರಾಗಿ  ಶಿರ್ಕ್ , ಕುಫ್ರ್ ಗೆ  ಬೀಳುವಂತಾಗಬಾರದು.
ಮೂರನೆಯದಾಗಿ ಪ್ರವಾದಿಯವರು(ಸ) ಸ್ವಭಾವ ಪರವಾದ ಕೆಡುಕಾಗಿ ಮದ್ಯಪಾನವನ್ನು ಪ್ರಸ್ತಾಪಿಸಿದ್ದಾರೆ. ಮದ್ಯಪಾನವು ಎಲ್ಲಾ ಕೆಡುಕುಗಳ ಮಾತೆಯಾಗಿದೆ. ಲಜ್ಜೆಯ ಸ್ವಭಾವ ಹೊಂದಿದವರು ಕೂಡಾ ಮದ್ಯಪಾನಿಗಳಾದಾಗ ನಿರ್ಲಜ್ಜೆಯಿಂದ ವತ್ರಿಸುತ್ತಾರೆ. ಮದ್ಯಪಾನವು ಎಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ. ಮದ್ಯಪಾನಿಗೆ ತಂದೆ-ತಾಯಿ, ಪತ್ನಿ, ಮಕ್ಕಳು ಯಾರೆಂದು ಗುರುತಿಸಲೂ ಸಾಧ್ಯವಾಗದೆ ಹಲವು ಪ್ರಮಾದಗಳನ್ನೆಸಗುತ್ತಾರೆ. ಇಂದು ಸಮಾಜದಲ್ಲಿ ಮದ್ಯಪಾನವು ವ್ಯಾಪಕವಾಗಿದೆ. ಹಿಂದೆಲ್ಲಾ ಕದ್ದು ಮುಚ್ಚಿ ಕುಡಿಯುತ್ತಿದ್ದರೂ ಇಂದು ಅದು ಶರಬತ್ತು ಕುಡಿದಂತೆ ಸಲೀಸಾಗಿ ಸಾ
ರ್ವಜನಿಕವಾಗಿ ಕುಡಿಯುತ್ತಾರೆ. ಯಾವುದೇ ಹಿತವಚನಗಳು ಮದ್ಯಪಾನಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ. ಇಂತಹ ಸಾಮಾಜಿಕ ಕೆಡುಕುಗಳು ವ್ಯಾಪಕವಾಗುವಾಗ ಅಲ್ಲಾಹನ ಶಿಕ್ಷೆಯು ಬಂದೆರಗಿದರೆ ಯಾವುದೇ ಆಶ್ಚರ್ಯವಿಲ್ಲ. ಇಂತಹ ಹಲವಾರು ಉದಾಹರಣೆಗಳು ಗತಕಾಲಗಳಲ್ಲಿ ಘಟಿಸಿವೆ. ಆದ್ದರಿಂದ ನಾವು ಇಂತಹ ಕೆಡುಕಗಳಿಂದ ದೂರ ನಿಲ್ಲಬೇಕಾಗಿದೆ. ಮಾತ್ರವಲ್ಲ, ಇತರರನ್ನೂ ಅವುಗಳಿಂದ ತಡೆಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ಅನುಗ್ರಹಿಸಲಿ.

ಸೋಮವಾರ, ಏಪ್ರಿಲ್ 02, 2012

ಅಹಂಕಾರವೆಂಬ ಹೃದಯ ರೋಗ


ಮನುಷ್ಯರ ಹೃದಯಗಳಿಗೆ ಹಲವಾರು ರೋಗಗಳು ಭಾದಿಸುತ್ತವೆ. ಅವು ಔಷಧಿಯ ಮೂಲಕ ಗುಣವಾಗುವಂಥದ್ದಲ್ಲ. ಶಸ್ತ್ರಕ್ರಿಯೆ ನಡೆಸಿ ನಿವಾರಿಸುವಂಥದ್ದಲ್ಲ. ಆತ್ಮ ನಿಯಂತ್ರಣವು ಆ ರೋಗ ಗಳಿಗೆ ಮದ್ದಾಗಿದೆ. ಅವುಗಳ ಪೈಕಿ ಅಹಂಕಾರವೂ ಒಂದಾಗಿದೆ. ಇದು ಓರ್ವ ವಿಶ್ವಾಸಿಯ ಸತ್ಕರ್ಮಗಳನ್ನು ನಾಶ ಪಡಿಸುತ್ತದೆ. ಅವನ ಸ್ವರ್ಗ ಪ್ರವೇಶಕ್ಕೆ ಕಂಟಕವಾಗುತ್ತದೆ. ಅಹಂಕಾರವು ಓರ್ವ ನಲ್ಲಿ ಮನೆ ಮಾಡಿಕೊಂಡಿದ್ದರೆ ಅವನ ಸುತ್ತಮುತ್ತಲಿರುವವರು ಅವನಿಗೆ ಕುಬ್ಜರಾಗಿ ತೋರುತ್ತಾರೆ. ಅವರ ಮುಂದೆ ತಾನು ದೊಡ್ಡವನು ಎಂಬ ಒಣ ಜಂಬವು ರೂಪುಗೊಳ್ಳುತ್ತದೆ. ಜನರನ್ನು ಕೇವಲವಾಗಿ ನೋಡುವುದು ಅಹಂಕಾ ರದ ಭಾಗವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಸತ್ಯವನ್ನು ನಿರಾಕರಿಸುವುದು ಮತ್ತು ಜನರನ್ನು ಕ್ಷುಲ್ಲಕವಾಗಿ ಪರಿ ಗಣಿಸುವುದು ಅಹಂಕಾರವಾಗಿದೆ.”
ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅಹಂಕಾರವು ಅವನ ಪದವಿಯನ್ನು ಪತನಗೊಳಿಸುತ್ತದೆ. ಗತಕಾಲಗಳಲ್ಲಿ ಜೀವಿಸಿದ್ದ ದೊಡ್ಡ ದೊಡ್ಡ ವ್ಯಕ್ತಿತ್ವಗಳು ತಮ್ಮ ಅಹಂಕಾರದಿಂದಾಗಿ ನಾಶ ಹೊಂದಿದ ಹಲವಾರು ಘಟನೆಗಳಿಗೆ ಇತಿ ಹಾಸವೇ ಸಾಕ್ಷಿ. ಕುರಾನ್ ಅಂಥವರ ಕುರಿತು ಹಲವಾರು ಕಡೆಗಳಲ್ಲಿ ವಿವರಿಸಿದೆ.ಕುರಾನ್ ಇವುಗಳನ್ನು ವಿವರಿಸಿದ್ದು ಮನುಷ್ಯರು ಪಾಠ ಕಲಿಯಲಿಕ್ಕಾಗಿದೆ. ಆದರೆ ಇಂದು ಜನರು ಕುರಾನ್ ಓದುತ್ತಿದ್ದರೂ, ಕಲಿಯುತ್ತಿದ್ದರೂ ಅದರ ಬೋಧನೆಗಳ ಪ್ರಕಾರ ವರ್ತಿ ಸುತ್ತಿಲ್ಲ. ಕುರಾನ್ ವಿವರಿಸಿದ ಘಟನೆಗಳೆಲ್ಲಾ ಇಂದು ಜನರಿಗೆ ರೋಮಾಂಚಕಾರಿ ಕಥೆಗಳಾಗಿ ಬದಲಾಗಿವೆ.
ಇಂದು ಜನರು ಹಲವಾರು ಸತ್ಕರ್ಮಗಳನ್ನು ಮಾಡುತ್ತಾರೆ. ಮಹಾ ದಾನಿಗಳು ಈ ಸಮಾಜದಲ್ಲಿ ಬೇಕಾದಷ್ಟಿದ್ದಾರೆ. ಆದರೆ ಈ ದಾನ-ಧರ್ಮಗಳ ಹೆಸರಿನಲ್ಲಿ ತನ್ನನ್ನು ಎಲ್ಲರೂ ದೊಡ್ಡ ವ್ಯಕ್ತಿ ಎಂದು ಗೌರವಿಸಬೇಕು ಎಂಬ ಚಿಂತೆಯು ಹೃದಯದಲ್ಲಿ ವೊಳಕೆಯೊಡೆದರೆ ಅವನ ಸತ್ಕಮ್ರಗಳು ವ್ಯಥ್ರ ವಾಗುವುದರಲ್ಲಿ ಯಾವುದೇ ಸಂಶಯ ವಿಲ್ಲ. ಮಾತ್ರವಲ್ಲ, ಅಂತಹ ಸತ್ಕಮ್ರ ಗಳನ್ನೆಸಗಿ ಅಹಂಕಾರ ಪಟ್ಟದ್ದಕ್ಕೆ ಶಿಕ್ಷೆ ಯನ್ನೂ ಅನುಭವಿಸುವನು.
ಸಮಾಜದಲ್ಲಿರುವ ಹೆಚ್ಚಿನ ಮಂದಿ ಯಲ್ಲಿ ಅಲ್ಪವಾದರೂ ಅಹಂಕಾರವಿರು ತ್ತದೆ. (ವಿಶೇಷತಃ ನೇತಾರರಲ್ಲೂ ವಿದ್ವಾಂಸರಲ್ಲೂ) ಗತಕಾಲಗಳಲ್ಲಿ ಪ್ರವಾದಿ ಗಳು ಆಗಮಿಸಿದಾಗ ಜನರು ಅವರನ್ನು ನಿಷೇಧಿಸಲು ಕಾರಣ ಸ್ವಂತದ ಕುರಿತಾದ ದುರಭಿಮಾನವೂ ಅಹಂಕಾ ರವೂ ಆಗಿದೆ. ಓರ್ವನ ಮನಸ್ಸಿನಲ್ಲಿ ‘ನಾನು’ ಎಂಬ ಆಲೋಚನೆ ಬಂದರೆ ಅದು ಅಹಂಕಾರದ ಲಕ್ಷಣವಾಗಿದೆ. ಅಲ್ಲಾಹನು ಆದಮರ(ಅ) ಮುಂದೆ ಸುಜೂದ್ ಮಾಡಲು ಮಲಕ್ಗಳೊಂದಿಗೆ ಹೇಳಿ ದಾಗ ಇಬ್ಲೀಸನ್ನು ಹೊರತು ಪಡಿಸಿ ಎಲ್ಲರೂ ಸಾಷ್ಟಾಂಗ ಮಾಡಿದರು. ಇಬ್ಲೀಸನಿಗೆ ‘ನಾನು ದೊಡ್ಡವನು’ ಎಂಬ ಭಾವನೆಯು ಮನಸ್ಸಿನಲ್ಲಿ ಮೂಡಿದ್ದರಿಂದ ಅವನು ಅದರಿಂದ ಹಿಂದೆ ಸರಿದನು. ತತ್ಪರಿ ಣಾಮವಾಗಿ ಅವನು ಅಲ್ಲಾಹನ ಶಾಪಕ್ಕೆ ಗುರಿಯಾದನು.
ಒಮ್ಮೆ ಅಬ್ದುಲ್ಲಾ ಬಿನ್ ಉಮರ್(ರ) ಮತ್ತು ಅಬ್ದುಲ್ಲಾ ಬಿನ್ ಅಮ್ರ್(ರ) ಮವ್ರಾ ಬೆಟ್ಟದಲ್ಲಿ ಪರಸ್ಪರ ಭೇಟಿಯಾದರು. ಬಳಿಕ ಮಾತುಕತೆ ನಡೆಸಿ ಅಬ್ದುಲ್ಲಾ ಬಿನ್ ಅ ಮ್ರ್ ರ (ರ) ಎದ್ದು ಹೋದರು. ಇಬ್ನು ಉಮರ್ ಅಲ್ಲಿ ಕುಳಿತು ಅಳಲಾರಂಭಿಸಿದರು. ಆಗ ಓವ್ರರು ಕೇಳಿ ದರು, “ಓ ಅಬೂ ಅಬ್ದುರ್ರಹ್ಮಾನ್ ತಾವೇಕೆ ಅಳುತ್ತಿದ್ದೀರಿ?” ಇಬ್ನು ಉಮರ್(ರ) ಉತ್ತರಿಸಿದರು, “ಯಾರ ದಾದರೂ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟಾದರೂ ಅಹಂಕಾರ ಇದ್ದರೆ ಆ ಕಾರಣದಿಂದಾಗಿ ಅಲ್ಲಾಹನು ಅವನನ್ನು ನರಕಕ್ಕೆ ಎಸೆಯುವನು ಎಂಬುದಾಗಿ ಪ್ರವಾದಿಯವರು(ಸ) ಹೇಳಿದ್ದಾರೆಂದು ಅಬ್ದುಲ್ಲಾ ಬಿನ್ ಅಮ್ರ್ (ರ) ನನ್ನೊಡನೆ ಹೇಳಿದರು. ಅದು ನನ್ನನ್ನು ಅಳುವಂತೆ ಮಾಡಿತು.” ಸಹಾಬಿಗಳು ತಮ್ಮ ಕಮ್ರ ಗಳಲ್ಲಿ ಅಹಂಕಾರ, ಕಾಪಟ್ಯತೆ ಬೆರೆಯ ದಂತೆ ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಅವರ ಮನಸ್ಸಿನಲ್ಲಿ `ನಾನು’ ಎಂಬ ಪ್ರಜ್ಞೆಯು ಎಂದೂ ಉದಯಿಸಿರಲಿಲ್ಲ. ಅದಕ್ಕೆ ಅವರ ಇತಿಹಾಸವೇ ಸಾಕ್ಷಿ.
ಇಬ್ಲೀಸನು ಅಲ್ಲಾಹನ ಮುಂದೆ ಅಹಂಕಾರ ಪ್ರದಶ್ರಿಸಿದ್ದರಿಂದ ಅದು ಪ್ರಪಂಚದ ಪ್ರಥಮ ಪಾಪವಾಗಿದೆ. ಅಲ್ಲಾಹನು ಹೇಳಿರುವುದಾಗಿ ಪ್ರವಾದಿ ಯವರು(ಸ) ಹೇಳಿದರು, “ಅಹಂಕಾ ರವು ನನ್ನ ಅಂಗಿಯಾಗಿದೆ. ಗಾಂಭೀ ಯ್ರವು ನನ್ನ ಉಡುಪಾಗಿದೆ. ಯಾರಾ ದರೂ ಅದನ್ನು ನನ್ನಿಂದ ಎಳೆದು ತೆಗೆದು ಸ್ವತಃ ಧರಿಸಲು ಪ್ರಯತ್ನಿಸಿದರೆ ನಾನು ಅವನನ್ನು ಖಂಡಿತವಾಗಿಯೂ ನರಕಕ್ಕೆಸೆಯುವೆನು.”
ಅಲೀ(ರ) ಹೇಳುತ್ತಾರೆ, “ಒಮ್ಮೆ ಪ್ರವಾದಿಯವರು(ಸ) ಕೆಲವು ಮಂದಿಯ ಬದಿಯಿಂದ ನಡೆದುಕೊಂಡು ಹೋಗು ತ್ತಿದ್ದರು. ಅವರಲ್ಲಿ ಓವ್ರನು ಬೆಲೆ ಬಾಳುವ ಸುಗಂಧದ್ರವ್ಯ ಪÇಸಿದ್ದನು. ಪ್ರವಾದಿಯವರು(ಸ) ಅವನನ್ನು ಕಡೆ ಗಣಿಸಿ ಉಳಿದವರನ್ನು ನೋಡಿ ಸಲಾಮ್ ಹೇಳಿದರು. ಆಗ ಅವರು ಕೇಳಿದರು, “ಪ್ರವಾದಿಯವರೇ(ಸ) ತಾವು ನನ್ನನ್ನು ಕಡೆಗಣಿಸಿದ್ದೀರಾ?” ಪ್ರವಾದಿ ಯವರು(ಸ) ಹೇಳಿದರು, “ನಿನ್ನ ಕಣ್ಣು ಗಳ ಮಧ್ಯೆ ನಾನು ಒಂದು ಅಗ್ನಿಜ್ವಾಲೆ ಯನ್ನು ಕಾಣುತ್ತಿದ್ದೇನೆ.” ಅಹಂಕಾರ ಹಾಗೂ ದುರಭಿಮಾನವು ಆ ವ್ಯಕ್ತಿ ಯಲ್ಲಿತ್ತು. ಇದರಿಂದಾಗಿ ಪ್ರವಾದಿ ಯವರು(ಸ) ಅವರನ್ನು ಕಡೆಗಣಿಸಿದರು.
ಅನಸ್(ರ) ಉದ್ಧರಿಸಿರುವ ಇನ್ನೊಂದು ಘಟನೆಯು ಹೀಗಿದೆ: ಪ್ರವಾದಿಯವರ(ಸ) ಕಾಲದಲ್ಲಿ ಸಜ್ಜನ ವ್ಯಕ್ತಿಯೊಬ್ಬರಿದ್ದರು. ಜನರು ಆ ವ್ಯಕ್ತಿಯ ಒಳಿತುಗಳ ಕುರಿತು ಪ್ರವಾದಿಯವ ರೊಂದಿಗೆ(ಸ) ಹೊಗಳುತ್ತಿದ್ದರು. ಒಮ್ಮೆ ಅವರು ಪ್ರವಾದಿಯವರ(ಸ) ಸನ್ನಿಧಿಗೆ ಬಂದಾಗ ಜನರು ಹೇಳಿದರು, “ಪ್ರವಾದಿಯವರೇ(ಸ) ಇವರ ಕುರಿತು ನಾವು ನಿವ್ಮೊಂದಿಗೆ ಹೇಳುತ್ತಿದ್ದೆವು.” ಪ್ರವಾದಿ(ಸ) ಆ ವ್ಯಕ್ತಿಯನ್ನು ನೋಡಿ ಹೀಗೆ ಹೇಳಿ ದರು. “ಪೈಶಾಚಿಕವಾದ ಒಂದು ಚಿಹ್ನೆ ಯನ್ನು ನಾನು ಅವರ ಮುಖದಲ್ಲಿ ಕಾಣು ತ್ತಿದ್ದೇನೆ.” ಬಳಿಕ ಪ್ರವಾದಿಯವರು(ಸ) ಅವರೊಂದಿಗೆ ಕೇಳಿದರು, “ಅಲ್ಲಾಹನನ್ನು ಸಾಕ್ಷಿಯಾಗಿಸಿ ನಾನು ತವ್ಮೊಂದಿಗೆ ಕೇಳು ತ್ತಿದ್ದೇನೆ. ಜನರಲ್ಲಿ ತಮಗಿಂತ ಶ್ರೇಷ್ಠ ವ್ಯಕ್ತಿ ಬೇರೆ ಯಾರಿಲ್ಲ ಎಂದು ತಾವು ಭಾವಿಸು ತ್ತೀರಾ?” ಆಗ ಅವರು, “ಹೌದು ಪ್ರವಾದಿ ಯವರೇ(ಸ)” ಎಂದುತ್ತರಿಸಿದರು. ಆ ವ್ಯಕ್ತಿಯಲ್ಲಿ `ನಾನು’ ಎಂಬ ಅಹಂಕಾರದ ಲಕ್ಷಣವಿತ್ತು. ಪ್ರವಾದಿಯವರು(ಸ) ಕೇವಲ ಒಂದು ಪ್ರಶ್ನೆಯ ಮೂಲಕ ಆ ವ್ಯಕ್ತಿಯ ನೈಜ ಬಣ್ಣವನ್ನು ತಮ್ಮ ಅನುಚರರಿಗೆ ಬಯಲು ಮಾಡಿದರು. ಇಂತಹ ವ್ಯಕ್ತಿಗಳು ನವ್ಮೊಂದಿಗೂ ಇರಬಹುದು. ಇಂತಹ ಸ್ವಭಾವಗಳು ನವ್ಮೊಳಗೂ ಇರಬಹುದು. ಪರಲೋಕದಲ್ಲಿ ಅಹಂಕಾರಗಳ ಸ್ಥಿತಿ ಯನ್ನು ಈ ಪ್ರವಾದಿ ವಚನ ಪ್ರಸ್ತುತಃ ಪಡಿಸುತ್ತದೆ.” ಅಂತ್ಯದಿನದಲ್ಲಿ ಅಹಂಕಾರಿ ಗಳನ್ನು ಪುಟ್ಟ ಇರುವೆಗಳ ರೂಪದಲ್ಲಿ ಹಾಜರಿಪಡಿಸಲಾಗುತ್ತದೆ. ಅವರಿಗೆ ನಾಲ್ಕು ಭಾಗಗಳಿಂದಲೂ ನಿಂದನೆಯ ಸುರಿಮಳೆ ಯಾಗುತ್ತದೆ. `ಬೂಲಸ್’ ಎಂಬ ಹೆಸರಿನ ನರಕದ ಜ್ವಾಲೆಗೆ ಅವರನ್ನು ಎಳೆದೊಯ್ಯಲಾಗುವುದು. ಅಗ್ನಿಯ ಜ್ವಾಲೆಗಳು ಅವರನ್ನು ಆವರಿಸುವವು. ನರಕವಾಸಿಗಳಿಂದ ಸುರಿಯುವ ದುಗ್ರಂಧಮಯವಾದ ನೀರನ್ನು ಅವರಿಗೆ ಕುಡಿಸಲಾಗುವುದು.”
ಈ ನಿಟ್ಟಿನಲ್ಲಿ ನಾವು ನಮ್ಮ ಹೃದಯದಲ್ಲಿ ಅಂಹಕಾರವು ಪ್ರವೇಶಿಸದಂತೆ ಎಚ್ಚರವಹಿಸಬೇಕು. ನಾವು ಸತ್ಕಮ್ರಗಳನ್ನು ಮಾಡಿದರೂ ಅಹಂಕಾರದ ನಿಮಿತ್ತ ಅದು ನರಕಕ್ಕೆ ಪ್ರವೇಶಿಸಲು ಹೇತುವಾಗಬಾರದು. ಅಲ್ಲಾಹನು ಅನುಗ್ರಹಿಸಲಿ.