ಸೋಮವಾರ, ಅಕ್ಟೋಬರ್ 29, 2012

ವಿಶ್ವಾಸಾರ್ಹರಾಗಿ, ಘಾತುಕರಾಗಬೇಡಿ


ಅಮಾನತ್ ಎಂಬುದು ನಾವು ಸಾಮಾನ್ಯವಾಗಿ ಕೇಳುವ ಪದವಾಗಿದೆ. ಈ ಪದಕ್ಕೆ ವಿಶಾಲವಾದ ಅರ್ಥಗಳಿವೆ. ವಿಶ್ವಾಸಾರ್ಹತೆ, ಸತ್ಯಸಂಧತೆ ಎಂಬುದೆಲ್ಲಾ ಅಮಾನತ್‍ನ ಭಾಷಾರ್ಥವಾಗಿದೆ. ಓರ್ವನು ಇನ್ನೋರ್ವನ ಮೇಲೆ ವಿಶ್ವಾಸವಿರಿಸಿ ಆತನಿಗೆ ವಹಿಸಿಕೊಡಲಾಗುವ ಎಲ್ಲಾ ಹೊಣೆಗಾರಿಕೆಗಳನ್ನು ಅಮಾನತ್ ಎನ್ನುತ್ತಾರೆ. ಅದು ಕರಾರನ್ನು ಈಡೇರಿಸುವುದು, ಸಾಮೂಹಿಕ ಸಂಧಾನ ಮಾಡಿಸುವುದು, ಸಮಾಜದ ರಹಸ್ಯ ಪಾಲನೆ ಮಾಡುವುದು, ವೈಯಕ್ತಿಕ ಅಥವಾ ಸಾಮೂಹಿಕ ಸೊತ್ತಿನ ಮೇಲ್ನೋಟ ವಹಿಸುವುದು, ಯಾವುದೇ ಪದವಿ ಅಥವಾ ಹುದ್ದೆಯನ್ನು ಸ್ವೀಕರಿಸುವುದು ಮುಂತಾದ ವ್ಯಕ್ತಿಯ ಮೇಲಿನ ಭರವಸೆಯೊಂದಿಗೆ ಸಮಾಜ ಅವನಿಗೆ ನೀಡುವಂತಹ ಯಾವುದೇ ಹೊಣೆಗಾರಿಕೆಯಾಗಿರಬಹುದು. ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ತಿಳುವಳಿಕೆ ಇದ್ದೂ ಅಲ್ಲಾಹ್ ಮತ್ತು ರಸೂಲರೊಂದಿಗೆ ವಿಶ್ವಾಸಘಾತುಕವೆಸಗಬೇಡಿರಿ ಮತ್ತು ಅಮಾನತ್(ವಿಶ್ವಸ್ಥ ನಿಧಿ)ಗಳಲ್ಲಿ ವಿದ್ರೋಹವೆಸಗಬೇಡಿ.” (ಅಲ್ ಅನ್‍ಫಾಲ್: 27)
ಅಮಾನತ್ತನ್ನು ಕಾಪಾಡುವುದು ಪ್ರತಿಯೋರ್ವ ವಿಶ್ವಾಸಿಯ ಕರ್ತವ್ಯವಾಗಿದೆ. ಅದನ್ನು ಕಾಪಾಡಲು ಹೇಳಿದವನಿಗೆ ವಿದ್ರೋಹವೆಸಗುವುದು ಸತ್ಯವಿಶ್ವಾಸಿಗಳ ಲಕ್ಷಣವಲ್ಲ. ಅದು ಕಪಟವಿಶ್ವಾಸಿಯ ಸ್ವಭಾವವಾಗಿದೆ. ಕಪಟ ವಿಶ್ವಾಸಿಗಳ ಗುಣಗಳ ಪೈಕಿ ಅಮಾನತಿನಲ್ಲಿ ವಂಚನೆ ನಡೆಸುವುದು ಒಂದಾಗಿದೆ.
ಹುದೈಫ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ನಮ್ಮೊಂದಿಗೆ ಹೇಳಿದರು, “ವಿಶ್ವಾಸಾರ್ಹತೆ (ಅಮಾನತ್) ಮನುಷ್ಯರ ಹೃದಯಗಳ ಕೆಳಸ್ತರದಲ್ಲಿರುವುದಾಗಿದೆ.” ಬಳಿಕ ಕುರ್‍ಆನ್ ಅವತೀರ್ಣಗೊಂಡಾಗ ಜನರು ಕುರ್‍ಆನಿನಿಂದಲೂ ಹದೀಸ್‍ಗಳಿಂದಲೂ ಅದನ್ನು ಕಲಿತರು. ಮುಂದುವರಿದು ಪ್ರವಾದಿಯವರು(ಸ) ವಿಶ್ವಾಸಾರ್ಹತೆ ಇಲ್ಲವಾಗುವುದರ ಕುರಿತು ಹೇಳಿದರು. “ಓರ್ವ ವ್ಯಕ್ತಿ ನಿದ್ರಿಸುತ್ತಿರುವಾಗ ಅವನ ಹೃದಯದಿಂದ ವಿಶ್ವಾಸಾರ್ಹತೆಯನ್ನು ನೀಗಿಸಲಾಗುವುದು. ಬಳಿಕ ಅಲ್ಲಿ ಬೆಂಕಿ ತಾಗಿದಾಗ ಉಂಟಾಗುವಂತೆ ಸಣ್ಣ ಕಲೆ ಮಾತ್ರ ಅಲ್ಲಿ ಉಳಿದಿರುತ್ತದೆ. ಅವನು ಮತ್ತೆ ನಿದ್ರಿಸುವಾಗ ಉಳಿದ ಅಮಾನತ್ ಕೂಡಾ ನಷ್ಟವಾಗುವುದು. ಬಳಿಕ ಕೆಂಡ ತಾಗಿದಾಗ ಉಂಟಾಗುವ ಗುಳ್ಳೆಯಂತೆ ಒಂದು ಗುರುತು ಮಾತ್ರ ಉಳಿದಿರುತ್ತದೆ. ಅದು ತುಂಬಿರುವಂತೆ ತೋರುತ್ತದೆ. ಆದರೆ ಅದರೊಳಗೆ ಶೂನ್ಯವಾಗಿರುವುದು. ಜನರು ಪರಸ್ಪರ ಕ್ರಯ-ವಿಕ್ರಯ ನಡೆಯುತ್ತಿರುವರು. ಯಾರು ಕೂಡಾ ವಿಶ್ವಾಸಾರ್ಹತೆ ತೋರಿಸಲಿಕ್ಕಿಲ್ಲ. ಅಂತಹ ಸಂದರ್ಭದಲ್ಲಿ ಜನರು ಆಶ್ಚರ್ಯದಿಂದ ಹೇಳುವರು, “ಇಂತಿಂಥ ಕುಟುಂಬದಲ್ಲಿ ವಿಶ್ವಾಸಾರ್ಹ ವ್ಯಕ್ತಿಯೋರ್ವನಿದ್ದಾನೆ. ಆತ ಮಹಾ ಧೀರ, ವಿವೇಕಶಾಲಿ ಮತ್ತು ಬುದ್ಧಿವಂತನಾಗಿರುವನು. ಆದರೆ ಆತನ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟೂ ಈಮಾನ್ ಇರಲಿಕ್ಕಿಲ್ಲ.”
ಈಮಾನ್ ಮತ್ತು ಅಮಾನತ್ ಒಂದೇ ಪದದಿಂದ ಉದ್ಭವಗೊಂಡದ್ದಾಗಿವೆ. ಸತ್ಯವನ್ನು ಮನಸಾರೆ ಒಪ್ಪಿಕೊಂಡು ಅದಕ್ಕಾಗಿ ಎಲ್ಲವನ್ನೂ ಅರ್ಪಿಸಿದವನಿಗೆ ಕಪಟಿಯೂ ವಂಚಕನೂ ಆಗಲು ಎಂದೂ ಸಾಧ್ಯವಿಲ್ಲ. ಕಳ್ಳನು, ವಂಚಕನು ವಿಶ್ವಾಸಘಾತುಕನು ಮೊದಲಾದವರೆಲ್ಲರೂ ಸತ್ಯಕ್ಕೆ ವಿರುದ್ಧವಾಗಿದ್ದಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅನಸ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ನಮ್ಮ ಮುಂದೆ ಮಾಡುವ ಎಲ್ಲಾ ಭಾಷಣಗಳಲ್ಲೂ ಈ ರೀತಿ ನೆನಪಿಸುತ್ತಿದ್ದರು. ತಿಳಿಯಿರಿ, ವಿಶ್ವಾಸಾರ್ಹತೆ ಇಲ್ಲದವನಿಗೆ ಈಮಾನಿಲ್ಲ. ಕರಾರು ಪಾಲಿಸದವನಿಗೆ ಧರ್ಮವಿಲ್ಲ.”
ಅಮಾನತ್ ಎಂಬುದು ಮನುಷ್ಯ ಹುಟ್ಟಿನಿಂದಲೇ ಪಡೆದಿರುತ್ತಾನೆ. ಬಳಿಕ ಜನರು ಕುರ್‍ಆನಿನಿಂದಲೂ ಪ್ರವಾದಿ ವಚನಗಳಿಂದಲೂ ಅವರ ಎಲ್ಲಾ ಭಾಗಗಳನ್ನೂ ಕರಗತ ಮಾಡಿಕೊಂಡರು. ವಿಶ್ವಾಸಾರ್ಹತೆ, ಸದಾಚಾರ, ಧಾರ್ಮಿಕ ಪ್ರಜ್ಞೆಗಳೊಂದೂ ಮಾನವರಿಗೆ ಅಪರಿಚಿತವಾದ ವಿಚಾರವಲ್ಲ. ಇವೆಲ್ಲವೂ ಮನುಷ್ಯ ಎಂದು ಕರೆಸಿಕೊಳ್ಳಲಿಕ್ಕೆ ಪೂರಕವಾದ ವಿಚಾರಗಳಾಗಿವೆ. ಜನರಿಗೆ ಅಪರಿಚಿತವಾಗಿರುವ ಹೊಸ ವಿಚಾರಗಳನ್ನು ಮಾತ್ರ ಕಲಿಸಲು ಪ್ರವಾದಿಗಳು ಬಂದದ್ದಲ್ಲ. ಬದಲಾಗಿ ಅವರಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಮಾನವೀಯ ಮೌಲ್ಯಗಳಿಗೆ ಪ್ರಚೋದನೆ ನೀಡಲು ಆಗಮಿಸಿದ್ದರು.
ಮೇಲೆ ತಿಳಿಸಿರುವ ಹದೀಸ್‍ನಲ್ಲಿ ವಿಶ್ವಾಸಾರ್ಹತೆ ಸಷ್ಟವಾಗುವುದರ ಕುರಿತು ತಿಳಿಸಲಾಗಿದೆ. ಒಂದು ಸ್ವಭಾವವು ಓರ್ವನಿಂದ ಒಮ್ಮೆಲೇ ನಷ್ಟ ಹೊಂದುವುದಿಲ್ಲ. ಅದು ಅವನಿಂದ ಸ್ವಲ್ಪ ಸ್ವಲ್ಪವೇ ಸರಿದು ಹೋಗುತ್ತದೆ. ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳು ನಮ್ಮನ್ನು ಮಹಾಪಾಪಗಳ ವರೆಗೆ ತಲುಪಿಸುತ್ತವೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಾವು ತಪ್ಪು ಮಾಡುತ್ತೇವೆ. ಹಾಗೆ ನಿರಂತರವಾಗಿ ಮಾಡುವಾಗ ತಪ್ಪುಗಳ ಕುರಿತು ಮೊದಲಿದ್ದ ಧೋರಣೆಯು ಸಡಿಲಗೊಳ್ಳುತ್ತದೆ. ಮನಸ್ಸಿನಲ್ಲಿ ಉಂಟಾಗುತ್ತಿದ್ದ ಕಳವಳವು ಕ್ರಮೇಣ ದೂರವಾಗುತ್ತದೆ. ಹಾಗೇ ದೊಡ್ಡ ತಪ್ಪುಗಳನ್ನು ಮಾಡುವಾಗ ಯಾವುದೇ ಪಾಪ ಪ್ರಜ್ಞೆ ಇಲ್ಲದಾಗುತ್ತದೆ. ಅಮಾನತ್ತಿನ ಸ್ಥಿತಿಯೂ ಇದೇ ರೀತಿಯಾಗಿದೆ. ಅದನ್ನು ಪಾಲಿಸಲು ಅನಾಸ್ಥೆ ತೋರುವುದಾದರೆ ಮುಂದೆ ಅದು ನಮ್ಮಿಂದ ಕಳೆದುಹೋಗುತ್ತದೆ. ಅದಕ್ಕೆ ಕೇವಲ ನಿದ್ರೆಯ ಸಮಯವಷ್ಟೇ ಸಾಕು. ಅವನು ಎಚ್ಚೆತ್ತುಕೊಳ್ಳುವಾಗ ಕಪಟಿಯೂ ವಿಶ್ವಾಸಘಾತುಕನೂ ಆಗಿ ಬದಲಾಗಿರುತ್ತಾನೆ. ಇಂತಹವರು ಹೊರ ಪ್ರಪಂಚಕ್ಕೆ ಸಭ್ಯರಾಗಿ ಕಂಡರೂ ಅವರ ಹೃದಯವು ಟೊಳ್ಳಾಗಿರುತ್ತದೆ. ವಂಚನೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಪೈಕಿ ಅತ್ಯುತ್ತಮರು ನನ್ನ ಕಾಲದವರಾಗಿದ್ದಾರೆ. ಬಳಿಕ ಅವರ ನಂತರ ಬರುವವರು. ಕೊನೆಗೆ ಒಂದು ವಿಭಾಗದ ಜನರು ಬರುವರು. ಅವರು ಸಾಕ್ಷಿ ಹೇಳುವರು. ಆದರೆ ಯಾರೂ ಅವರಲ್ಲಿ ಸಾಕ್ಷಿ ನುಡಿಯಲು ಹೇಳಲಿಕ್ಕಿಲ್ಲ. ಅವರು ವಂಚನೆ ನಡೆಸುವರು. ವಿಶ್ವಾಸಘಾತುಕರಾಗುವರು. ಅವರು ಪ್ರತಿಜ್ಞೆಗಳನ್ನು ಮಾಡುವರು. ಆದರೆ ಅವುಗಳನ್ನು ಪಾಲಿಸಲಿಕ್ಕಿಲ್ಲ. ಹೊರ ನೋಟಕ್ಕೆ ಅವರು ಸಭ್ಯರಾಗಿರುವರು.”
ಅತ್ಯಂತ ಹೆಚ್ಚು ವಿಶ್ವಾಸಾರ್ಹತೆ ತೋರಬೇಕಾಗಿರುವುದು ಜನರ ಮಧ್ಯೆ ಇರುವ ಆರ್ಥಿಕ ವ್ಯವಹಾರದಲ್ಲಾಗಿದೆ. ಹಣದ ವಿಚಾರದಲ್ಲಿ ಹೆಚ್ಚಿನ ಮಂದಿ ಎಡವಿ ಬೀಳುವ ಸಾಧ್ಯತೆ ಇದೆ. ಹಣವು ಮನುಷ್ಯನಿಗೆ ಅಲಂಕಾರ ವಸ್ತುವಾಗಿದೆ. ಅವನು ಸದಾ ಅದರ ಕಡೆಗೆ ಆಕರ್ಷಿತನಾಗಿರುತ್ತಾನೆ. ಮಾನವರ ಶರೀರದಲ್ಲಿ ರಕ್ತದಂತೆ ಚಲಿಸುವ ಶೈತಾನನು ಹಣದ ವಿಚಾರದಲ್ಲಿ ವಂಚನೆ ನಡೆಸಲು ಪ್ರೇರೇಪಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಕಡೆಗಣಿಸಿದರೆ ನಾವು ಪಾಪಿಗಳ ಸಾಲಿಗೆ ಸೇರುವುದು ನಿಶ್ಚಿತವಾಗಿದೆ. ಹಣದ ವಿಚಾರದಲ್ಲಿ ವಂಚನೆ ನಡೆಸುವುದು ಮಹಾ ಅಪರಾಧವಾಗಿದೆ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಹೇಳುತ್ತಾರೆ,
“ವಿಶ್ವಾಸ ವಂಚನೆ ನಡೆಸದಿದ್ದರೆ ರಕ್ತ ಸಾಕ್ಷಿಯಾದವನ ಎಲ್ಲಾ ಪಾಪಗಳು ಮನ್ನಿಸಲ್ಪಡುತ್ತವೆ. ಅಂತ್ಯ ದಿನದಲ್ಲಿ ಅಂತಹ ವ್ಯಕ್ತಿಯನ್ನು ಕರೆತರಲಾಗುವುದು. ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಪ್ರಾಣವನ್ನು ಅರ್ಪಿಸಿರುವವನಾಗಿರುವನು. ಆತನಲ್ಲಿ ಅಲ್ಲಾಹನು ಅಮಾನತ್ತುಗಳನ್ನು ಪೂರ್ತೀಕರಿಸಲು ಹೇಳುವನು. ಆಗ ಅವನು ಹೇಳುವನು, ‘ಪ್ರಭೂ, ಐಹಿಕ ಜೀವನವು ಕೊನೆಗೊಂಡಿತಲ್ಲವೇ. ಇನ್ನು ನಾನು ಅದನ್ನು ಪೂರ್ತಿಗೊಳಿಸುವುದು ಹೇಗೆ?’ ಆಗ ಆತನನ್ನು ನರಕಕ್ಕೆ ಎಳೆದೊಯ್ಯಲು ಆಜ್ಞೆ ಬರುತ್ತದೆ. ಭೂಮಿಯಲ್ಲಿ ಆತನ ಮೇಲೆ ವಿಶ್ವಾಸವಿರಿಸಿ ಜನರು ನೀಡಿರುವ ಸೊತ್ತುಗಳೆಲ್ಲವೂ ಯಥಾs ಪ್ರಕಾರ ನರಕದಲ್ಲಿ ಆತ ಕಾಣುವನು. 'ಬಚಾವಾದೆ' ಎಂಬ ಭಾವನೆಯಿಂದ ಅವೆಲ್ಲವನ್ನೂ ಬಾಚಿ ನರಕದಿಂದ ಹೊರಬರಲು ಪ್ರಯತ್ನಿಸುವನು. ಆದರೆ ಅವೆಲ್ಲವೂ ಅವನ ಬಾಹು ಬಂಧನದಿಂದ ಜಾರಿ ಬೀಳುವುದು. ಆತ ಮತ್ತೆ ಅದನ್ನು ಹೊತ್ತುಕೊಳ್ಳಲು ಪ್ರಯತ್ನಿಸುವನು. ಆಗಲೂ ಅವು ಕೆಳಗೆ ಬೀಳುತ್ತಿರುವುವು. ಇದೇ ಪ್ರಕಾರ ಆತ ನರಕದಲ್ಲಿ ಕಳೆಯುವನು.” ಇಬ್ನು ಮಸ್‍ಊದ್(ರ) ಮುಂದುವರಿಸುತ್ತಾ ಹೇಳುತ್ತಾರೆ, "ತಿಳಿಯಿರಿ, ಎಲ್ಲವೂ ಅಮಾನತ್ತಾಗಿದೆ. ನಮಾಝ್, ವುಝೂ, ಅಳತೆ, ತೂಕ ಮೊದಲಾದವುಗಳೆಲ್ಲವೂ ಅಮಾನತ್ತಾಗಿದೆ. ಅತ್ಯಂತ ದೊಡ್ಡ ಅಮಾನತ್ ವಿಶ್ವಾಸವಿರಿಸಿ ನೀಡಿರುವ ಸಂಪತ್ತಾಗಿದೆ. ಅಮಾನತ್ತಿನಲ್ಲಿ ವಂಚನೆ ನಡೆಸಿರುವ ರಕ್ತಸಾಕ್ಷಿಗಳ ದುಃಸ್ಥಿತಿಯು ಈ ರೀತಿಯಾದರೆ ನಮ್ಮ ಗತಿ ಏನಾಗಿರಬಹುದು!"
ಪ್ರವಾದಿ(ಸ) ಈ ಕುರಿತು ಎಚ್ಚರಿಕೆ ನೀಡಿರುವರು, "ಎಲ್ಲ ವಂಚಕರಿಗೂ ಅಂತ್ಯ ದಿನದಲ್ಲಿ ಒಂದು ಪತಾಕೆ ನೀಡಲಾಗುವುದು. ವಂಚನೆಯ ಪ್ರಮಾಣಕ್ಕನುಸಾರವಾಗಿ ಅದು ಎತ್ತರಕ್ಕೇರುತ್ತದೆ. ತಿಳಿಯಿರಿ, ನಾಯಕ ನಡೆಸುವ ವಿಶ್ವಾಸ ವಂಚನೆಗಿಂತ ದೊಡ್ಡ ವಿಶ್ವಾಸ ವಂಚನೆ ಬೇರೊಂದಿಲ್ಲ."
ನಾವು ಹಲವು ವೇಳೆ ಅಮಾನತ್ತಿನ ವಿಚಾರದಲ್ಲಿ ಅಸಡ್ಡೆ ತೋರುತ್ತೇವೆ. ಇದರಿಂದ ಮಹಿಳೆಯರೂ ಹೊರತಾಗಿಲ್ಲ. ಯಾರಾದರೂ ಏನಾದರೂ ವಿಚಾರವೊಂದನ್ನು ನಮಗೆ ತಿಳಿಸಿ ಯಾರಿಗೂ ಹೇಳಬಾರದೆಂದು ಹೇಳಿರುತ್ತಾರೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಅವರು ಹೇಳಿದ ವಿಚಾರವು ಒಂದು ಅಮಾನತ್ತಾಗಿರುತ್ತದೆ. ಅವರು ನಮ್ಮ ಮೇಲೆ ವಿಶ್ವಾಸವಿರಿಸಿ ಹೇಳಿರುತ್ತಾರೆ. ಆದರೆ ನಾವು ಮಾಡುವ ಕೆಲಸವೇ ಬೇರೆ. ನಾವು ಅದನ್ನು ಇತರರಲ್ಲಿ ತಿಳಿಸುತ್ತೇವೆ. ಅದರೊಂದಿಗೆ "ಇದು ನಿನ್ನಲ್ಲಿ ಮಾತ್ರ ಹೇಳುವುದು, ಯಾರಲ್ಲೂ ಹೇಳಬಾರದೆಂದು ಆತ ತಿಳಿಸಿದ್ದಾನೆ" ಎಂಬ ಔದಾರ್ಯದ ಮಾತನ್ನಾಡಲು ಮರೆಯುವುದಿಲ್ಲ. ಅದು ಹಾಗೇ ಬಾಯಿಯಿಂದ ಬಾಯಿಗೆ ಹರಡಿ ರಹಸ್ಯವಿದ್ದದ್ದು ಬಹಿರಂಗವಾಗುತ್ತದೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವ, ನಾವು ಕ್ಷುಲ್ಲಕವೆಂದು ಭಾವಿಸುವ ದೊಡ್ಡ ವಿಚಾರವಾಗಿದೆ.
ವಿಶ್ವಾಸಿಯಾದವನು ವಿಶ್ವಾಸದ್ರೋಹವೆಸಗುವುದು ಧರ್ಮವನ್ನೇ ಅವಹೇಳನ ಮಾಡಿದಂತೆ. ಅಂತಹವರು ಇಹಲೋಕದಲ್ಲೂ ಪರಲೋಕದಲ್ಲೂ ಮೌಲ್ಯಹೀನರಾಗುವರು. ಜನರ ಮಧ್ಯೆ ವಿಶ್ವಾಸ ಗಳಿಸಲು ವರ್ಷಗಳ ಸಭ್ಯ ವರ್ತನೆ ಬೇಕಾಗಬಹುದು. ಆದರೆ ಅದನ್ನು ಕಳೆದುಕೊಳ್ಳಲು ಒಂದು ಕ್ಷದ ವಂಚನೆ, ಕಪಟತನದ ವರ್ತನೆ ಧಾರಾಳ ಸಾಕು. ವಿಶ್ವಾಸ ದ್ರೋಹವು ಕಪಟ ವಿಶ್ವಾಸಿಗಳ ಸ್ವಭಾವವಾದುದರಿಂದ ನಾವು ಅವರ ಸಾಲಿಗೆ ಸೇರದಂತಾಗಲು ಗರಿಷ್ಠ ಪ್ರಯತ್ನ ನಡೆಸಬೇಕಾಗಿದೆ. ಅದಕ್ಕೆ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಧಾರೆಯೆರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ಮಗಳ ಬಗ್ಗೆ ಜಾಗೃತರಾಗಬೇಕು. ಸರ್ವಶಕ್ತನಾದ ಅಲ್ಲಾಹನು ಅದಕ್ಕಾಗಿ ನಮ್ಮೆಲ್ಲರನ್ನೂ ಅನುಗ್ರಹಿಸಲಿ.


ಸೋಮವಾರ, ಅಕ್ಟೋಬರ್ 15, 2012

ನಿಮ್ಮ ಸಂಪತ್ತು ಪಿಶಾಚಿಯ ಹಿಡಿತದಲ್ಲಿರಬಹುದೇ?


ದಾನ ಧರ್ಮವು ಶ್ರೇಷ್ಠ ಕರ್ಮಗಳ ಪೈಕಿ ಒಂದಾಗಿದೆ. ಇದು ಧನಿಕರ ಮೇಲಿನ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ದಾನ ಮಾಡುವುದು ಅನಿವಾರ್ಯವಾಗಿದೆ. ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳ ಜೀವನದ ಕಡೆಗೊಮ್ಮೆ ಕಣ್ಣೋಡಿಸುವುದಾದರೆ ದಾನ ಧರ್ಮದ ಉಜ್ವಲ ಉದಾಹರಣೆಯನ್ನು ದರ್ಶಿಸಲು ಸಾಧ್ಯವಿದೆ. ಅವರು ಎಲ್ಲವನ್ನೂ ಅಲ್ಲಾಹನ ಮಾರ್ಗದಲ್ಲಿ ದಾನ ಮಾಡುತ್ತಿದ್ದರು. ಮಾತ್ರವಲ್ಲ, ಈ ವಿಷಯದಲ್ಲಿ ಪರಸ್ಪರ ಪೈಪೋಟಿ  ನಡೆಸುತ್ತಿದ್ದರು. ಸಂಪತ್ತನ್ನು ದಾನ ಮಾಡಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು. ದಾನ ಮಾಡಿದ್ದರಿಂದ ಯಾರು ಕೂಡಾ ದಿವಾಳಿಯಾಗಿಲ್ಲ. ದಿವಾಳಿಯಾಗುವುದೂ ಇಲ್ಲ.
ಸಂಪತ್ತೆಲ್ಲ ಒಂದು ಕಡೆಯೇ ವ್ಯಕ್ತಿಗತವಾಗಿ ಶೇಖರಣೆಯಾಗುವಾಗ ಬಡತನ, ದಾರಿದ್ರ್ಯ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಸಂಪತ್ತು ಜನರ ಮಧ್ಯೆ ಹರಿದಾಡುವಾಗ ಬಡತನದ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅದಕ್ಕಾಗಿಯೇ ಅಲ್ಲಾಹನು ಝಕಾತ್, ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳ ಸಾಲಿಗೆ ಸೇರಿಸಿದ್ದಾನೆ. ಮರಣದ ಬಳಿಕವೂ ಪ್ರತಿಫಲ ಲಭಿಸುವ ಕರ್ಮಗಳ ಪೈಕಿ ಒಂದು ಕರ್ಮವನ್ನಾಗಿ ಮಾಡಿದ್ದಾನೆ.
ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಜನರು ಹಿಂದೆ ಸರಿಯುವುದನ್ನು ನಾವು ಕಾಣುತ್ತೇವೆ. ಕಾರಣ ಸಂಪತ್ತು ಮನುಷ್ಯರನ್ನು ಆಕರ್ಷಣೆಗೆ ಒಳಪಡಿಸುವ ಒಂದು ಸಾಧನವಾಗಿದೆ. ಗಳಿಸಿದಷ್ಟೂ ಬೇಕೆನಿಸುವ ಒಂದು ಅನುಗ್ರಹವಾಗಿದೆ ಸಂಪತ್ತು. ಸುಖ ಸೌಲಭ್ಯಗಳೆಲ್ಲ ಇದ್ದೂ ಅದನ್ನು ದೇವಮಾರ್ಗದಲ್ಲಿ ವ್ಯಯಿಸದೆ ಆಡಂಬರದ ಪ್ರದರ್ಶನಕ್ಕೆ ವ್ಯಯಿಸಿ ಕೊನೆಗೆ ಮರಣ ಸನ್ನಿಹಿತವಾಗುವಾಗ “ನಾನು ನನ್ನ ಸಂಪತ್ತೆಲ್ಲವನ್ನು ದಾನ ಮಾಡುತ್ತೇನೆ” ಎಂದು ಉಯಿಲು ಬರೆದಿಡುವ ಕೆಲವರಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ಬಡವರ್ಗವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದವರಾಗಿರುತ್ತಾರೆ. ಸ್ವಂತ ಸುಖಾಡಂಬರಗಳಿಗೆ ಮಹತ್ವ ನೀಡಿದವರು. ಕೊನೆಗೆ ಜೀವನವು ಕೊನೆಗೊಂಡಿತೆಂದು ಅರಿವಾಗುವಾಗ ಎಲ್ಲವನ್ನೂ ದೇವನ ಮಾರ್ಗದಲ್ಲಿ ವ್ಯಯಿಸುವ ತೀರ್ಮಾನ ಕೈಗೊಂಡು ದೇವನನ್ನು ಮರುಳು ಮಾಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅಲ್ಲಾಹನ ಪ್ರೀತಿ ಗಳಿಸಲಿಕ್ಕೆ ಮರಣಾಸನ್ನ ಸಮಯದಲ್ಲಿ ನಡೆಸುವ ಇಂತಹ ನಟನೆಗಳು ಸಾಕೆಂದು ಅವರು ಭಾವಿಸುತ್ತಾರೆ.
ದಾನವು ಅತ್ಯಂತ ಪ್ರತಿಫಲಾರ್ಹವಾಗುವುದು ವ್ಯಕ್ತಿಯ ಆರೋಗ್ಯ ಸಮಯದಲ್ಲಿ ವ್ಯಯಿಸುವ ಮೂಲಕವಾಗಿದೆ. ಅಬೂ ಹುರೈರಾ(ರ) ವರದಿ ಮಾಡುತ್ತಾರೆ: ಓರ್ವರು ಪ್ರವಾದಿಯವರ(ಸ) ಬಳಿ ಬಂದು ಕೇಳಿದರು, “ಅಲ್ಲಾಹನ ಸಂದೇಶವಾಹಕರೇ! ಅತ್ಯಂತ ಪ್ರತಿಫಲಾರ್ಹವಾದ ದಾನ ಯಾವುದು?” ಆಗ ಪ್ರವಾದಿಯವರು(ಸ) ಹೇಳಿದರು, “ನಾನು ಹೇಳಿಕೊಡುತ್ತೇನೆ. ನೀನು ಆರೋಗ್ಯವಂತನೂ ಜಿಪುಣನೂ ಆಗಿರಬೇಕು. ಅದೇ ವೇಳೆ ಬಡತನವನ್ನು ಹೆದರುತ್ತಿ ಮತ್ತು ಐಶ್ವರ್ಯವನ್ನು ಬಯಸುತ್ತಿ. ಈ ಸಂದರ್ಭದಲ್ಲಿ ನೀನು ಮಾಡುವ ದಾನವು ಶ್ರೇಷ್ಠ ದಾನವಾಗಿದೆ. ದಾನ ಮಾಡಲು ನೀನು ಆತ್ಮವು ಗಂಟಲಿಗೆ ತಲುಪುವವರೆಗೆ ಕಾಯಬಾರದು. ಇಂತಿಂಥವನಿಗೆ ಇಂತಿಷ್ಟು ಕೊಡಬೇಕು ಇಂತಿಂಥವನಿಗೆ ಅಷ್ಟು ಕೊಡಬೇಕು ಎಂದೆಲ್ಲಾ ಆಗ ನೀನು ಹೇಳುತ್ತಿರುವೆ. ಆದರೆ ವಾಸ್ತವದಲ್ಲಿ ಆ ಸಂದರ್ಭ ಬಂದೊದಗಿದಾಗಲೇ ಸೊತ್ತೆಲ್ಲವೂ ಇತರರದ್ದಾಗಿರುತ್ತದೆ.”
ತನ್ನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಇತರರ ಅಗತ್ಯತೆಗಳಿಗೂ ಸ್ಪಂಧಿಸುವ ಉನ್ನತ ಗುಣವನ್ನು ಓರ್ವ ವಿಶ್ವಾಸಿ ಹೊಂದಿರುತ್ತಾನೆ. ತನ್ನ ಎಲ್ಲಾ ಬೇಡಿಕೆಗಳನ್ನು ಬದಿಗಿಟ್ಟು ಇತರರ ಕರೆಗೆ ಆತನು ಓಗೊಡುತ್ತಾನೆ. ತನ್ನ ಹಸಿವೆಯನ್ನು ಕಡೆಗಣಿಸಿ ಇತರರ ಹಸಿವಿನ ಶಮನಕ್ಕೆ ಪ್ರಯತ್ನಿಸುತ್ತಾನೆ. ಪವಿತ್ರ ಕುರ್‍ಆನ್ ಸತ್ಯವಿಶ್ವಾಸಿಗಳನ್ನು ಈ ರೀತಿ ಪರಿಚಯಿಸುತ್ತದೆ. “ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ. (ಮತ್ತು ಅವರೊಡನೆ ಹೇಳುತ್ತಾರೆ) ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ. ನಮಗಂತು ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀರ್ಘ ದಿನದ ಭಯವಿದೆ.” (ಅದ್ದಹ್ರ್: 8-10) ಅದೇ ರೀತಿ ಸೂರಃ ಅಲ್‍ಹಶ್ರ್‍ನ 9ನೇ ಸೂಕ್ತದಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ, “ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲಿನದಕ್ಕಿಂತ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.”
“ನಮ್ಮ ಅವಶ್ಯಕತೆಗಳೆಲ್ಲಾ ಮುಗಿದ ಬಳಿಕ ಇತರರಿಗೆ ನೆರವಾಗುವ” ಎಂದು ತೀರ್ಮಾನಿಸುವ ಹಲವರಿದ್ದಾರೆ. ಇಂತಹ ಮನೋಭಾವವು ಒಂದು ಮೌಢ್ಯವಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಕೊನೆಯೆಂಬುದಿಲ್ಲ. ಅದು ನಿರಂತರ ಮುಂದುವರಿಯುತ್ತದೆ. ಒಂದು ಸಿಕ್ಕಿದರೆ ಮತ್ತೊಂದನ್ನು ಗಳಿಸಬೇಕು ಎಂಬ ಹಂಬಲ ಅವನಲ್ಲಿರುತ್ತದೆ. ಮನಸ್ಸಿನಲ್ಲಿ ಸಂತೃಪ್ತಿ ಎಂಬ ಅಂಶವಿಲ್ಲದ ವ್ಯಕ್ತಿಗೆ ಎಷ್ಟೇ ಲಭಿಸಿದರೂ ಅದು ಸಾಕಾಗಲಿಕ್ಕಿಲ್ಲ. “ಮಣ್ಣಲ್ಲದೆ ಮನುಷ್ಯನ ಬಾಯಿಯನ್ನು ತುಂಬಲಿಕ್ಕಿಲ್ಲ” ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ವಿಶ್ವಾಸಿಗಳು ದಾನ ಧರ್ಮದ ವಿಚಾರದಲ್ಲಿ ಎಂದೂ ಮುಂದಿರುತ್ತಾರೆ. ಅಲ್ಪವನ್ನು ತಮಗಿಟ್ಟು ಮಿಕ್ಕಿದ್ದನ್ನು ಇತರರಿಗೆ ನೀಡುತ್ತಾರೆ. ಕುರ್‍ಆನಿನಲ್ಲಿ ವಿಶ್ವಾಸಿಗಳ ಸ್ವಭಾವದ ಕುರಿತು ಹೀಗೆ ಹೇಳಲಾಗಿದೆ. “ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ದಾನ ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಆಲಿಇಮ್ರಾನ್: 134)
ದಾನಧರ್ಮದಿಂದ ಬಡತನ ಬರುತ್ತದೆ. ಎಂಬ ಅಂಜಿಕೆಯು ವಿಶ್ವಾಸಿಗೆ ತರವಲ್ಲ. ಅಲ್ಲಾಹನು ಸಂಪತ್ತನ್ನು ವ್ಯಯಿಸುವುದು ಅಲ್ಲಾಹನ ಬೇಡಿಕೆಯಾಗಿದೆ. ಹಾಗೆ ವ್ಯಯಿಸಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆಯೇ ಹೊರತು ಕಡಿತಗೊಳಿಸುವುದಿಲ್ಲ. ದಾನ ಮಾಡಿ ಬೀದಿ ಪಾಲಾದವರಿಲ್ಲ. ಬಡತನಕ್ಕೆ ಹೆದರಿ ದಾನ ಧರ್ಮಗಳಿಂದ ಹಿಂದೆ ಸರಿಯುವವರನ್ನು ಅಲ್ಲಾಹನು ವಿಮರ್ಶಿಸಿದ್ದಾನೆ. “ಶೈತಾನನು ನಿಮ್ಮನ್ನು ದಾರಿದ್ರ್ಯದಿಂದ ಭಯಭೀತಗೊಳಿಸುತ್ತಾನೆ ಮತ್ತು ಅಶ್ಲೀಲ ಕಾರ್ಯಗಳನ್ನೆಸಗುವ ಪ್ರಚೋದನೆಯನ್ನೀಯುತ್ತಾನೆ. ಆದರೆ, ಅಲ್ಲಾಹನು ನಿಮಗೆ ತನ್ನ ಕ್ಷಮೆ ಹಾಗೂ ಅನುಗ್ರಹದ ವಚನವನ್ನೀಯುತ್ತಾನೆ. ಅಲ್ಲಾಹನು ಮಹಾ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.”
ಪ್ರವಾದಿಯವರು(ಸ) ಹೇಳಿದರು, “ದಾನ ಮಾಡುವುದನ್ನು ತಡೆಯುತ್ತಾ ತನ್ನ ಸಂಪತ್ತಿನಲ್ಲಿ ಕಚ್ಚಿ ಹಿಡಿದಿರುವ ಎಪ್ಪತ್ತು ಪಿಶಾಚಿಗಳ ದವಡೆಗಳನ್ನು ಅದರಿಂದ ಬೇರ್ಪಡಿಸದೆ ಯಾರಿಗೂ ಏನನ್ನೂ ದಾನ ಮಾಡಲು ಸಾಧ್ಯವಿಲ್ಲ.” ದಾನ ಮಾಡಲು ಒಪ್ಪದ ಮನಸ್ಥಿತಿಯನ್ನು ಈ ಪ್ರವಾದಿ ವಚನವು ಬೆಟ್ಟು ಮಾಡುತ್ತದೆ. ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವರ ಸಂಪತ್ತನ್ನು ಶೈತಾನನು ಹಿಡಿದಿಟ್ಟುಕೊಂಡಿರುತ್ತಾನೆ ಎಂಬುದು ಮೇಲಿನ ಪ್ರವಾದಿ ವಚನದ ಸಾರವಾಗಿದೆ. ಇದು ಶೈತಾನನಿಗೆ ತಲೆಬಾಗಿದಂತೆ. ಹಾಗೆ ಮಾಡುವುದು ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.
ಎಲ್ಲ ಕರ್ಮಗಳಿಗೂ ಸಂಕಲ್ಪ ಶುದ್ಧಿ ಇರಬೇಕು. ದಾನ ಧರ್ಮದ ವಿಚಾರದಲ್ಲೂ ಇದು ಬಹಳ ಮುಖ್ಯವಾಗಿದೆ. ತಮ್ಮ ಸಂಪತ್ತನ್ನು ಯಥೇಚ್ಛವಾಗಿ ದಾನ ಮಾಡಿ ಅದರ ಹಿಂದೆ ‘ತಾನು ಕೊಡುಗೈ ದಾನಿ’ ಎಂದು ಜನರಿಂದ ಕರೆಸಿಕೊಳ್ಳಬೇಕೆಂಬ ಉದ್ದೇಶವಿದ್ದರೆ, ಆ ದಾನವು ವ್ಯರ್ಥ ಎಂಬುದರಲ್ಲಿ ಎರಡು ಮಾತಿಲ್ಲ. ದಾನ ಮಾಡಬೇಕಾದುದು ಅಲ್ಲಾಹನ ಸಂತೃಪ್ತಿಯನ್ನು ಬಯಸಿಯೇ ಹೊರತು ಅದನ್ನು ಪಡೆಯುವವನ ಸಂತೃಪ್ತಿಗಾಗಿ ಅಲ್ಲ. ಅಂತಹ ದಾನದಿಂದ ಅವನಿಗೆ ಈ ಭೂಮಿಯಲ್ಲಿ ಗೌರವಾದರಗಳು ಲಭಿಸಬಹುದು. ಆದರೆ ಪರಲೋಕದಲ್ಲಿ ಯಾವುದೇ ಬೆಲೆ ಇರಲಿಕ್ಕಿಲ್ಲ. ಅದ್ದರಿಂದ ನಾವು ನಮ್ಮ ದಾನಧರ್ಮಗಳ ಹಿಂದೆ ತೋರಿಕೆಯ ಭಾವವು ಬರದಂತೆ ಎಚ್ಚರ ವಹಿಸಬೇಕು. ತೋರಿಕೆಗಾಗಿ ಮಾಡುವ ಕರ್ಮಗಳು ಅತ್ಯಂತ ಸಣ್ಣ ಶಿರ್ಕಾಗಿದೆ ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ದಾನ ಮಾಡಿ ಶಿಕ್ಷೆಗೆ ಗುರಿಯಾಗುವ ದು:ಸ್ಥಿತಿಯಿಂದ ಪಾರಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಅಕ್ಟೋಬರ್ 09, 2012

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ......

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ಕೊಲ್ಲಲು ಹೇಳಿಲ್ಲ . ಆದರೂ ಎಲ್ಲರೂ ಇಸ್ಲಾಮನ್ನು  ದೂರುತ್ತಾರೆ ... ಯಾಕೆ ?  ಇತರರ ಮಾತು ಕೇಳಿ ನೀವು ಮೂರ್ಕರಾಗಬೇಡಿ . ಇಸ್ಲಾಮಿನ ಕುರಿತು ಕಲಿಯಿರಿ . ಇಸ್ಲಾಂ ಧರ್ಮವು  ರಹಸ್ಯವಲ್ಲ . ಅದು ತೆರೆದ ಪುಸ್ತಕವಾಗಿದೆ . ಯಾರಿಗೂ ಅದರ ಬಗ್ಗೆ ಅಧ್ಯಯನ ನಡೆಸಬಹುದು .. ಇನ್ನೇಕೆ ತಡ .. ಕೂಡಲೇ ತಯಾರಾಗಿ . 

ಮಂಗಳವಾರ, ಸೆಪ್ಟೆಂಬರ್ 25, 2012

ಜಾಗ್ರತೆ, ನಿಮ್ಮ ಶತ್ರು ನಿಮ್ಮಲ್ಲೇ ಇದ್ದಾರೆ!

ಸಂಪತ್ತು ಮತ್ತು ಸಂತಾನಗಳು ಅಲ್ಲಾಹನು ನೀಡಿರುವ ದೊಡ್ಡ ಅನುಗ್ರಹಗಳಾಗಿವೆ. ಮಾನವರು ಈ ವಸ್ತುಗಳನ್ನು ಸದಾ ಆಶ್ರಯಿಸಿರುತ್ತಾರೆ. ಸಂಪತ್ತು ಮತ್ತು ಸಂತಾನಗಳ ಗಳಿಕೆಗಾಗಿ ಕಷ್ಟ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನು ಪಡೆಯುಲು ಹಾತೊರೆಯದವರಿದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವುಗಳನ್ನು ಬಯಸುತ್ತಾರೆ. ಮಾನವನ ಐಹಿಕ ಜೀವನವನ್ನೂ ಪರಲೋಕ ಜೀವನವನ್ನೂ ಯಶಸ್ವಿ ಗೊಳಿಸುವ ಶಕ್ತಿ ಈ ಎರಡೂ ಅನುಗ್ರಹಗಳಿಗಿವೆ. ಐಹಿಕ ಜೀವನಕ್ಕೆ ಸಂಬಂಧಿಸಿದಂತೆ ಇವುಗಳು ಕೇವಲ ಅಲಂಕಾರಗಳಾಗಿವೆ. ಅಲ್ಲಾಹನು ಹೇಳುತ್ತಾನೆ, “ಜನರಿಗೆ ಇಂದ್ರಿಯಾಸಕ್ತಿಗಳಾದ-ಸ್ತ್ರೀಯರು, ಮಕ್ಕಳು, ಚಿನ್ನ-ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು ಜಾನುವಾರುಗಳು ಮತ್ತು ಕೃಷಿ ಭೂಮಿ-ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಆದರೆ, ಇವೆಲ್ಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳು. ಯಥಾರ್ಥದಲ್ಲಿ ಅತ್ಯುತ್ತಮ ವಾಸ ಸ್ಥಳವಂತು ಅಲ್ಲಾಹನ ಬಳಿಯಲ್ಲಿದೆ.” (ಆಲಿ ಇಮ್ರಾನ್: 14)
ಇನ್ನೊಂದೆಡೆ ಹೀಗೆ ಹೇಳಲಾಗಿದೆ. “ಈ ಸೊತ್ತು ಮತ್ತು ಸಂತತಿಗಳು ಕೇವಲ ಲೌಕಿಕ ಜೀವನದ (ನಿಮ್ಮ ಪ್ರಭುವಿನ ಬಳಿ) ಕ್ಷಣಿಕ ಸೊಬಗು ಮಾತ್ರ. ವಾಸ್ತವದಲ್ಲಿ, ಉಳಿಯುವ ಪುಣ್ಯ ಕಾರ್ಯಗಳೇ ಪರಿಣಾಮದ ದೃಷ್ಟಿಯಿಂದ ಶ್ರೇಷ್ಠವಾಗಿರುತ್ತವೆ. ಅವುಗಳ ಮೇಲೆಯೇ ಉತ್ತಮ ನಿರೀಕ್ಷೆಗಳನ್ನಿರಿಸಿಕೊಳ್ಳಬಹುದು.” (ಅಹ್‍ಕಾಫ್: 46)
ಸಂಪತ್ತು ಮತ್ತು ಸಂತಾನಗಳನ್ನು ಈ ಲೋಕದಲ್ಲಿ ನಮಗೆ ಆಕರ್ಷಣೀಯ  ವಸ್ತುಗಳನ್ನಾಗಿ ಮಾಡಲಾಗಿದೆ. ಅವುಗಳಿಗೆ ಮಾರು ಹೋಗುವುದು ಮಾನವನ ದೌರ್ಬಲ್ಯಗಳಲ್ಲಿ ಸೇರಿದೆ. ಮನುಷ್ಯನ ಪರಲೋಕ ವಿಜಯವು ಇವುಗಳ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಾವು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಈ ವಸ್ತುಗಳು ಕೊನೆಗೊಂದು ದಿನ ನಮ್ಮ ಶತ್ರುಗಳಾಗುತ್ತವೆ. ಇಬ್ನುಮಾಲಿಕುಲ್ ಅಶ್‍ಅರಿಯವರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿದರು.
 لَيْسَ عَدُوُّكَ الَّذِي إِذَا قَتَلَكَ أَدْخَلَكَ الْجَنَّةَ ، وَإِذَا قَتَلْتَهُ كَانَ لَكَ نُورًا أَعْدَى عَدُوًّا لَكَ نَفْسُكَ الَّتِي بَيْنَ جَنْبَيْكَ “ನೀನು ಕೊಂದರೆ ನಿನಗೆ ಪ್ರಕಾಶಮಯವಾಗುವ ಮತ್ತು ನಿನ್ನನ್ನು ಕೊಂದು ಬಿಟ್ಟರೆ ನಿನಗೆ ಸ್ವರ್ಗ ಲಭಿಸಲು ಕಾರಣಕರ್ತನಾಗುವವನಲ್ಲ ನಿನ್ನ ನೈಜ ಶತ್ರು. ಬದಲಾಗಿ ನಿನ್ನ ಬೆನ್ನೆಲುಬಿನಿಂದ ನಿನಗೆ ಹುಟ್ಟಿದ ನಿನ್ನ ಸಂತಾನಗಳಾಗಿರಬಹುದು ನಿನ್ನ ಅತ್ಯಂತ ದೊಡ್ಡ ಶತ್ರು. ಆ ಬಳಿಕ ನೀನು ಶೇಖರಿಸಿಟ್ಟಿರುವ ಸಂಪತ್ತಾಗಿದೆ.”
ನಮ್ಮ ಶತ್ರುಗಳು ಹೊರಗೆಲ್ಲೋ ಇದ್ದಾರೆ ಎಂದು ನಾವು ಭಾವಿಸಿದ್ದೇವೆ. ನೆರೆಕರೆಯವರು ಕೆಲವೊಮ್ಮೆ ನಮಗೆ ಶತ್ರುಗಳಾಗುತ್ತಾರೆ. ಸಂಬಂಧಿಕರನ್ನು ನಾವು ಶತ್ರುಗಳಾಗಿಸುತ್ತೇವೆ. ಆದರೆ ಈ ಹದೀಸಿನ ಪ್ರಕಾರ ನಮ್ಮ ಶತ್ರುಗಳು ನಮ್ಮೊಳಗೇ ಇದ್ದಾರೆ. ನಾವು ಜತನದಿಂದ ಕಾಪಾಡಿಕೊಂಡಿದ್ದ ಸಂಪತ್ತು ಮತ್ತು ಸಂತಾನವು ನಮ್ಮ ಮುಂದೆ ಶತ್ರುಗಳಾಗಿ ನಿಲ್ಲುತ್ತವೆ. ನಮ್ಮ ಪರಲೋಕ ವಿಜಯಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಸ್ವರ್ಗ ಪ್ರಾಪ್ತಿಯನ್ನು ತಡೆಯುತ್ತವೆ.
ಹಣ ಸಂಪಾದಿಸುವ ವಿಚಾರದಲ್ಲಿ ಇಸ್ಲಾಮ್ ನಿಷೇಧ ವಿಧಿಸಿಲ್ಲ. ಆದರೆ ಅದು ಜೀವನದ ಪರಮ ಗುರಿಯಾಗುವುದು ಮತ್ತು ಉಳಿದೆಲ್ಲಾ ವಿಚಾರಗಳು ನಗಣ್ಯವಾಗುವ ಸಂದರ್ಭವನ್ನು ಇಸ್ಲಾಮ್ ಸಹಿಸುವುದಿಲ್ಲ. ಸಂಪತ್ತಿನ ಗಳಿಕೆಯೇ ಪ್ರಧಾನ ಕೆಲಸವಾಗಿ ಬಿಟ್ಟರೆ ಅದನ್ನು ಪಡೆಯಲು ಮನುಷ್ಯನು ಯಾವುದೇ ದಾರಿಯನ್ನು ಸ್ವೀರಿಸಲು ಸಿದ್ಧನಾಗುತ್ತಾನೆ. ಅದು ಅಡ್ಡದಾರಿಯಾದರೂ ಸರಿ. ಆಗ ಅವನಿಗೆ ಒಳಿತು-ಕೆಡುಕುಗಳು ಸಮಸ್ಯೆಯಾಗುವುದಿಲ್ಲ. ಹಣ ಗಳಿಕೆಗಾಗಿ ಎದುರಾಗುವ ಎಲ್ಲಾ ತೊಡಕುಗಳನ್ನೂ ಅವನು ನೀಗಿಸಲು ಪ್ರಯತ್ನಿಸುತ್ತಾನೆ. ತತ್ಪರಿಣಾಮಗಾಗಿ ಅವನಲ್ಲಿ ಸಚ್ಚಾರಿತ್ರ್ಯವು ನಶಿಸಿ ಹೋಗುತ್ತದೆ.
ಇನ್ನು ಸರಿಯಾದ ರೀತಿಯಲ್ಲಿ ಸಂಪತ್ತನ್ನು ಗಳಿಸಿದವನು ಅದನ್ನು ಹಕ್ಕುದಾರರಿಗೆ ನೀಡದೆ ಶೇಖರಿಸಿಡುತ್ತಾನೆ. ಬಡವರ ಹಕ್ಕುಗಳು ಅವನಿಂದ ದಮನಿಸಲ್ಪಡುತ್ತವೆ. ಅಲ್ಲಾಹನು ಹೇಳುತ್ತಾನೆ, “ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು. ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಖಂಡಿತ ಇಲ್ಲ. ಅವನು ಪುಡಿಗಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.” (ಅಲ್ ಹುಮಝ: 2-4)
ಮನುಷ್ಯನು ತನ್ನ ಸಂಪತ್ತು ಶಾಶ್ವತ ಎಂದು ಭಾವಿಸುತ್ತಾನೆ. ಇವೆಲ್ಲವನ್ನೂ ಬಿಟ್ಟು ಒಂದು ದಿನ ಬರಿಗೈಯಲ್ಲಿ ಮರಳಲಿಕ್ಕಿದೆ ಎಂಬ ಪ್ರಜ್ಞೆ ಅವನಲ್ಲಿ ಇರುವುದಿಲ್ಲ. ಪ್ರವಾದಿ(ಸ) ಹೇಳಿದರು,
تعس عبد الدينار، تعس عبد الدرهم، عبد الخميصة، إن أعطي منها رضي، وإن لم يعط سخط، تعس وانتكس، وإذا شيك فلا انتقش “ದಿರ್ಹಮ್ ಮತ್ತು ದೀನಾರ್‍ಗಳ ಗುಲಾಮನು ನಾಶ ಹೊಂದಿದನು. ಅವನಿಗೆ ಏನಾದರೂ ನೀಡಲ್ಪಟ್ಟರೆ ಅವನು ಸಂತುಷ್ಟನಾಗುವನು. ನೀಡದಿದ್ದರೆ ಅವನು ಕೋಪಿಷ್ಠನಾಗುವನು. ಅವನ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗುವುದು. ಅವನಿಗೆ ಒಂದು ಮುಳ್ಳು ಚುಚ್ಚಿದರೂ ಅದನ್ನು ತೆಗೆಯಲು ಜನರು ಸಿಗದೆ ಅವನು ಕಷ್ಟ ಅನುಭವಿಸುವನು.”
ಸಂತಾನಗಳ ಸ್ಥಿತಿಯೂ ಇದೇ ಆಗಿದೆ. ಅಲ್ಲಾಹನ ಸಂಪ್ರೀತಿಗಿಂತ ಹೆಚ್ಚಿನ ಆದ್ಯತೆಯನ್ನು ಮಕ್ಕಳಿಗೆ ನೀಡುವಾಗ ಅವರು ಹೆತ್ತವರಿಗೆ ಶತ್ರುಗಳಾಗಿ ಮಾರ್ಪಡುತ್ತಾರೆ. ಮಕ್ಕಳೊಂದಿಗಿರುವ ಮೇರೆ ವಿೂರಿದ ಪ್ರೀತ್ಯಾದರವು ಹೆತ್ತವರನ್ನು ಮಕ್ಕಳ ಗುಲಾಮರನ್ನಾಗಿಸುತ್ತದೆ. ಮಕ್ಕಳ ಬೇಡಿಕೆ ಗಳನ್ನು, ಆಸೆ-ಚಪಲಗಳನ್ನು ಪೂರೈಸಲು ಹೆತ್ತವರು ಹಲಾಲ್-ಹರಾಮ್‍ಗಳ ಕಡೆಗೆ ಜಾಣ ಕುರುಡು ಪ್ರದರ್ಶಿಸುವ ಮಟ್ಟಕ್ಕೆ ತಲುಪುತ್ತಾರೆ. ಹೇಗಾದರೂ ಮಾಡಿ ಮಕ್ಕಳನ್ನು ತೃಪ್ತಿ ಪಡಿಸುವುದು ಅವರ ಗುರಿಯಾಗಿರುತ್ತದೆ. ದೇವನ ಮಾರ್ಗದಿಂದ ಪಥ ಭ್ರಷ್ಟಗೊಳ್ಳುವ ಸಾಧ್ಯತೆಯೂ ಇಂತಹ ಸಂದರ್ಭಗಳಲ್ಲಿ ಉಂಟಾಗುತ್ತದೆ. ಹೀಗೆ ಮಕ್ಕಳು ಹೆತ್ತವರ ಪಾಲಿಗೆ ಪರಲೋಕ ಜೀವನವನ್ನು ದುರಂತ ಮಯಗೊಳಿಸುವ ಶತ್ರುಗಳಾಗಿ ಬದಲಾಗುತ್ತಾರೆ. ಪ್ರವಾದಿ(ಸ) ಹೇಳಿದರು.
يأتي على الناس زمان يكون هلاك الرجل على يد زوجته وأبويه وولده ، يعيرونه بالفقر ويكلفونه ما لا يطيق ! فيدخل المداخل التي يذهب فيها دينه فيهلك “ನನ್ನ ಸಮುದಾಯಕ್ಕೆ ಒಂದು ಕಾಲ ಬರಲಿಕ್ಕಿದೆ. ಅಂದು ಓರ್ವನ ನಾಶವು ಅವನ ಪತ್ನಿ ಮತ್ತು ಮಕ್ಕಳ ಮೂಲಕವಾಗಿರಬಹುದು. ದಾರಿದ್ರ್ಯದಿಂದಾಗಿ ಅವರು ಅವನನ್ನು ತೆಗಳುತ್ತಿರುವರು. ಹಾಗೆ ಅವನು ನಿಷಿದ್ಧ ಮಾರ್ಗ ತುಳಿಯಲು ನಿರ್ಬಂಧಿತನಾಗುವನು. ಕೊನೆಗೆ ಅವನು ನಾಶ ಹೊಂದುವನು.”
ಪತ್ನಿ-ಮಕ್ಕಳ ಬೇಡಿಕೆಗಳನ್ನು ಪೂರೈಸಲಿಕ್ಕಾಗಿ ಪಾಪ ಕೃತ್ಯಗಳಿಗೆ ಬಲಿಯಾದ ಎಷ್ಟೋ ಮಂದಿ ನಮ್ಮ ಕಣ್ಮುಂದೆಯೇ ಇದ್ದಾರೆ. ಪತ್ನಿಯ ಆಭರಣದ ವ್ಯಾಮೋಹಕ್ಕೆ ಮಣಿದು, ಮಕ್ಕಳ ಆಟಿಕೆಯ ತೀವ್ರ ಬೇಡಿಕೆಗೆ ಬಲಿಯಾಗಿ ಕಳ್ಳತನ ನಡೆಸಿ ಸಿಕ್ಕಿ ಬೀಳುವವರ ಪಟ್ಟಿಯು ಪುಟ್ಟದಲ್ಲ. ಪತ್ನಿ-ಮಕ್ಕಳಿಗಾಗಿ ತನ್ನ ಅಸ್ತಿತ್ವವನ್ನೇ ಅವರು ಮರೆಯುತ್ತಾರೆ. ತಮ್ಮ ಧಾರ್ಮಿಕ ಪ್ರಜ್ಞೆಯನ್ನೇ ಅವರು ಪಣಕ್ಕಿಡುತ್ತಾರೆ. ಅಂಥವರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ನಾಳೆ ಪರ ಲೋಕದಲ್ಲಿ ಓರ್ವ ವ್ಯಕ್ತಿಯನ್ನು ಕರೆತರಲಾಗುವುದು. ಅವನ ಕುರಿತು “ಇವನ ಒಳಿತುಗಳನ್ನೆಲ್ಲಾ ಇವನ ಕುಟುಂಬವು ತಿಂದು ಮುಗಿಸಿದೆ” ಎಂದು ಹೇಳಲಾಗುವುದು. ಆದ್ದರಿಂದ ನಾವು ನಮ್ಮ ಸಂಪತ್ತು-ಸಂತಾನಗಳು ನಮ್ಮ ಶತ್ರುಗಳಾಗಿ ಬದಲಾಗದಂತೆ ಎಚ್ಚರ ವಹಿಸಬೇಕು. ಆ ಅನುಗ್ರಹಗಳಿಂದಾಗಿ ನಮಗೆ ಸ್ವರ್ಗಪ್ರಾಪ್ತಿಯಾಗಬೇಕೇ ಹೊರತು ನರಕವಲ್ಲ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಸೆಪ್ಟೆಂಬರ್ 17, 2012

ಪ್ಲೀಸ್, ಕುಟುಂಬ ಸಂಬಂಧ ಮುರಿಯಬೇಡಿ


 ಮಾನವನು ಸಂಘಜೀವಿಯಾಗಿದ್ದಾನೆ. ಇತರರೊಂದಿಗೆ ಕೂಡಿ ಬಾಳುವುದು ಅವನ ಪ್ರಕೃತಿದತ್ತ ಗುಣವಾಗಿದೆ. ಆದ್ದರಿಂದ ಅವನಿಗೆ ಏಕಾಂಗಿಯಾಗಿ ಜೀವಿಸಲು ಕೆಲವು ದಿನಗಳ ಮಟ್ಟಿಗೆ ಸಾಧ್ಯವಾದರೂ ಅದು ಶಾಶ್ವತವಾಗಿಸಲು ಅವನಿಂದ ಸಾಧ್ಯವಿಲ್ಲ. ಇನ್ನು ಯಾರ ಹಂಗಿಲ್ಲದೇ ಏಕಾಂಗಿಯಾಗಿ ಜೀವಿಸುವುದು ಮಾನಸಿಕ ಸ್ಥಿಮಿತ ಕಳಕೊಂಡಿರುವ ಹುಚ್ಚರು ಮಾತ್ರ.
ಮನುಷ್ಯರಲ್ಲಿ ಕೂಡಿ ಬಾಳುವ ಗುಣ ಇರುವುದರಿಂದಲೇ ಅವನು ಒಂದು ಕುಟುಂಬವನ್ನು ಬಯಸುತ್ತಾನೆ. ಓರ್ವ ಮನುಷ್ಯನ ಸುತ್ತಲೂ ಸಂಬಂಧಗಳ ಸರಪಳಿಯು ಪೋಣಿಸಲ್ಪಟ್ಟಿದೆ. ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ, ಮಾವ ಹೀಗೆ ಈ ಸರಪಳಿಯು ಅವನನ್ನು ಬಂಧಿಸಿ ಸಹಬಾಳ್ವೆಯ ಸುಖವನ್ನು ನೀಡುತ್ತಿರುತ್ತದೆ. ಆದ್ದರಿಂದಲೇ ಮಾನವನು ಈ ಸರಪಳಿಯಿಂದ ಬಂಧಮುಕ್ತಗೊಳ್ಳಲು ತಯಾರಾಗುತ್ತಿಲ್ಲ.
ಓರ್ವ ವಿಶ್ವಾಸಿಗೆ ಕುಟುಂಬದ ಮೇಲೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಈ ಸಂಬಂಧಗಳಿಗಾಗಿದೆ. ಆದ್ದರಿಂದ ಕುಟುಂಬ ಸಂಬಂಧಕ್ಕೆ ಧಕ್ಕೆ ಯಾಗುವಂತಹ ಯಾವುದೇ ಕೆಲಸವು ಓರ್ವ ನೈಜ ವಿಶ್ವಾಸಿ ಯಿಂದ ಘಟಿಸಬಾರದು. ಕುಟುಂಬ ಸಂಬಂಧಕ್ಕೆ ಇಸ್ಲಾಮ್ ಅತೀ ಹೆಚ್ಚು ಮಹತ್ವ ನೀಡಿದೆ. ಕುಟುಂಬದೊಂದಿಗೆ ಹಳಸಲು ಸಂಬಂಧವಿರಿಸಿ ನಾವು ಮಾಡುವ ಸತ್ಕರ್ಮಗಳು ನಿರರ್ಥಕ ವಾಗಬಹುದು. ಇಂದು ಸಮಾಜದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಳ್ಳುವವರು, ಸಮಾಜದ ಜನರ ಸಂಕಷ್ಟಗಳಿಗೆ ಹೆಗಲು ಕೊಡುವವರು, ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿಕೊಂಡವರು ಕುಟುಂಬದ ವಿಚಾರದಲ್ಲಿ ವಿಫಲರಾಗಿರು ತ್ತಾರೆ. ಅಣ್ಣನ ಅಭಿವೃದ್ಧಿಯನ್ನು ಸಹಿಸದ ತಮ್ಮ, ತಮ್ಮನ ಅಭಿವೃದ್ಧಿಯ ವಿರುದ್ಧ ಅಸೂಯೆ ತೋರುವ ಅಣ್ಣ ಹೀಗೆ ಬಹಳ ಹತ್ತಿರದ ಸಂಬಂಧಗಳಲ್ಲೂ ಬಿದ್ದಿರುವ ಬಿರುಕುಗಳು ನಮ್ಮ ಧಾರ್ಮಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.
ಅಬ್ದುರ್ರಹ್ಮಾನ್ ಬಿನ್ ಔಫ್‍ರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ: ಅಲ್ಲಾಹನು ಹೇಳಿದ್ದಾನೆ, “ನಾನು ಅಲ್ಲಾಹನಾಗಿದ್ದೇನೆ. ನಾನು ಪರಮ ದಯಾ ಮಯನಾಗಿದ್ದೇನೆ. ಕುಟುಂಬ ಸಂಬಂಧವನ್ನು ಸೃಷ್ಟಿಸಿದ್ದು ನಾನು. ನನ್ನ ನಾಮಗಳಿಂದ ಅದಕ್ಕೆ ಪಾಲು ಮಾಡಿ ನೀಡಿದ್ದೇನೆ. ಆದ್ದ ರಿಂದ ಕುಟುಂಬ ಸಂಬಂಧವನ್ನು ಸ್ಥಾಪಿಸುವವರೊಂದಿಗೆ ನಾನೂ ಸಂಬಂಧ ಸ್ಥಾಪಿಸುತ್ತೇನೆ. ಕುಟುಂಬದೊಂದಿಗಿನ ಸಂಬಂಧವನ್ನು ಕಡಿಯುವವರೊಂದಿಗೆ ನಾನೂ ಸಂಬಂಧ ಕಡಿಯುತ್ತೇನೆ.”
قَالَ عَبْدُ الرَّحْمَنِ بْنُ عَوْفٍ : إِنِّي سَمِعْتُ رَسُولَ اللَّهِ يَقُولُ : " قَالَ اللَّهُ جَلَّ وَعَزَّ : " أَنَا اللَّهُ وَأَنَا الرَّحْمَنُ خَلَقْتُ الرَّحِمَ وَشَقَقْتُ لَهَا     مِنَ اسْمِي فَمَنْ وَصَلَهَا وَصَلْتُهُ وَمَنْ قَطَعَهَا بَتَتُّهُ
ಕುಟುಂಬ ಸಂಬಂಧದ ಮಹತ್ವದ ಕುರಿತು ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಹಲವಾರು ಪ್ರಸ್ತಾಪಗಳು ಬಂದಿವೆ. ಅಲ್ಲಾಹನು ಸೂರಃ ಅನ್ನಿಸಾದ ಪ್ರಥಮ ಸೂಕ್ತದಲ್ಲೇ ಈ ರೀತಿ ಹೇಳುತ್ತಾನೆ,
يَـٰٓأَيُّہَا ٱلنَّاسُ ٱتَّقُواْ رَبَّكُمُ ٱلَّذِى خَلَقَكُم مِّن نَّفۡسٍ۬ وَٲحِدَةٍ۬ وَخَلَقَ مِنۡہَا زَوۡجَهَا وَبَثَّ مِنۡہُمَا رِجَالاً۬ كَثِيرً۬ا وَنِسَآءً۬‌ۚ وَٱتَّقُواْ ٱللَّهَ ٱلَّذِى تَسَآءَلُونَ بِهِۦ وَٱلۡأَرۡحَامَ‌ۚ إِنَّ ٱللَّهَ كَانَ عَلَيۡكُمۡ رَقِيبً۬ا  
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಮೇಲ್ನೊಟ ಇರಿಸಿ ಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.”
ಇಲ್ಲಿ ಅಲ್ಲಾಹನು ‘ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ’ ಎಂದು ಸ್ಪಷ್ಟವಾಗಿ ಆಜ್ಞಾಪಿಸಿದ್ದಾನೆ. ಈ ಸಂಬಂಧವನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುವವರಿಗೆ ಅಲ್ಲಾಹನು ಈ ರೀತಿ ಎಚ್ಚರಿಕೆ ನೀಡಿದ್ದಾನೆ,
فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِى ٱلۡأَرۡضِ وَتُقَطِّعُوٓاْ أَرۡحَامَكُمۡ 
 فَأَصَمَّهُمۡ وَأَعۡمَىٰٓ أَبۡصَـٰرَهُمۡ ‭۝ ‬أُوْلَـٰٓٮِٕكَ ٱلَّذِينَ لَعَنَهُمُ ٱللَّهُ  ‭  
 “ನೀವು ವಿಮುಖರಾಗಿ ಬಿಟ್ಟರೆ ಭೂಮಿಯಲ್ಲಿ ಪುನಃ ಕ್ಷೋಭೆಯನ್ನುಂಟು ಮಾಡುವ ಹಾಗೂ ನಿಮ್ಮ ಕುಟುಂಬ ಸಂಬಂಧವನ್ನು ಕೆಡಿಸುವ ಹೊರತು ನಿಮ್ಮಿಂದ ಬೇರೇನನ್ನಾದರೂ ನಿರೀಕ್ಷಿಸಬಹುದೇ? ಅಲ್ಲಾಹನು ಶಪಿಸಿರುವುದು ಮತ್ತು ಕಿವುಡರಾಗಿಯೂ ಕುರುಡರಾಗಿಯೂ ಮಾಡಿ ಬಿಟ್ಟಿರುವುದು ಇವರನ್ನೇ.” (ಮುಹಮ್ಮದ್: 22-23)
ಈ ಸೂಕ್ತದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ನಡೆದು ತೋರಿಸಿರುವ ಹಾದಿಯಿಂದ ನೀವು ವಿಮುಖರಾಗುವುದಾದರೆ ಅದರ ಪರಿಣಾಮ ವಾಗಿ ನೀವು ಅಜ್ಞಾನದಲ್ಲೇ ಬಿದ್ದುಕೊಂಡಿರುತ್ತೀರಿ. ಮಾತ್ರವಲ್ಲ, ನೀವು ಪರಸ್ಪರ ರಕ್ತ ಹರಿಸುತ್ತಾ ಶತಮಾನಗಳನ್ನೇ ಕಳೆಯುತ್ತೀರಿ. ಸ್ವಂತ ಸಂತಾನವನ್ನೇ ಜೀವಂತ ಹೂಳಲು ಹೇಸದ ಮನಸ್ಥಿತಿ ಯವರಾಗುತ್ತೀರಿ ಎಂಬುದಾಗಿದೆ.
ಪ್ರವಾದಿಯವರು(ಸ) ಮಕ್ಕಾದಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದ ಆರಂಭ ಕಾಲದಲ್ಲೇ ಕುಟುಂಬ ಸಂಬಂಧದ ಕಡೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಜಾಹಿಲಿಯಾ ಕಾಲದಲ್ಲಿ ಅರೇಬಿಯಾದಲ್ಲಿ ಓರ್ವ ಪ್ರವಾದಿ ಬಂದಿದ್ದಾರೆಂದೂ ಅವರು ಕೆಲವು ವಿಚಾರಗಳನ್ನು ಹೇಳುತ್ತಿದ್ದಾರೆಂದೂ ಯಾರೋ ಹೇಳುವುದನ್ನು ನಾನು ಕೇಳಿದೆ ಹಾಗೂ ನಾನು ಅವರನ್ನು ಭೇಟಿಯಾಗಲು ಹೋದೆ. ಅವರ ಬಳಿ ಹೋಗಿ ಕೇಳಿದೆ, “ತಾವು ಯಾರು?” ಪ್ರವಾದಿಯವರು(ಸ) ಹೇಳಿದರು. “ನಾನು ಪ್ರವಾದಿಯಾಗಿದ್ದೇನೆ. ಅಲ್ಲಾಹನು ನನ್ನನ್ನು ಜನರ ಬಳಿಗೆ ಪ್ರವಾದಿಯಾಗಿ ನೇಮಿಸಿದ್ದಾನೆ.” ನಾನು ಕೇಳಿದೆ, “ಯಾವ ಸಂದೇಶದೊಂದಿಗೆ ಅಲ್ಲಾಹನು ನಿಮ್ಮನ್ನು ಕಳುಹಿಸಿದ್ದಾನೆ?” ಪ್ರವಾದಿಯವರು(ಸ) ಹೇಳಿದರು,
أَرْسَلَنِي بِصِلَةِ الْأَرْحَام وَكَسْر الْأَوْثَان وَأَنْ يُوَحَّد اللَّه لَا يُشْرَك بِهِ شَيْء
 “ಕುಟುಂಬ ಸಂಬಂಧವನ್ನು ಸ್ಥಾಪಿಸಬೇಕು. ವಿಗ್ರಹಗಳನ್ನು ಧ್ವಂಸಗೊಳಿಸಬೇಕು. ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಗಳಾಗಿ ಮಾಡದೆ ಅವನ ಏಕತ್ವವನ್ನು ಸ್ಥಾಪಿಸಬೇಕು.”
ಇಮಾಮ್ ನವವಿ(ರ) ಈ ಹದೀಸಿನ ಕುರಿತು ಹೀಗೆ ವಿವರಿಸಿದ್ದಾರೆ, “ಕುಟುಂಬ ಸಂಬಂಧಗಳನ್ನು ಸ್ಥಾಪಿಸುವುದಕ್ಕೆ ಇಸ್ಲಾಮ್ ನೀಡುವ ಪ್ರೇರಣೆ ಹಾಗೂ ಪ್ರೋತ್ಸಾಹಗಳಿಗೆ ಈ ಹದೀಸಿನಲ್ಲಿ ಪುರಾವೆ ಇದೆ. ಯಾಕೆಂದರೆ, ಪ್ರವಾದಿಯವರು(ಸ) ಕುಟುಂಬ ಸಂಬಂಧವನ್ನು ಪರಾಮರ್ಶಿಸಿರುವುದು ತೌಹೀದ್ ನೊಂದಿಗಾಗಿದೆ. ಧರ್ಮದ ಇತರ ವಿಷಯಗಳನ್ನು ಪ್ರಸ್ತಾಪಿಸದೆ ಕುಟುಂಬದ ಮಹತ್ವವನ್ನು ಸ್ಮರಿಸುತ್ತಾ ಅದನ್ನು ಪ್ರಥಮವಾಗಿ ಅವರು ಹೇಳಿದ್ದಾರೆ.”
ಇಸ್ಲಾಮಿನಲ್ಲಿ ಎಲ್ಲಾ ವಿಧದ ಸಂಬಂಧಗಳಿಗಿಂತಲೂ ಆದರ್ಶ ಸಂಬಂಧವು ದೊಡ್ಡದಾಗಿದೆ. ಆದರ್ಶದಲ್ಲಿ ವೈರುಧ್ಯತೆ ಇದ್ದರೂ ಕುಟುಂಬ ಸಂಬಂಧಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಇಸ್ಲಾಮ್ ಧರ್ಮವು ಆಜ್ಞಾಪಿಸುತ್ತದೆ. ಈ ಸೂಕ್ತವು ಅದಕ್ಕಿರುವ ಒಂದು ಉದಾಹರಣೆಯಾಗಿದೆ. ಸೂರಃ ಲುಕ್ಮಾನ್‍ನ 15ನೇ ಸೂಕ್ತ ದಲ್ಲಿ ಅಲ್ಲಾಹನು ಹೆತ್ತವರ ಕುರಿತು ಈ ರೀತಿ ಹೇಳುತ್ತಾನೆ, “ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಆದರೆ ಈ ಲೋಕದಲ್ಲಿ ಅವ ರೊಂದಿಗೆ ಸದ್ವರ್ತನೆ ಮಾಡುತ್ತಿರು.”
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಪ್ರವಾದಿ ಯವರು(ಸ) ಏರು ದನಿಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದೆ,
" إِنَّ آلَ أَبِي فُلانٍ لَيْسُوا لِي بِأَوْلِيَاءَ , إِنَّمَا وَلِيِّ اللَّهُ وَصَالِحُو الْمُؤْمِنِينَ " . 
 “ಇಂತಿಂತಹ ವ್ಯಕ್ತಿಯ ಕುಟುಂಬವು ನನ್ನ ಸಹಾಯಕರಲ್ಲ. ನನ್ನ ಸಹಾಯಿಗಳು ಅಲ್ಲಾಹ್ ಮತ್ತು ಸಚ್ಚರಿತ ಸತ್ಯವಿಶ್ವಾಸಿಗಳಾಗಿದ್ದಾರೆ. ಆದರೆ ಇಂತಿಂತಹ ವ್ಯಕ್ತಿಗಳಿಗೆ ನನ್ನೊಂದಿಗೆ ಕೌಟುಂಬಿಕ ಸಂಬಂಧವಿದೆ. ನಾನು ಆ ಸಂಬಂಧವನ್ನು ಹಸನುಗೊಳಿಸಿಯೇ ಸಿದ್ಧ.”
ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಇಷ್ಟು ಮಹತ್ವ ಇರುವಾಗ ಅದನ್ನು ಮುರಿಯುವುದು ದೊಡ್ಡ ಅಪರಾಧವಾಗುತ್ತದೆ. ಕುಟುಂಬ ಸಂಬಂಧವನ್ನು ಕೆಡಿಸುವುದರಿಂದ ದೇವ ಕೋಪಕ್ಕೆ ಪಾತ್ರರಾಗಬಹುದು. ಮಾಡಿದ ಸತ್ಕರ್ಮಗಳು ನೀರಿನಲ್ಲಿ ಬರೆದಂತಾಗಬಹುದು. ಅಬೂ ಹುರೈರಾ(ರ) ವರದಿ ಮಾಡುತ್ತಾರೆ:
 إِنَّ أَعْمَالَ بَنِي آدَمَ تُعْرَضُ عَلَى اللَّهِ تَبَارَكَ وَتَعَالَى عَشِيَّةَ كُلِّ خَمِيسٍ لَيْلَةَ الْجُمُعَةِ ، فَلا يَقْبَلُ عَمَلَ قَاطِعِ رَحِمٍ 
ಪ್ರವಾದಿಯವರು(ಸ) ಹೇಳಿದರು, “ಮನುಷ್ಯರ ಕರ್ಮಗಳನ್ನು ಎಲ್ಲಾ ಶುಕ್ರವಾರದ ಮುಂಜಾನೆ ಅಲ್ಲಾಹನ ಮುಂದೆ ಪ್ರದರ್ಶಿಸಲಾಗುವುದು. ಆದರೆ ಕುಟುಂಬ ಸಂಬಂಧವನ್ನು ಮುರಿದವನ ಕರ್ಮಗಳನ್ನು ತಿರಸ್ಕರಿಸಲಾಗುವುದು.”
ಅಬ್ದುಲ್ಲಾ ಬಿನ್ ಅಬೀ ಔಫ್(ರ) ಹೇಳುತ್ತಾರೆ: ಒಮ್ಮೆ ನಾವು ಪ್ರವಾದಿಯವರೊಂದಿಗೆ(ಸ) ಕುಳಿತಿದ್ದೆವು. ಆಗ ಪ್ರವಾದಿಯವರು(ಸ) ಹೇಳಿದರು,لَا يُجَالِسُنَا الْعَشِيَّةَ قَاطِعُ رَحِمٍ “ಕುಟುಂಬ ಸಂಬಂಧವನ್ನು ಮುರಿದವರು ಇಂದು ನಮ್ಮೊಂದಿಗೆ ಕುಳಿತುಕೊಳ್ಳಬಾರದು.” ಆಗ ಅಲ್ಲಿಂದ ಓರ್ವರು ಎದ್ದು ಹೊರ ನಡೆದರು. ಅವರ ಮಾತೃ ಸಹೋದರಿ ಹಾಗೂ ಅವರ ಮಧ್ಯೆ ಮನಸ್ತಾಪವಿತ್ತು. ಹಾಗೆ ಅವರು ಅದನ್ನು ಸರಿಪಡಿಸಿ ಮರಳಿದರು. ಆಗ ಪ್ರವಾದಿಯವರು(ಸ) ಹೇಳಿದರು,
 إِنَّ الرَّحْمَةَ لَا تَنْزِلُ عَلَى قَوْمٍ فِيهِمْ قَاطِعُ رَحِمٍ“ಕುಟುಂಬ ಸಂಬಂಧವನ್ನು ಕಡಿದುಕೊಂಡವನು ಇರುವಲ್ಲಿಗೆ ಅಲ್ಲಾಹನ ಕರುಣೆಯು ವರ್ಷಿಸುವು ದಿಲ್ಲ” ಅದೇ ರೀತಿ ಪ್ರಮುಖ ಸಹಾಬಿಯಾದ ಅಬ್ದುಲ್ಲಾ ಬಿನ್ ಮಸ್‍ಊದ್ ಸುಬ್‍ಹಿ ನಮಾಝ್‍ನ ಬಳಿಕ ನಡೆಸುತ್ತಿದ್ದ ಧಾರ್ಮಿಕ ಪ್ರವಚನದ ಬಳಿಕ ಪ್ರಾರ್ಥನೆ ನಡೆಸುವುದಕ್ಕಿಂತ ಮುಂಚೆ ಈ ರೀತಿ ಹೇಳುತ್ತಿದ್ದರು,
  أَنْشُدُ اللَّهَ قَاطِعَ الرَّحِمِ إِمَّا قَامَ عَنَّا ، فَإِنَّا نُرِيدُ أَنْ نَدْعُوَا رَبَّنَا ، وَإِنَّ أَبْوَابَ السَّمَاءِ مُرَتَجَةٌ دُونَ قَاطِعِ الرَّحِمِ“ಅಲ್ಲಾಹನ ಮೇಲೆ ಆಣೆ ಹಾಕಿ ಹೇಳುತ್ತಿದ್ದೇನೆ. ಕುಟುಂಬ ಸಂಬಂಧವನ್ನು ಮುರಿದವರು ಇಲ್ಲಿಂದ ಎದ್ದು ಹೋಗಲಿ. ಯಾಕೆಂದರೆ ನಾವು ಅಲ್ಲಾಹನೊಂದಿಗೆ ಪ್ರಾರ್ಥಿಸಲಿದ್ದೇವೆ. ಕುಟುಂಬ ಸಂಬಂಧವನ್ನು ಮುರಿದವನಿಗೆ ಆಕಾಶದ ಬಾಗಿಲುಗಳು ಮುಚ್ಚಲ್ಪಡುತ್ತವೆ.”
ಇದರಿಂದ ಕುಟುಂಬ ಸಂಬಂಧಕ್ಕೆ ಎಷ್ಟು ಮಹತ್ವ ಇದೆಯೆಂದು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಕುಟುಂಬ ಸಂಬಂಧಿಗಳೊಂದಿಗೆ ಮಾತು ಬಿಟ್ಟಿದ್ದರೆ ಅದನ್ನು ಮರುಸ್ಥಾಪಿಸಬೇಕಾಗಿದೆ. ಇಲ್ಲದಿದ್ದರೆ ನಾವು ನಿರ್ವಹಿಸುವ ಎಲ್ಲಾ ಸತ್ಕರ್ಮಗಳು ನಿಶ್ಫಲವಾಗುವುದು. ಈ ನಿಟ್ಟಿನಲ್ಲಿ ನಾವು ಕುಟುಂಬ ಸಂಬಂಧದ ಸ್ಥಾಪನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಅದಕ್ಕೆ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಸೆಪ್ಟೆಂಬರ್ 11, 2012

ಪದಾರ್ಥದಲ್ಲಿ ಕೂದಲು ಸಿಕ್ಕಿದರೆ...


ದಾಂಪತ್ಯದ ಮೂಲ ಘಟಕಗಳು ಪತಿ ಮತ್ತು ಪತ್ನಿಯಾಗಿದ್ದಾರೆ. ದಾಂಪತ್ಯ ಎಂಬ ಗಾಡಿಯು ಸುಸೂತ್ರವಾಗಿ ಮುಂದೆ ಸಾಗಬೇಕಾದರೆ ಪತಿ-ಪತ್ನಿಯರ ಮುಂದೆ ಸಮತೋಲನಾತ್ಮಕ ವರ್ತನೆಗಳು ಅತ್ಯಗತ್ಯವಾಗಿವೆ. ದಾಂಪತ್ಯ ಜೀವನದ ಯಶಸ್ವಿಗಾಗಿ ಕುರ್‍ಆನ್ ಹಾಗೂ ಹದೀಸ್‍ಗಳಲ್ಲಿ ಹಲವಾರು ಸಲಹೆ, ಆಜ್ಞೆಗಳು ಬಂದಿವೆ. ಕಾರಣ ದಾಂಪತ್ಯದಷ್ಟು ಪರಿಶುದ್ಧವೂ ಆನಂದಮಯವೂ ಆದ ಸಂಬಂಧ ಇನ್ನೊಂದಿಲ್ಲ. ಅದು ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಪೈಕಿ ಶ್ರೇಷ್ಠರಾದ ಮಾನವರಿಗೆ ಮೀಸಲಿರಿಸಿದ ಸೌಭಾಗ್ಯವಾಗಿದೆ.
ಅಬೂ ಸಈದುಲ್ ಕುದ್ರಿ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಓರ್ವ ಪರುಷನು ತನ್ನ ಪತ್ನಿಯನ್ನು ಮತ್ತು ಓರ್ವ ಮಹಿಳೆಯು ಅವಳ ಪತಿಯನ್ನು ಪರಸ್ಪರ ನೋಡಿದರೆ ಅಲ್ಲಾಹನು ಅವರೀರ್ವರನ್ನೂ ಕರುಣೆಯ ದೃಷ್ಟಿಯಿಂದ ನೋಡುತ್ತಾನೆ. ಇನ್ನು, ಅವನು ತನ್ನ ಪತ್ನಿಗೆ ಹಸ್ತಲಾಘವ ಮಾಡಿದರೆ ಅವರು ಮಾಡಿದ ಪಾಪಗಳು ಅವರ ಕೈ ಬೆರಳುಗಳ ಎಡೆಯಿಂದ ಜಾರಿ ಹೋಗುವುದು.” ಕುರ್‍ಆನ್ ಕೂಡಾ ಈ ರೀತಿ ಹೇಳಿದೆ, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.”
ಪತಿ ಮತ್ತು ಪತ್ನಿಯು ಪರಸ್ಪರ ಪೂರಕವಾಗಿ ವರ್ತಿಸಿದರೆ ಮಾತ್ರ ದಾಂಪತ್ಯ ಜೀವನವು ಸುಖಮಯವಾಗುವುದು. ಪತಿಯು ಪತ್ನಿಯೊಂದಿಗೆ ಮತ್ತು ಪತ್ನಿಯು ಪತಿಯೊಂದಿಗೆ ಮನ ಮುದಗೊಳಿಸುವ ವರ್ತನೆಗಳು ತೋರಬೇಕು. ಪತಿಗೆ, ತಾನು ಯಜಮಾನ ಮತ್ತು ಪತ್ನಿಗೆ ತಾನು ಗುಲಾಮಳು ಎಂಬ ಭಾವನೆ ಉಂಟಾಗತೊಡಗಿದರೆ ಆ ದಾಂಪತ್ಯ ಸಂಬಂಧದಲ್ಲಿ ಬಿರುಕು ಕಾಣಿಸತೊಡಗುತ್ತದೆ. ಹಾಗೇ ಮುಂದುವರಿದರೆ ಅದು ದೊಡ್ಡ ಪ್ರಪಾತವಾಗಿ ಪರಸ್ಪರ ಸಂಬಂಧ ಕಡಿದುಹೋಗುತ್ತದೆ.
ಇಂದು ಹಲವು ಪುರುಷರು ತಮ್ಮ ಪತ್ನಿಗೆ `ಪತ್ನಿ’ ಎಂಬ ಸ್ಥಾನವನ್ನು ನೀಡದೆ ಗುಲಾಮಳನ್ನಾಗಿಸಿದ್ದಾರೆ. ಅವಳ ಬೇಕು ಬೇಡಗಳ ಕಡೆಗೆ ಗಮನ ಹರಿಸುತ್ತಿಲ್ಲ. ಪುರುಷರು ಮಹಿಳೆಯರಿಗಿಂತ ಶ್ರೇಷ್ಠರು ಎಂಬ ಒಣ ಜಂಭವು ಪುರುಷರಲ್ಲಿ ತಲೆ ಎತ್ತಿದೆ. ಹಗಲೆಲ್ಲಾ ತಾನು ದುಡಿದು ಬರುವವನಾಗಿದ್ದರಿಂದ ತನ್ನ ಮುಂದೆ ಮನೆ ಮಂದಿ ತಲೆ ಬಾಗಬೇಕು ಎಂದು ಅವರು ಸ್ವತಃ ತೀರ್ಮಾನಿಸಿದ್ದಾರೆ. ಪುರುಷರು ತೋಳ್ಬಲದಲ್ಲೂ ಇತರ ವಿಷಯಗಳಲ್ಲೂ ಮಹಿಳೆಯರಿಗಿಂತ ಶ್ರೇಷ್ಠರು ನಿಜ. ಆದರೆ ಅದು ದಾಂಪತ್ಯ ಜೀವನದಲ್ಲಿ ಗಣನಾರ್ಹವಾದ ವಿಚಾರವಾಗಬಾರದು. ಅಲ್ಲಿ ಸ್ತ್ರೀಯರು ಮತ್ತು ಪುರುಷರು ಸಮಾನವಾಗಿದ್ದಾರೆ. ಒಬ್ಬರಿಗೊಬ್ಬರು ನೆರವಾಗಬೇಕಾದುದು ದಾಂಪತ್ಯ ಸುಖಮಯವಾಗಲಿಕ್ಕಿರುವ ಮಾನದಂಡವಾಗಿದೆ. ಓರ್ವ ಪತ್ನಿಯನ್ನು ಸತಾಯಿಸುವುದು ಪತಿಯಾದವನಿಗೆ ಭೂಷಣವಲ್ಲ.
ಮಹಿಳೆಯರೊಂದಿಗೆ ಗೌರವಾದರದಿಂದ ವರ್ತಿಸಲು ಇಸ್ಲಾಮ್ ಆಜ್ಞಾಪಿಸುತ್ತದೆ. ಮಹಿಳೆಗೆ ಇಸ್ಲಾಮ್ ನೀಡಿದಷ್ಟು ಸ್ಥಾನಮಾನ ಬೇರಾವುದೇ ಧರ್ಮವು ನೀಡಿಲ್ಲ. ಅಲ್ಲಾಹನು ಹೇಳುತ್ತಾನೆ, “ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ.“ (ಅನ್ನಿಸಾ: 19) ಪ್ರವಾದಿ(ಸ) ಹಜ್ಜತುಲ್ ವಿದಾಅïನ ಭಾಷಣದಲ್ಲಿ ಮಹಿಳೆಯರ ಕುರಿತು ಹೇಳಲು ಮರೆಯಲಿಲ್ಲ. “ತಿಳಿಯಿರಿ, ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸಲಿಕ್ಕಿರುವ ನನ್ನ ಉಪದೇಶವನ್ನು ನೀವು ಸ್ವೀಕರಿಸಿರಿ. ಅವರು ನಿಮ್ಮೊಂದಿಗಿರುವ ನಿಮ್ಮ ಆಶ್ರಿತರಾಗಿದ್ದಾರೆ. ನಿಮಗೆ ಇತರ ಯಾವುದೇ ಅಧಿಕಾರ ಅವರ ಮೇಲಿಲ್ಲ. ಅರಿಯಿರಿ, ನಿಮಗೆ ಮಹಿಳೆಯರ ಮೇಲೆ ಕೆಲವು ಹಕ್ಕುಗಳಿವೆ. ಹಾಗೆಯೇ ಅವರಿಗೂ ನಿಮ್ಮ ಮೇಲೆ ಕೆಲವು ಹಕ್ಕುಗಳಿವೆ.”
ಒಮ್ಮೆ ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು, “ಅಲ್ಲಾಹನ ಸಂದೇಶವಾಹಕರೇ, ನಮ್ಮ ಪತ್ನಿಯರಿಗೆ ನಮ್ಮಿಂದ ಲಭಿಸಬೇಕಾದ ಹಕ್ಕುಗಳು ಯಾವುವು?” ಆಗ ಪ್ರವಾದಿ(ಸ) ಹೇಳಿದರು, “ನೀನು ತಿನ್ನುವುದಾದರೆ ಅವಳಿಗೂ ತಿನ್ನಿಸಬೇಕು. ನೀನು ಬಟ್ಟೆ ಧರಿಸಿದರೆ ಅವಳಿಗೂ ತೊಡಿಸಬೇಕು. ಮುಖಕ್ಕೆ ಹೊಡೆಯಬಾರದು. ಅಸಭ್ಯ ಮಾತುಗಳಿಂದ ಜರೆಯಬಾರದು. ಅವರೊಂದಿಗೆ ವಿರಸಗೊಳ್ಳುವುದಾದರೆ ಅದು ಮನೆಯ ಒಳಗೆ ಮಾತ್ರವಾಗಿರಬೇಕು.”
ಇಷ್ಟೆಲ್ಲಾ ನಿಯಮ-ನಿರ್ದೇಶನಗಳು ಕಣ್ಮುಂದೆಯೇ ಇರುವಾಗ ಇಂದು ಪತಿಯಂದಿರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪ್ರವಾದಿಯವರ(ಸ) ಜೀವನ ಚರ್ಯೆಯನ್ನು ಬೇಕಾದ ಕಡೆಗೆ ಮಾತ್ರ ತೆಗೆದುಕೊಳ್ಳುವುದಲ್ಲ. ದಾಂಪತ್ಯ ಜೀವನಕ್ಕೂ ಅದು ಅನ್ವಯವಾಗುತ್ತದೆ. ಪ್ರವಾದಿಎಸಏ ಓರ್ವ ಉತ್ತಮ ಪತಿಯಾಗಿ ತನ್ನ ಜೀವನವನ್ನು ಇತರರಿಗೆ ಕಲಿಸಿಕೊಟ್ಟಿದ್ದಾರೆ. ಅವರು(ಸ) ತನ್ನ ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ನೀವೊಬ್ಬ ಉತ್ತಮ ಪತಿಯಾಗಬೇಕಾದರೆ ಅದಕ್ಕಿರುವ ಮಾರ್ಗದರ್ಶನವು ಪ್ರವಾದಿಯವರ(ಸ) ಜೀವನದಲ್ಲಿದೆ. ಪ್ರವಾದಿ (ಸ)  ಹೇಳಿದರು, “ನಿಮ್ಮ ಪೈಕಿ ಶ್ರೇಷ್ಠರು ಯಾರೆಂದರೆ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವರಾಗಿದ್ದಾರೆ. ನಾನು ನನ್ನ ಪತ್ನಿಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನಾಗಿದ್ದೇನೆ.”
ಪತ್ನಿಯರ ಅವಶ್ಯಕತೆಗಳು, ಬೇಡಿಕೆಗಳು, ಆಗ್ರಹಗಳನ್ನು ಅರಿತು ಅವರ ಮನಸ್ಸಿಗೆ ಮುದ ನೀಡುವ, ಅವರನ್ನು ಸಂತೋಷಪಡಿಸುವ ವಾತಾವರಣವನ್ನು ಪ್ರವಾದಿ(ಸ) ಸೃಷ್ಟಿ ಮಾಡುತ್ತಿದ್ದರು. ಪ್ರವಾದಿ(ಸ) ಪತ್ನಿಯರೊಂದಿಗಿರುವಾಗ ಅವರ ಮಾನಸಿಕ ಸ್ಥಿತಿಗೆ ಪ್ರವಾದಿಯವರೂ ಮರಳುತ್ತಿದ್ದರು. ಪ್ರವಾದಿಯವರ(ಸ) ಉಪಸ್ಥಿತಿಯನ್ನು ಅವರು ಯಾವಾಗಲೂ ಬಯಸುತ್ತಿದ್ದರು. ಹಾಸ್ಯದ ಮಾತುಗಳಿಂದ ಪತ್ನಿಯರನ್ನು ನಗಿಸುತ್ತಿದ್ದರು. ಅನಸ್(ರ) ವರದಿ ಮಾಡುತ್ತಾರೆ, “ಪ್ರವಾದಿ(ಸ) ಜನರ ಪೈಕಿ ಅತೀ ಹೆಚ್ಚು ಹಾಸ್ಯ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದರು.”
ಇಂದಿನ ಪತಿಯಂದಿರು ಇದಕ್ಕೆ ನೇರ ವಿರುದ್ಧವಾಗಿದ್ದಾರೆ. ಪತಿಯು ಮನೆಯಲ್ಲಿದ್ದರೆ ಪತ್ನಿಗೆ ಕಿರಿಕಿರಿಯಾಗುತ್ತದೆ. “ಈ ಮನುಷ್ಯ ಒಮ್ಮೆ ಹೊರಗಡೆ ಹೋಗಿದ್ದರೆ” ಎಂದು ಪತ್ನಿಯು ಬಯಸುವ ವಾತಾವರಣವು ಸೃಷ್ಟಿಯಾಗಿದೆ. ಇದು ಸೃಷ್ಟಿಯಾದದ್ದಲ್ಲ. ಪತಿಯರೇ ಸೃಷ್ಟಿ ಮಾಡಿದ್ದು. ಇಂತಹ ಒಂದು ಮನಸ್ಥಿತಿಯು ದಾಂಪತ್ಯದಲ್ಲಿ ಸೃಷ್ಟಿಯಾದರೆ ಆ ದಾಂಪತ್ಯ ಜೀವನಕ್ಕೆ ಉಳಿಗಾಲವಿದೆಯೇ?
ಆಯಿಶಾರೊಂದಿಗೆ(ರ) ಪ್ರವಾದಿ(ಸ) ಹಲವು ವೇಳೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಕೆಲವು ವೇಳೆ ಪ್ರವಾದಿಯವರು(ಸ) ವಿಜಯಿಯಾಗುತ್ತಿದ್ದರು. ಇನ್ನು ಕೆಲವು ವೇಳೆ ಆಯಿಶಾರು(ರ). ಆಯಿಶಾ(ರ) ಕೆಲವು ವರ್ಷಗಳ ಬಳಿಕ ಈ ಘಟನೆಯನ್ನೆಲ್ಲಾ ವಿವರಿಸುತ್ತಾ ಈ ರೀತಿ ಬೋಧಿಸಿದ್ದಾರೆ, “ಆದ್ದರಿಂದ ಕೌಮಾರ ಪ್ರಾಯದವರೂ ವಿನೋದ ಪ್ರಿಯರೂ ಆದ ಸ್ತ್ರೀಯರಿಗೆ ಅರ್ಹವಾದದ್ದನ್ನು ನೀವು ನೀಡಬೇಕು.”
ಆಟಗಳಲ್ಲೂ ವಿನೋದಗಳಲ್ಲೂ ಭಾಗವಹಿಸಲು ಪತ್ನಿಯರಿಗೆ ಅನುಮತಿ ನೀಡುವುದು ದಾಂಪತ್ಯದ ಭದ್ರತೆ ಹಾಗೂ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ. ಉಮರ್(ರ) ಒಮ್ಮೆ ಹೇಳಿದರು, “ಪುರುಷನು ತನ್ನ ಪತ್ನಿ-ಮಕ್ಕಳ ಬಳಿಗೆ ಹೋದರೆ ಒಂದು ಮಗುವಿನಂತೆ ವರ್ತಿಸಲಿ. ಆದರೆ ಅವನ ಬಳಿಯಿರುವ ಪೌರುಷವು ಏನೆಂದು ಅವರು ತಿಳಿಯಬಯಸುವುದಾದರೆ ಅವನು ಓರ್ವ ಪುರುಷನಾಗಿ ಬದಲಾಗಲಿ.”
ಪ್ರವಾದಿ(ಸ) ತನ್ನನ್ನು ವಿಮರ್ಶಿಸುವ ಮತ್ತು ವಿರೋಧಿಸುವ ಸ್ವಾತಂತ್ರ್ಯವನ್ನು ಪತ್ನಿಯರಿಗೆ ನೀಡಿದ್ದರು. ಎಷ್ಟೊಂದು ಉದಾತ್ತ ಮಾದರಿ, ಇಂದು ಈ ಕುರಿತು ಆಲೋಚಿಸಲೂ ಸಾಧ್ಯವಿಲ್ಲ. ಪತ್ನಿಗೆ ಪತಿಯ ಮುಂದೆ ಸ್ವರ ಎತ್ತುವಂತಿಲ್ಲ. ತನ್ನ ತಪ್ಪುಗಳನ್ನು ತಿದ್ದುವಂತಿಲ್ಲ. “ತಾನು ಮಾಡಿದ್ದೇ ಸರಿ, ತಾನು ಹೇಳಿದ್ದೇ ವೇದ” ಎಂಬ ಧೋರಣೆಯು ಹಲವು ಪುರುಷರಲ್ಲಿ ತಲೆ ಎತ್ತಿದೆ. ಸ್ವಂತ ತೀರ್ಮಾನ ಕೈಗೊಂಡರೆ ಅದನ್ನು ಅನುಸರಿಸಲು ಪತ್ನಿಯರಿಗೆ ನಿರ್ಬಂಧಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಆಯ್ಕೆಗಳಿರುತ್ತವೆ. ಎಲ್ಲರ ಮನಸ್ಸೂ ಒಂದೇ ತೆರನಾಗಿರುವುದಿಲ್ಲ. ಹಾಗಿರುವಾಗ ಪುರುಷನ ತೀರ್ಮಾನಗಳನ್ನು ಬಲಾತ್ಕಾರವಾಗಿ ಪತ್ನಿಯ ಮೇಲೆ ಜಪಹೊರಿಸುವುದು ಎಷ್ಟರ ಮಟ್ಟಿಗೆ ಸರಿ. ಪತ್ನಿಗೂ ಒಂದು ಮನಸ್ಸಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಬೇಕು.
ಒಮ್ಮೆ ಆಯಿಶಾರ(ರ) ಮತ್ತು ಪ್ರವಾದಿಯವರ(ಸ) ಮಧ್ಯೆ ಯಾವುದೋ ಒಂದು ವಿಚಾರದಲ್ಲಿ ವಿರಸ ಉಂಟಾಯಿತು. ಆಗ ಆಯಿಶಾ(ರ) ಹೇಳಿದರು, “ಅಲ್ಲಾಹನ ಪ್ರವಾದಿ ಎಂದು ವಾದಿಸುವ ವ್ಯಕ್ತಿ ನೀವಾ?” ಈ ತರದ ಒಂದು ಪ್ರಶ್ನೆ ಇಂದಿನ ಪತಿಯರಲ್ಲಿ ಕೇಳಿದ್ದರೆ ಅಲ್ಲಿನ ವಾತಾವರಣವೇ ಯುದ್ಧಮಯವಾಗುತ್ತಿತ್ತು. ಆದರೆ ಪ್ರವಾದಿ(ಸ) ಕೇವಲ ಒಂದು ಮುಗುಳ್ನಗೆ ಮಾತ್ರ ಬೀರಿದ್ದರು.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವಾರು ವಿಚಾರಗಳಿಗೆ ದಾಂಪತ್ಯದಲ್ಲಿ ಮಹತ್ವವಿದೆ. ಪ್ರೀತಿಯಿಂದ ಕೂಡಿದ ಕುಡಿನೋಟ, ಕನಿಕರದಿಂದ ತಲೆ ಸವರುವುದು, ಮನಸ್ಸು ಪುಳಕಗೊಳ್ಳುವಂತಹ ಮಾತುಗಳು ಮೊದಲಾದವುಗಳೆಲ್ಲಾ ದಾಂಪತ್ಯ ಜೀವನದಲ್ಲಿ ಪ್ರಭಾವ ಬೀರುವವುಗಳಾಗಿವೆ. ಒಂದು ನೋಟ, ಒಂದು ಸ್ಪರ್ಶ, ಒಂದು ಉತ್ತಮ ಮಾತು ಇವುಗಳ ಕೊರತೆಯು ಕೆಲವು ವೇಳೆ ಸಮಸ್ಯೆಯ ಸೃಷ್ಟಿಗೆ ಕಾರಣವಾಗಿರಬಹುದು. ಒಂದು ಮಂದಹಾಸವು ಎಲ್ಲಾ ಸಮಸ್ಯೆಗಳನ್ನು ಮರೆಯುವಂತೆ ಮಾಡುವ ಶಕ್ತಿ ಹೊಂದಿದೆ. ಪತಿ-ಪತ್ನಿಯರ ನಡುವಿನ ನೋಟವು ಅಲ್ಲಾಹನ ಕರುಣೆಯ ಭಾಗವಾಗಿ ಪ್ರವಾದಿ(ಸ) ಬಣ್ಣಿಸಿದ್ದಾರೆ. ಆದ್ದರಿಂದ ದಾಂಪತ್ಯದ ಯಶಸ್ವಿಯು ನಮ್ಮ ಕೈಯಲ್ಲೇ ಇದೆ. ಅದನ್ನು ನಾವೇ ಪಡೆದುಕೊಳ್ಳಬೇಕಾಗಿದೆ. “ಪದಾರ್ಥದಲ್ಲಿ ಕೂದಲು” ಸಿಕ್ಕಿದರೆ ಅಂತಹ ಕ್ಷುಲ್ಲಕ ವಿಚಾರಗಳು ದಾಂಪತ್ಯ ಛಿದ್ರಗೊಳ್ಳುವುದಕ್ಕೆ ಕಾರಣವಾಗದಿರಲಿ. ದಾಂಪತ್ಯದಲ್ಲಿನ ಯಶಸ್ವಿಯೇ ಇಹಪರಗಳ ವಿಜಯವಾಗಿದೆ.

ಸೋಮವಾರ, ಸೆಪ್ಟೆಂಬರ್ 03, 2012

ಅನುಗ್ರಹಗಳಿಗೆ ಕೃತಘ್ನರಾಗುತ್ತೀರಾ?


 ಅಲ್ಲಾಹನು ನಮಗೆ ಲೆಕ್ಕವಿಲ್ಲದಷ್ಟು ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಲೋಕದ ವೈಭವವನ್ನು ನೋಡಲು ಕಣ್ಣುಗಳು, ಶಬ್ದ ತರಂಗಗಳನ್ನು ಆಲಿಸಲು ಕಿವಿಗಳು, ಜನರ ಮಧ್ಯೆ ಪರಸ್ಪರ ವಿಚಾರ ವಿನಿಮಯ ನಡೆಸಲು ನಾಲಗೆ, ವಸ್ತುಗಳನ್ನು ಹಿಡಿದುಕೊಳ್ಳಲು ಕೈಗಳು, ನಡೆದಾಡಲು ಕಾಲುಗಳು, ಆಲೋಚಿಸಲು ಬುದ್ಧಿ ಶಕ್ತಿ ಇವೆಲ್ಲವೂ ಅಲ್ಲಾಹನ ಅಪಾರ ಅನುಗ್ರಹಗಳ ಪೈಕಿ ಕೆಲವೊಂದಾಗಿವೆ. ಇವ್ಯಾವುದೂ ಕ್ಷುಲ್ಲಕ ವಿಚಾರಗಳಲ್ಲ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಎಣಿಸಲು ಅದು ನಿಮ್ಮಿಂದ ಸಾಧ್ಯವಿಲ್ಲ. ಇದು ಅಲ್ಲಾಹನೇ ಸ್ವತಃ ತಿಳಿಸಿರುವ ವಿಚಾರವಾಗಿದೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಅವನ ಆಜ್ಞೆ, ಆದೇಶಗಳನುಸಾರ ಬಳಸಿದರೆ ಅವು ಅನುಗ್ರಹವಾಗಿ ಉಳಿಯುತ್ತವೆ. ಬದಲಾಗಿ ಆ ಅನುಗ್ರಹಗಳನ್ನು ಸ್ವೇಚ್ಛೆಯಂತೆ ಅಲ್ಲಾಹನ ನಿಯಮಗಳನ್ನು ಉಲ್ಲಂಘಿಸಿ ಬಳಸಿದರೆ ಅದು ನಮ್ಮ ಪಾಲಿಗೆ ಪರೀಕ್ಷೆಯಾಗಿ ಬದಲಾಗುತ್ತವೆ.
ನಮಗೆ ಲಭಿಸುವ ಪ್ರತಿಯೊಂದು ಅನುಗ್ರಹದ ಕುರಿತು ನಾವು ನಾಳೆ ಪರಲೋಕದಲ್ಲಿ ಪ್ರಶ್ನಿಸಲ್ಪಡಲಿದ್ದೇವೆ. ಅನುಗ್ರಹಗಳ ಕುರಿತ ಪ್ರಶ್ನೆಗಳನ್ನು ಎದುರಿಸದೆ ಯಾರು ಕೂಡಾ ಒಂದಡಿ ಮುಂದೆ ಸಾಗಲಿಕ್ಕಿಲ್ಲ. ಭೂಮಿಯಲ್ಲಿ ಲಭಿಸಿದ ಅನುಗ್ರಹಗಳನ್ನು ಅಲ್ಲಾಹನ ಇಚ್ಛೆಗನುಸಾರವಾಗಿ ಬಳಸಿಕೊಂಡವನು ತನ್ನ ವಿಚಾರಣೆಯಲ್ಲಿ ಯಶಸ್ವಿಯಾಗುವನು ಇನ್ನು ಅದನ್ನು ಒಂದು ಪರೀಕ್ಷೆಯಾಗಿ ಪರಿವರ್ತಿಸಿದವನು ಹಲವು ಸಂಕಷ್ಟಗಳನ್ನು ಎದುರಿಸಬೇಕಾದೀತು. ಪ್ರವಾದಿಯವರು(ಸ) ಪ್ರತೀ ಸಂದರ್ಭಗಳಲ್ಲೂ ಅಲ್ಲಾಹನ ಅನುಗ್ರಹಗಳನ್ನು ಬಳಸುವಾಗ ಅವರಲ್ಲಿ ನಾಳೆ ಪರಲೋಕದಲ್ಲಿ ಈ ಅನುಗ್ರಹಗಳಿಗೆ ಸೂಕ್ತ ಉತ್ತರ ನೀಡಲಿಕ್ಕಿದೆ ಎಂಬ ಪ್ರಜ್ಞೆಯು ಜಾಗೃತವಾಗುತ್ತಿತ್ತು. ಅವರು ತಮ್ಮ ಅನುಯಾಯಿಗಳಿಗೂ ಅದೇ ಶಿಕ್ಷಣ ನೀಡಿದ್ದರು. ಆದರೆ ನಮ್ಮಲ್ಲಿ ಇಂದು ಅಂತಹ ಪ್ರಜ್ಞೆ ಅಸ್ತಂಗತವಾಗಿದೆ. ದಿನನಿತ್ಯ ಹಲವಾರು ಅನುಗ್ರಹಗಳನ್ನು ಬೇಕಾಬಿಟ್ಟಿಯಾಗಿ ನಾವು ಬಳಸುತ್ತಿದ್ದರೂ ನಾಳೆ ಅದಕ್ಕೆಲ್ಲಾ ಉತ್ತರಿಸಲಿಕ್ಕಿದೆ ಎಂಬ ಪ್ರಜ್ಞೆ ನಮ್ಮಲ್ಲಿ ಎಂದಾದರೂ ಮೂಡಿದೆಯೇ?
ಆರೋಗ್ಯವು ಅತ್ಯಂತ ಶ್ರೇಷ್ಠ ಅನುಗ್ರಹವಾಗಿದೆ. ಅವಯವಗಳ ರಚನೆ, ಜ್ಞಾನೇಂದ್ರಿಯಗಳ ವ್ಯವಸ್ಥೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಅನುಗ್ರಹಗಳನ್ನು ಋಜುಮಾರ್ಗದಲ್ಲಿ ವಿನಿಯೋಗಿಸಿ ಅದನ್ನು ನೀಡಿದಾತನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಂದಿ ಈ ಎರಡು ಅನುಗ್ರಹಗಳಿಂದ ವಂಚಿತರಾಗಿರುತ್ತಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅವುಗಳ ಪೈಕಿ ಒಂದು ಆರೋಗ್ಯವಾಗಿದೆ.
ಅಲ್ಲಾಹನು ಹಲವರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿದ್ದರೂ ಅವರು ಹಲವು ಚಟಗಳನ್ನು ಮೈಗೂಡಿಸಿ ತಮ್ಮ ಆರೋಗ್ಯವನ್ನು ಹಾಳುಗೆಡಹುತ್ತಿದ್ದಾರೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಉತ್ತಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಕ್ಷಣಿಕ ಸುಖದ ಲಾಲಸೆಗಾಗಿ ಮಹಾ ಅನುಗ್ರಹವೊಂದನ್ನು ಕೈಚೆಲ್ಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೃಷ್ಟಿಕರ್ತನ ಕುರಿತು ಜ್ಞಾನದ ಕೊರತೆಯಾಗಿದೆ. ನಾಳೆ ಅಲ್ಲಾಹನ ಮುಂದೆ ಆರೋಗ್ಯವೆಂಬ ಅನುಗ್ರಹದ ಕುರಿತು ವರದಿ ಒಪ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯು ಮನಸ್ಸಲ್ಲಿದ್ದರೆ ಅವರು ಆರೋಗ್ಯವನ್ನು ದೇವ ಮಾರ್ಗಕ್ಕಾಗಿಯೇ ಮುಡಿಪಾಗಿರಿಸುತ್ತಿದ್ದರು.
ನಮಗೆ ಲಭಿಸಿರುವ ಆರೋಗ್ಯದ ಬೆಲೆ ತಿಳಿಯಬೇಕಾದರೆ ರೋಗ ಪೀಡಿತರನ್ನು ಸಂದರ್ಶಿಸಬೇಕು. ಕಣ್ಣಿನ ಬೆಲೆ ತಿಳಿಯಬೇಕಾದರೆ ಕುರುಡನ ಪರದಾಟನ್ನು ನೋಡಿದರೆ ಸಾಕು. ಬುದ್ಧಿಶಕ್ತಿಯ ಬೆಲೆ ಅರಿಯಬೇಕಾದರೆ ಬುದ್ಧಿಮಾಂದ್ಯನ ವರ್ತನೆಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ನಗರದ ಆಸ್ಪತ್ರೆಗಳಿಗೆ ನೀವು ಒಮ್ಮೆ ಭೇಟಿ ನೀಡಿದರೆ, ಅಲ್ಲಾಹನು ನಮಗೆ ದಯಪಾಲಿಸಿರುವ ಈ ಆರೋಗ್ಯದ ಮೌಲ್ಯವು ಹಗಲಿನಂತೆ ವ್ಯಕ್ಯವಾಗುವುದು. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಂದ ಬಳಲುತ್ತಿರುವವರು, ಪ್ರಾರ್ಥಮಿಕ ಆವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವವರು, ಎದ್ದು ಸರಿಯಾಗಿ ನಡೆದಾಡಲಾಗದವರು, ನಿದ್ದೆಯಿಲ್ಲದೆ ರಾತ್ರಿಯಿಡಿ ಹಾಸಿಗೆಯಲ್ಲಿ ಹೊರಳಾಡುವವರು, ಮಾನಸಿಕ ರೋಗಗಳಿಂದ ನರಳುವವರು ಮೊದಲಾದವರೆಲ್ಲರೂ ನಮ್ಮ ಆರೋಗ್ಯದ ಬೆಲೆಯನ್ನು ನಮಗೆ ನೆನಪಿಸುತ್ತಿದ್ದಾರೆ.
ನಮ್ಮಲ್ಲಿರುವ ಸಂಪತ್ತು, ಪದವಿ, ಅಧಿಕಾರಗಳು ಆರೋಗ್ಯದ ಮುಂದೆ ಕ್ಷುಲ್ಲಕ ವಸ್ತುಗಳಾಗಿವೆ. ಅನಾರೋಗ್ಯ ಪೀಡಿತರಾದಾಗ ಇದು ಹೆಚ್ಚು ಖಾತ್ರಿಯಾಗುತ್ತದೆ. ಸಂಪತ್ತು, ಅಧಿಕಾರದ ಮೂಲಕ ದರ್ಪ ಪ್ರದರ್ಶಿಸಿದವರು ಕೊನೆಗೆ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ತಮ್ಮ ಸಂಪತ್ತನ್ನೆಲ್ಲಾ ವ್ಯಯಿಸಿ ದಿವಾಳಿಯಾದವರು ಹಲವರಿದ್ದಾರೆ. ಆರೋಗ್ಯವಿದೆ ಎಂಬ ಹುಂಬ ಧೈರ್ಯದಿಂದ ಸಂಪತ್ತು, ಅಧಿಕಾರದಿಂದ ಅಹಂಕಾರಿಗಳಾದವರು ಆರೋಗ್ಯವನ್ನೇ ಕಳಕೊಂಡಾಗ ಪಶ್ಚಾತ್ತಾಪ ಪಡುತ್ತಾರೆ. ಆರೋಗ್ಯದ ಮರಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಅಬ್ಬಾಸಿ ಖಲೀಫರಾದ ಹಾರೂನ್ ರಶೀದ್ ಒಮ್ಮೆ ಇಬ್ನು ಸಮಾಕ್ ಎಂಬ ವಿದ್ವಾಂಸರೊಂದಿಗೆ, “ನನಗೆ ಉಪದೇಶ ಮಾಡಿರಿ” ಎಂದು ಭಿನ್ನವಿರಿಸಿಕೊಂಡರು. ಆ ಸಂದರ್ಭದಲ್ಲಿ ಖಲೀಫರಿಗೆ ಕುಡಿಯಲಿಕ್ಕಾಗಿ ಸ್ವಲ್ಪ ನೀರು ತಂದಿಟ್ಟಿದ್ದರು. ಇಬ್ನು ಸಮಾಕ್ ಹೇಳಿದರು. “ಓ ಅವಿೂರುಲ್ ಮುಅïಮಿನೀನ್ ನಿಮಗೆ ಈ ನೀರನ್ನು ಕುಡಿಯಲು ಅಸಾಧ್ಯವಾದಂತಹ ಸ್ಥಿತಿ ಬಂದೊದಗಿದರೆ ತಮ್ಮ ಅಧಿಕಾರವನ್ನೆಲ್ಲಾ ಅದರ ಚಿಕಿತ್ಸೆಗಾಗಿ ವ್ಯಯಿಸಲಿಕ್ಕಿಲ್ಲವೇ?” ಖಲೀಫ ಹೌದೆಂದು ಉತ್ತರಿಸಿದರು. “ಇನ್ನು ಅದನ್ನು ಸೇವಿಸಿದ ಬಳಿಕ ಅದು ಹೊರ ಹೋಗದಿದ್ದರೆ ಆಗಲೂ ತಾವು ತಮ್ಮ ಅಧಿಕಾರವನ್ನೆಲ್ಲಾ ವಿನಿಯೋಗಿಸಲಿಕ್ಕಿಲ್ಲವೇ?” ಆಗಲೂ ಹೌದೆಂದು ಖಲೀಫರು ಉತ್ತರಿಸಿದರು. ಆಗ ಇಬ್ನು ಸಮಾಕ್ ಹೇಳಿದರು, “ನೀರು ಸೇವಿಸಲು ಮತ್ತು ಅದನ್ನು ವಿಸರ್ಜಿಸಲು ಅಸಾಧ್ಯವಾದುದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲದ ನಿಮ್ಮ ಅಧಿಕಾರದ ಬೆಲೆಯಾದರೂ ಏನು?” ಇಲ್ಲಿ ರಾಷ್ಟ್ರ ಹಾಗೂ ಅಧಿಕಾರಕ್ಕಿಂತ ಹೆಚ್ಚಿನ ಬೆಲೆ ಆರೋಗ್ಯಕ್ಕಿದೆ ಎಂದು ಉಪದೇಶಿಸಲಾಗಿದೆ.
ನಾವು ಆರೋಗ್ಯವಂತರಾಗಿದ್ದರಿಂದ ನಮಗೆ ಆರೋಗ್ಯದ ಬೆಲೆ ತಿಳಿಯುತ್ತಿಲ್ಲ. ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. ಒಂದು ವಸ್ತುವು ನಮ್ಮಲ್ಲಿರುವಾಗ ನಮಗೆ ಅದರ ಬೆಲೆ ತಿಳಿಯುವುದಿಲ್ಲ. ಅದು ಕಳೆದು ಹೋದಾಗ ಮಾತ್ರ ನಮಗೆ ಅದರ ಮೌಲ್ಯ ತಿಳಿಯುತ್ತದೆ. ಬಳಿಕ ಪಶ್ಚಾತ್ತಾಪಪಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ನಾಳೆ ಅನುಗ್ರಹದ ವಿಚಾರಣೆಯ ಕುರಿತು ಯಾರೂ ಸಂಶಯ ಪಡಬೇಕಾಗಿಲ್ಲ. ಅದು ನಡೆದೇ ತೀರುವುದು.
ಪ್ರವಾದಿಯವರು(ಸ) ಹೇಳಿದರು, “ನನ್ನ ಆತ್ಮ ಯಾರ ಕೈಯಲ್ಲಿದೆಯೋ, ಅವನಾಣೆ! ನಿಶ್ಚಯವಾಗಿಯೂ ಅಂತ್ಯದಿನದಲ್ಲಿ ಸತ್ಕರ್ಮಗಳೊಂದಿಗೆ ಓರ್ವನು ಬರುವನು. ಅವುಗಳನ್ನು ಒಂದು ಪರ್ವತದ ಮೇಲಿಟ್ಟರೆ ಆ ಪವರ್ತವು ಭಾರದಿಂದ ಕುಸಿಯುವುದು. ಆಗ ಅಲ್ಲಾಹನ ಅನುಗ್ರಹಗಳ ಪೈಕಿ ಒಂದು ಅನುಗ್ರಹವು ಎದ್ದು ನಿಲ್ಲುತ್ತದೆ. ಅಲ್ಲಾಹನ ಅನುಗ್ರಹವು ಅವನನ್ನು ಆವರಿಸದಿರುತ್ತಿದ್ದರೆ ಅದು ಅವನ ಸತ್ಕರ್ಮಗಳೆಲ್ಲವನ್ನು ನಾಶಪಡಿಸುತ್ತಿತ್ತು.” (ತ್ವಬ್ರಾನಿ)
ಇಸ್ಲಾಮ್ ಜೀವನವನ್ನೇ ಒಂದು ಒಂದು ಅನುಗ್ರಹವಾಗಿ ಕಾಣುತ್ತದೆ. ನಮಗೆ ನೀಡಲಾಗಿರುವ ಮನೆ, ರಾತ್ರಿ-ಹಗಲುಗಳ ಸೃಷ್ಟಿ, ಸಂಚಾರ ಸೌಕರ್ಯ ಇವೆಲ್ಲವೂ ಅಲ್ಲಾಹನ ಅನುಗ್ರಹಗಳ ಸಾಲಿಗೆ ಸೇರಿವೆ. ಇವುಗಳಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಅಲ್ಲಾಹನು ಹೇಳಿದ್ದಾನೆ. ಶ್ರೇಷ್ಠವಾದ ಈ ಜೀವನವು ಅಲ್ಲಾಹನ ವತಿಯಿಂದಿರುವ ಮಹಾ ಸೌಭಾಗ್ಯವಾಗಿದೆ. ಆದ್ದರಿಂದ ಅಲ್ಲಾಹನ ಹಕ್ಕುಗಳನ್ನು ಪೂರೈಸಬೇಕಾದುದೂ ಅತ್ಯಗತ್ಯವಾಗಿದೆ. ಅಲ್ಲಾಹನು ಹೇಳುತ್ತಾನೆ, “ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುತ್ತೀರಿ? ನೀವಾದರೋ ನಿರ್ಜೀವಿಗಳಾಗಿದ್ದಿರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು. ತರುವಾಯ ನಿಮಗೆ ಆತನೆಡೆಗೇ ಮರಳಿ ಹೋಗಬೇಕಾಗಿದೆ.”
ಅಲ್ಲಾಹನ ಅನುಗ್ರಹಗಳನ್ನು ಗುರುತಿಸಲಿಕ್ಕಾಗಿ ಅವನು ನಮಗೆ ಪಂಚೇಂದ್ರಿಯಗಳನ್ನು ನೀಡಿದ್ದಾನೆ. ಈ ಮೂಲಕ ನಾವು ಜಗದ ಸೌಂದರ್ಯವನ್ನು ಸವಿಯುತ್ತೇವೆ. ಜೀವನದ ಎಲ್ಲಾ ರಂಗಗಳಲ್ಲೂ ಅದು ವ್ಯಾಪಿಸುವಾಗ ಅದನ್ನು ನೀಡಿದಾತನಿಗೆ ನಾವು ಕೃತಜ್ಞರಾಗಬೇಕಾಗಿದೆ. ಅಲ್ಲಾಹನು ಅನ್ನಹ್ಲ್ ಅಧ್ಯಾಯದ 78ನೇ ಸೂಕ್ತದಲ್ಲಿ ಹೇಳುತ್ತಾನೆ, “ಅಲ್ಲಾಹನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರ ತಂದನು. ನೀವು ಕೃತಜ್ಞರಾಗಲಿಕ್ಕಾಗಿ ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ವಿಚಾರ ಮಾಡುವ ಮನಸ್ಸುಗಳನ್ನೂ ನೀಡಿದನು.”
ಆದ್ದರಿಂದ ಅನುಗ್ರಹಗಳನ್ನು ನೀಡಿದಾತನ ಆರಾಧನೆಯು ನಮ್ಮ ನಿಮ್ಮೆಲ್ಲರ ಕಡ್ಡಾಯ ಕರ್ತವ್ಯವಾಗಿದೆ. ಇಷ್ಟೆಲ್ಲಾ ಅನುಗ್ರಹಗಳನ್ನು ಅಲ್ಲಾಹನು ನೀಡಿದ್ದರೂ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ನಾವು ಜಿಪುಣರಾಗುತ್ತಿದ್ದೇವೆ ಅಥವಾ ಆ ಕಡೆಗೆ ಗಮನಹರಿಸುತ್ತಿಲ್ಲ. ನಾಳೆ ಅಲ್ಲಾಹನು ಅನುಗ್ರಹಗಳ ಕುರಿತು ವಿಚಾರಿಸುವಾಗ ಸಮರ್ಪಕ ಉತ್ತರ ನೀಡಲು ನಮಗೆ ಸಾಧ್ಯವಾಗಬೇಕು. ಅವುಗಳನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸುವವರ ಪಟ್ಟಿಯಲ್ಲಿ ಸೇರಲು ನಮಗೆ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ನಾವು ಸಾಧ್ಯವಾದಷ್ಟು ಪ್ರಯತ್ನ ನಡೆಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.


ಮಂಗಳವಾರ, ಜುಲೈ 10, 2012

ಆತ್ಮಾವಲೋಕನಕ್ಕೆ ಸಿದ್ಧರಾಗೋಣ


ಓರ್ವ ವಿಶ್ವಾಸಿಯು ಹೃದಯದಲ್ಲಿ ಸದಾ ದೇವಭಯವನ್ನಿರಿಸುತ್ತಾನೆ. ಅವನು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವ್ಯವಹಾರಗಳಲ್ಲೂ ದೇವನಿಗೆ ಪ್ರಥಮ ಆದ್ಯತೆ ನೀಡುತ್ತಾನೆ. ಪ್ರತೀ ಕೆಲಸಕ್ಕೆ ಮುಂದಾಗುವಾಗಲೂ ಅವನು ದೇವನ ಆಜ್ಞೆ ಏನು ಎಂಬುದನ್ನು ತಿಳಿದ ಬಳಿಕವಷ್ಟೇ ಅದನ್ನು ಮಾಡುತ್ತಾನೆ. ಅವನು ತನಗೂ ದೇವನಿಗೂ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸಲು ಬೇಕಾಗುವ ಎಲ್ಲವನ್ನೂ ಮಾಡುತ್ತಾನೆ. ನಮಾಝಿನಲ್ಲಿ ಕೈ ಕಟ್ಟಿದ ಬಳಿಕ “ನನ್ನ ನಮಾಝ್, ನನ್ನ ಬಲಿಕರ್ಮಗಳು, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಪರಿಪಾಲಕನಿಗಾಗಿದೆ” ಎಂದು ಮನಸರಿತು ಹೇಳುತ್ತಾನೆ. ಆದರೆ ಇದು ಕೇವಲ ನಮಾಝಿಗೆ ಮಾತ್ರ ಸೀಮಿತಗೊಳ್ಳದೆ ಅವನ ಜೀವನದ ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತದೆ. 
ವಿಶ್ವಾಸಿಯು ದೇವನ ಕರುಣೆಯ ಕುರಿತು ಹೆಚ್ಚು ನಿರೀಕ್ಷೆಯಿರಿಸಿರುತ್ತಾನೆ. ಅದರೊಂದಿಗೆ ದೇವನ ಶಿಕ್ಷೆಯ ಕುರಿತು ಸದಾ ಚಿಂತಿತನಾಗಿರುತ್ತಾನೆ. ಹೃದಯವು ಅದರ ಕುರಿತು ಕಂಪಿಸುತ್ತಿರುತ್ತದೆ. ಆಯಿಶಾ(ರ) ವರದಿ ಮಾಡಿದ್ದಾರೆ. ಆಯಿಶಾ(ರ) ಪ್ರವಾದಿಯವರೊಂದಿಗೆ ಕೇಳಿದರು, “ಅಲ್ಲಾಹನ ಸಂದೇಶವಾಹಕರೇ “ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆಯಿಂದ ಕಂಪಿಸುತ್ತಿರುವ ಹೃದಯಗಳಿರುವವರು” (ಅಲ್ ಮೂಮಿನೂನ್- 60) ಎಂದು ಕುರಾನ್ ಹೇಳಿರುವುದು, ವ್ಯಭಿಚಾರ, ಕಳ್ಳತನ, ಮದ್ಯಪಾನ ಮಾಡಿರುವ ವ್ಯಕ್ತಿಗಳ ಕುರಿತಲ್ಲವೇ? ಆಗ ಪ್ರವಾದಿಯವರು(ಸ) ಹೇಳಿದರು. “ಓ ಅಬೂಬಕ್ಕರ್ರ(ರ) ಪುತ್ರಿಯೇ ಅಲ್ಲ. ಇದು ಉಪವಾಸ ಆಚರಿಸುವ, ನಮಾಝ್ ನಿರ್ವಹಿಸುವ, ದಾನ-ಧರ್ಮ ಮಾಡುವ ವ್ಯಕ್ತಿಗಳ ಕುರಿತಾಗಿದೆ. ತನ್ನ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಿಕ್ಕಿಲ್ಲ ಎಂದು ಅವರು ಭಯಪಡುತ್ತಿರುವರು.”
ವಿಶ್ವಾಸಿಗೆ ತನ್ನ ಸೃಷ್ಟಿಕರ್ತನ ಮಹಿಮೆಯ ಕುರಿತು ಅಪಾರ ಜ್ಞಾನ  ಹೊಂದಿರುತ್ತಾನೆ. ದೇವನ ಮುಂದೆ ತನ್ನ ಕುಬ್ಜತನವನ್ನು ಮನಸಾರೆ ಒಪ್ಪಿಕೊಳ್ಳುತ್ತಾನೆ. ತನ್ನ ಜೀವನದ ಗುರಿಯ ಕುರಿತು ಪ್ರಜ್ಞಾವಂತನಾಗಿರುತ್ತಾನೆ. ಆ ಗುರಿಯೆಡೆಗೆ ಸಾಗಲಿಕ್ಕಾಗಿ ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಲು ತಯಾರಾಗುತ್ತಾನೆ. ದೇವನ ಆಜ್ಞಾನುಸಾರ ಅವನು ಹಲವಾರು ಕರ್ಮಗಳನ್ನೆಸಗುತ್ತಾನೆ. ಜನರು ಆ ಕರ್ಮಗಳೆಲ್ಲವೂ ಮೌಲ್ಯಯುತವಾದುದೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಅವನನ್ನು ಗೌರವಿಸುತ್ತಾರೆ. ಆದರೆ ಓರ್ವ ವಿಶ್ವಾಸಿಗೆ ಇವೆಲ್ಲವೂ ನಗಣ್ಯವಾಗಿದೆ. ಅಲ್ಲಾಹನ ಸಂಪ್ರೀತಿಗೆ ಪಾತ್ರವಾಗಲು, ಅವನ ಶಿಕ್ಷೆಯಿಂದ ಪಾರಾಗಲು ಜನರು ತನ್ನ ಬಗ್ಗೆ ಮಾಡುವ ಪ್ರಶಂಸೆಯು ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ಅವನು ದೃಢವಾಗಿ ನಂಬುತ್ತಾನೆ. ತನ್ನ ಕರ್ಮಗಳು ತೋರಿಕೆಯಾಗಿ ಮಾರ್ಪಡುವುದೋ ಎಂಬ ಬಗ್ಗೆ ಸದಾ ಚಿಂತಿತನಾಗಿರುತ್ತಾನೆ. ತೋರಿಕೆಗಾಗಿ ಮಾಡುವ ಕರ್ಮವು ಅತ್ಯಂತ ಸಣ್ಣ ಶಿರ್ಕ್ ಆಗಿದೆಯಷ್ಟೇ. ಅಲ್ಲಾಹನು ನಮ್ಮ ಸೌಂದರ್ಯವನ್ನೊ ಸಂಪತ್ತನ್ನೋ ಪದವಿಗಳನ್ನೋ ನೋಡುವುದಿಲ್ಲ. ಬದಲಾಗಿ ನಮ್ಮ ಹೃದಯಕ್ಕೂ ಕರ್ಮಗಳಿಗೂ ನೋಡುತ್ತಾನೆ. ನಾವು ಎಷ್ಟು ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯವಲ್ಲ. ಹೇಗೆ ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯ. ಕರ್ಮಗಳ ಹಿಂದಿರುವ ಉದ್ದೇಶದ ಕಡೆಗೆ ಅಲ್ಲಾಹನು ನೋಡುತ್ತಾನೆ. ಆದ್ದರಿಂದ ವಿಶ್ವಾಸಿಯು ತನ್ನ ಕರ್ಮಗಳು ನಿಶ್ಫಲಗೊಳ್ಳುವುದೇ ಎಂಬ ಕುರಿತು ಸದಾ ಚಿಂತಿತನಾಗಿರುತ್ತಾನೆ.
ಕುದ್ಸಿಯಾದ ಹದೀಸ್ನಲ್ಲಿ ಹೀಗಿದೆ. “ಅಲ್ಲಾಹನು ಹೇಳುತ್ತಾನೆ. ನನ್ನ ಪ್ರತಾಪದ ಮೇಲಾಣೆ. ನನ್ನ ದಾಸರ ಮೇಲೆ ಎರಡು ಸಂದರ್ಭಗಳ ಭಯ ಹಾಗೂ ನಿರ್ಭಯವನ್ನು ಒಟ್ಟಿಗೆ ನೀಡಲಿಕ್ಕಿಲ್ಲ. ಇಹಲೋಕದಲ್ಲಿ ನನ್ನ ಭಯವಿರಿಸಿ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಅವನಿಗೆ ನಿರ್ಭಯ ನೀಡುವೆನು. ಇಹಲೋಕದಲ್ಲಿ ನನ್ನ ಭಯವಿಲ್ಲದೆ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಭಯವನ್ನು ನೀಡುವೆನು.” ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಯಾವ ವಸ್ತುವಿನ ಬಗ್ಗೆ ಮನುಷ್ಯನು ಭಯ ಭೀತನಾಗಿರುತ್ತಾನೋ ಆ ವಸ್ತುವಿನಿಂದ ದೂರ ಸರಿಯಲು ಅವನು ಪ್ರಯತ್ನಿಸುತ್ತಾನೆ. ಆದರೆ ಅಲ್ಲಾಹನನ್ನು ಭಯಪಡುವವನು ಅವನಿಂದ ದೂರ ಸರಿಯುವುದಲ್ಲ. ಬದಲಾಗಿ ಅವನ ಬಳಿಗೆ ಓಡಿ ಹೋಗಲು ಬಯಸುತ್ತಾನೆ.”
ಅಲ್ಲಾಹನ ಕುರಿತು ಭಯವೂ, ನಿರೀಕ್ಷೆಯೂ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ನಾವು ಅಲ್ಲಾಹನ ಸಂಪ್ರೀತಿಗಾಗಿ ಏನೆಲ್ಲಾ ಕಸರತ್ತು ನಡೆಸುತ್ತೇವೆ. ಭಯ ಭಕ್ತಿಯಿಂದ ನಮಾಝ್ ನಿರ್ವಹಿಸುತ್ತೇವೆ. ಕೊಡುಗೈ ದಾನಿ ಎಂದು ಜನರಾಡಿಕೊಳ್ಳುವಷ್ಟರ ಮಟ್ಟಿಗೆ ದಾನ-ಧರ್ಮ ನೀಡುತ್ತೇವೆ. ಆದರೆ ಅದರ ಮರುಕ್ಷಣದಲ್ಲೇ ಅವೆಲ್ಲವೂ ನಿಶ್ಫಲಗೊಳ್ಳುವಂತಹ, ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳನ್ನು ಮಾಡಿ ಬಿಡುತ್ತೇವೆ. ಅಲ್ಲಾಹನ ಕರುಣೆಯ ಮೇಲೆ ಮಾತ್ರ ವಿಪರೀತ ನಿರೀಕ್ಷೆ ಇರಿಸಿ ತಪ್ಪುಗಳನ್ನೆಸಗುತ್ತಾ ಜೀವಿಸುವುದು ವಿಶ್ವಾಸಿಗಳ ಲಕ್ಷಣವಲ್ಲ.
ವಿಶ್ವಾಸಿಗಳು ಅಲ್ಲಾಹನ ಪ್ರೀತಿಗೆ ಪಾತ್ರರಾಗಲು ಸದಾ ಹಂಬಲಿಸುತ್ತಿರುತ್ತಾರೆ. ಅವರ ಇಹಲೋಕ ಜೀವನದ ಸರ್ವಸ್ವವು ಅಲ್ಲಾಹನ ಸಂಪ್ರೀತಿಯಗಳಿಯಾಗಿರುತ್ತದೆ. ಉಮರ್(ರ) ಹೇಳಿರುವರು. “ಆಕಾಶದಿಂದ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿದೆಲ್ಲರೂ ಸ್ವರ್ಗಕ್ಕೆ ಪ್ರವೇಶಿಸಿರಿ” ಎಂಬ ಕರೆ ಕೇಳಿದರೆ, ಸ್ವರ್ಗಕ್ಕಿರುವ ಗುಂಪಿನಿಂದ ಕೈಬಿಡಲ್ಪಟ್ಟ ವ್ಯಕ್ತಿ ನಾನಾಗಿರಬಹುದೇ ಎಂದು ನಾನು ಭಯಪಡುತ್ತೇವೆ. ಅದೇ ರೀತಿ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿ ಕೆÉೀಳಿದರೆ ಆ ಕೈ ಬಿಡಲ್ಪಟ್ಟ ವ್ಯಕ್ತಿ ನಾನಾಗಿರಬೇಕು ಎಂದು ನಿರೀಕ್ಷೆ ಇರಿಸುತ್ತೇನೆ.”
ಆದ್ದರಿಂದ ನಾವು ನಮ್ಮ ಜೀವನದ ಕಡೆಗೊಮ್ಮೆ ಕಣ್ಣೋಡಿಸಬೇಕಾಗಿದೆ. ನಾವು ಎಸಗುವ ಕರ್ಮಗಳು ಜನರ ಪ್ರಶಂಸೆ ಸಂಪಾದಿಸುವುದಕ್ಕೋಸ್ಕರವಾದರೆ ಅಂತಹ ಕರ್ಮಗಳಿಂದ ಯಾವುದೇ ಪ್ರಯೋಜನವಿಲ್ಲ. ಮಾತ್ರವಲ್ಲ ಅಂಥ ಕರ್ಮಗಳ ಹೆಸರಿನಲ್ಲಿ ಶಿಕ್ಷೆಗೂ ಗುರಿಯಾಗಬಹುದು. ಉಮರ್(ರ) ಹೇಳಿರುವರು, “ನಾವು ವಿಚಾರಣೆಗೆ ಗುರಿಯಾಗುವುದಕ್ಕಿಂತ ಮುಂಚೆಯೇ ನಾವು ಸ್ವತಃ ವಿಚಾರಣೆ ನಡೆಸಬೇಕು.” ಈ ನಿಟ್ಟಿನಲ್ಲಿ ನಮ್ಮ ಕರ್ಮಗಳ ಕುರಿತು ಆತ್ಮಾವಲೋಕನ ನಡೆಸಬೇಕಾಗಿದೆ. ಸತ್ಕರ್ಮಗಳನ್ನು ಮಾಡಿ ಆ ಸತ್ಕರ್ಮಗಳು ನಿಶ್ಪ್ರಯೋಜಕವಾಗುವ ಹತಭಾಗ್ಯರ ಗುಂಪಿಗೆ ಸೇರದಂತೆ ನಾವು ಸದಾ ಜಾಗೃತರಾಗಬೇಕಾಗಿದೆ. ಅದಕ್ಕಾಗಿ ಸರ್ವಲೋಕಗಳ ಪರಿಪಾಲಕರು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಜುಲೈ 02, 2012

ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕೇ?


ಅಲ್ಲಾಹನೊಂದಿಗೆ ಪ್ರೀತಿ ಮತ್ತು ಸಹಸೃಷ್ಟಿಗಳೊಂದಿಗಿನ ಸೇವೆಯು ಇಸ್ಲಾಮಿನಲ್ಲಿ ಅತೀ ಹೆಚ್ಚು ಮಹತ್ವ ಇರುವ ಕರ್ಮಗಳಾಗಿವೆ. ಈ ಎರಡು ವಿಷಯಗಳು ಪರಸ್ಪರ ಪೂರಕವಾಗಿದೆ. ಅಲ್ಲಾಹನೊಂದಿಗಿರುವ ಪ್ರೀತಿ, ಇಷ್ಟಗಳು ಅವನ ಇತರ ಸೃಷ್ಟಿಜಾಲಗಳೊಂದಿಗಿರುವ ಕರುಣೆಗೂ ದಯೆಗೂ ನಾಂದಿಯಾಗುತ್ತವೆ. ಓರ್ವನು ತನ್ನ ಪ್ರಭುವಿನಿಂದ ದೂರ ಸರಿಯುತ್ತಿದ್ದಂತೆ ಇತರ ಸೃಷ್ಟಿಗಳಿಂದಲೂ ಅವನು ದೂರ ಸರಿಯುತ್ತಾನೆ. ಅವನು ಅಲ್ಲಾಹನ ಸಾಮಿಪ್ಯ ಗಳಿಸುತ್ತಾನೆಂದಾದರೆ ಇತರ ಸೃಷ್ಟಿಗಳಿಗೂ ಹತ್ತಿರವಾಗುತ್ತಾನೆ.
ಇಬ್ಬ್ನು ಉಮರ್(ರ) ವರದಿ ಮಾಡಿದ್ದಾರೆ. ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು “ಅಲ್ಲಾಹನ ಸಂದೇಶವಾಹಕರೇ. ಜನರ ಪೈಕಿ ಅಲ್ಲಾಹನಿಗೆ ಹೆಚ್ಚು ಇಷ್ಟವಿರುವವರು ಯಾರು? ಅಲ್ಲಾಹನಿಗೆ ಅತ್ಯಂತ ಹೆಚ್ಚು ಇಷ್ಟ ಇರುವ ಕೆಲಸ ಯಾವುದು?” ಆಗ ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಹೆಚ್ಚು ಪ್ರೀತಿ ಪಾತ್ರರು ಜನರಿಗೆ ಹೆಚ್ಚು ಉಪಕಾರ ಮಾಡುವವರಾಗಿದ್ದಾರೆ. ಅಲ್ಲಾಹನಿಗೆ ಹೆಚ್ಚು ಇಷ್ಟ ಇರುವ ಕೆಲಸ ಓರ್ವ ಮುಸ್ಲಿಮನಿಗೆ ನಿನ್ನ ಮೂಲಕ ಲಭಿಸುವ ಸಂತೋಷವಾಗಿದೆ. ಅಲ್ಲದಿದ್ದರೆ ಅವನ ಒಂದು ಸಂಕಷ್ಟವನ್ನು ಪರಿಹರಿಸುವುದು ಅಥವಾ ಸಾಲ ಸಂದಾಯ ಮಾಡುವುದಾಗಿದೆ. ಅದೂ ಅಲ್ಲದಿದ್ದರೆ ಅವನ ಹಸಿವನ್ನು ನೀಗಿಸುವುದಾಗಿದೆ. ನಿಶ್ಚಯವಾಗಿಯೂ, ಓರ್ವ ಸಹೋದರನೊಂದಿಗೆ ಅವನ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಂಚರಿಸಿದರೆ ಈ ಮಸೀದಿಯಲ್ಲಿ (ಮಸ್ಜಿದುನ್ನಬವಿ) ಒಂದು ತಿಂಗಳು ಪೂರ್ತಿಯಾಗಿ ಇಅïತಿಕಾಫ್ ನಿರ್ವಹಿಸುವುದಕ್ಕಿಂತ ಹೆಚ್ಚು ನನಗೆ ಪ್ರಿಯವಾಗಿದೆ. ಓರ್ವನು ತನ್ನ ಕೋಪವನ್ನು ತಡೆದಿರಿಸಿದರೆ ಅಲ್ಲಾಹನು ಅವನ ನ್ಯೂನತೆಗಳನ್ನು ಮರೆಸುವನು. ಬಯಸಿದ್ದನ್ನು ಮಾಡಿಬಿಡುವ ಸಾಮಥ್ರ್ಯವಿದ್ದೂ ತನ್ನ ದ್ವೇಷವನ್ನು ತಡೆದಿರಿಸಿದವನ ಹೃದಯದಲ್ಲಿ ಅಲ್ಲಾಹನು ಅಂತ್ಯದಿನದಲ್ಲಿ ನಿರೀಕ್ಷೆಗಳನ್ನು ತುಂಬುವನು. ತನ್ನ ಸಹೋದರನೊಂದಿಗೆ ಸಂಚರಿಸಿ ಅವನ ಅವಶ್ಯಕತೆಗಳನ್ನು ಪೂರೈಸಿಕೊಟ್ಟವನ ಪಾದಗಳನ್ನು ಎಲ್ಲಾ ಪಾದಗಳು ಜಾರಿಬೀಳುವ ದಿನದಲ್ಲೂ ಅವುಗಳನ್ನು ಸುದೃಡವಾಗಿ ನಿಲ್ಲಿಸುವನು.”
ಇಸ್ಲಾಮಿನ ದೃಷ್ಟಿಯಲ್ಲಿ ಜನಸೇವೆ ಎಂಬುದು ಕೇವಲ ಬೌತಿಕ ಕರ್ಮವಲ್ಲ. ಅದು ತೌಹೀದ್ನ ಭಾಗವಾಗಿದೆ. ನಮಾಝ್, ಉಪವಾಸ, ಹಜ್ಜ್ ವೊದಲಾದವುಗಳಿಗೆ ಮಾತ್ರ ಇಸ್ಲಾಮ್ ಸೀಮಿತಗೊಂಡಿಲ್ಲ. ಬದಲಾಗಿ ಅದು ಮನುಷ್ಯನ ಬದುಕಿನ ಎಲ್ಲಾ ಸ್ತರಗಳಿಗೂ ವ್ಯಾಪಿಸಿದೆ. ಜನರ ಸೇವೆ ಮಾಡುವುದು ಮತ್ತು ಅವರನ್ನು ಪ್ರೀತಿಸುವುದು ನೈಜವಾಗಿ ಅಲ್ಲಾಹನನ್ನು ಪ್ರೀತಿಸುವುದಕ್ಕೆ ಸಮಾನವಾಗಿದೆ. ಜನರೊಂದಿಗೆ ಕೆಟ್ಟದಾಗಿ ವರ್ತಿಸಿದವನು, ಜನರನ್ನು ದ್ವೇಷಿಸುವವನು ಅಲ್ಲಾಹನೊಂದಿಗೂ ವೈರ ಕೆಟ್ಟಿಕೊಳ್ಳುತ್ತಾನೆ.
ಅಬೂ ಹುರೈರ(ರ) ವರದಿ ಮಾಡಿದ ಒಂದು ಪ್ರವಾದಿ ವಚನವು ಹೀಗಿದೆ: ಅಂತ್ಯ ದಿನದಲ್ಲಿ ತನ್ನ ಮುಂದೆ ಬರುವ ದಾಸನೊಂದಿಗೆ ಅಲ್ಲಾಹನು ಪ್ರಶ್ನಿಸುವನು, “ಓ ಮಾನವಾ ನಾನು ರೋಗಿಯಾಗಿದ್ದ ಸಂದರ್ಭದಲ್ಲಿ ನೀನು ಯಾಕೆ ನನ್ನನ್ನು ಭೇಟಿ ಮಾಡಲಿಲ್ಲ?” ಆಗ ಮಾನವನು ಹೇಳುವನು, “ಓ ನನ್ನ ಪ್ರಭೂ, ನಾನು ನಿನ್ನನ್ನು ಭೇಟಿ ಮಾಡುವುದೇ? ನೀನು ಸರ್ವಲೋಕಗಳ ಪಾಲಕನಲ್ಲವೇ?” ಅಲ್ಲಾಹನು ಹೇಳುವನು, “ನನ್ನ ಇಂಥ ದಾಸನು ರೋಗಿಯಾದದ್ದು ನಿನಗೆ ತಿಳಿದಿಲ್ಲವೇ? ಆದರೂ ನೀನು ಯಾಕೆ ಅವನನ್ನು ಸಂದರ್ಶಿಸಿಲ್ಲ? ಅವರನ್ನು ನೀನು ಬೇಟಿಯಾಗುತ್ತಿದ್ದರೆ ಖಂಡಿತವಾಗಿಯೂ ಅವನ ಬಳಿ ನನ್ನನ್ನು ಕಾಣಬಹುದಾಗಿತ್ತು. ಓ ಮನುಜಾ! ನಾನು ನಿನ್ನೊಂದಿಗೆ ಆಹಾರ ಕೇಳಿದೆ. ಆದರೆ ನೀನು ನನಗೆ ಆಹಾರ ನೀಡಲಿಲ್ಲ.” ಆಗ ದಾಸನು ಹೇಳುವನು, “ಓ ಪ್ರಭೂ ನಾನು ನಿನಗೆ ತಿನ್ನಿಸುವುದೇ? ನೀನು ಸರ್ವಲೋಕದವರಿಗೂ ಆಹಾರ ನೀಡುವವನಲ್ಲವೇ?” ಆಗ ಅಲ್ಲಾಹನು ಹೇಳುವನು, “ಹೌದು ನನ್ನ ಇಂತಹ ದಾಸನು ನಿನ್ನೊಂದಿಗೆ ಆಹಾರ ಕೇಳಿದ. ಆದರೆ ನೀನು ಆಹಾರ ನೀಡಲಿಲ್ಲ. ಅವನಿಗೆ ನೀನು ನೀಡುತ್ತಿದ್ದರೆ, ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಅನುಭವಿಸಬಹುದಾಗಿತ್ತು.. ಓ ಮನುಜಾ! ನಾನು ನಿನ್ನೊಂದಿಗೆ ನೀರನ್ನು ಕೇಳಿದೆ. ಆದರೆ ನೀನು ನೀಡಲಿಲ್ಲ. ಆಗ ದಾಸನು ಹೇಳುವನು, “ಪ್ರಭೂ, ನೀನು ಸರ್ವಲೋಕಗಳ ಪರಿಪಾಲಕನಾಗಿರುವಾಗ ನಿನಗೆ ನಾನು ನೀರು ನೀಡುವುದೇ?” ಆಗ ಅಲ್ಲಾಹನು ಹೇಳುವನು. “ಹೌದು. ನನ್ನ ಇಂತಿಂತಹ ದಾಸನು ನಿನ್ನೊಂದಿಗೆ ನೀರನ್ನು ಕೇಳಿದನು. ನೀನು ಅವನಿಗೆ ನೀರು ನೀಡಲಿಲ್ಲ. ಅಂದು ನೀನು ಅವನಿಗೆ ನೀರು ನೀಡುತ್ತಿದ್ದರೆ ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಕಾಣಬಹುದಾಗಿತ್ತು.”
ಈ ಪ್ರವಾದಿ ವಚನವು ಜನರ ಸೇವೆಯ ಮಹತ್ವವನ್ನು ಬೆಟ್ಟು ಮಾಡುತ್ತದೆ. ಕಷ್ಟ ಅನುಭವಿಸುವವರಿಗೆ ನೆರವಾಗುವಾಗ ಮಾತ್ರ ಓರ್ವನಿಗೆ ಪೂರ್ಣ ವಿಶ್ವಾಸಿಯಾಗಲು ಸಾಧ್ಯ. ಪ್ರವಾದಿಯವರ(ಸ) ಜೀವನವನ್ನು ಅವಲೋಕಿಸಿದರೆ ಹಲವಾರು ಜನಸೇವೆಯ ಕೆಲಸಗಳನ್ನು ಕಾಣಲು ಸಾಧ್ಯ. ಜನರ ಸಮಸ್ಯೆಗಳಿಗೆ ಹೆಗಲು ಕೊಡದೆ ಪ್ರವಾದಿಯವರ(ಸ) ಅನುಯಾಯಿಗಳೆಂದು ಹೆಮ್ಮೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲಾಹನ ಪ್ರೀತಿ ಸಂಪಾದನೆಗೆ ಜನರ ಸೇವೆಯು ಅನಿವಾರ್ಯವಾಗಿದೆ.
ಇನ್ನು ಜನರಿಗೆ ಉಪಕಾರ ಮಾಡಲು ಸಾಧ್ಯವಿಲ್ಲದವರು ಉಪದ್ರವ ನೀಡದಿರಲಾದರೂ ಪ್ರಯತ್ನಿಸಬೇಕು. ಅದು ಕೂಡಾ ಪ್ರತಿಫಲಾರ್ಹವಾಗಿದೆ. ಕೆಲವರೊಂದಿಗಿರುವ ಹಗೆತನವು ಅವರೊಂದಿಗೆ ಅಕ್ರಮವೆಸಗಲು ಪ್ರೇರೇಪಿಸುತ್ತದೆ. ವಿಶೇಷತಃ ಅವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಪ್ರವಾದಿಯವರು(ಸ) ಶತ್ರುಗಳ ಹಿತಾಕಾಂಕ್ಷೆ ಬಯಸುತ್ತಿದ್ದರೇ ಹೊರತು ಅವರ ಸರ್ವನಾಶಕ್ಕಾಗಿ ಬಯಸಲಿಲ್ಲ. ಮಕ್ಕಾ ವಿಜಯದ ವೇಳೆ ಬಂಧಿತರಾದವರನ್ನು ಕೊಂದು ಬಿಡುವ ಎಲ್ಲಾ ಅವಕಾಶಗಳೂ ಪ್ರವಾದಿಯವರಿಗಿತ್ತು. ಆದರೆ ಅವರು ಆ ಬಂಧಿತರಿಗೆ ಕ್ಷಮೆ ನೀಡಿ ಸ್ವತಂತ್ರಗೊಳಿಸಿದರು.
ಮಸೀದಿಯಲ್ಲಿ ಜಾಗರಣೆ ನಡೆಸುವುದು ಅತೀ ಹೆಚ್ಚು ಪ್ರತಿಫಲಾರ್ಹ ಕರ್ಮಗಳಲ್ಲೊಂದಾಗಿದೆ. ಅದು ಕೂಡಾ ಮಸ್ಜಿದುನ್ನಬವಿಯಲ್ಲಾದರೆ ಪುಣ್ಯದ ಪಟ್ಟು ಇನ್ನೂ ಹೆಚ್ಚಾಗುತ್ತದೆ. ಆದರೆ ಪ್ರವಾದಿಯವರು(ಸ) ಓರ್ವ ಸಹೋದರನ ಕಷ್ಟಕ್ಕೆ ನೆರವಾಗುವುದನ್ನು ಜಾಗರಣೆ ನಡೆಸುವುದಕ್ಕೆಂತ ದೊಡ್ಡ ಪದವಿಗೆ ಏರಿಸಿದ್ದಾರೆ. ಸಹಜೀವಿಗಳ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಮಸೀದಿಗಳಲ್ಲಿ ಕುಳಿತು ಆರಾಧನೆಗಳಲ್ಲಿ ನಿರತರಾಗುವುದನ್ನು ಇಸ್ಲಾಮ್ ಪ್ರೋತ್ಸಾಹಿಸಿಲ್ಲ. ರಾತ್ರಿಕಾಲದ ಪ್ರಾರ್ಥನೆಗಳೂ ಹಗಲಿನ ಕರ್ಮಗಳೂ ಓರ್ವನನ್ನು ನೈಜ ವಿಶ್ವಾಸಿಯಾಗಿ ಮಾರ್ಪಡಿಸುತ್ತದೆ. ಅವನ ಈಮಾನನ್ನು ಪರಿಪೂರ್ಣಗೊಳಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಈಮಾನನ್ನು ನವೀಕರಿಸಬೇಕಾಗಿದೆ. ನೈಜ ವಿಶ್ವಾಸಿಗಳಾಗಿ ಬಾಳಲು ಇಸ್ಲಾಮಿನ ಆದೇಶ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ಅದಕ್ಕೆ ಅಲ್ಲಾಹನು ಅನುಗ್ರಹಿಸಲಿ.

ಸೋಮವಾರ, ಜೂನ್ 25, 2012

ಗೆಳೆತನ ಸಂಪಾದಿಸುವಾಗ ಎಚ್ಚರ ವಹಿಸಿ


ಗೆಳೆತನವೆಂಬುದು ಮನುಷ್ಯನ ಜೀವನದ ಅನಿವಾರ್ಯ ಬೇಡಿಕೆಗಳಲ್ಲೊಂದಾಗಿದೆ. ಎಲ್ಲರೂ ಗೆಳೆಯರನ್ನು ಹೊಂದಿರುತ್ತಾರೆ. ಇನ್ನು ಗೆಳೆಯರಿಲ್ಲದವರು ಅವರ ಗಳಿಕೆಗಾಗಿ ಹಂಬಲಿಸುತ್ತಿರುತ್ತಾರೆ. ಯಾರಿಗೂ ಕೂಡಾ ಏಕಾಂಗಿಯಾಗಿ ಯಾರದೇ ಸಹಾಯವಿಲ್ಲದೇ ಜೀವಿಸಲು ಸಾಧ್ಯವಿಲ್ಲ. ಗೆಳೆತನವು ಮಾನವರ ಬದುಕಿನ ಮಾರ್ಗ ಸೂಚಿಯಾಗಿದೆ. ತಂದೆ ತಾಯಿಗಳೊಂದಿಗೆ ಹೇಳಲು ಸಾಧ್ಯವಿಲ್ಲದ್ದನ್ನೂ ನಾವು ಗೆಳೆಯರೊಂದಿಗೆ ಹಂಚಿಕೊಳ್ಳುತ್ತೇವೆ. ಅದು ಬದುಕಿನ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಓರ್ವನ ಸ್ವಭಾವ ಹಾಗೂ ಚಾರಿತ್ರ್ಯ ನಿರ್ಮಾಣದ ಮೇಲೆ ಗೆಳೆತನವು ನಿರ್ವಹಿಸುವ ಪಾತ್ರವು ಸಣ್ಣದಲ್ಲ. ಓರ್ವ ವ್ಯಕ್ತಿಯ ವ್ಯಕ್ತಿತ್ವವು ಅವನ ಗೆಳೆಯರಿಗೆ ಹೊಂದಿಕೊಂಡಿರುತ್ತದೆ. ಉತ್ತಮ ಗೆಳೆಯರನ್ನು ಹೊಂದಿದವನ ಸ್ವಭಾವ, ವರ್ತನೆಗಳು ಯಾವಾಗಲೂ ಉತ್ತಮವಾಗಿಯೇ ಇರುತ್ತದೆ. ಇನ್ನು ಕೆಟ್ಟಗೆಳೆಯರಿದ್ದರೆ ಅದರ ಪರಿಣಾಮವು ಅವರಲ್ಲಿ ಖಂಡಿತವಾಗಿಯೂ ಗೋಚರವಾಗುತ್ತದೆ. ಉತ್ತಮ ಹಾಗೂ ಕೆಟ್ಟ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ.
ಅಬೂ ಮೂಸಲ್ ಅಶ್ಅರಿ(ರ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಉತ್ತಮ ಹಾಗೂ ಕೆಟ್ಟ ಗೆಳೆಯರ ಉಪಮೆಯು ಕಸ್ತೂರಿ ಹೊರುವವನು ಮತ್ತು ಒಲೆಗೆ ಊದುವವನಂತಾಗಿದೆ. ಕಸ್ತೂರಿ ಹೊರುವವನು ಅದರಿಂದ ನಿನಗೆ ಏನಾದರೂ ನೀಡಬಹುದು. ಇಲ್ಲದಿದ್ದರೆ ನೀನು ಅವನಿಂದ ಹಣ ನೀಡಿ ಖರೀದಿಸಬಹುದು. ಅದೂ ಅಲ್ಲದಿದ್ದರೆ ಅದರ ಸುವಾಸನೆಯನ್ನಾದರೂ ಸವಿಯಬಹುದು. ಇನ್ನು ಒಲೆಯಲ್ಲಿ ಊದುವವನು ಒಂದೋ ನಿನ್ನ ಬಟ್ಟೆಯನ್ನು ಸುಟ್ಟು ಬಿಡಬಹುದು. ಇಲ್ಲದಿದ್ದರೆ ದುರ್ಗಂಧವನ್ನು ನೀನು ಅನುಭವಿಸ ಬೇಕಾಗುವುದು.” ಇದು ಬಹಳ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗೆಳೆಯನನ್ನು ಪ್ರವಾದಿಯವರು ಕಸ್ತೂರಿ ಹೊರುವವನಿಗೆ ಹೋಲಿಸಿದ್ದಾರೆ. ಕಸ್ತೂರಿ ಹೊರುವವನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಯಾಕೆಂದರೆ ಅವನ ಬಳಿ ಹೋದರೆ ಉತ್ತಮ ಪರಿಮಳ ಲಭಿಸುತ್ತದೆ. ಮನಸ್ಸಿಗೆ ಆಹ್ಲಾದವಾಗುತ್ತದೆ. ಆದರೆ ಒಲೆಗೆ ಊದುವವನ ಸ್ಥಿತಿಯು ಇದಕ್ಕೆ ವಿರುದ್ಧವಾಗಿರುತ್ತದೆ. ಕಿಡಿಗಳು ಅಲ್ಲಲ್ಲ್ಲಿ ಹಾರುತ್ತಿರುತ್ತವೆ. ಬಳಿ ಹೋದವರ ಬಟ್ಟೆ ಅಥವಾ ಶರೀರ ಸುಡುವ ಸಾಧ್ಯತೆ ಇದೆ. ಆದ್ದರಿಂದ ಯಾರು ಕೂಡಾ ಅವನ ಬಳಿ ಹೋಗಲು ಇಷ್ಟ ಪಡುವುದಿಲ್ಲ.
ನಾವು ನಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಉತ್ತಮ ಗೆಳೆಯರು ನೆರವಾಗುತ್ತಾರೆ. ಸಚ್ಚಾರಿತ್ರ್ಯದಿಂದ ತುಂಬಿದ ಅವರ ಜೀವನವು ಇತರರಿಗೆ ದಾರಿ ದೀಪವಾಗುತ್ತದೆ. ಅಂತಹ ವ್ಯಕ್ತಿಗಳೊಂದಿಗೆ ಗೆಳೆತನ ಬೆಳೆಸಲು ಎಲ್ಲರೂ ಮುಂದಾಗುತ್ತಾರೆ. ಉತ್ತಮ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದರು, “ಎರಡು ಗೆಳೆಯರು ಎರಡು ಕೈಗಳಿದ್ದಂತೆ. ಒಂದು ಕೈಯು ಇನ್ನೊಂದು ಕೈಯನ್ನು ಶುಚಿಗೊಳಿಸಲು ಸದಾ ನೆರವಾಗುತ್ತಿರುತ್ತದೆ. ವಿಶ್ವಾಸಿಗಳಾದ ಇಬ್ಬರು ವ್ಯಕ್ತಿಗಳು ಪರಸ್ಪರ ಭೇಟಿಯಾದರೆ ಓರ್ವನಿಂದ ಇನ್ನೋರ್ವನಿಗೆ ಅಲ್ಲಾಹನು ಯಾವುದಾದರೂ ಒಳಿತನ್ನು ನೀಡದಿರಲಿಕ್ಕಿಲ್ಲ.”
ಕೆಟ್ಟ ಗೆಳೆಯರೊಂದಿಗೆ ಗೆಳೆತನ ಬೆಳೆಸಿದರೆ ಅದು ಜೀವನದ ಅಧಃಪತನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅವರಿಂದ ಯಾವುದೇ ಉತ್ತಮ ಗುಣಗಳನ್ನು ನಿರೀಕ್ಷಿಸುವಂತಿಲ್ಲ. ಅವರೊಂದಿಗೆ ಗೆಳೆತನ ಬೆಳೆಸಿದರೆ ನಮ್ಮ ಜೀವನವು ಅವರ ಜೀವನದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತು ಪ್ರವಾದಿ(ಸ) ಎಚ್ಚರಿಕೆ ನೀಡಿದ್ದಾರೆ. ಅಬೂದರ್ರುಲ್ ಗಿಫಾರಿ(ರಿ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಕೆಟ್ಟ ಗೆಳೆಯರಿಗಿಂತ ಉತ್ತಮವಾದದ್ದು ಏಕಾಂತತೆಯಾಗಿದೆ. ಏಕಾಂತತೆಗಿಂತ ಉತ್ತಮವಾದುದು ಸಚ್ಚರಿತರಾದ ಉತ್ತಮ ಗೆಳೆಯರಾಗಿದ್ದಾರೆ. ಉತ್ತಮ ಮಾತುಕತೆಯು ಮೌನಕ್ಕಿಂತ ಶ್ರೇಷ್ಠವಾದುದಾಗಿದೆ. ಮೌನವು ಕೆಟ್ಟ ಮಾತುಕತೆಗಿಂತ ಶ್ರೇಷ್ಠ ವಾದುದಾಗಿದೆ.”
ನಾವು ಗೆಳೆತನ ಬೆಳೆಸುವಾಗ ಜಾಗರೂಕರಾಗಿರಬೇಕು. ಕೆಟ್ಟ ಗೆಳೆಯರ ಸಂಪಾದನೆಯು ವಿನಾಶಕ್ಕೆ ಆಹ್ವಾನವೀಯುತ್ತದೆ. ಪ್ರವಾದಿ(ಸ) ಹೇಳಿದರು, “ಮನುಷ್ಯನು ಅವನ ಗೆಳೆಯನ ಧರ್ಮದಲ್ಲಾಗಿರುವನು. ಆದ್ದರಿಂದ ಯಾರೊಂದಿಗೆ ಗೆಳೆತನ ಬೆಳೆಸಬೇಕೆಂದು ಪ್ರತಿಯೊಬ್ಬನೂ ಆಲೋಚಿಸಿ ತೀರ್ಮಾನಿಸಲಿ.” ಗೆಳೆಯರನ್ನು ಸಂಪಾದಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಮಾಮ್ ಜಅïಫರ್ ಸ್ವಾದಿಕ್(ರ) ಹೀಗೆ ಹೇಳುತ್ತಾರೆ. “ಸುಳ್ಳು ಹೇಳುವವನು, ಪೆದ್ದ, ಜಿಪುಣ, ಹೇಡಿ, ದುರ್ವರ್ತನೆ ಹೊಂದಿದವನು ವೊದಲಾದವರೊಂದಿಗೆ ನೀನು ಗೆಳೆತನ ಬೆಳೆಸಬಾರದು. ಸುಳ್ಳು ಹೇಳುವವನು ನಿನ್ನನ್ನು ವಂಚನೆಯಲ್ಲಿ ಸಿಲುಕಿಸುವನು. ಅವನು ಮರುಭೂಮಿಯಲ್ಲಿರುವ ಮರೀಚಿಕೆಯಂತಿರುವನು. ಹತ್ತಿರ ಇರುವುದನ್ನು ದೂರವಾಗಿಯೂ ದೂರ ಇರುವುದನ್ನು ಹತ್ತಿರವಾಗಿಯೂ ಪ್ರದರ್ಶಿಸುವನು. ಪೆದ್ದನಿಂದ ನಿನಗೆ ಯಾವುದೇ ಉಪಕಾರ ಲಭಿಸಲಿಕ್ಕಿಲ್ಲ. ಅವನು ಉಪಕಾರ ಮಾಡಲು ಬಯಸಿದರೂ ಅದು ಉಪದ್ರವದಲ್ಲಿ ಕೊನೆಗೊಳ್ಳುತ್ತದೆ. ಜಿಪುಣನು, ನಿನಗೆ ಅವನ ಅಗತ್ಯ ಹೆಚ್ಚಿರುವಾಗ ಅವನು ನಿನ್ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳತ್ತಾನೆ. (ಹಣ ಖರ್ಚಾಗಬಹುದು ಎಂಬ ಭಯ) ಹೇಡಿಯು ಸಂಕಷ್ಟದ ಸ್ಥಿತಿಯಲ್ಲಿ ನಿನ್ನನ್ನು ಕೈಬಿಡುವನು. ದುರ್ವರ್ತನೆ ಹೊಂದಿ ದವನು ನಿನ್ನನ್ನು ತುಚ್ಚ ಬೆಲೆಗೆ ಮಾರಿ ಬಿಡಲೂ ಹೇಸಲಿಕ್ಕಿಲ್ಲ.”
ಗೆಳೆಯರ ಕುರಿತು ಖಲೀಫ ಮಾಮೂನ್ ಹೀಗೆ ಹೇಳಿದ್ದರು. “ಗೆಳೆಯರು ಮೂರು ವಿಧದಲ್ಲಿದ್ದಾರೆ. ಒಂದು ವಿಭಾಗವು ಆಹಾರದಂತಿದೆ. ಅದಿಲ್ಲದೆ ಯಾರಿಗೂ ಜೀವಿಸಲು ಸಾಧ್ಯವಿಲ್ಲ. ಇನ್ನೊಂದು ವಿಭಾಗವು ರೋಗಕ್ಕಿರುವ ಔಷಧದಂತಿದೆ. ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಉಪಯೋಗಿಸಬಹುದು. ಯಾವಾಗಲೂ ಅದರ ಅವಶ್ಯಕತೆ ಇರಲಿಕ್ಕಿಲ್ಲ. ಮೂರನೇ ವಿಭಾಗವು ರೋಗದಂತಿದೆ. ಅದರ ಉಪಸ್ಥಿತಿಯನ್ನು ಯಾರೂ ಇಷ್ಟಪಡುವುದಿಲ್ಲ. ಅದು ಅಂಟಿಕೊಂಡರೆ ಶರೀರವು ಅವ್ಯವಸ್ಥಿತವಾಗುತ್ತದೆ.”
ಆದ್ದರಿಂದ ಗೆಳೆಯರನ್ನು ಆರಿಸುವಾಗ ಅವರ ಸ್ವಭಾವ-ಗುಣಗಳ ಕಡೆಗೆ ಗಮನ ಹರಿಸಬೇಕು. ನಾವು ನಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು. ವಿಶೇಷತಃ ಈ ಕಾಲದಲ್ಲಿ ಮಕ್ಕಳ ಗೆಳೆಯರು ಎಂತಹವರೆಂಬುದನ್ನು ಹೆತ್ತವರು ಖಾತರಿ ಪಡಿಸಿಕೊಳ್ಳಬೇಕು. ಕಾರಣ, ಗೆಳೆಯರಿಗೆ ಹೊಂದಿಕೊಂಡು ಮಕ್ಕಳ ಸ್ವಭಾವವು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗ ಬೇಕಾಗಿದೆ. ಅಲ್ಲಾಹನು ಅನುಗ್ರಹಿಸಲಿ.

ನೇಪಾಳಿ ನಟಿ ಪೂಜಾ ಲಾಮಾ ಅಮ್ನ ಫಾರೂಖಿಯಾದಾಗ



ನೇಪಾಳದ ಪ್ರಸಿದ್ಧ ನಟಿ ಮಾಡಲ್, ಗಾಯಕಿಯೂ ಆದ ಪೂಜಾ ಲಮಾ ಇಸ್ಲಾಮಿಗೆ ಮತಾಂತರಗೊಂಡಿದ್ದಾರೆ. ಹಲವು ವಿವಾದಗಳ ಒಡತಿಯಾದ ಪೂಜಾ ಈಗ ಅಮ್ನಾ ಫಾರೂಕಿಯಾಗಿ ಬದಲಾಗಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.
  ನೀವು ಇಸ್ಲಾಮ್ ಸ್ವೀಕರಿಸಲು ಪ್ರೇರಕವಾದ ಅಂಶಗಳು ಯಾವುವು?
  ನಾನು ಬೌದ್ಧ ಕುಟುಂಬದಿಂದ ಬಂದವಳಾಗಿದ್ದೇನೆ. ಒಂದು ವರ್ಷದ ಹಿಂದೆ ನನ್ನಲ್ಲಿ ಇತರ ಧರ್ಮಗಳ ಕುರಿತು ಕಲಿಯುವ ಬಯಕೆ ಉಂಟಾಯಿತು. ನಾನು ಹಿಂದು, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳನ್ನು ತುಲನಾತ್ಮಕವಾಗಿ ಕಲಿಯಲು ಪ್ರಾರಂಭಿಸಿದೆ. ನಾನು ದುಬೈ ಮತ್ತು ಖತಾರ್ಗೆ ಪ್ರವಾಸ ಹೋದ ಸಂದರ್ಭದಲ್ಲಿ ಅಲ್ಲಿನ ಇಸ್ಲಾಮಿ ಸಂಸ್ಕ್ರತಿಯು ನನ್ನ ಮೇಲೆ ಪ್ರಭಾವ ಬೀರಿತು. ಇಸ್ಲಾಮಿನ ವೈಶಿಷ್ಯವೇನೆಂದರೆ ಏಕದೇವತ್ವ ಸಿದ್ಧಾಂತವಾಗಿದೆ. ಇದು ಇತರ ಯಾವುದೇ ಧರ್ಮದಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ.
  ಇಂದು ಮಾಧ್ಯಮಗಳು ಇಸ್ಲಾಮಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿವೆ. ಅದು ಭಯೋತ್ಪಾದಕ ಧರ್ಮವಾಗಿ ಪರಿಚಯಿಸುತ್ತಿದೆ. ಇದು ನಿಮ್ಮ ಮೇಲೆ ಯಾವುದೇ ಪ್ರಭಾವ ಬೀರಿಲ್ಲವೇ?
  ನಾನು ಇಸ್ಲಾಮ್ ಸ್ವೀಕರಿಸಲು ಇಸ್ಲಾಮಿನ ವಿರುದ್ಧ ಪ್ರಚಾರವಾಗಿದ್ದ ಸುಳ್ಳಾರೋಪಗಳೂ, ಅಪಪ್ರಚಾರಗಳೂ ಕೂಡಾ ಕಾರಣವಾಗಿವೆ. ಯಾಕೆಂದರೆ ನಾನು ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದಾಗ ಆ ಆರೋಪಗಳೆಲ್ಲ ಸುಳ್ಳಾಗಿದ್ದವು. ಇಸ್ಲಾಮ್ ಮಾನವೀಯತೆಯ ಮತ್ತು ಶಾಂತಿಯ ಏಕೈಕ ಧರ್ಮವಾಗಿದ್ದೆ ಎಂದು ನಾನು ಬಹಳ ಅಭಿಮಾನದಿಂದ ಹೇಳುತ್ತೇನೆ. ಇಸ್ಲಾಮಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.
  ಪೂಜಾರವರೇ, ನಿಮಗೆ ಚಲನಚಿತ್ರ ರಂಗದಿಂದ ವಿರೋಧಗಳು ವ್ಯಕ್ತವಾಗಿದೆ. ನೀವು ಅವರಿಂದ ಅವಮಾನಕ್ಕೆ ಒಳಗಾಗಿದ್ದೀರಿ. ಇದರಿಂದಾಗಿ ಒಮ್ಮೆ ನೀವು ಆತ್ಮಹತ್ಯೆಗೆ ಕೂಡಾ ಯತ್ನಿಸಿದ್ದೀರಿ. ಇದರ ಕುರಿತು ವಿವರಿಸುವಿರಾ?
 ವಾರ್ತಾ ಮಾಧ್ಯಮಗಳು ನನ್ನ ವೈಯಕ್ತಿಕ ಜೀವನವನ್ನು ಹೀಯಾಳಿಸಿದೇ. ನನ್ನ ವಿರುದ್ಧ ಆರೋಪ ಹೊರಡಿಸಿವೆ. ಆದರೆ ನಾನು ಅವರನ್ನು ಶಪಿಸುತ್ತಿಲ್ಲ. ನನ್ನ ಜೀವನದಲ್ಲಿ ಮೂರು ವಿವಾಹಗಳು ನಡೆದಿವೆ. ಆದರೆ ಅವೆಲ್ಲವೂ ವಿಚ್ಛೇಧನದಲ್ಲಿ ಪರ್ಯಾವಸಾನವಾಯಿತು. ನನಗೆ ನನ್ನ ವೊದಲ ಪತಿಯಿಂದ ಲಭಿಸಿದ ಓರ್ವ ಮಗನಿದ್ದಾನೆ. ಅವನು ಈಗ ನನ್ನ ತಾಯಿಯೊಂದಿಗೆ ಜೀವಿಸುತ್ತಿದ್ದಾನೆ. ಮಾಧ್ಯಮಗಳು ನನ್ನ ವಿರುದ್ಧ ಕಪೋಲಕಲ್ಪಿತವಾದ ವಿಚಾರಗಳನ್ನು ಪ್ರಚಾರ ಮಾಡಿದವು. ನಾನು ಇದೆಲ್ಲ ಮಾಡಿದ್ದು ಖ್ಯಾತಿ ಗಳಿಸೆಲಿಕೈ ಮಾಡಿದೆ ಎಂದು ಜನರಾಡಿಕೊಳ್ಳಲು ಪ್ರಾರಂಭಿಸಿದರು. ಬಳಿಕ ಇಸ್ಲಾಮ್ ಸ್ವೀಕರಿಸಿದೆ. ನಾನು ನನ್ನ ಹಿಂದಿನ ಜೀವನವನ್ನು ಮರೆಯಲು ಯತ್ನಿಸುತ್ತೇನೆ. ಯಾಕೆಂದರೆ ಈಗ ನಾನು ಶಾಂತ ಮತ್ತು ಸಭ್ಯ ಜೀವನ ನಡೆಸುತ್ತಿದ್ದೇನೆ.
  ಪೂಜಾರವರೇ, ನೀವು ಇಸ್ಲಾಮ್ ಸ್ವೀಕರಿಸಿದ ಬಳಿಕ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ನೀವು ಈಗ ಸ್ಕಾರ್ಫ್ ಧರಿಸುತ್ತೀರಿ. ಮದ್ಯಪಾನ ಮತ್ತು ಧೂಮಪಾನವನ್ನು ವರ್ಜಿಸಿದ್ದೀರಿ. ಇದರ ಕುರಿತು...?
 ದಯವಿಟ್ಟು ನನ್ನನ್ನು ಪೂಜಾ ಎಂದು ಕರೆಯಬೇಡಿ. ಪೂಜಾ ನನ್ನ ಹಿಂದಿನ ಹೆಸರಾಗಿದೆ. ಈಗ ನಾನು ‘ಅಮ್ನ ಫಾರೂಖಿ’ ಆಗಿದ್ದೇನೆ. ಇಸ್ಲಾಮ್ ಸ್ವೀಕಾರಕ್ಕಿಂತ ಮುಂಚೆ ನನ್ನ ಜೀವನವು ಸಂಕಷ್ಟಗಳಿಂದ ಕೂಡಿತ್ತು. ಆಗ ಅವುಗಳಿಂದ ತಾತ್ಕಾಲಿಕ ಮುಕ್ತಿ ಹೊಂದಲು ಮದ್ಯ ಸೇವಿಸುತ್ತಿದ್ದೆ. ಆದರೆ ಎಂದೂ ನಾನು ಮಾನಸಿಕ ಸೀಮಿತ ಕಳೆದುಕೊಳ್ಳುವಷ್ಟು ಮದ್ಯಪಾನ ಮಾಡುತ್ತಿರಲಿಲ್ಲ. ಈಗ ನಾನು ಅವುಗಳ ಪರಿಹಾರಕ್ಕಾಗಿ ದೇವನೊಂದಿಗೆ ಪ್ರಾರ್ಥಿಸುತ್ತೇನೆ.
  ಇಸ್ಲಾಮಿನಲ್ಲಿ ಮಹಿಳೆಯರ ದೇಹ ಪ್ರದರ್ಶನವೂ, ಅದೇ ರೀತಿಯ ಹಾಡು-ಕುಣಿತಗಳೂ ವಿರೋಧಿಸಲ್ಪಟ್ಟಿವೆ. ಈ ನಿಯಮವನ್ನು ನೀವು ಪಾಲಿಸುತ್ತಿದ್ದೀರಾ?
  ನಾನು ಇಸ್ಲಾಮಿಗೆ ಮತಾಂತರಗೊಂಡಾಗ ಎಲ್ಲಾ ಸಿನಿಮಾ ನಿರ್ಮಾಪಕರು ನನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡರು. ಸಂಗೀತವು ನನ್ನ ರಕ್ತದಲ್ಲಿ ಬೆರೆತುಹೋಗಿದೆ. ಆದ್ದರಿಂದ ನಾನು ಹೊಟೇಲುಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇನೆ. ಅದೂ ಕೂಡಾ ಹಿಜಾಬ್ ಧರಿಸಿಯೇ. ಇನ್ನು ನಾನು ಅದನ್ನೂ ವರ್ಜಿಸಲು ತೀರ್ಮಾನಿಸಿದ್ದೇನೆ.
  ನೀವು ಇಸ್ಲಾಮ್ ಸ್ವೀಕರಿಸಲಿಕ್ಕಿರುವ ಪ್ರೇರಣೆ ಏನು?
  ನನ್ನ ಕೆಲವು ಬೌದ್ಧ ಗೆಳೆಯ-ಗೆಳತಿಯರು ಇಸ್ಲಾಮಿಗೆ ಮತಾಂತರಗೊಂಡಿದ್ದರು. ಅವರು ನನ್ನನ್ನು ಇಸ್ಲಾಮಿಗೆ ಪ್ರವೇಶಿಸಲು ನಿರಂತರವಾಗಿ ಒತ್ತಾಯಪಡಿಸುತ್ತಿದ್ದರು. ಮತ್ತು ಯಾರನ್ನಾದರೂ ಇಸ್ಲಾಮ್ ಕಲಿಸಲು ನೇಮಿಸಬೇಕು ಎಂದು ಹೇಳುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ನಾನು ಓರ್ವ ಮುಸ್ಲಿಮ್ ಗೆಳೆಯನಿಂದ ಇಸ್ಲಾಮನ್ನು ಕಲಿಯಲು ಪ್ರಾರಂಭಿಸಿದೆ. ಅವನು ಕಲಿಸಿದ ಒಂದು ವಿಚಾರವು ನನ್ನನ್ನು ಅತಿಯಾಗಿ ಪ್ರೇರೇಪಿಸಿತು. ಅದೇನೆಂದರೆ “ಈ ಜಗತ್ತಿನಲ್ಲಿರುವ ಯಾವುದೇ ಮನುಷ್ಯನಿಗೆ ಹೆದರಿ ಪಾಪಕೃತ್ಯಗಳನ್ನೆಸಗಬಾರದು. ಹೆದರುವುದಿದ್ದರೆ ಅದು ಅಲ್ಲಾಹನನ್ನು ಮಾತ್ರ” ಎಂಬುದಾಗಿದೆ. ಅಂದಿನಿಂದ ನಾನು ಇಸ್ಲಾಮ್ ಸ್ವೀಕರಿಸಲು ತೀರ್ಮಾನಿಸಿದೆ.
  ನೀವು ಇಸ್ಲಾಮ್ ಸ್ವೀಕರಿಸಿದ್ದಕ್ಕೆ ನಿಮ್ಮ ಮನೆಯವರಿಂದ ವಿರೋಧ ವ್ಯಕ್ತವಾಗಿದೆಯೇ?
  ನಾನು ಇಸ್ಲಾಮ್ ಸ್ವೀಕರಿಸಿದ ನಂತರ ನನ್ನ ಕುಟುಂಬಿಕರಿಗೆ ತಿಳಿಸಿದೆ. ಪ್ರಸ್ತುತ ಅವರು ಡಾರ್ಜಿಲಿಂಗ್ನಲ್ಲಿ ನೆಲೆಸಿದ್ದಾರೆ. ನನ್ನ ತಾಯಿ ನನಗೆ ಸಂಪೂರ್ಣ ಸಹಕಾರ ನೀಡಿದರು. “ಮಗಳೇ, ನೀನು ಸರಿಯಾದ ಮಾರ್ಗವನ್ನು ಸ್ವೀಕರಿಸಿದ್ದಿ. ಯಾಕೆಂದರೆ ನೀನು ಇಷ್ಟು ಸಂತೋಷದಿಂದಿರುವುದನ್ನು ನಾನು ಈ ವೊದಲು ನೋಡಲೇ” ಇಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಇತರ ಬಂಧುಗಳು ಕೂಡಾ ನನ್ನ ಕುಟುಂಬಿಕರನ್ನು ಅಭಿನಂದಿಸಿದ್ದಾರೆ.
  ನೀವು ಎಲ್ಲೋ ಓರ್ವ ಮುಸ್ಲಿಮನನ್ನು ಪ್ರೀತಿಸಿ ಮದುವೆಯಾಗಿದ್ದೀರಿ. ಆದ್ದರಿಂದ ನೀವು ಇಸ್ಲಾಮ್ ಸ್ವೀಕಾರ ಮಾಡಿದ್ದು ಎಂದು ಮಾಧ್ಯಮಗಳು ಹೇಳುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ?
  ಇದು ಆಧಾರ ರಹಿತ ಆರೋಪವಾಗಿದೆ. ನನಗೆ ಕೆಲವು ಮುಸ್ಲಿಮ್ ಗೆಳೆಯ-ಗೆಳತಿಯರಿದ್ದಾರೆ. ಅಂದರೆ ಇದರರ್ಥ ನಾನು ಪ್ರಿತಿಸುತ್ತಿದ್ದೇನೆ ಮತ್ತು ಅವನನ್ನು ಮದುವೆಯಾಗುತ್ತೇನೆ ಎಂದಾಗುತ್ತದೆಯೇ? ಈಗ ನಾನು ಅಭಿಮಾನದಿಂದ ಹೇಳುತ್ತಿದ್ದೇನೆ. “ನಾನು ಮುಸ್ಲಿಮಳಾಗಿದ್ದೇನೆ. ಆದ್ದರಿಂದ ನಾನು ಓರ್ವ ಉತ್ತಮ ಮುಸ್ಲಿಮನನ್ನೇ ಮದುವೆಯಾಗುತ್ತೇನೆ” ನಾನು ಜನರಿಗೆ ತಿಳಿಸುವ ಸಂದೇಶವೇನೆಂದರೆ ಇತರರ ಮಾತುಕೇಳಿ ಒಂದು ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಾರದು.
 ನಾವು ಸ್ವತಃ ಆ ವಿಷಯದ ಬಗ್ಗೆ ಪರೀಕ್ಷಿಸಬೇಕು. ಯಾಕೆಂದರೆ ಇತರರ ಮಾತು ಸುಳ್ಳಾಗಿರಬಹುದು.

ಸೋಮವಾರ, ಜೂನ್ 04, 2012

ಆಪತ್ಕಾಲದಲ್ಲಿ ಆಪತ್ಬಾಂಧವರಾಗುವವರು



ನಮ್ಮ ಮನೆಯಲ್ಲಿ ನಮಗೆ ಏನಾದರೂ ಸಂಕಷ್ಟ ಉಂಟಾದಾಗ ನೆರವಿಗೆ ಧಾವಿಸುವವರು ನೆರೆಮನೆಯ ಮಂದಿಯಾಗಿದ್ದಾರೆ. ನಮ್ಮ ಸುಖಗಳಲ್ಲೂ ದುಃಖಗಳಲ್ಲೂ ಅವರು ಭಾಗಿಯಾಗುತ್ತಾರೆ. ನೆರೆಕರೆಯವರಿದ್ದರೆ ನಮಗೆ ಒಂದು ರೀತಿಯ ಭದ್ರತಾ ಭಾವ ಮನದಲ್ಲಿ ಮೂಡುತ್ತದೆ. ನಾವು ಹೊರಗಡೆ ಹೋಗುವಾಗ ಮನೆಯ ಬೀಗದ ಕೈಯನ್ನೂ ನೆರೆಯವರ ಕೈಗೆ ಒಪ್ಪಿಸಿ ಹೋಗುತ್ತೇವೆ. ಮನೆಗೆ ನೆಂಟರು ಬಂದಾಗ ಸಕ್ಕರೆಯೋ ಇನ್ನಾವುದೋ ವಸ್ತುಗಳು ಮುಗಿದದ್ದು ಗೊತ್ತಾದರೆ ನಾವು ಲೋಟ ಹಿಡಿದು ಎರವಲು ಪಡೆಯಲು ನೆರೆಮನೆಗೆ ಓಡುತ್ತೇವೆ. ಒಟ್ಟಿನಲ್ಲಿ ಜೀವನದ ಹಲವಾರು ಸಂದರ್ಭಗಳಲ್ಲಿ ಸಂಕಷ್ಟವೆರಗಿದಾಗ ನಮಗೆ ಸಹಾಯ ಹಸ್ತ ಚಾಚುವವರು ನೆರೆಕರೆಯವರೇ ಆಗಿದ್ದಾರೆ. ಆದ್ದರಿಂದ ನಮಗೆ ಅವರ ಮೇಲೆ ಹಲವಾರು ಬಾಧ್ಯತೆಗಳಿವೆ. ಆ ಭಾದ್ಯತೆಗಳ ಕುರಿತು ನಾವು ಜಾಣ ಮರೆವು ಪ್ರದರ್ಶಿಸುತ್ತಿದ್ದೇವೆ.
ನೆರೆಕರೆಯವರೊಂದಿಗಿನ ವರ್ತನೆಗೆ ಕುರಾನ್ ಹೆಚ್ಚಿನ ಮಹತ್ವ ನೀಡಿದೆ. ಅಲ್ಲಾಹನೊಂದಿಗಿನ ಆರಾಧನೆಯ ಬಳಿಕ ಪರಸ್ಪರರ ಸಂಬಂಧಕ್ಕೆ  ಕುರಾನ್   ಮಹತ್ವ ನೀಡಿದ್ದನ್ನೂ ನಮಗೆ ಕಾಣಲು ಸಾಧ್ಯ. ಅಲ್ಲಾಹನು ಅನ್ನಿಸಾ ಅಧ್ಯಾಯದ 36ನೇ ಸೂಕ್ತದಲ್ಲಿ ಈ ರೀತಿ ಹೇಳುತ್ತಾನೆ, “ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ನಿರ್ಗತಿಕರೊಂದಿಗೂ ಆಪ್ತರಾದ ನೆರೆಕರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸದಾಸಿಯರೊಂದಿಗೆ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿದ ಗರ್ವಿಷ್ಟನನ್ನೂ ಆತ್ಮಸ್ತುತಿಗೈಯುವವನನ್ನೂ ಅಲ್ಲಾಹನು ಇಷ್ಟಪಡುವುದಿಲ್ಲ.”
ನೆರೆಕರೆಯವರೊಂದಿಗಿನ ಬಾಧ್ಯತೆಯ ಕುರಿತು ತ್ವಬ್ರಾನಿ ಉದ್ಧರಿಸಿರುವ ಒಂದು ಪ್ರವಾದಿ ವಚನವು ಇಂತಿದೆ. “ಅವನು ರೋಗಿಯಾದರೆ ಅವನನ್ನು ಸಂದರ್ಶಿಸುವುದು ಮತ್ತು ಉಪಚರಿಸುವುದು, ಅವನು ಮರಣ ಹೊಂದಿದರೆ ಅವನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು, ಅವನು ಸಾಲ ಕೇಳಿದರೆ ನೀಡುವುದು, ಅವನ ತಪ್ಪುಗಳನ್ನು ಕ್ಷಮಿಸುವುದು, ಮನೆ ನಿರ್ಮಿಸುವಾಗ ನೆರೆಮನೆಗಿರುವ ವಾಯು ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿ ನಿರ್ಮಿಸದಿರುವುದು, ಅಡುಗೆ ಮಾಡುವಾಗ ಅದರ ಗಂಧವು ನೆರೆಮನೆಯವನಿಗೆ ಉಪದ್ರವ ನೀಡದಂತಿರುವುದು. ಏನಾದರೂ ತಿಂಡಿ ತಿನಿಸುಗಳನ್ನು ತಂದರೆ ನೆರೆಮನೆಯವನಿಗೂ ನೀಡುವುದು.” ಕಂಸುಲ್ ಉಮ್ಮಾಲ್ ಎಂಬ ಗ್ರಂಥದಲ್ಲಿ ಹೀಗೆ ಉದ್ಧರಿಸಲಾಗಿದೆ, “ನೀವು ಹಣ್ಣನ್ನು ಖರೀದಿಸಿ ತಂದರೆ ಅದರಿಂದ ಒಂದು ಪಾಲನ್ನು ನೆರೆಮನೆಯವನಿಗೆ ನೀಡಬೇಕು. ಹಾಗೆ ನೀಡಲು ಸಾಧ್ಯವಿಲ್ಲದಿದ್ದರೆ ಅವರಿಗೆ ತೋರಿಸಬಾರದು.”
ಆದರೆ ಇಂದು ನಾವು ಈ ಎಲ್ಲಾ ಬಾಧ್ಯತೆಯ ಕುರಿತು ನಿರ್ಲಕ್ಷ್ಯರಾಗಿದ್ದೇವೆ. ಇಂದು ನಮ್ಮ ಜೀವನವು ಸಂಕೀರ್ಣಗೊಂಡು ದೊಡ್ಡ ದೊಡ್ಡ ‘ಫ್ಲಾಟ್’ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಂಡಿದ್ದೇವೆ. ಆಚೀಚೆ ಕಣ್ಣೆತ್ತಿಯೂ ನೋಡದೆ ಕೇವಲ ಪತ್ನಿ ಮಕ್ಕಳೊಂದಿಗೆ ಲೋಕದ ಪರಿವೇ ಇಲ್ಲದೆ ಕಾಲ ಕಳೆಯುವಾಗ ನೆರೆಕರೆಯಲ್ಲಿ ಏನೇ ಸಂಭವಿಸಿದರೂ ತಿಳಿಯದ ಪರಿಸ್ಥಿತಿ ಇಂದು ಬಂದೊದಗಿದೆ. ಇತ್ತೀಚೆಗೆ ಒಂದು ಫ್ಲಾಟಿನಲ್ಲಿ ಕೆಳಗಿನ ಅಂತಸ್ತಿನಲ್ಲಿರುವ ಒಂದು ಮನೆಯಲ್ಲಿ ಓರ್ವರು ಮರಣ ಹೊಂದಿ ಅವರ ಶವ ಸಂಸ್ಕಾರ ನಡೆದು ಸಂಜೆಯ ವರೆಗೂ ಮೇಲಿನ ಅಂತಸ್ತಿನ ಮನೆಯವರಿಗೆ ತಿಳಿಯದ ಪ್ರಸಂಗವೂ ನಡೆದಿದೆ.
ನೀವೇ ಆಲೋಚಿಸಿ ನೋಡಿ, ಬದುಕು ಎಷ್ಟು ಸಂಕೀರ್ಣಗೊಂಡಿದೆ! ನೆರೆಮನೆಯ ಮಕ್ಕಳು ನಮ್ಮ ಮಕ್ಕಳೊಂದಿಗಿರುವಾಗ ಕೇವಲ ನಮ್ಮ ಮಕ್ಕಳಿಗೆ ಮಾತ್ರ ತಿಂಡಿ-ತಿನಿಸನ್ನು ನೀಡುವ ಎಷ್ಟೋ ಹೆತ್ತವರಿದ್ದಾರೆ. ನಾವು ನಮ್ಮ ಸ್ಥಳದಲ್ಲಿಯೇ ಮನೆ ನಿರ್ಮಿಸುತ್ತಿದ್ದರೂ ಅದರಿಂದ ನೆರೆಮನೆಗೆ ಉಪದ್ರವ ಉಂಟಾಗದಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇಂದು ಯಾರು ಕೂಡಾ ಮುಂದಾಗುತ್ತಿಲ್ಲ. ಈ ಸ್ವಭಾವಗಳು ಯಾವನೇ ವಿಶ್ವಾಸಿಗೆ ಭೂಷಣವಲ್ಲ. ಎಲ್ಲ ಆರಾಧನಾ ಕರ್ಮಗಳನ್ನು ಭಕ್ತಿಯಿಂದ ನಿರ್ವಹಿಸುವ ಏಕದೇವತ್ವಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿರುವ ಮಂದಿ ನೆರೆಮನೆಯವರೊಂದಿಗಿನ ವರ್ತನೆಯ ವಿಚಾರದಲ್ಲಿ ಬಹಳ ಹಿಂದಿದ್ದಾರೆ.
ನೆರೆಕರೆಯವರಿಗೆ ಕಾಟ ನೀಡುವುದು ಮಾತ್ರವಲ್ಲ, ಅವರಿಗೆ ಉಪಕಾರ ಮಾಡದಿರುವುದು ಕೂಡಾ ಪಾಪವಾಗಿದೆ. ಈ ಕುರಿತು ನಾಳೆ ಪರಲೋಕದಲ್ಲಿ ನೆರೆಮನೆಯವನು ಅಲ್ಲಾಹನ ಮುಂದೆ ನಮ್ಮ ವಿರುದ್ಧ ಸಾಕ್ಷಿ ನುಡಿಯುವನು. ಪ್ರವಾದಿ(ಸ) ಹೇಳಿದರು, “ಅಂತ್ಯ ದಿನದಲ್ಲಿ ಎಷ್ಟೋ ಜನರು ತಮ್ಮ ನೆರೆಕರೆಯವರೊಂದಿಗೆ ಹಾಜರಾಗುತ್ತಾರೆ. ನೆರೆಮನೆಯವನು ಹೇಳುವನು, ಓ ನನ್ನ ಪ್ರಭೂ, ಇವನು ನನಗಾಗಿ ತನ್ನ ಬಾಗಿಲನ್ನು ಮುಚ್ಚಿದ್ದಾನೆ. ತನ್ನ ಒಳಿತುಗಳನ್ನು ನನಗೆ ತಡೆದಿದ್ದಾನೆ.”
ಇಂದು ಹಲವರು, ಮುಸ್ಲಿಮರು ಮಾತ್ರ ನೆರೆಕರೆಯವರು ಎಂದು ಭಾವಿಸಿದ್ದಾರೆ. ಮುಸ್ಲಿಮೇತರರು ನೆರೆಕರೆಯ ಪಟ್ಟಿಗೆ ಸೇರಿದವರಲ್ಲ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಆದರೆ ಇದು ತಪ್ಪಾದ ಕಲ್ಪನೆಯಾಗಿದೆ. ಮನೆಯ ಸುತ್ತ ವಾಸಿಸುವ ಯಾರೇ ಆದರೂ ಅವರು ನೆರೆಕರೆಯ ಸಾಲಿಗೆ ಸೇರುತ್ತಾರೆ. ಅವರೊಂದಿಗೆ ಬಾಧ್ಯತೆಯ ವಿಚಾರದಲ್ಲಿ ಹೆಚ್ಚು ಕಡಿಮೆ ಇದ್ದರೂ ನೆರೆಕರೆಯವರು ಎಂಬ ಸ್ಥಾನದಿಂದ ಅವರು ಹೊರಗುಳಿಯುವುದಿಲ್ಲ. ನಮ್ಮ ನೆರೆಯಲ್ಲಿರುವ ಒಂದೆರಡು ಮನೆಗಳನ್ನು ನೆರೆಮನೆಯವರ ಸಾಲಿಗೆ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತೇವೆ. ಆದರೆ ಪ್ರವಾದಿ(ಸ) ಒಂದು ಮನೆಯ ಸುತ್ತಮುತ್ತ ಇರುವ 40 ಮನೆಗಳು ನೆರೆಕರೆಯವರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಸ್ನದ್ ಬಸ್ಸಾರ್ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ, “ನೆರೆಮನೆಯವರಲ್ಲಿ ಮೂರು ವಿಭಾಗಗಳಿವೆ. ಒಂದನೇ ವಿಭಾಗದವರಲ್ಲಿ ಒಂದೇ ಬಾಧ್ಯತೆ. ಎರಡನೇ ವಿಭಾಗದವರಲ್ಲಿ ಎರಡು ಬಾಧ್ಯತೆಗಳಿವೆ. ಮೂರನೇ ವಿಭಾಗದವರಲ್ಲಿ ಮೂರು ಬಾಧ್ಯತೆಗಳಿವೆ. ಒಂದನೇ ವಿಭಾಗದವರಲ್ಲಿ ನೆರೆಮನೆಯವರು ಎಂಬ ಬಾಧ್ಯತೆ ಮಾತ್ರ. ಎರಡನೇ ವಿಭಾಗದವರು ಮುಸ್ಲಿಮರಾಗಿದ್ದಾರೆ. ಅವರೊಂದಿಗೆ ನೆರೆಮನೆಯವರು ಎಂಬ ಬಾಧ್ಯತೆಯೊಂದಿಗೆ ಮುಸಲ್ಮಾನರು ಎಂಬ ಬಾಧ್ಯತೆಯೂ ಇದೆ. ಮೂರನೇ ವಿಭಾಗದವರು ಮುಸ್ಲಿಮರಾದ ಸಂಬಂಧಿಕರು. ಅವರೊಂದಿಗೆ ಮುಸ್ಲಿಮರು, ಸಂಬಂಧಿಕರು ಮತ್ತು ನೆರೆಮನೆಯವರು ಎಂಬ ನೆಲೆಯಲ್ಲಿ ಮೂರು ಬಾಧ್ಯತೆಗಳಿವೆ.”
ಆದರೆ ಇಂದು ಇವೆಲ್ಲದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಮನೆಯವರಿಗೆ ಸದಾ ಅಪಚಾರ ಮಾಡುವ ಎಷ್ಟೋ ಮಂದಿಯಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಪರಸ್ಪರ ಜಗಳವಾಡುತ್ತಾರೆ. ನೆರೆಮನೆಯ ಕೋಳಿ ಅಥವಾ ಆಡು ನಮ್ಮ ಮನೆಗೆ ಬಂದರೆ ಅಲ್ಲಿ ದೊಡ್ಡ ಯುದ್ಧವೇರ್ಪಡುತ್ತದೆ. ಬುದ್ಧಿ ಇಲ್ಲದ ಜಾನುವಾರುಗಳು ಮಾಡುವ ಕೃತ್ಯಕ್ಕೆ ಬುದ್ಧಿ ಇರುವ ಮಾನವರು ಸಂಬಂಧಗಳನ್ನೇ ಮುರಿದುಕೊಳ್ಳುತ್ತಾರೆ. ಆದರೆ ಇದು ವಿಶ್ವಾಸಿಗೆ ತರವಲ್ಲ. ನೆರೆಮನೆಯವರೊಂದಿಗೆ ಉತ್ತಮವಾಗಿ ವರ್ತಿಸದವನು ವಿಶ್ವಾಸಿಯಾಗಲಿಕ್ಕಿಲ್ಲ. ಅವನ ಕರ್ಮಗಳು ನಿಶ್ಫಲವಾಗಬಹುದು. ಆದ್ದರಿಂದ ನಾವು ನಮ್ಮ ನೆರೆಕರೆಯವರೊಂದಿಗೆ ಉತ್ತಮವಾಗಿ ವರ್ತಿಸಬೇಕು ಮತ್ತು ಅವರೊಂದಿಗಿನ ಬಾಧ್ಯತೆಗಳನ್ನು ಪೂರೈಸಬೇಕು. ಆಪತ್ಕಾಲದಲ್ಲಿ ಆಪತ್ಭಾಂಧವರಾಗುವುದು ಅವರಲ್ಲವೇ?

ಸೋಮವಾರ, ಮೇ 21, 2012

ವ್ಯಭಿಚಾರಕ್ಕಿಂತ ದೊಡ್ಡ ಪಾಪ


ಇಸ್ಲಾಮ್ ಧರ್ಮವು ವ್ಯಭಿಚಾರವನ್ನು ತೀವ್ರವಾಗಿ ವಿರೋಧಿಸಿದೆ. ಕುರಾನ್ ಅದರ ಬಳಿ ಸುಳಿಯಬಾರದೆಂದು ತಾಕೀತು ಮಾಡಿದೆ. ಪ್ರವಾದಿಯವರು(ಸ) ಹೆಸರಿಸಿರುವ ಏಳು ಮಹಾ ಪಾಪಗಳಲ್ಲಿ ವ್ಯಭಿಚಾರವೂ ಒಂದಾಗಿದೆ. ವಿವಾಹಿತನು ವ್ಯಭಿಚಾರ ನಡೆಸಿದರೆ ವಧೆ ಶಿಕ್ಷೆ ಕಡ್ಡಾಯವಾಗುತ್ತದೆ. ಅದೊಂದು ಅಶ್ಲೀಲ ಕೃತ್ಯವಾಗಿದೆ. ಆದರೆ ಇಸ್ಲಾಮ್ ವ್ಯಭಿಚಾರಕ್ಕಿಂತಲೂ ದೊಡ್ಡ ಪಾಪಗಳೆಂದು ಹೇಳಿರುವ ಕೆಲವು ದುಶ್ಕರ್ಮಗಳಿವೆ. ಅವುಗಳ ಪೈಕಿ ಪರದೂಷಣೆಯು ಪ್ರದಾನವಾದುದಾಗಿದೆ. ಪರದೂಷಣೆ ಎಂದರೇನು? ಎಂದು ಪ್ರವಾದಿಯವರೊಡನೆ(ಸ) ಕೇಳಲಾಯಿತು. ಆಗ ಅವರು ಹೇಳಿದರು “ನೀನು ನಿನ್ನ ಸಹೋದರನ ಬಗ್ಗೆ ಅವನಿಗೆ ಅಸಮಾಧಾನ ಉಂಟಾಗುವಂತಹ ರೀತಿಯಲ್ಲಿ ಪ್ರಸ್ತಾಪಿಸುವುದು. ನಾನು ಪ್ರಸ್ತಾಪಿಸುವಂತಹ ವಿಷಯ ನನ್ನ ಸಹೋದರನಲ್ಲಿದ್ದರೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಲಾಯಿತು. ಅದಕ್ಕೆ ಪ್ರವಾದಿಯವರು(ಸ) ಹೇಳಿದರು. ಅವನಲ್ಲಿ ಆ ವಿಷಯ ಇದ್ದಾಗಲೇ ಅದು ಪರದೂಷಣೆ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದು ಆರೋಪವೆನಿಸಿಕೊಳ್ಳುತ್ತದೆ.”
ಇಂದು ನಾವು ಈ ಮಹಾ ಅಪರಾಧವನ್ನು ಕ್ಷುಲ್ಲಕವೆಂದು ಭಾವಿಸಿ ದಿನನಿತ್ಯ ಮಾಡುತ್ತಿದ್ದೇವೆ. ಜನರು ‘ಟೈಂಪಾಸ್’ ಎಂಬ ನೆಲೆಯಲ್ಲಿ ಮಾಡುತ್ತಿರುವುದು ಈ ಪರದೂಷಣೆಯನ್ನಾಗಿದೆ. ಕಟ್ಟೆಗಳಲ್ಲಿ ಕ್ಲಾಸುಗಳಲ್ಲಿ, ದೂರವಾಣಿಯಲ್ಲಿ ನಾವು ಈ ಅಪರಾಧದ ವಕ್ತಾರರಾಗುತ್ತಿದ್ದೇವೆ. ಈ ಅಪರಾಧದ ನೀಚತೆಯನ್ನು ಪ್ರವಾದಿಯವರು(ಸ) ತನ್ನ ಅನುಯಾಯಿಗಳಿಗೆ ಉದಾಹರಣೆ ಸಹಿತ ವಿವರಿಸಿದ್ದಾರೆ.
ಅಬೂ ಹುರೈರ(ರ) ವರದಿ ಮಾಡಿದ್ದಾರೆ. “ಅಸ್ಲಮ್ ಗೋತ್ರದ ಮಾಯಿಝ್ ಬಿನ್ ಮಾಲಿಕ್(ರ) ಪ್ರವಾದಿಯವರ(ಸ) ಬಳಿ ಬಮದು ವ್ಯಭಿಚಾರಕ್ಕಿರುವ ಶಿಕ್ಷೆಯನ್ನು ತನ್ನ ಮೇಲೆ ಜಾರಿಗೊಳಿಸಬೇಕೆಂದು ನಾಲ್ಕು ಬಾರಿ ಬಂದು ಭಿನ್ನವಿಸಿದ್ದರು. ಬಳಿಕ ಪ್ರವಾದಿಯವರು(ಸ) ಅವರಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡಿದ್ದರು. ಕೆಲ ಕಾಲದ  ಬಳಿಕ ಪ್ರವಾದಿಯವರು(ಸ) ಮತ್ತು ಕೆಲವು ಅನುಯಾಯಿಗಳು (ಮಾಯಿಝ್(ರ) ವಧಿಸಲ್ಪಟ್ಟ ಸ್ಥಳದ ಮೂಲಕ) ನಡೆದು ಹೋಗುತ್ತಿದ್ದರು. ಆಗ ಓರ್ವರು ಹೇಳಿದರು, “ಇವರು ಎಂತಹ ಬುದ್ಧಿಹೀನ ವ್ಯಕ್ತಿ. ಹಲವು ಬಾರಿ ಅವರು ಪ್ರವಾದಿಯವರ(ಸ) ಬಳಿಗೆ ಬಂದರು. ಪ್ರತೀ ಭಾರಿಯೂ ಪ್ರವಾದಿಯವರು(ಸ) ಅವರನ್ನು ಮರಳಿಕಳಿಸಿದರು. ಆದರೂ ಒಂದು ನಾಯಿ ಕೊಲ್ಲಲ್ಪಡುವಂತೆ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ಪ್ರವಾದಿವರ್ಯರು(ಸ) ಮೌನವ ವಹಿಸಿದರು. ಸ್ವಲ್ಪ ಮುಂದೆ ಹೋದಾಗ ಸತ್ತು ಕೊಳೆತು ನಾರುತ್ತಿರುವ ಕತ್ತೆಯ ಶವವನ್ನು ಕಂಡರು. ಪ್ರವಾದಿರ್ವಯರು(ಸ) ಅವರೊಂದಿಗೆ “ನೀವಿಬ್ಬರು ಈ ಕತ್ತೆಯನ್ನು ತಿನ್ನಿರಿ.” ಆಗ ಅವರು ಕೇಳಿದರು, “ಅಲ್ಲಾಹನ ದೂತರೇ, ಈ ಕತ್ತೆಯ ಶವವನ್ನಾ?” ಪ್ರವಾದಿಯವರು(ಸ) ಹೇಳಿದರು, “ಸ್ವಲ್ಪ ವೊದಲು ನೀವು ನಿಮ್ಮ ಸಹೋದರನ ಅಭಿಮಾನವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿ. ನೀವು ಹೇಳಿದ ಆ ಮಾತುಗಳು ಇದನ್ನು ತಿನ್ನುವುದಕ್ಕಿಂತ ಗಂಭೀರವಾದುದಾಗಿವೆ. ಮುಹಮ್ಮದನ ಆತ್ಮವು ಯಾರ ಕೈಯಲ್ಲಿದೆಯೋ ಅವನಾಣೆ! ಖಂಡಿತವಾಗಿಯೂ ಮಾಯಿಝ್(ರ) ಸ್ವರ್ಗದ ನದಿಯೊಂದರಲ್ಲಿ ಈಗ ಈಜಾಡುತ್ತಿರಬಹುದು.”
ಓರ್ವ ಮನುಷ್ಯನ ತಪ್ಪುಗಳನ್ನೂ ಕುಂದು ಕೊರತೆಗಳನ್ನೂ ಇತರರ ಮುಂದೆ ಹೇಳುವುದು ದೊಡ್ಡ ಪಾಪಕಾರ್ಯವಾಗಿದೆ. ವಿಶೇಷತಹ ಸತ್ಯವಿಶ್ವಾಸಿಗಳು ಈ ಪಾಪಕ್ಕೆ ಬಲಿ ಬಿಳ ಬಾರದು. ವಿಶ್ವಾಸಿಗಳು ಪರಸ್ಪರ ಸಹೋದರರಂತೆ ಜೀವಿಸಬೇಕಾದವರಾಗಿದ್ದಾರೆ. ಈ ಸಾಹೋದರ್ಯ ಸಂಬಂಧವನ್ನು ಮುರಿಯುವಂತ ದುಶ್ಚಟಗಳು ಅವರಲ್ಲಿ ಇರಲೇಬಾರದು ಸುಳ್ಳು, ಪರದೂಷಣೆಯಂತಹ ಪಾಪಗಳು ವಿಶ್ವಾಸಿಗಳ ಮಧ್ಯೆ ಇರುವ ಸೌಹಾರ್ದತೆಯನ್ನು ನಾಶಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ವಿಶ್ವಾಸಿಗಳು ವರ್ಜಿಸಬೇಕಾದ ಪಾಪ ಕೃತ್ಯಗಳ ಕುರಿತು ಅಲ್ಲಾಹನು ಸೂರಃ ಹುಜರಾತಿನ 12ನೇ ಸೂಕ್ತದಲ್ಲಿ ಹೇಳುತ್ತಾನೆ, “ಸತ್ಯವಿಶ್ವಾಸಿಗಳೇ ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೋಷಾನ್ವೇಷಣೆ ಮಾಡದಿರಿ. ನಿಮ್ಲಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವನೇ? ನೀವು ಸ್ವತಃ ಅದನ್ನು ಅಸಹ್ಯಪಡುತ್ತೀರಿ. ಅಲ್ಲಾಹನನ್ನು ಭಯ ಪಡಿರಿ. ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.”
ಇಂದು ಸಮಾಜದ ಬಹುತೇಕ ಮಂದಿಯಲ್ಲಿ ಪರದೂಷಣೆಯೆಂಬ ಆ ಮಹಾ ಪಾಪವು ಹಾಸು ಹೊಕ್ಕಾಗಿದೆ. ಅದರಲ್ಲಿ ವಿಶ್ವಾಸಿಗಳೂ ಸೇರಿದ್ದಾರೆ. ಧಾರ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿರುವವರೂ ಪರದೂಷಣೆಯಲ್ಲಿ ಮುಂದಿರುತ್ತಾರೆ ಎಂಬುದು ಒಂದು ದುರಂತವೇ ಸರಿ. ಅದರ ಅದರ ಗಂಭೀರತೆಯ ಕುರಿತೋ ಅಥವಾ ಅದು ಸಮಾಜದಲ್ಲಿ ಉಂಟು ಮಾಡುವ ಅನಾಹುತಗಳ ಕುರಿತೋ ಅವರು ಆಲೋಚಿಸುತ್ತಿಲ್ಲ. ಈ ಪಾಪವು ಹೆಚ್ಚಾಗಿ ಗೋಚರವಾಗುತ್ತಿರುವುದು ಮಹಿಳೆಯರಲ್ಲಿ ಎಂಬುದು ಖೇದಕರವಾದ ಸಂಗತಿಯಾಗಿದೆ. ಇದರರ್ಥ ಪುರುಷರಲ್ಲಿ ಈ ಸ್ವಭಾವವು ಇಲ್ಲವೆಂದಲ್ಲ. ಪುರುಷರು ದುಡಿಮೆಯ ನಿಭಿಡತೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಅದಕ್ಕೆ ಹೆಚ್ಚು ಸಮಯ ದೊರೆಯುವುದಿಲ್ಲ. ಆದರೆ ಸಿಕ್ಕಿದ ಸಮಯವನ್ನು ಅದಕ್ಕೆ ಉಪಯೋಗಿಸುತ್ತಿದ್ದಾರೆ ಎಂಬುದು ಕಟು ಸತ್ಯವಾಗಿದೆ. ಮಹಿಳೆಯರು ಹಾಗಲ್ಲ. ಅವರಿಗೆ ಬಿಡುವು ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲೆಲ್ಲಾ ಪರದೂಷಣೆಗೆ ಅವರ ನಾಲಗೆಯು ಸಾಕ್ಷಿಯಾಗುತ್ತದೆ. ಸಂಜೆ ವೇಳೆಗಳಲ್ಲೆಲ್ಲಾ ನೆರೆಯವರೊಂದಿಗೆ ಕುಳಿತು ಹರಟೆ ಹೊಡೆಯುವಾಗ ಹೆಚ್ಚಿನ ವೇಳೆ ಇತರರ ತಪ್ಪುಗಳೂ, ಕೊರತೆಗಳೂ ಅಲ್ಲಿ ಪ್ರಸ್ತಾಪಿಸಲ್ಪಡುತ್ತವೆ.
ಮಹಿಳೆಯರ ಕುರಿತು ಒಂದು ಗಾದೆ ಮಾತು ಚಾಲ್ತಿಯಲ್ಲಿದೆ. “ಮೂವರು ಮಹಿಳೆಯರು ಮಾತನಾಡುವಾಗ ಅದು ಸಂಭಾಷಣೆ. ಅವರ ಪೈಕಿ ಓರ್ವಳು ಹೊರಟು ಹೋದಾಗ ಅದು ಪರದೂಷಣೆ.” ಇಂದು ನಡೆಯುವ ವಿಷಯವೇ ಆಗಿದೆ. ಮೂವರೋ ನಾಲ್ವರೋ ಸೇರಿ ಏನಾದರೂ ಮಾತನಾಡುತ್ತಿರುತ್ತಾರೆ. ಅವರಲ್ಲಿ ಯಾರಾದರೂ ಹೋದರೆ ಮತ್ತು ಹೋದ ವ್ಯಕ್ತಿಯ ಕುರಿತು ಅಲ್ಲಿ ಚರ್ಚೆಯಾಗುತ್ತದೆ. ಖಂಡಿತವಾಗಿಯೂ ಇಂತಹ ಸ್ವಭಾವವು ಓರ್ವ ಸತ್ಯವಿಶ್ವಾಸಿಗೆ ಭೂಷಣವಲ್ಲ. ವ್ಯಭಿಚಾರದಂತಹ ಪಾಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವವರು ವ್ಯಭಿಚಾರಕ್ಕಿಂತಲೂ ದೊಡ್ಡ ಈ ಪಾಪವನ್ನು ಕ್ಷುಲ್ಲಕವೆಂದು ಬಗೆದು ಮಾಡುತ್ತಿದ್ದಾರೆ.
ಅಬೂ ಸಯೀದಿಲ್ ಖುದ್ರೀ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಪರದೂಷಣೆಯು ವ್ಯಭಿಚಾರಕ್ಕಿಂತ ಗಂಭೀರವಾದ ಪಾಪವಾಗಿದೆ.” ಜನರು ಕೇಳಿದರು, “ಅಲ್ಲಾಹನ ಪ್ರವಾದಿಯವರೇ(ಸ) ಪರದೂಷಣೆಯು ಯಾಕೆ ವ್ಯಭಿಚಾರಕ್ಕಿಂತ ದೊಡ್ಡ ಪಾಪವಾಯಿತು? ಪ್ರವಾದಿಯವರು(ಸ) ಹೇಳಿದರು. ಓರ್ವನು ವ್ಯಭಿಚಾರ ವೆಸಗಿದರೆ ಅಲ್ಲಾಹನು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಆದರೆ ಪರದೂಷಣೆ ಮಾಡಿದವನು. ಅವನು ಯಾರ ಕುರಿತು ಪರದೂಷಣೆ ಮಾಡಿರುವನೋ ಅವನು ಕ್ಷಮಿಸುವವರೆಗೆ ಅಲ್ಲಾಹನು ಪರದೂಷಣೆ ನಡೆಸಿದವನನ್ನು ಕ್ಷಮಿಸಿಲಿಕ್ಕಿಲ್ಲ.”
ಒಟ್ಟಿನಲ್ಲಿ ವ್ಯಕ್ತಿಗಳ ಅಭಿಮಾನವನ್ನು ಅವಹೇಳನ ಮಾಡುವ ಪರದೂಷಣೆಯು ವಿಶ್ವಾಸಿಗಳಲ್ಲಿರಲೇ ಬಾರದು. ಎಲ್ಲಾ ಧಾರ್ಮಿಕ ಕರ್ಮಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರೂ ಪರದೂಷಣೆಯು ನಮ್ಮಲ್ಲಿದ್ದರೆ ಆ ಕರ್ಮಗಳಿಂದೇನೂ ಪ್ರಯೋಜನವಿಲ್ಲ. ಇದು ಕ್ಷುಲ್ಲಕವೆಂದು ಕಂಡರೂ ಇದರಿಂದಾಗುವ ಆಪತ್ತು ಬಹಳ ಗಂಭೀರವಾದುದಾಗಿದೆ. ಆದ್ದರಿಂದ ನಮ್ಮ ಕರ್ಮಗಳು ನಿಶ್ಫಲಗೊಳ್ಳದಿರಬೇಕಾದರೆ ಈ ಪಾಪದಿಂದ ನಾವು ದೂರ ಸರಿಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ.

ಬುಧವಾರ, ಮೇ 16, 2012

ಇವರಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ?



ಈ ಲೋಕದಲ್ಲಿ ಜಯಾಪಜಯಗಳನ್ನು ನಿರ್ಧರಿಸುವಲ್ಲಿ ಮುಖ್ಯವಾಗಿ ಮೂರು ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವು ಸಂಪತ್ತು, ಕುಟುಂಬ ಮತ್ತು ಕರ್ಮಗಳಾಗಿವೆ. ಈ ಮೂರು ವಿಷಯಗಳ ನಿರ್ವಹಣೆಗನುಗುಣವಾಗಿ ಮಾನವರಿಗೆ ಸ್ವರ್ಗ-ನರಕ ಪ್ರಾಪ್ತಿಯಾಗುತ್ತದೆ. ಪ್ರವಾದಿಯವರು(ಸ) ಈ ಮೂರು ವಿಷಯಗಳನ್ನು ಗೆಳೆಯರಿಗೆ ಹೋಲಿಸಿದ್ದಾರೆ. ಅಬೂಹುರೈರರಿಂದ(ರ) ವರದಿಯಾಗಿದೆ: ಪ್ರವಾದಿಯವರು(ಸ) ಹೇಳಿದರು, “ಓರ್ವ ಮನುಷ್ಯನ ಸಂಪತ್ತು, ಕುಟುಂಬ, ಕರ್ಮಗಳ ಉಪಮೆಯು ಮೂವರು ಸಹೋದರರು ಅಥವಾ ಗೆಳೆಯರಿರುವ ಓರ್ವನಂತಾಗಿದೆ. ಅವರಲ್ಲಿ ಓರ್ವನು ಹೇಳಿದನು- ನಾನು ನಿನ್ನ ಜೀವನದಲ್ಲಿ ನಿನ್ನೊಂದಿಗೇ ಇರುವೆನು. ಆದರೆ ನೀನು ಮರಣ ಹೊಂದಿದರೆ ನನ್ನ ಮತ್ತು ನಿನ್ನ ಮಧ್ಯೆ ಇರುವ ಸರ್ವ ಸಂಬಂಧಗಳೂ ಮುರಿದು ಹೋಗುವುದು. ಎರಡನೆಯವನು ಹೇಳಿದನು, ನಾನೂ ನಿನ್ನೊಂದಿಗಿರುವೆನು. ಆದರೆ ಆ ಕಾಣುತ್ತಿರುವ ಮರದ ಬಳಿ ತಲುಪಿದರೆ ನನ್ನ ಮತ್ತು ನಿನ್ನ ಮಧ್ಯೆ ಯಾವುದೇ ಸಂಬಂಧವಿರುವುದಿಲ್ಲ. ಮೂರನೆಯವನು ಹೇಳಿದನು- ನೀನು ಜೀವಿಸಿದರೂ ಮರಣಿಸಿದರೂ ನಾನು ಸದಾ ನಿನ್ನೊಂದಿಗೆ ಇರುವೆನು.”
ಮನುಷ್ಯನು ತನ್ನ ಜೀವನದಲ್ಲಿ ಮಾಡುವ ಕರ್ಮಗಳು, ಅವನು ಪ್ರೀತಿಸುವ ಕುಟುಂಬಗಳು, ಅವನು ಹೆಚ್ಚು ಹೆಚ್ಚು ಸಂಪಾದಿಸಿರುವ ಅವನ ಸಂಪತ್ತು ಈ ಮೂರು ವಸ್ತುಗಳ ವಾಸ್ತವಿಕತೆಯನ್ನು ಮೇಲೆ ತಿಳಿಸಲಾದ ಪ್ರವಾದಿ ವಚನವು ವಿವರಿಸುತ್ತದೆ. ಸಂಪತ್ತು ಮನುಷ್ಯನಿಗೆ ತನ್ನ ಜೀವನದಲ್ಲಿ ಹೆಚ್ಚು ಪ್ರಯೋಜನ ನೀಡುವ ಒಂದು ವಸ್ತುವಾಗಿದೆ. ಜೀವನದ ಅವಶ್ಯಕತೆಗಳನ್ನು ಪೂರೈಸಲು ಸಂಪತ್ತು ಅಗತ್ಯವಾಗಿದೆ. ಮನುಷ್ಯನು ಸಂಪತ್ತಿನಲ್ಲಿ ತನ್ನ ಸಂತೋಷವನ್ನು ಕಾಣುತ್ತಾನೆ. ಅದರ ಸಂಪಾದನೆಗಾಗಿ ಆಹೋರಾತ್ರಿ ದುಡಿಯುತ್ತಾನೆ. ಬಡತನ, ಸಂಕಷ್ಟಗಳನ್ನು ಅನುಭವಿಸಲು ಯಾರೂ ತಯಾರಾಗುವುದಿಲ್ಲ. ಅವುಗಳನ್ನು ಹೊಗಲಾಡಿಸಲಿಕ್ಕಾಗಿ ಸಂಪತ್ತಿನ ವೊರೆ ಹೋಗುತ್ತಾರೆ. ಸಂಪತ್ತು ಅಲ್ಲಾಹನ ದೊಡ್ಡ ಅನುಗ್ರಹವಾಗಿದೆ. ಅಲ್ಲಾಹನು ತಾನಿಚ್ಛಿಸಿದವನಿಗೆ ಅದನ್ನು ನೀಡುತ್ತಾನೆ. ಆದರೆ ಈ ಸಂಪತ್ತು ಮನುಷ್ಯನ ಜೀವಿತಾವಧಿಗೆ ಮಾತ್ರ ಸೀಮಿತಗೊಂಡಿದೆ. ಅವನ ಪ್ರಾಣ ಪಕ್ಷಿಯು ಶರೀರದಿಂದ ಬೇರ್ಪಡುವುದರೊಂದಿಗೆ ಅವನಿಗೂ ಅವನ ಸಂಪತ್ತಿಗೂ ಇರುವ ಸಂಬಂಧವೂ ಮುರಿದು ಹೋಗುತ್ತದೆ. ಮರಣಿಸಿ ಹೋಗುವಾಗ ಯಾರೂ ಕೂಡಾ ಸಂಪತ್ತನ್ನು ತನ್ನೊಂದಿಗೆ ಕೊಂಡೊಯ್ದದ್ದಿಲ್ಲ. ಕೊಂಡುಹೋಗಲಿಕ್ಕೂ ಇಲ್ಲ. ಎಷ್ಟೇ ದೊಡ್ಡ ಶ್ರೀಮಂತನಾದರೂ ಗೋರಿ ಸೇರುವಾಗ ಅವನು ಶೂನ್ಯ ಹಸ್ತನಾಗಿಯೇ ಇರುತ್ತಾನೆ. ಜಗತ್ತನ್ನೇ ಜಯಿಸಲು ಹೊರಟ ಅಲೆಗ್ಸಾಂಡರ್ ಚಕ್ರವರ್ತಿ ಮರಣ ಹೊಂದಿದಾಗ ಒಂದು ಸಂದೇಶವನ್ನು ಜಗತ್ತಿಗೆ ರವಾನಿಸಿದ್ದನು. ಒಂದು ಕೈಯನ್ನು ಶವಪೆಟ್ಟಿಗೆಯಿಂದ ಹೊರ ಹಾಕಿದ ಸ್ಥಿತಿಯಲ್ಲೇ ಅವನನ್ನು ದಫನ ಮಾಡಲಾಯಿತು. “ಮನುಷ್ಯರು ಮರಣ ಹೊಂದಿ ಹೋಗುವಾಗ ಬರಿ ಕೈಯಲ್ಲೇ ಹೋಗುತ್ತಾರೆ” ಎಂಬ ಉನ್ನತ ಸಂದೇಶವು ಅದರಲ್ಲಿತ್ತು.
ಈ ಲೋಕವು ಒಂದು ಬಸ್ ಇದ್ದಂತೆ. ನಾವು ಬಸ್ಸಿನಲ್ಲಿ ಹತ್ತಿ ಒಂದು ನಿಗದಿತ ಸ್ಥಳದ ವರೆಗೆ ಪ್ರಯಾಣಿಸುತ್ತೇವೆ. ಅದಕ್ಕಾಗಿ ನಾವು ಟಿಕೇಟನ್ನೂ ಖರೀದಿಸುತ್ತೇವೆ. ಆ ಸ್ಥಳ ತಲುಪುವ ವರೆಗೆ ಆ ಟಿಕೇಟಿಗೆ ಬೆಲೆ ಇರುತ್ತದೆ. ಅಲ್ಲಿ ತಲುಪಿದ ಬಳಿಕ ಆ ಟಿಕೆಟ್ ತನ್ನ ಬೆಲೆ ಕಳೆದುಕೊಳ್ಳುತ್ತದೆ. ನಂತರ ಅದು ಪ್ರಯೋಜನಕ್ಕೆ ಬರುವುದಿಲ್ಲ. ಈ ಲೋಕದ ಸ್ಥಿತಿಯೂ ಹಾಗೆಯೇ ಆಗಿದೆ. ಜೀವನವೆಂಬ ಪ್ರಯಾಣದಲ್ಲಿ ಮರಣ ಎಂಬ ನಿಲ್ದಾಣ ತಲುಪುವ ವರಗೆ ಸಂಪತ್ತೆಂಬ ಟಿಕೇಟ್ ನಮಗೆ ಪ್ರಯೋಜನ ನೀಡುತ್ತದೆ. ಆ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ಅದರೊಂದಿಗಿನ ಸಂಬಂಧವೇ ಬೇರ್ಪಡುತ್ತದೆ.
ಸಾಮಾಜಿಕ ಜೀವನದಲ್ಲಿ ಸಂಪತ್ತಿನಂತೆಯೇ ಕುಟುಂಬವೂ ಮುಖ್ಯವಾಗಿದೆ. ಯಾರಿಗೂ ಕೂಡಾ ಕುಟುಂಬವಿಲ್ಲದೆ ಏಕಾಂಗಿಯಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಮನುಷ್ಯರ ಮಧ್ಯೆ ಕುಟುಂಬಕ್ಕೆ ಉನ್ನತ ಸ್ಥಾನವಿದೆ. ಜೀವನವನ್ನು ನೆಮ್ಮದಿದಾಯಕಗೊಳಿಸುವ ಹಾಗೂ ಬೀದಿಪಾಲು ಗೊಳಿಸುವ ಶಕ್ತಿಯು ಕುಟುಂಬಕ್ಕಿದೆ. ಜನನದಿಂದ ಮರಣದ ತನಕ ನವ್ಮೊಂದಿಗೆ ಕುಟುಂಬಿಕರು ಇರುತ್ತಾರೆ. ಮರಣ ಹೊಂದಿ ಗೋರಿ ಸೇರುವುದರೊಂದಿಗೆ ಕುಟುಂಬದೊಂದಿಗಿನ ಸಂಬಂಧವು ಮುರಿದು ಹೋಗುತ್ತದೆ. ಕುಟುಂಬವನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದರೂ ನಾವು ಮರಣ ಹೊಂದುವಾಗ ಅವರು ನವ್ಮೊಂದಿಗೆ ಬರಲಾರರು. ನಾವು ಏಕಾಂಗಿಯಾಗಿಯೇ ಹೋಗಬೇಕು.
ಮೇಲೆ ತಿಳಿಸಲಾದ ಸಂಪತ್ತು ಮತ್ತು ಕುಟುಂಬಗಳೆಂಬ ಅನುಗ್ರಹಗಳಿಗೆ ಕೆಲವು ಕೊರತೆಗಳಿವೆ. ಅವು ನಮಗೆ ಈ ಲೋಕದಲ್ಲಿ ಮಾತ್ರ ಪ್ರಯೋಜನ ನೀಡುತ್ತವೆ. ಪರಲೋಕದಲ್ಲಿ ಅವು ನಮಗೆ ಯಾವುದೇ ಪ್ರಯೋಜನ ನೀಡಲಿಕ್ಕಿಲ್ಲ. ನಾಳೆ ಪರಲೋಕದಲ್ಲಿ ವಿಚಾರಣೆಗೆ ಗುರಿಯಾಗುವಾಗ ಸಂಪತ್ತು ಅಥವಾ ಕುಟುಂಬವು ಅವನ ನೆರವಿಗೆ ಬರಲಿಕ್ಕಿಲ್ಲ. ತಾನು ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ. ನಾನು ಮಸೀದಿಯ ಅಧ್ಯಕ್ಷನೂ ಸಮುದಾಯದ ನೇತಾರನೂ ಆಗಿದ್ದೆ ಎಂಬ ರಿಯಾಯಿತಿಯು ಅಲ್ಲಿ ಲಭಿಸಲಿಕ್ಕಿಲ್ಲ. ಅಲ್ಲಿ ನಮಗೆ ನಾವೇ ಜವಾಬ್ದಾರರಾಗಿರುತ್ತೇವೆ.
ಆದರೆ ಎಲ್ಲಾ ಸಂದರ್ಭಗಳಲ್ಲೂ ಕರ್ಮಗಳು ನವ್ಮೊಂದಿಗಿರುತ್ತವೆ. ಅವು ಉತ್ತಮ ಕರ್ಮಗಳಾಗಿದ್ದರೂ ದುಷ್ಕರ್ಮಗಳಾಗಿದ್ದರೂ ಸರಿಯೇ. ಸಂಪತ್ತು ಮತ್ತು ಕುಟುಂಬಗಳಂತೆ ಮರಣದೊಂದಿಗೆ ಕರ್ಮಗಳ ಸಂಬಂಧವು ಮುರಿದು ಹೋಗುವುದಿಲ್ಲ. ಮರಣದ ಬಳಿಕವೂ ಅವು ನಮ್ಮನ್ನು ಹಿಂಬಾಲಿಸುತ್ತವೆ. ಪರಲೋಕದಲ್ಲಿ ನಮ್ಮ ಕರ್ಮಗಳನ್ನು ಮಾನದಂಡವಾಗಿರಿಸಿ ಶಿಕ್ಷೆ-ರಕ್ಷೆ ನೀಡಲಾಗುತ್ತದೆ. ಮನುಷ್ಯರಿಗೆ ಕರ್ಮಗಳೊಂದಿಗಿನ ನೈಜ ಸಂಬಂಧವು ಸ್ಥಾಪನೆಯಾಗುವುದು ಮರಣದ ಬಳಿಕವೇ ಆಗಿದೆ.
ಪ್ರವಾದಿಯವರು(ಸ) ಹೇಳಿದರು, “ಮರಣ ಹೊಂದಿದ ವ್ಯಕ್ತಿಯನ್ನು ಮೂರು ವಿಷಯಗಳು ಹಿಂಬಾಲಿಸುತ್ತಿರುತ್ತವೆ. ಅವು ಕುಟುಂಬ, ಸಂಪತ್ತು ಮತ್ತು ಕರ್ಮಗಳಾಗಿವೆ. ಬಳಿಕ ಅವುಗಳಲ್ಲಿ ಎರಡು ವಸ್ತುಗಳು ಮರಳುತ್ತವೆ ಮತ್ತು ಒಂದು ಅವನೊಂದಿಗೆ ಉಳಿಯುತ್ತದೆ. ಕುಟುಂಬ ಮತ್ತು ಸಂಪತ್ತು ಮರಳಿ ಬರುತ್ತವೆ. ಕರ್ಮಗಳು ಅವನೊಂದಿಗೆ ಉಳಿಯುತ್ತವೆ.”
ಐಹಿಕ ಜೀವನದಲ್ಲಿ ಮನುಷ್ಯನು ತಿಳಿದೋ ತಿಳಿಯದೆಯೋ ಮಾಡಿದ ಕರ್ಮಗಳೆಲ್ಲವೂ ಮರಣದೊಂದಿಗೆ ಅವನ ಮುಂದೆ ಪ್ರತ್ಯಕ್ಷಗೊಳ್ಳುತ್ತವೆ. ಅಲ್ಲಿಯ ವರೆಗೆ ಅವನು ರಹಸ್ಯವಾಗಿರಿಸಿದ ಕರ್ಮಗಳು ಅವನಿಗೆ ರಕ್ಷೆಯನ್ನೂ ಶಿಕ್ಷೆಯನ್ನೂ ನೀಡುತ್ತವೆ.
ಬರ್ರಾಅï ಬಿನ್ ಆಸಿಬಿಯವರಿಂದ(ರ) ಇಮಾಮ್ ಅಹ್ಮದ್ ವರದಿ ಮಾಡುತ್ತಾರೆ: ಪ್ರವಾದಿಯವರು(ಸ) ಹೇಳಿದರು, “(ಸತ್ಯವಿಶ್ವಾಸಿಯಾದ ಓರ್ವನ ಆತ್ಮವು ಗೋರಿಗೆ ತಲುಪಿದಾಗ) ಉತ್ತಮವಾದ ವಸ್ತ್ರಧರಿಸಿದ ಸುಂದರ ವ್ಯಕ್ತಿಯು ಪರಿಮಳ ಸೂಸುತ್ತಾ ಅಲ್ಲಿಗೆ ಬರುತ್ತಾರೆ. ಬಳಿಕ ಅವರು ಹೇಳುವರು, ‘ಸಂತೋಷಪಡಿರಿ. ಆನಂದದಾಯಕವಾದ ಎಲ್ಲವನ್ನೂ ತಮಗೆ ತಯಾರಿಸಿಡಲಾಗಿದೆ. ಇದು ಭರವಸೆ ನೀಡಲ್ಪಟ್ಟ ಆ ದಿನವಾಗಿದೆ.’ ಆಗ ವಿಶ್ವಾಸಿಯು ಕೇಳುವನು. ‘ತಾವು ಯಾರು? ಸುಂದರವಾದ ತಮ್ಮ ಮುಖವನ್ನು ನೋಡುವಾಗ ಸಂತೋಷವಾಗುತ್ತದೆ.’ ಆಗ ಅವರು ಹೇಳುವರು, ‘ನಾನು ನಿನ್ನ ಸತ್ಕರ್ಮಗಳಾಗಿದ್ದೇನೆ.’ ಆಗ ಸತ್ಯವಿಶ್ವಾಸಿ ಹೇಳುವನು, ‘ಓ ನನ್ನ ಪ್ರಭೂ ಅಂತ್ಯ ದಿನವನ್ನು ಬೇಗನೇ ತಲುಪಿಸಿದ್ದರೆ ಎಷ್ಟು ಒಳ್ಳೆಯದಿತ್ತು. ನನಗೆ ನನ್ನ ಕುಟುಂಬಿಕರ ಬಳಿ ಮರಳಿ ಸುಖವಾಗಿ ಜೀವಿಸಬಹುದಾಗಿತ್ತು.’ (ಆದರೆ ಸತ್ಯನಿಷೇಧಿಯಾದ ಆತ್ಮವು ಗೋರಿಗೆ ತಲುಪಿದಾಗ) ಕೊಳೆಯಾದ ವಸ್ತ್ರಧರಿಸಿ ಕುರೂಪಿಯಾದ ಓರ್ವರು ದುರ್ಗಂಧ ಬೀರುತ್ತಾ ಬರುವರು. ಬಳಿಕ ಅವರು ಹೇಳುವರು, ‘ನಿನಗೆ ನಾಶವಿದೆ. ಇದು ಭರವಸೆ ನೀಡಲಾದ ದಿನವಾಗಿದೆ.’ ಆಗ ಸತ್ಯನಿಷೇಧಿಯು ಕೇಳುವನು. ‘ನೀನು ಯಾರು? ನಿನ್ನ ಕೆಟ್ಟ ಮುಖವನ್ನು ನೋಡುವಾಗಲೇ ಅಸಹ್ಯವಾಗುತ್ತಿದೆ.’ ಆಗ ಅವರು ಹೇಳುವರು, ‘ನಾನು ನಿನ್ನ ದುಷ್ಕರ್ಮಗಳಾಗಿದ್ದೇನೆ.’ ಈ ಸಂದರ್ಭದಲ್ಲಿ ಸತ್ಯನಿಷೇಧಿಯು ‘ಓ ನನ್ನ ಪ್ರಭೂ, ಆ ಅಂತ್ಯದಿನವು ಬೇಗನೇ ಬರದಿದ್ದರೆ ಎಷ್ಟು ಒಳ್ಳೆಯದಿತ್ತು’ ಎಂದು ಅಳುತ್ತಾ ಹೇಳುವನು.”
ಆದ್ದರಿಂದ ತಾತ್ಕಾಲಿಕವಾಗಿ ಈ ಲೋಕದಲ್ಲಿ ಮಾತ್ರ ನವ್ಮೊಂದಿಗಿರುವ ಸಂಪತ್ತು ಮತ್ತು ಕುಟುಂಬಗಳೆಂಬ ಗೆಳೆಯರ ಗಳಿಕೆಗಾಗಿ ನಮ್ಮ ಜೀವನವನ್ನು ವ್ಯರ್ಥಗೊಳಿಸದೆ ಇಹಲೋಕದಲ್ಲೂ ಪರಲೋಕದಲ್ಲೂ ಸದಾ ನವ್ಮೊಂದಿಗಿರುವ ಕರ್ಮಗಳೆಂಬ ಗೆಳೆಯನ ಸಂಪಾದನೆಗಾಗಿ ನಾವು ಪ್ರಯತ್ನಿಸಬೇಕು. ತಾತ್ಕಾಲಿಕವಾದ ಇಹಲೋಕಕ್ಕಾಗಿ ಶಾಶ್ವತವಾದ ಪರಲೋಕವನ್ನು ಕಳೆದುಕೊಳ್ಳಬೇಕೇ?


ಸೋಮವಾರ, ಏಪ್ರಿಲ್ 30, 2012

ಹೇಳಿದರೆ ಸಾಲದು, ಮಾಡಿ ತೋರಿಸಿ


ಸಮಾಜದೊಂದಿಗೆ ನಾವು ಹೇಳುವ ವಿಚಾರಗಳು ಯಶಸ್ವಿಯಾಗಬೇಕಾದರೆ, ಸಮಾಜದ ಮಂದಿ ಕಿವಿಗೊಟ್ಟು ಆಲಿಸಬೇಕಾದರೆ ಹಲವಾರು ನಿಬಂಧನೆಗಳ ನಿವ್ರಹಣೆಯು ಅನಿವಾರ್ಯವಾಗಿದೆ. ಅವುಗಳ ಪೈಕಿ ಮಾದರಿ ಜೀವನವು ಪ್ರಮುಖವಾದುದಾಗಿದೆ. ಓರ್ವನು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರುವುದಾದರೆ ಅವನ ಜೀವನವು ಉತ್ತಮವಾಗಿರಬೇಕು. ಅವನ ವರ್ತನೆಗಳು ಮಾದರಿ ಯೋಗ್ಯವಾಗಿರಬೇಕು. ಒಳಿತನ್ನು ಸ್ಥಾಪಿಸಲು ಬಯಸುವವನ ಜೀವನವು ಒಳಿತಿನಿಂದ ಕೂಡಿರಬೇಕು. ಸಮಾಜದಿಂದ ಕೆಡುಕನ್ನು ಅಳಿಸಲು ಹೊರಟವನ ಜೀವನವು ಕೆಡುಕುಗಳಿಂದ ಮುಕ್ತವಾಗಿರಬೇಕು. ಮಧ್ಯದ ಬಾಟಲಿಯನ್ನು ಜೇಬಲ್ಲಿರಿಸಿ ತನ್ನ ಶಿಷ್ಯರಿಗೆ ಮಧ್ಯಪಾನದ ಕೆಡುಕುಗಳನ್ನೂ, ಅದನ್ನು ಕುಡಿಯುವುದರಿಂದಾಗುವ ಅನಾಹುತಗಳನ್ನೂ ವಿವರಿಸಿ ಮುನ್ನೆಚ್ಚರಿಕೆ ನೀಡುವ ಅಧ್ಯಾಪಕನ ಕುರಿತೊಮ್ಮೆ ಆಲೋಚಿಸಿ ನೋಡಿ. ಇದು ಎಂತಹ ಅನರ್ಥವಾಗಿರಬಹುದು. ಇಂದು ಕೂಡಾ ನಡೆಯುತ್ತಿರುವುದು ಇದೇ ಆಗಿದೆ. ಜನರಿಗೆ ಉಪದೇಶ ನೀಡುವುದರಲ್ಲಿ ಸದಾ ಮುಂದಿರುವ ಕೆಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಆ ಯಾವುದೇ ಅಂಶಗಳು ಇರುವುದಿಲ್ಲ. ಸ್ವಂತ ಜೀವನವು ಕೆಡುಕಿನಿಂದ ಕೂಡಿದ್ದರೂ ಜನರಿಗೆ ಉಪದೇಶ ನೀಡುವುದರಲ್ಲಿ ಚುರುಕಾಗಿರುತ್ತಾರೆ.
ಈ ರೀತಿಯ ಜನರನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಕುರಾನ್   ಹೇಳುತ್ತದೆ. “ಓ ಸತ್ಯ ವಿಶ್ವಾಸಿಗಳೇ, ನೀವು ಮಾಡದ್ದನ್ನು ಆಡುತ್ತೀರೇಕೆ? ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಅತ್ಯಂತ ಅಪ್ರಿಯ ಕೃತ್ಯವಾಗಿದೆ.” (ಅಸ್ಸಫ್ಫ್  - 2,3) ಅದೇ ರೀತಿ ಸೂರಃ ಅಕರಾದ 44ನೇ ಸೂಕ್ತದಲ್ಲಿ ಅಲ್ಲಾಹನು ಕೇಳುತ್ತಾನೆ, “ನೀವು ಇತರರಿಗೆ ಸನ್ಮಾರ್ಗವನ್ನನುಸರಿಸಲು ಉಪದೇಶ ನೀಡುತ್ತೀರಿ. ಆದರೆ ನಿಮ್ಮನ್ನು ನೀವು ಮರೆತು ಬಿಡುತ್ತೀರಾ? ವಸ್ತುತಃ ನೀವು ದಿವ್ಯ ಗ್ರಂಥವನ್ನು ಪಠಿಸುತ್ತೀರಿ. ನೀವು ಒಂದಿಷ್ಟೂ ಯೋಚಿಸುವುದಿಲ್ಲವೇ?”
ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದ ವಿಚಾರಗಳನ್ನು ಇತರರಿಗೆ ಬೋಧಿಸುವುದು ಅಲ್ಲಾಹನಿಗೆ ಕೋಪ ಬರಿಸುವ ಕೆಲಸವಾಗಿದೆ. ಉಳಿದ ಬೆರಳುಗಳು ನಮ್ಮನ್ನೇ ಬೆಟ್ಟು ಮಾಡುತ್ತಿವೆ ಎಂಬ ಪ್ರಜ್ಞೆ ಇರಬೇಕು. ಇತರರ ತಪ್ಪಿಗೆ ಬೆರಳು ತೋರಿಸುವಾಗ ಇಂಥವರ ಸ್ಥಿತಿಯು ನಾಳೆ ಪರಲೋಕದಲ್ಲಿ ಹೇಗಿರುತ್ತದೆ ಎಂದು ಪ್ರವಾದಿಯವರು(ಸ) ತಿಳಿಸಿರುತ್ತಾರೆ. “ಅಂತ್ಯ ದಿನದಲ್ಲಿ ಓರ್ವನನ್ನು ತರಲಾಗುವುದು. ಬಳಿಕ ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳು ಹೊರ ಬೀಳುತ್ತದೆ. ಕತ್ತೆ ಗಾಣಕ್ಕೆ ಸುತ್ತುವಂತೆ ಅವನು ಆ ಕರುಳಿನೊಂದಿಗೆ ಸುತ್ತುವನು. ಆ ವೇಳೆ ಅವನ ಬಳಿ ನರಕ ವಾಸಿಗಳು ಸೇರುವರು. ಬಳಿಕ ಅವರು ಕೇಳುವರು. “ಓ ಮನುಜ, ನಿನಗೇನು ಸಂಭವಿಸಿದೆ. ನೀನು ನಮಗೆ ಒಳಿತನ್ನು ಬೋಧಿಸುತ್ತಿರಲಿಲ್ಲವೇ! ಕೆಡುಕನ್ನು ತಡೆಯುತ್ತಿದ್ದಿರಲ್ಲವೇ?” ಆಗ ಅವನು ಹೇಳುವನು, “ಹೌದು, ನಾನು ನಿಮಗೆ ಒಳಿತನ್ನು ಉಪದೇಶಿಸುತ್ತಿದ್ದೆನು. ಆದರೆ ಅದರಂತೆ ನಾನು ಜೀವನ ನಡೆಸಲಿಲ್ಲ. ನಿಮ್ಮನ್ನು ನಾನು ಕೆಡುಕಿನಿಂದ ತಡೆಯುತ್ತಿದ್ದೆ. ಆದರೆ ಆ ಕೆಡುಕನ್ನು ನಾನು ಮಾಡುತ್ತಿದ್ದೆ. (ಬುಖಾರಿ, ಮುಸ್ಲಿಮ್)
ಓವ್ರ ಧಮ್ರ ಪ್ರಚಾರಕನಲ್ಲಿ ಜನರು ಇಷ್ಟಪಡುವಂತಹ ಹಲವಾರು ಗುಣಗಳಿರಬೇಕು. ಉತ್ತಮ ಸ್ವಭಾವ, ಚಾರಿತ್ರ್ಯ, ಸತ್ಯಸಂಧತೆ, ಕರುಣೆ, ಸಹನೆ, ಸಮಾಜ ಸೇವೆಯ ಗುಣ, ತ್ಯಾಗ, ಹೃದಯ ವೈಶಾಲ್ಯತೆ, ದೇವಭಯ ವೊದಲಾದ ಗುಣಗಳು ಜನರಲ್ಲಿ ಪ್ರಭಾವ ಬೀರುತ್ತವೆ. ನಾವು ಹೇಳುವ, ಉಪದೇಶಿಸುವ ವಿಚಾರಗಳನ್ನು ಜನರು ಆಲಿಸಬೇಕಾದರೆ ಈ ಎಲ್ಲಾ ಗುಣಗಳು ನಮ್ಮಲ್ಲಿರಬೇಕಾದುದು ಅನಿವಾಯ್ರವಾಗಿದೆ. ಓವ್ರನು ಜನರಿಗೆ ಉಪದೇಶ ಮಾಡುವಾಗ ಆ ವಿಚಾರವು ಅವನ ಜೀವನದಲ್ಲಿದೆಯೇ ಎಂದು ನೋಡುವುದು ಇಂದಿನ ಜನರ ಮನಸ್ಥಿತಿಯಾಗಿದೆ. ಧರ್ಮ ಪ್ರಚಾರಕನು ಇತರರಿಗೆ ಮಾದರಿಯಾದಾಗ ಮಾತ್ರ ಜನರು ಅವನನ್ನು ಅನುಸರಿಸಲು ಮುಂದಾಗುತ್ತಾರೆ. “ನೀನು ವೊದಲು ಸರಿಯಾಗು. ಬಳಿಕ ನಮಗೆ ಉಪದೇಶ ಮಾಡು” ಎಂದು ಹೇಳಲು ಜನರಿಗೆ ಅವಕಾಶ ನೀಡಬಾರದು. ಪ್ರವಾದಿಯವರ(ಸ) ಕಾಲದಲ್ಲಿ, ಅವತೀರ್ಣ ಗೊಳ್ಳುವ ಕುರಾನ್ ಸೂಕ್ತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿದ ನಂತರವೇ ಸಹಾಬಿಗಳು ಅದನ್ನು ಜನರಿಗೆ ಉಪದೇಶಿಸುತ್ತಿದ್ದರು. ಅವರು ಒಳಿತುಗಳನ್ನು ಮಾಡಿ ತೋರಿಸಿ ಜನರಿಗೆ ಮಾದರಿಯಾಗುತ್ತಿದ್ದರು. ಇಂತಹ ಗುಣಗಳಿಂದಾಗಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳು ಅನಾಗರಿಕ ಅರಬರನ್ನು ಒಂದು ಉತ್ತಮ, ಶ್ರೇಷ್ಠ ಸಂಸ್ಕ್ರತಿಯ ಮನುಷ್ಯರನ್ನಾಗಿ ಮಾರ್ಪಡಿಸಿದರು. ಜೀವನದ ನೈಜ ಗುರಿಯನ್ನು ಅವರಿಗೆ ಮನಗಾಣಿಸಿದರು. ದೊಡ್ಡ ದೊಡ್ಡ ಭಾಷಣ, ಹಾಳೆಗಟ್ಟಲೆ ಲೇಖನಮಾಲೆ, ಅತ್ಯಾಧುನಿಕ ಆಯುಧಗಳು ನಿರ್ವಹಿಸಲು ಸಾಧ್ಯವಾಗದ್ದನ್ನು ಹೃದಯದ ಅಂತರಾಳದಿಂದ ಬರುವ ಒಂದು ಮುಗುಳ್ನಗೆಯು ಸಾಧಿಸಬಹುದು. ಈ ಒಂದು ಆಯುಧವು ಎಂತಹ ಜನರನ್ನು ಮಂತ್ರ ಮುಗ್ಧರನ್ನಾಗಿಸುವ ಶಕ್ತಿ ಹೊಂದಿದೆ. ಇಂತಹ ಹಲವು ಘಟನೆಗಳಿಗೆ ಇತಿಹಾಸವು ಮೂಕ ಸಾಕ್ಷಿಯಾಗಿದೆ.
ಧಮ್ರ ಪ್ರಚಾರಕನಲ್ಲಿ ಸ್ವಾರ್ತತೆ, ಕಪಟತನ, ವಂಚನೆ, ವಿಶ್ವಾಸ ದ್ರೋಹ ವೊದಲಾದ ದುರ್ಗುಣ ಗಳಿದ್ದರೆ ಅವನ ಮಾತಿಗೆ ಸಮಾಜದಲ್ಲಿ ಯಾವುದೇ ಬೆಲೆ ಇರುವುದಿಲ್ಲ. ಅವನ ಮಾತಿಗೆ ಜನರು ಎದುರಾಡಲು ಪ್ರಾರಂಭಿಸುತ್ತಾರೆ. ಮಾತ್ರವಲ್ಲ ಇಂತಹ ಜನರ ದುಷ್ಟ ಮುಖವನ್ನು ಜನರು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಹೇಸುವುದಿಲ್ಲ. ಧರ್ಮ  ಪ್ರಚಾರಕ ಕೊನೆಗೆ ಮುಖ ಭಂಗ ಅನುಭವಿಸುತ್ತಾರೆ.
ಮಾಲಿಕ್ ಬಿನ್ ದೀನಾರ್, ಶರಫ್ ಬಿನ್ ಮಾಲಿಕ್, ಮಾಲಿಕ್ ಬಿನ್ ಹಬೀಬ್ ವೊದಲಾದ ಶ್ರೇಷ್ಠರು ಭಾರತದಲ್ಲಿ ಇಸ್ಲಾಮನ್ನು ಪ್ರಚಾರ ಪಡಿಸಿದರು. ಅವರ ಧರ್ಮ  ಪ್ರಚಾರದಿಂದಾಗಿ ಹಲವರು ಇಸ್ಲಾಮ್ ಸ್ವೀಕಾರ ಮಾಡಿದರು. ಕೇವಲ ಅರಬಿ ಭಾಷೆ ಮಾತ್ರ ತಿಳಿದಿರುವ ಇವರಿಂದ ಇಲ್ಲಿನ ಜನರು ಇಸ್ಲಾಮನ್ನು ಹೇಗೆ ಕಲಿತುಕೊಂಡರು? ಅವರು ಇಲ್ಲಿ ಬಂದು ಗಂಟೆಗಟ್ಟಲೆ ಭಾಷಣ ಮಾಡಲಿಲ್ಲ,ಪುಟಗಟ್ಟಲೆ ಲೇಖನಗಳನ್ನು ಬರೆಯಲಿಲ್ಲ. ಇಂದು ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಮಾಧ್ಯಮಗಳನ್ನು ಬಳಸಿಕೊಳ್ಳಲಿಲ್ಲ. ಹಾಗಾದರೆ ಜನರು ಹೇಗೆ ಸತ್ಯಧರ್ಮಕ್ಕೆ ಆಗಮಿಸಿದರು? ಅವರ ವರ್ತನೆಯಿಂದಲೂ ಸ್ವಭಾವದಿಂದಲೂ ಜನರು ಸತ್ಯವನ್ನು ಅರಿತರು ಎಂಬುದು ಇತಿಹಾಸದತ್ತ ಕಣ್ಣೋಡಿಸಿದರೆ ಮನದಟ್ಟಾಗಬಹುದು. ಜನರ ಸಾಮಾನ್ಯ ಜೀವನ ಶೈಲಿಗಿಂತ ಭಿನ್ನವಾಗಿ ಅವರ ಜೀವನ ಶೈಲಿಯು ಗೋಚರವಾಯಿತು. ಅವರ ನಿಷ್ಕಳಂಕ ಪ್ರಾಮಾಣಿಕ ಜೀವ ಶೈಲಿಯು ಜನರನ್ನು ಆಕಷ್ರಿಸಿತು. ಇದು ಜನರಿಗೆ ಇಸ್ಲಾಮ್ ಸ್ವೀಕರಿಸಲು ಪ್ರೇರಕವಾಯಿತು.
ಖ್ಯಾತ ವಿದ್ವಾಂಸರೂ ಲೇಖಕರೂ ಆದ ಶೈಕ್ ಮುಹಮ್ಮದ್ ಹಸನ್ “ನಾಯಕತ್ವದ ಗೊಂದಲಗಳು ಮತ್ತು ಪರಿಹಾರ” ಎಂಬ ತನ್ನ ಗ್ರಂಥದಲ್ಲಿ ಈ ರೀತಿ ಬರೆಯುತ್ತಾರೆ. “ಅನುಯಾಯಿಗಳು ತಮ್ಮ ನಾಯಕರನ್ನು ಗೌರವದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಅವರು ನಾಯಕರಿಂದ ಬಯಸುವುದು ಉತ್ತಮ ಮಾದರಿಯನ್ನಾಗಿದೆ. ಚಿಂತನೆ, ಸ್ವಭಾವ,ವರ್ತನೆ ವೊದಲಾದವುಗಳಲ್ಲಿ ಮಾದರಿಯು ಅವರ ಬಯಕೆಯಾಗಿದೆ. ಆದರೆ ಜನರ   ಆಕಾಂಕ್ಷೆಗಳಿಗೆ ವಿರುದ್ಧವಾಗಿ ನಾಯಕರು ವರ್ತಿಸುವುದಾದರೆ ಜನರನ್ನು ನಿರಾಶೆಯು ಆವರಿಸುತ್ತದೆ. ಅದು ಕೆಲವರಲ್ಲಿ ನಿಷ್ಕ್ರಿಯತೆಯನ್ನು ಉಂಟು ಮಾಡಿದರೆ ಇನ್ನು ಕೆಲವರನ್ನು ಸಂಘಟನೆಯಿಂದಲೇ ದೂರ ಸರಿಸುತ್ತದೆ.”
ಓರ್ವ ಧರ್ಮ  ಪ್ರಚಾರಕನಿಗೆ ಹಲವಾರು ಒತ್ತಡಗಳು, ಸಮಸ್ಯೆಗಳು ಎದುರಾಗಬಹುದು. ಈ ರಂಗವು ಐಶಾರಾಮದ ರಂಗವಲ್ಲ. ಈ ರಂಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಖಂಡಿತವಾಗಿಯೂ ಲಭಿಸುತ್ತದೆ. ಧರ್ಮ  ಪ್ರಚಾರದ ರಂಗದಲ್ಲಿ ಸಹನೆಯು ಅತಿ ಪ್ರಧಾನವಾಗಿದೆ. ಜನರನ್ನು ಧಮ್ರಕ್ಕೆ ಆಹ್ವಾನಿಸುವಾಗ ಅವರು ಬರುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಅಥವಾ ಅವರ ಕೆಡುಕುಗಳಲ್ಲಿ ತಾವು ಕೂಡಾ ಭಾಗಿಯಾಗುವಂತಿಲ್ಲ. ಇಂದು ಜನರನ್ನು ಕೆಡುಕುಗಳಿಂದ ತಡೆಯಲು ಪ್ರಯತ್ನಿಸಿ ಅವರು ಅದರಿಂದ ಹಿಂದೆ ಸರಿಯದಿದ್ದರೆ ತಡೆದವರು ನಿರಾಶರಾಗಿ ಆ ಜನರೊಂದಿಗೆ ಸೇರಿಕೊಳ್ಳುವ ಘಟನೆಗಳು ನಡೆಯುತ್ತಿವೆ. ಆದರೆ ಇದು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಂತಹ ಕೆಲಸವಾಗಿದೆ.
ಪ್ರವಾದಿಯವರು(ಸ) ಹೇಳಿದರು, “ಇಸ್ರಾಈಲ್ ಸಂತತಿಗಳು ದೇವಧಿಕ್ಕಾರ ಪ್ರದರ್ಶಿಸಲು ಪ್ರಾರಂಭಿಸಿದಾಗ ಅವರ ವಿದ್ವಾಂಸರು ಅವರನ್ನು ಅದರಿಂದ ತಡೆದರು. ಆದರೆ ಜನರು ಅದರಿಂದ ಹಿಂದೆ ಸರಿಯಲಿಲ್ಲ. ಆಗ ಆ ವಿದ್ವಾಂಸರು ಅವರ ವೇದಿಕೆಗಳಲ್ಲಿ ಕುಳಿತುಕೊಳ್ಳ ತೊಡಗಿದರು ಮತ್ತು ಅವರೊಂದಿಗೆ ತಿನ್ನಲು, ಕುಡಿಯಲು ಪ್ರಾರಂಭಿಸಿದರು. ಆದ್ದರಿಂದ ಅಲ್ಲಾಹನು ಅವರೆಲ್ಲರ ಹೃದಯಗಳನ್ನು ಕಲ್ಲಾಗಿಸಿದನು. ಬಳಿಕ ದಾವೂದ್(ಅ) ಮತ್ತು ಈಸಾರ(ಅ) ನಾಲಗೆಯಿಂದ ಅವರನ್ನು ಶಪಿಸಿದನು. ಅವರು ತಪ್ಪೆಸಗಿದ ಹಾಗೂ ಅಲ್ಲಾಹನ ಆಜ್ನೋಲ್ಲಂಘನೆ ಮಾಡಿದುದರ ಪರಿಣಾಮವಾಗಿ ಈ ಶಾಪವು ಅವರ ಮೇಲೆರಗಿತು. (ವರದಿಗಾರರು ಹೇಳುತ್ತಾರೆ) ಆಗ ಪ್ರವಾದಿಯವರು(ಸ) ಒರಗಿ ಕುಳಿತಿದ್ದರು. ಅವರು ನೇರವಾಗಿ ಕುಳಿತು ಹೇಳಿದರು. “ನನ್ನ ಆತ್ಮವು ಯಾರ ಕೈಯಲ್ಲಿರುವುದೋ ಅವನಾಣೆ! ಖಂಡಿತವಾಗಿಯೂ ನೀವು ಒಳಿತನ್ನು ಸಂಸ್ಥಾಪಿಸಬೇಕು ಮತ್ತು ಕೆಡುಕನ್ನು ವಿರೋಧಿಸಬೇಕು. ನೀವು ಅಕ್ರಮಿಯ ಕೈ ಹಿಡಿದು ಅವನನ್ನು ಸತ್ಯಕ್ಕೆ ಮುನ್ನಡೆಸಬೇಕು. ಇಲ್ಲದಿದ್ದರೆ ನಿಮ್ಮೆಲ್ಲರ ಹೃದಯಗಳನ್ನು ಅಲ್ಲಾಹನು ಕಲ್ಲಾಗಿಸುವನು. ಬಳಿಕ ಅಲ್ಲಾಹನು ಅವರನ್ನು ನಾಶಪಡಿಸಿದಂತೆ ನಿಮ್ಮನ್ನೂ ನಾಶ ಪಡಿಸುವನು.”
ಆದ್ದರಿಂದ ನಾವು ಧರ್ಮ  ಪ್ರಚಾರದ ರಂಗಕ್ಕಿಳಿಯುವಾಗ ನಾವು ನಮ್ಮನ್ನೇ ಸಂಸ್ಕರಿಸಿಕೊಳ್ಳಬೇಕು. ಆ ಬಳಿಕವೇ ಜನರಿಗೆ ಉಪದೇಶ ನೀಡಬೇಕು. ನಮ್ಮ ಜೀವನವು ಹೊಲಸಾಗಿ ಇತರರಿಗೆ ಮಾತ್ರ ಒಳಿತನ್ನು ಉಪದೇಶಿಸುವಂತಾಗಬಾರದು. ನಮ್ಮ ಧಮ್ರ ಪ್ರಚಾರ ಕಾರ್ಯಗಳಿಂದಾಗಿ ಜನರು ಸನ್ಮಾರ್ಗಕ್ಕೆ ಬರಬೇಕೇ ಹೊರತು ಅದರಿಂದ ವಿಮುಖರಾಗುವಂತಾಗಬಾರದು.

ಸೋಮವಾರ, ಏಪ್ರಿಲ್ 23, 2012

ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದರಾದೀತೇ?


ಕುರ್ಆನ್ ಮಾನವ ಕುಲದ ಮಾರ್ಗದರ್ಶನಕ್ಕೆ ಬಂದಂತಹ ಗ್ರಂಥವಾಗಿದೆ. ಕಷ್ಟ ಅನುಭವಿಸುವ ಮನುಷ್ಯರಿಗೆ ಸಾಂತ್ವನದ ಸೆಲೆಯಾಗಿ ಅಂತಿಮ ಪ್ರವಾದಿ ಮುಹಮ್ಮದರವರ(ಸ) ಮೂಲಕ ಅವತೀಣ್ರಗೊಂಡಿತು. ಕುರ್ಆನ್ ಮನುಷ್ಯರ ಎಲ್ಲಾ ಸಮಸ್ಯೆಗಳಿಗೆ ಬೆಳಕು ಚೆಲ್ಲಿದೆ. ಕುರ್ಆನ್ ಕೇವಲ ಮುಸ್ಲಿಮರಿಗಾಗಿ ಅವತೀಣ್ರಗೊಂಡ ಗ್ರಂಥವಲ್ಲ. ಅದು ಸಕಲ ಮಾನವ ಕೋಟಿಗೆ ಮಾರ್ಗದರ್ಶಿಯಾಗಿದೆ. ಕುರ್ಆನ್ ಪಾರಾಯಣ ಮಾಡುವಾಗ ಅದರ ಪ್ರತೀ ಅಕ್ಷರಕ್ಕೂ ಪ್ರತಿಫಲವಿದೆ. ಕುರ್ಆನನ್ನು ಕಲಿತು ಅದರ ಪ್ರಕಾರ ಜೀವನವನ್ನು ಸಂಸ್ಕರಿಸಿಕೊಂಡವರಿಗೆ ನಾಳೆ ಪರಲೋಕದಲ್ಲಿ ಶ್ರೇಷ್ಠ ಪ್ರತಿಫಲವಿದೆ.
ಅಲ್ಲಾಹನ ವಚನಗಳಾದ ಈ ಕುರ್ಆನನ್ನು ಸೂಕ್ತ ರೀತಿಯಲ್ಲಿ ಗೌರವಿಸುವುದು ಕುರ್ಆನಿನೊಂದಿಗಿನ ವಿಶ್ವಾಸಿಗಳ ಪ್ರಥಮ ಹೊಣೆಗಾರಿಕೆಯಾಗಿದೆ. ಆ ಕುರ್ಆನನ್ನು ಓದುವುದು ಮತ್ತು ಅದನ್ನು ಇತರರಿಗೆ ಕಲಿಸುವುದು ಪ್ರತಿಫಲಾಹ್ರ ಕಮ್ರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ನಿಮ್ಮಲ್ಲಿ ಅತ್ಯಂತ ಶ್ರೇಷ್ಠರು ಕುರ್ಆನನ್ನು ಕಲಿಯುವವರು ಮತ್ತು ಅದನ್ನು ಇತರರಿಗೆ ಕಲಿಸುವವರಾಗಿದ್ದಾರೆ.” ಅಬೂ ಹುರೈರ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ. “ಯಾರಾದರೂ ಅಲ್ಲಾಹನ ಭವನದಲ್ಲಿ ಒಟ್ಟು ಸೇರಿ ದೈವಿಕ ಗ್ರಂಥವನ್ನು ಪಾರಾಯಣ ಮಾಡಿ  ಚರ್ಚೆ ನಡೆಸಿ ಅಧ್ಯಯನ ನಡೆಸಿದರೆ ಅವರ ಮೇಲೆ ಅಲ್ಲಾಹನ ಕರುಣೆ ಮತ್ತು ಶಾಂತಿಯುವರ್ಷಿಸುವುದು. ಮಲಕ್ ಗಳು  ಅವರನ್ನು ಸುತ್ತುವರಿದಿರುವರು. ಅಲ್ಲಾಹನು ತನ್ನ ಬಳಿ ಇರುವವರೊಂದಿಗೆ ಅವರ ಕುರಿತು ಹೊಗಳುವನು.” ಅದೇ ರೀತಿ ಕುರ್ಆನ್ ಪಾರಾಯಣ ನಡೆಸಲ್ಪಡುವ ಮನೆಗಳಲ್ಲಿ ಅಲ್ಲಾಹನ ಅನುಗ್ರಹಗಳು ತುಂಬುತ್ತವೆ ಮತ್ತು ಪಿಶಾಚಿಗಳು ಅಲ್ಲಿಂದ ಓಡಿ ಹೋಗುತ್ತವೆ ಎಂದು ಬುಖಾರಿ, ಮುಸ್ಲಿಮ್ ಹದೀಸ್ ಗ್ರಂಥಗಳಲ್ಲಿ ಬಂದಿದೆ.
ಕುರ್ಆನ್ ಪಾರಾಯಣದಂತೆ ಅದನ್ನು ಕಂಠಪಾಠ ಮಾಡುವುದು ಸಹ ಶ್ರೇಷ್ಠ ಹಾಗೂ ಪುಣ್ಯದಾಯಕ ಕೆಲಸವಾಗಿದೆ. ಹೃದಯದಲ್ಲಿ ಅಲ್ಪವಾದರೂ ಕುರ್ಆನ್ ಇಲ್ಲದವರನ್ನು ಪ್ರವಾದಿಯವರು(ಸ) ಧ್ವಂಸಗೊಂಡ ಜನವಾಸವಿಲದ ಮನೆಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು. “ಕುರ್ಆನಿನ ಯಾವುದೇ ಅಂಶವು ಹೃದಯದಲ್ಲಿಲ್ಲ್ಲದವರು ಶೂನ್ಯವಾದ ಭವನಕ್ಕೆ ಸಮಾನವಾಗಿದ್ದಾರೆ.” ಜನವಾಸವಲ್ಲದ ಶೂನ್ಯ ಭವನವು ಕಸಕಡ್ಡಿ, ಧೂಳಿನಿಂದ ತುಂಬಿರುತ್ತದೆ. ಅಲ್ಲಿ ಸ್ವಚ್ಛತೆ ಇರುವುದಿಲ್ಲ. ಹಲವು ಜಂತುಗಳು ಅಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ಹೃದಯದಲ್ಲಿ ಕೂಡಾ ಕುರ್ಆನ್ ಇಲ್ಲದಿದ್ದರೆ ಕೆಡುಕುಗಳು ಮನೆಮಾಡಿಕೊಳ್ಳುತ್ತವೆ. ಅವನ ಜೀವನವೇ ನೆಮ್ಮದಿ ರಹಿತವಾಗುತ್ತದೆ. ಆದ್ದರಿಂದ ಕುರ್ಆನನ್ನು ಹೃದ್ಯಸ್ತಗೊಳಿಸಬೇಕು. ಅನಸ್ ಬಿನ್ ಮಾಲಿಕ್(ರ) ವರದಿ ಮಾಡುತ್ತಾರೆ, ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನಿಗೆ ಪ್ರೀತಿ ಪಾತ್ರರಾದ ಕೆಲವರಿದ್ದಾರೆ.” ಆಗ ಸಹಾಬಿಗಳು ಕೇಳಿದರು, “ಪ್ರವಾದಿಯವರೇ(ಅ) ಅವರು ಯಾರು?” ಆಗ ಪ್ರವಾದಿಯವರು(ಸ) ಹೇಳಿದರು, “ಅವರು ಕುರ್ಆನಿನವರಾಗಿದ್ದಾರೆ. ಅಲ್ಲಾಹನು ಪ್ರತ್ಯೇಕ ಪರಿಗಣನೆ ನೀಡುವುದು ಅವರಿಗಾಗಿದೆ.”
ಕುರ್ಆನನ್ನು ಕೇವಲ ಪಾರಾಯಣ ಮಾಡಿದರೆ ಸಾಲದು. ನಿಯಮ ನಿದ್ರೇಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುರ್ಆನ್ ನೀಡಿರುವ ಆಜ್ಞೆಗಳು, ಆದೇಶಗಳು, ಸಲಹೆಗಳು ಕೇವಲ ಅದರ ಹಾಳೆಗಳಿಗೆ ಮಾತ್ರ ಸೀಮಿತವಾಗಬಾರದು. ಪ್ರವಾದಿಯವರ(ಸ) ಕಾಲದಲ್ಲಿ ಸಹಾಬಿಗಳು ಕುರ್ಆನಿನ ಸೂಕ್ತಗಳನ್ನು ಕಲಿತಾಗ ಅದನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದಿನ ಸೂಕ್ತವನ್ನು ಕಲಿಯುತ್ತಿದ್ದರು. ಆದ್ದರಿಂದಲೇ ಅವರ ಜೀವನವು ಕುರ್ಆನಿನ ಪ್ರಕಾರವಾಗಿತ್ತು. ಅಬ್ದುಲ್ಲಾ ಬಿನ್ ಮಸ್ಊದ್(ರ) ವರದಿ ಮಾಡಿದ್ದಾರೆ. “ನಾವು ಪ್ರವಾದಿವಯವರಿಂದ(ಸ) 10 ಸೂಕ್ತಗಳನ್ನು ಕಲಿತು ಅದರಲ್ಲಿರುವ ಕಮ್ರಗಳನ್ನು ಜೀವನದಲ್ಲಿ ಅಳವಡಿಸಿದ ಬಳಿಕ ಮುಂದೆ ಅವತೀಣ್ರಗೊಳ್ಳುವ ಹತ್ತು ಸೂಕ್ತಗಳನ್ನು ಕಲಿಯುತ್ತಿದ್ದೇವು.” ಇನ್ನೊಮ್ಮೆ ಅವರು ಹೀಗೆ ಹೇಳಿದರು, “ಕುರ್ಆನ್ ಅವತೀಣ್ರಗೊಂಡಿರುವುದು ಜನರು ಅದರನುಸಾರ ಜೀವಿಸುವುದಕ್ಕಾಗಿದೆ. ಆದರೆ ಜನರು ಅದರ ಪಾರಾಯಣವನ್ನೇ ಒಂದು ಕೆಲಸವಾಗಿ ಸ್ವೀಕರಿಸಿದ್ದಾರೆ. ನೀವು ಕುರ್ಆನನ್ನು ಒಂದು ಅಕ್ಷರವೂ ತಪ್ಪಿಲ್ಲದೆ ಪೂರ್ತಿಯಾಗಿ ಓದಿ ಮುಗಿಸುತ್ತೀರಿ. ಆದರೆ ಅದಕ್ಕನುಸಾರವಾಗಿ ಜೀವಿಸಲು ತಯಾರಾಗುತ್ತಿಲ್ಲ.”
ಇದೊಂದು ವಾಸ್ತವಿಕತೆಯಾಗಿದೆ. ಇಂದು ಕುರ್ಆನ್ ಪಾರಾಯಣವನ್ನು ಒಂದು ಕಸುಬಾಗಿ ಸ್ವೀಕರಿಸಿದವರಿದ್ದಾರೆ. ಮರಣ ಹೊಂದಿದ ಶ್ರೀಮಂತರ ಗೋರಿಯ ಮೇಲೆ ನಿರಂತರವಾಗಿ ಹಲವು ದಿನಗಳ ವರಗೆ ಕುರ್ಅನ್ ಪಾರಾಯಣ ಮಾಡಿಸಲಾಗುತ್ತದೆ. ಇಂತಹ ಪಾರಾಯಣಕ್ಕಾಗಿಯೇ ಕಾದು ನಿಂತ ಹಲವರಿದ್ದಾರೆ. ಇವರ ಕಸುಬು ಕುರ್ಆನ್ ಪಾರಾಯಣವಾಗಿರುತ್ತದೆ. ಹೀಗೆ ಕುರ್ಆನ್ ಪಾರಾಯಣ ನಡೆಸಿ ಐಹಿಕ ಪ್ರತಿಫಲ ಲಭಿಸಬಹುದೇ ಹೊರತು ಪರಲೋಕದಲ್ಲಿ ಪ್ರತಿಫಲವು ಶೂನ್ಯವಾಗಿರುತ್ತದೆ.
ಕುರ್ಆನ್ ಸ್ವತಃ ಕಲಿತು ಇತರರನ್ನು ಕಲಿಯಲು ಪ್ರೇರೇಪಿಸಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಕೇವಲ ಐಹಿಕ ಲಾಭಕ್ಕಾಗಿ ಶಿಕ್ಷಣ ನೀಡಬಾರದು. ಧಾಮ್ರಿಕ ಮಹತ್ವ ನೀಡಬೇಕು. ಧಾಮ್ರಿಕತೆಯ ಗಂಧಗಾಳಿಯೂ ಸೋಕದೆ ಕೇವಲ ಭೌತಿಕ ಶಿಕ್ಷಣ ಪಡೆದವರ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಧಾಮ್ರಿಕ ಶಿಕ್ಷಣದ ಅನಿವಾಯ್ರತೆಯು ಮನದಟ್ಟಾಗಬಹುದು. ಇಂದು ವೈದ್ಯನು ರೋಗಿಗಳ ಕಿಡ್ನಿ ತೆಗೆದು ವ್ಯಾಪಾರ ಮಾಡುವ ಘಟನೆಗಳು ನಡೆಯುತ್ತವೆ. ಅಧ್ಯಾಪಕನು ವಿದ್ಯಾಥ್ರಿನಿಯರಿಗೆ ಶಾರೀರಿಕ ಕಿರುಕುಳ ನೀಡುವ ಕೃತ್ಯಗಳು ನಡೆಯುತ್ತವೆ. ವಿದ್ಯಾವಂತರಾಗಿ ದೊಡ್ಡ ದೊಡ್ಡ ನೌಕರಿಯಲ್ಲಿರುವವರು ತಮ್ಮ ಮುದಿ ತಂದೆ-ತಾಯಿಗಳನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇವೆಲ್ಲವೂ ನಡೆಯುತ್ತಿರುವುದು ಧಾಮ್ರಿಕ ಪ್ರಜ್ಞೆಯ ಕೊರತೆಯಿಂದಾಗಿದೆ. ಧಾಮ್ರಿಕ ಶಿಕ್ಷಣದ ಬಲವಿಲ್ಲದೆ ಕೇವಲ ಭೌತಿಕ ಶಿಕ್ಷಣವನ್ನು ಪಡೆದುದರ ಫಲವಾಗಿದೆ.
ಹೆತ್ತವರು ತಮ್ಮ ಮಕ್ಕಳಿಗೆ ಕುರ್ಆನನ್ನು ಕಲಿಸಬೇಕು. ಅದರ ಪ್ರಕಾರ ಜೀವಿಸಲು ಪ್ರಾಯೋಗಿಕವಾಗಿ ತೋರಿಸಬೇಕು. ಮಕ್ಕಳು ಕುರ್ಆನ್ ಕಲಿತರೆ ಅದರ ಪ್ರತಿಫಲವು ಕೇವಲ ಮಕ್ಕಳಿಗೆ ಮಾತ್ರ ಸಿಗುವುದಲ್ಲ. ಬದಲಾಗಿ ಹೆತ್ತವರಿಗೂ ಸಿಗುತ್ತದೆ. ಬುರೈದಾ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಓರ್ವ ನು ಕುರ್ಆನನ್ನು ಓದಿ ಕಲಿತು ಅದರನುಸಾರ ಜೀವನ ನಡೆಸಿದರೆ ಅಂತ್ಯದಿನದಲ್ಲಿ ಸೂರ್ಯ ನಂತೆ ಪ್ರಕಾಶಿಸುವ ಒಂದು ಕಿರೀಟವನ್ನು ಅವನಿಗೆ ತೊಡಿಸಲಾಗುವುದು. ಅವನ ಹೆತ್ತವರಿಗೆ ಎರಡು ಜೋಡಿ ವಸ್ತ್ರವನ್ನು ತೊಡಿಸಲಾಗುವುದು. ಐಹಿಕ ಲೋಕವನ್ನು ಪೂರ್ತಿಯಾಗಿ ತೆಗೆದರೂ ಅವುಗಳಿಗೆ ಸಮಾನವಾಗಲಿಕ್ಕಿಲ್ಲ. ಆಗ ಅವರು ಕೇಳುವರು. “ನಮಗೆ ಈ ವಸ್ತ್ರವನ್ನು ಯಾಕೆ ತೊಡಿಸಲಾಯಿತು.” ಆಗ ಅವರಲ್ಲಿ ಹೇಳಲಾಗುವುದು. “ನಿಮ್ಮ ಮಕ್ಕಳು ಕುರ್ಆನ್ ಕಲಿತ ಕಾರಣದಿಂದ.”
ಅನಸ್ ಬಿನ್ ಮಾಲಿಕ್(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನ ಹೀಗಿದೆ. ಪ್ರವಾದಿಯವರು(ಸ) ಹೇಳಿದರು, “ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಓದಲು ಕಲಿಸಿದರೆ ಅವನ ಕಳೆದ ಹಾಗೂ ಬರಲಿಕ್ಕಿರುವ ಎಲ್ಲಾ ಪಾಪಗಳ್ನು ಅಲ್ಲಾಹನು ಕ್ಷಮಿಸುವನು. ಇನ್ನು ಓವ್ರನು ತನ್ನ ಮಕ್ಕಳಿಗೆ ಕುರ್ಆನನ್ನು ಕಂಠಪಾಠ ಮಾಡಿಸುವುದಾದರೆ ಅಂತ್ಯದಿನದಲ್ಲಿ ಅವನನ್ನು ಹುಣ್ಣಿಮೆ ಚಂದ್ರನಂತೆ ಎಬ್ಬಿಸಲಾಗುತ್ತದೆ. ಬಳಿಕ ಅವನ ಮಗನೊಂದಿಗೆ ಹೇಳಲಾಗುವುದು. “ನೀನು ಕುರ್ಆನ್ ಪಾರಾಯಣ ಮಾಡು.” ಪ್ರತೀ ಸೂಕ್ತವು ಓದಿದಂತೆ ಆ ತಂದೆಯ ಪದವಿಯನ್ನು ಉನ್ನತಿಗೇರಿಸುತ್ತಿರುವನು. ಹಾಗೆ ಅವನು ಕುರ್ಆನನ್ನು ಪೂರ್ತಿಯಾಗಿ ಪಾರಾಯಣ ಮಾಡುವವರೆಗೆ ಅದು ಮುಂದುವರಿಯುವುದು.
ಅಲ್ಲಾಹನು ಇಷ್ಟೆಲ್ಲಾ ಅನುಗ್ರಹಗಳನ್ನು ವಿೂಸಲಿಟ್ಟಿರುವಾಗ ಇಂದು ಕುರ್ಆನಿನ ಕುರಿತು ಅನಾಸ್ಥೆ ತೋರಲಾಗುತ್ತದೆ. ಐಹಿಕ ಜೀವನದ ಗಳಿಕೆಗಾಗಿರುವ ನಾಗಾಲೋಟದಲ್ಲಿ ಕುರ್ಆನ್ ಮೂಲೆಗುಂಪಾಗುತ್ತಿದೆ. ಎಲ್ಲರಿಗೂ ಮಾರ್ಗದರ್ಶಿಯಾಗಿರುವ ಕುರ್ಆನನ್ನು ಬದಿಗಿರಿಸಿ ಸ್ವಂತ ಇಚ್ಛೆಯಂತೆ ಮುಂದೆ ಸಾಗಿದರೆ ಅವನೆಂದೂ ಯಶಸ್ವಿಯಾಗಲಾರ. ಲೌಕಿಕತೆಯ ಬಿಸಿಲು ಕುದುರೆಯೇರಿ ಮುಂದುವರಿಯುವಾಗ ಕುರ್ಆನಿನ ಆಜ್ಞೆಗಳು, ಆದೇಶಗಳು, ಸಲಹೆಗಳು, ಉದ್ಬೋಧೆಗಳೆಲ್ಲಾ ಅವನಿಗೆ ವಿರುದ್ಧವಾಗಿ ಗೋಚರವಾಗುತ್ತದೆ. ಹಾಗೆ ಅವನು ಕುರ್ಆನಿನ ಸಹವಾಸವೇ ಬೇಡ ಎಂದು  ತೀರ್ಮಾನಿಸಿ  ಬಿಟ್ಟಿದ್ದಾನೆ.
ಹಿಂದೆಲ್ಲಾ ಮಗ್ರಿಬ್ನ ವೇಳೆಯಲ್ಲಿ ಎಲ್ಲಾ ಮನೆಗಳಿಂದಲು ಕುರ್ಆನ್ ಪಾರಾಯಣ ಕೇಳಿಬರುತ್ತಿತ್ತು. ಆದರೆ ಇಂದು ಆ ಸ್ಥಾನವನ್ನು ಟಿ.ವಿ. ಚಾನೆಲ್ಗಳ ಹಲವು ಧಾರಾವಾಹಿಗಳು ಆಕ್ರಮಿಸಿಕೊಂಡಿವೆ. ಧಾರಾವಾಹಿಗಳು ಆಕ್ರಮಿಸಿಕೊಂಡಿವೆ ಎಂದು ಹೇಳುವುದಕ್ಕಿಂತ ಅವುಗಳ ಮನೆಗೆ ಪ್ರವೇಶಿಸಲು ನಾವು ಸೌಕರ್ಯ  ಒದಗಿಸಿದ್ದೇವೆ ಎಂದು ಹೇಳುವುದೇ ಸೂಕ್ತವಾಗಿರುತ್ತದೆ.
ಮಹಾ ಕವಿ ಅಲ್ಲಾಮಾ ಇಕ್ಬಾಲ್ ಹಾಡಿದರು “ಒಂದು ಕಾಲದಲ್ಲಿ ನಾವು ಮುಸ್ಲಿಮರು ಎಂದು ಹೇಳಿ ಹೆಮ್ಮೆ ಪಟ್ಟು ಕೊಳ್ಳುತ್ತಿದ್ದೇವು. ಆದರೆ ಇಂದು ನಾವು ಕುರ್ಆನನ್ನು ಉಪೇಕ್ಷಿಸಿ ಎಲ್ಲರ ಮುಂದೆ ನಿಕೃಷ್ಟರಾಗಿದ್ದೇವೆ.” ಇದು ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವೆನಿಸಿರುವ ಅಲ್ಲಾಮಾ ಇಕ್ಬಾಲ್ರ ದೂರ ದೃಷ್ಟಿಯ ಫಲಶ್ರುತಿಯಾಗಿದೆ. ಇಂದು ನಾವು ಕುರ್ಆನನನ್ನು ಬದಿಗಿರಿಸಿರುವುದರಿಂದ ಇತರರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದೊದಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಪರಾಧ ಕೃತ್ಯಗಳ ಕಡೆಗೆ ಕಣ್ಣೋಡಿಸಿದರೆ ಅದರ ಭೀಕರತೆಯು ತಿಳಿದು ಬರುತ್ತದೆ. ಕನ್ನಡಕವನ್ನು ಕಣ್ಣಲ್ಲಿಟ್ಟು ಹುಡುಕಿದಂತೆ ಇಂದು ನಾವು ಕುರ್ಆನನ್ನು ಕೈಯಲ್ಲಿಡಿದು ಪರಿಹಾರಕ್ಕಾಗಿ ಹುಡುಕುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಕುರ್ಆನ್ ನಿದ್ರೇಶಿಸಿರುವ ಮಾಗ್ರವನ್ನು ವಿೂರಿ ಅಡ್ಡ ಮಾಗ್ರವನ್ನು ಹಿಡಿಯುತ್ತಿದ್ದೇವೆ. ಮನಃಶಾಂತಿಗಾಗಿ ಹಲವು ನಕಲಿ ಬಾಬಾಗಳ ಹಾಗೂ ಅವರು ನೀಡುವ ತಾಯಿತಗಳ ವೊರೆಹೋಗುತ್ತಿದ್ದೇವೆ. ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಉಗುಳಿದ ನೀರಿಗೆ ಮುಗಿಬೀಳುವಾಗ ಹರಾಜಾಗುತ್ತಿರುವುದು ಇಸ್ಲಾಮಿನ ಮಾನವಾಗಿದೆ ಎಂಬ ಸಾಮಾನ್ಯ ಪ್ರಜ್ಞೆ ಯು ನಮ್ಮಲ್ಲಿ ಜಾಗೃತವಾಗಿರಬೇಕು.
ಎಲ್ಲದರಲ್ಲ್ಲೂ ಶ್ರೇಷ್ಠವಾಗಿರುವ ಕುರ್ಆನ್ ನಮ್ಮ ಕೈಯಲ್ಲಿರುವಾಗ ಆಧುನಿಕತೆಯ ಅನಾಚಾರಗಳಿಗೂ ಮೂಢನಂಬಿಕೆಗಳಿಗೂ ಕೊಚ್ಚಿ ಹೋಗಬಾರದು. ನಮ್ಮ ಆದಶ್ರಗಳನ್ನು ಇತರರ ಮುಂದೆ ಪಣಕ್ಕಿಟ್ಟು ಅತ್ಯಂತ ನಿಕೃಷ್ಟರಾಗಿ ಬಾಳಬಾರದು. ಕುರ್ಆನಿನ ಪ್ರಕಾರ ಪ್ರವಾದಿಯವರು(ಸ) ಜೀವಿಸಿ ತೋರಿಸಿದ ಪ್ರಕಾರ ಜೀವಿಸಿ ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವಂತಾಗಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಏಪ್ರಿಲ್ 16, 2012

ಅವರು ಶರಬತ್ತಿನಂತೆ ಸಲೀಸಾಗಿ ಕುಡಿಯುತ್ತಾರೆ.


3 ರಂಗಗಳಿಗೆ ಸಂಬಂಧಿಸಿದ ಕೆಡುಕುಗಳ ಕುರಿತು ಪ್ರವಾದಿಯವರು(ಸ) ಹೇಳಿದರು, “ನಿನ್ನ ಅಂಗಾಗಳನ್ನು ಕಡಿದರೂ, ನಿನ್ನನ್ನು ಬೆಂಕಿಯಲ್ಲಿ ಸುಟ್ಟರೂ ನೀನು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿ ಮಾಡಬಾರದು. ನೀನು ಕಡ್ಡಾಯ ನಮಾಝನ್ನು ಮನಃ ಪೂರ್ವಕವಾಗಿ ಉಪೇಕ್ಷಿಸಬಾರದು. ಮನಃ ಪೂರ್ವಕವಾಗಿ ಉಪೇಕ್ಷಿಸಿದರೆ ನಾನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರಬರುವೆ. ನೀನು ಮದ್ಯಪಾನ ಮಾಡಬಾರದು. ಕಾರಣ ಅದು ಎಲ್ಲಾ ಕೆಡುಕುಗಳ ಕೀಲಿ ಕೈಯಾಗಿದೆ.”
ಇಲ್ಲಿ ಪ್ರವಾದಿಯವರು(ಸ) ನಂಬಿಕೆ, ಆರಾಧನೆ ಮತ್ತು 
ಸಂಸ್ಕ್ರತಿಗೆ  ಸಂಬಂಧಿಸಿದ ಮೂರು ಕೆಡುಕುಗಳ ಕುರಿತು ಪ್ರಸ್ತಾಪಿಸಿದ್ದಾರೆ. ಏಕದೇವ ವಿಶ್ವಾಸವು ವಿಶ್ವಾಸ ಕರ್ಮಗಳ ಪೈಕಿ ಪ್ರಥಮವಾದುದಾಗಿದೆ. ಧರ್ಮ  ಬುನಾದಿಯಲ್ಲಿಯೂ ಪ್ರಥಮವಾದುದಾಗಿದೆ. ಅಲ್ಲಾಹನ ಶಕ್ತಿ ಸಾಮಥ್ಯ್ರವನ್ನೂ ಸ್ಥಾನವನ್ನೂ ಇತರರಿಗೆ ಕಲ್ಪಿಸದಿರುವುದು ಏಕದೇವ ವಿಶ್ವಾಸದ ಬೇಡಿಕೆಯಾಗಿದೆ. ಇದನ್ನು ಅರಿತೂ ಕೂಡಾ ಮಾತು, ಕೃತಿಗಳ ಮೂಲಕ ಆ ರೀತಿ ಮಾಡುವುದು ಮಹಾ ಪಾಪವಾಗಿದೆ. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸಬಹುದು. ಆದರೆ ಅವನಿಗೆ ಸಹಭಾಗಿಗಳನ್ನಾಗಿ ಮಾಡುವ ಈ ದುಷ್ಟ ಕೃತ್ಯವನ್ನು ಅವನು ಎಂದಿಗೂ ಕ್ಷಮಿಸಲಾರ. ಇದನ್ನು ಸ್ವತಃ ಅಲ್ಲಾಹನೇ ಸ್ಪಷ್ಟ ಪಡಿಸಿದಾನೆ.
“ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು.” (ಅನ್ನಿಸಾ: 48)
ಶಿರ್ಕನ್ನು(ಬಹುದೇವಾರಾಧನೆ ) ಇಸ್ಲಾಮ್ ನಖಶಿಖಾಂತ ವಿರೋಧಿಸಿದೆ. ಶಿರ್ಕ್ ಆಹ್ವಾನವೀಯುವ ಎಲ್ಲಾ ಬಾಗಿಲುಗಳನ್ನೂ ಅದು ಮುಚ್ಚಿದೆ. ತೋರಿಕೆಗಾಗಿ ಮಾಡುವ ಕಮ್ರಗಳನ್ನು ಪ್ರವಾದಿಯವರು(ಸ) ಅತ್ಯಂತ ಸಣ್ಣ  ಶಿರ್ಕ್  ಎಂದಿದ್ದಾರೆ. ಒಳಿತುಗಳೆಲ್ಲವೂ ಅಲ್ಲಾಹನಿಗಾಗಿ ನಿರ್ವಹಿಸಬೇಕಾದದ್ದಾಗಿದೆ. ಅಲ್ಲಾಹನಿಗಾಗಿ ನಿರ್ವ ಹಿಸಬೇಕಾದ ಕರ್ಮಗಳನ್ನು ಇತರರು ಕಾಣಲಿ ಎಂಬ ಉದ್ದೇಶದಿಂದ ನಿರ್ವಹಿಸುವಾಗ ಅವು ತನ್ನ ಗುರಿಯನ್ನು ಕಳಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಕಮ್ರಗಳನ್ನೆಸಗುವವರು ಅಲ್ಲಾಹನನ್ನು ಮರೆತು ನೋಡುಗರನ್ನು ಮಾತ್ರ ಪರಿಗಣಿಸುತ್ತಾರೆ. ಆಗ ಸ್ವಾಭಾವಿಕವಾಗಿ ಕರ್ಮಗಳೂ ಕೂಡಾ ಇತರರಿಗಾಗಿ ನಿವ್ರಹಿಸಿದಂತಾಗುತ್ತದೆ. ಆದ್ದರಿಂದ ಈ ತೋರಿಕೆಗಾಗಿ ಮಾಡುವ ಕರ್ಮಗಳು  ಶಿರ್ಕ್ ಗೆ ಕೊಂಡೊಯ್ಯುವುದರಿಂದ ಪ್ರವಾದಿಯವರು(ಸ) ಅದನ್ನು ವಿರೋಧಿಸಿದ್ದಾರೆ.
ಯಾವುದೇ ಸಂದ
ರ್ಭದಲ್ಲಿ ಏಕದೇವ ವಿಶ್ವಾಸವನ್ನು ಕೈಬಿಡಬಾರದೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಇಂದು ಸಮಾಜದಲ್ಲಿ  ಶಿರ್ಕ್   ವ್ಯಾಪಕವಾಗುತ್ತಿದೆ. ಪುರೋಹಿತರೆಂದೆನಿಸಿಕೊಂಡವರು ತಮ್ಮ ಹೊಟ್ಟೆಪಾಡಿಗಾಗಿ ಅರಸಿಕೊಂಡಿರುವ ಕಸುಬು  ಶಿರ್ಕ್   ಆಗಿದೆ. “ನನ್ನೊಂದಿಗೆ ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ” ಎಂದು ಅಲ್ಲಾಹನು ಕುರ್ಆನಿನಲ್ಲಿ ಸ್ಪಷ್ಟವಾಗಿ ಹೇಳಿರುವಾಗ ಇತರರೊಂದಿಗೆ ಪ್ರಾರ್ಥಿಸಲು ಪ್ರೇರೇಪಿಸುವವರು, ಅದಕ್ಕಾಗಿ ವ್ಯವಸ್ಥೆ ಕಲ್ಪಿಸಿ ಕೊಡುವವರು ತಮ್ಮ ಕರ್ಮಗಳಿಗೆ ಲಭಿಸುವ ಪ್ರತಿಫಲವೇನು ಎಂಬುದನ್ನಾದರೂ ಯೋಚಿಸಬಾರದೇ? ಅಲ್ಲಾಹನು ಯಾವುದಾದರೂ ತೀಮ್ರಾನ ಕೈಗೊಳ್ಳುವಾಗ ಓರ್ವ ವಿದ್ವಾಂಸರಲ್ಲಿ ಕೇಳಿದ ಬಳಿಕವೇ ತೀರ್ಮಾನಿಸುತ್ತಾನೆ ಎಂದು ಈ ಸಮಾಜದಲ್ಲಿ ಪ್ರಚಾರ ಪಡಿಸಿದವರಿದ್ದಾರೆ. (ಮಆದಲ್ಲಾಹ್) ಇವರು ಮಕ್ಕಾದ ಮುಶ್ರಿಕರಿಗಿಂತಲೂ ಅಧಃಪತನ ಹೊಂದಿದವರಿದ್ದಾರೆ. ಕಾರಣ ಮಕ್ಕಾದ ಮುಶ್ರಿಕರು ಮಳೆ ಬರಿಸುವುದು ಯಾರೆಂದು ಕೇಳಿದರೆ `ಅಲ್ಲಾಹು’ ಎಂದು ಉತ್ತರಿಸುತ್ತಿದ್ದರು. ಆದರೆ ಇಂದಿನ ವಿದ್ವಾಂಸರೂ, ಪುರೋಹಿತರೂ ಆ ಸ್ಥಾನವನ್ನು ಮನುಷ್ಯರಿಗೆ ನೀಡಿದ್ದಾರೆ. ಅಲ್ಲಾಹನು  ಶಿರ್ಕ್ ನ್ನು ಒಮ್ಮೆಯೂ ಕ್ಷಮಿಸುವುದಿಲ್ಲ ಎಂದು ಕುರಾನ್ ಪದೇ ಪದೇ ಎಚ್ಚರಿಸಿದ್ದನ್ನು ಈ ಮಂದಿ ಕಂಡಿಲ್ಲವೇ?
ಎರಡನೆಯದಾಗಿ ಪ್ರವಾದಿಯವರು(ಸ) ಆರಾಧನೆಗೆ ಸಂಬಂಧಿಸಿದ ಕೆಡುಕೆಂದು ಹೇಳಿರುವುದು ನಮಾಝನ್ನು ಉಪೇಕ್ಷಿಸುವುದಾಗಿದೆ. ಅಲ್ಲಾಹನಿಗಿರುವ ಆರಾಧನಾ ಕರ್ಮಗಳ ಪೈಕಿ ಅತ್ಯಂತ ಮಹತ್ವವಾದ ಆರಾಧನೆ ನಮಾಝ್ ಆಗಿದೆ. ನಾಳೆ ಪರಲೋಕದಲ್ಲಿ ನಮಾಝಿನ ಕುರಿತು ಪ್ರಶ್ನಿಸಲ್ಪಡದೆ ಯಾವುದೇ ವ್ಯಕ್ತಿ ಒಂದು ಹೆಜ್ಜೆಯೂ ಮುಂದಿಡಲಾರ. ಪ್ರವಾದಿಯವರು(ಸ), “ನಮಾಝಿಲ್ಲದೆ ಧರ್ಮವಿಲ್ಲ. ಶರೀರದಲ್ಲಿ ತಲೆಗಿರುವ ಸ್ಥಾನವು ಧಮ್ರದಲ್ಲಿ ನಮಾಝಿಗಿದೆ” ಎಂದು ಹೇಳಿದ್ದಾರೆ.
ನಮಾಝನ್ನು ಉಪೇಕ್ಷಿಸುವುದು  ಶಿರ್ಕ್    ಹಾಗೂ ಕುಫ್ರ್ (
  ದೇವ ನಿಷೇಧ )  ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಪ್ರವಾದಿಯವರ(ಸ) ಕಾಲದಲ್ಲಿ ನಮಾಝ್ ನಿವ್ರಹಿಸದವರನ್ನು ಕಾಫಿರ್ಗಳೆಂಬ ರೀತಿಯಲ್ಲಿ ಜನರು ನೋಡುತ್ತಿದ್ದರು. “ಯಾರಾದರೂ ಮನಃಪೂರ್ವಕವಾಗಿ ಒಂದು ನಮಾಝನ್ನು ಉಪೇಕ್ಷಿಸಿದರೆ ಅವನು ಸ್ಪಷ್ಟವಾದ ಕುಫ್ರ್  ಎಸಗಿದನು” ಎಂದು ಪ್ರವಾದಿಯವರು(ಸ) ಎಚ್ಚರಿಸಿದ್ದಾರೆ. 
ನಮಾಝನ್ನು ಎಲ್ಲಾ ಸಂದಭ್ರಗಳಲ್ಲೂ ನಿವ್ರಹಿಸಲು ಪ್ರವಾದಿಯವರು(ಸ) ಹೇಳಿದ್ದಾರೆ. ಆದರೆ ಅದು ಸನ್ನಿವೇಶಗಳಿಗೆ ಅನುಗುಣವಾಗಿ ವಿವಿಧ ರೂಪದಲ್ಲಿರಬಹುದು. ಆದರೂ ನಮಾಝ್ ನಿವ್ರಹಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಮನಃಪೂರ್ವ ಕವಾಗಿ ನಮಾಝನ್ನು ಉಪೇಕ್ಷಿಸುವವನು ಅಲ್ಲಾಹನ ಹೊಣೆಗಾರಿಕೆಯಿಂದ ಹೊರದಬ್ಬಲ್ಪಡುತ್ತಾನೆ ಎಂದು ಪ್ರವಾದಿಯವರು(ಸ) ಬಹಳ ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾನೆ. ಇದರ ತಾತ್ಪಯ್ರವು ಅವನು ಧರ್ಮ ದಿಂದಲೂ ಮುಸ್ಲಿಮ್ ಸಮುದಾಯದಿಂದಲೂ ಹೊರ ಹೋಗುತ್ತಾನೆ ಎಂದಾಗಿದೆ. ಓರ್ವ  ಮುಸ್ಲಿಮನನ್ನು ಮತ್ತು ಕಾಫಿರನನ್ನು ಪ್ರತ್ಯೇಕಿಸುವುದು ಕೂಡಾ ನಮಾಝ್ ಆಗಿದೆ. ಇಂದು ನಮಾಝಿನ ಕುರಿತು ನಮ್ಮಲ್ಲಿ ಅನಾಸ್ಥೆ ಉಂಟಾಗಿದೆ. ಅಲ್ಲಾಹನಿಗಾಗಿ ನಮ್ಮ ಕೆಲವು ಕ್ಷಣಗಳನ್ನು
ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಸಮಯದ ಅಭಾವದಿಂದಲೋ ಅಹಂಕಾರದ ಪರಾಕಾಷ್ಟೆಯಿಂದಲೋ ನಮಾಝನ್ನು ಮೂರು ವೇಳೆಗಳಿಗೆ ಸೀಮಿತಗೊಳಿಸಿದವರೂ ಇದ್ದಾರೆ. ಆದ್ದರಿಂದ ನಾವು ಅಲ್ಲಾಹನಿಗಿರುವ ಸಮಯದ ವಿಷಯದಲ್ಲಿ ಜಿಪುಣರಾಗಿ  ಶಿರ್ಕ್ , ಕುಫ್ರ್ ಗೆ  ಬೀಳುವಂತಾಗಬಾರದು.
ಮೂರನೆಯದಾಗಿ ಪ್ರವಾದಿಯವರು(ಸ) ಸ್ವಭಾವ ಪರವಾದ ಕೆಡುಕಾಗಿ ಮದ್ಯಪಾನವನ್ನು ಪ್ರಸ್ತಾಪಿಸಿದ್ದಾರೆ. ಮದ್ಯಪಾನವು ಎಲ್ಲಾ ಕೆಡುಕುಗಳ ಮಾತೆಯಾಗಿದೆ. ಲಜ್ಜೆಯ ಸ್ವಭಾವ ಹೊಂದಿದವರು ಕೂಡಾ ಮದ್ಯಪಾನಿಗಳಾದಾಗ ನಿರ್ಲಜ್ಜೆಯಿಂದ ವತ್ರಿಸುತ್ತಾರೆ. ಮದ್ಯಪಾನವು ಎಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ. ಮದ್ಯಪಾನಿಗೆ ತಂದೆ-ತಾಯಿ, ಪತ್ನಿ, ಮಕ್ಕಳು ಯಾರೆಂದು ಗುರುತಿಸಲೂ ಸಾಧ್ಯವಾಗದೆ ಹಲವು ಪ್ರಮಾದಗಳನ್ನೆಸಗುತ್ತಾರೆ. ಇಂದು ಸಮಾಜದಲ್ಲಿ ಮದ್ಯಪಾನವು ವ್ಯಾಪಕವಾಗಿದೆ. ಹಿಂದೆಲ್ಲಾ ಕದ್ದು ಮುಚ್ಚಿ ಕುಡಿಯುತ್ತಿದ್ದರೂ ಇಂದು ಅದು ಶರಬತ್ತು ಕುಡಿದಂತೆ ಸಲೀಸಾಗಿ ಸಾ
ರ್ವಜನಿಕವಾಗಿ ಕುಡಿಯುತ್ತಾರೆ. ಯಾವುದೇ ಹಿತವಚನಗಳು ಮದ್ಯಪಾನಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ. ಇಂತಹ ಸಾಮಾಜಿಕ ಕೆಡುಕುಗಳು ವ್ಯಾಪಕವಾಗುವಾಗ ಅಲ್ಲಾಹನ ಶಿಕ್ಷೆಯು ಬಂದೆರಗಿದರೆ ಯಾವುದೇ ಆಶ್ಚರ್ಯವಿಲ್ಲ. ಇಂತಹ ಹಲವಾರು ಉದಾಹರಣೆಗಳು ಗತಕಾಲಗಳಲ್ಲಿ ಘಟಿಸಿವೆ. ಆದ್ದರಿಂದ ನಾವು ಇಂತಹ ಕೆಡುಕಗಳಿಂದ ದೂರ ನಿಲ್ಲಬೇಕಾಗಿದೆ. ಮಾತ್ರವಲ್ಲ, ಇತರರನ್ನೂ ಅವುಗಳಿಂದ ತಡೆಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ಅನುಗ್ರಹಿಸಲಿ.