ಮಂಗಳವಾರ, ಮಾರ್ಚ್ 06, 2012

ಮರಣ


ಮರಣ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ಎಲ್ಲರೂ ಮರಣದ ರುಚಿಯನ್ನು ಅನುಭವಿಸುವರು. ಜನಿಸಿದ ಪ್ರತೀ ಜೀವಕ್ಕೂ ಮರಣವಿದೆ. ಮರಣವನ್ನು ಬಯಸಿ ದರೂ ಬಯಸದಿದ್ದರೂ ಅದು ಬಂದೇ ಬರುತ್ತದೆ. ಅದು ಯಾರ ಅನುಮತಿಗೂ ಕಾಯುವುದಿಲ್ಲ. ಮರಣವು ಬರುವಾಗ “ನನಗೀಗ ಬರಲು ಪÅರುಸೊತ್ತಿಲ್ಲ. ಮುಂದಿನ ಬಾರಿ ನೋಡುವಾ” ಎಂದು ಸಾಗ ಹಾಕಿ ಕಳುಹಿಸಲು ಯಾವುದಾದರೂ ಆತ್ಮಕ್ಕೆ ಸಾಧ್ಯವಿದೆಯೇ?
ಅಲ್ಲಾಹನು ಪ್ರತಿಯೊಂದು ಆತ್ಮಕ್ಕೂ ಒಂದು ಅವಧಿಯನ್ನು ನಿಶ್ಚಯಿಸಿದ್ದಾನೆ. ಆ ಸಂದಭ್ರ ಬಂದೊದಗಿದಾಗ ಮರಣವು ಆವರಿಸಿಯೇ ತೀರುವುದು. ನಾವು ಯಾವ ಸ್ಥಿತಿಯಲ್ಲಿದ್ದರೂ ಸರಿ. ಅಲ್ಲಾಹನು ಹೇಳುತ್ತಾನೆ. “ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತವಿದೆ. ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ಅಥವಾ ಮುಂದೆ ಆಗುವುದಿಲ್ಲ.” (ಅಅïರಾಫ್- 34)
ಎಷ್ಟೇ ದೊಡ್ಡ ಅಕ್ರಮಿಯಾದರೂ ಮರಣದ ಮುಂದೆ ಕುಬ್ಜನಾಗುತ್ತಾನೆ. ತನ್ನ ಶಕ್ತಿ, ಸಾಮಥ್ಯ್ರ ದಿಂದ ಜಗತ್ತಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿದವರೂ ಅಕ್ರಮಗಳನ್ನೆಸಗಿದವರೂ ಮರಣ ಸಂಭವಿಸಿದರೆ ನಿಶ್ಚಲರಾಗುತ್ತಾರೆ. ದಷ್ಟ ಪÅಷ್ಟವಾದ ಅಂಗಸೌಷ್ಠ್ಯವವಿದ್ದರೂ ಮಣ್ಣಿನ ಹುಳಗಳಿಗೆ ಆಹುತಿಯಾಗುತ್ತಾರೆ. ಅಲ್ಲಾಹನು ಮಾಡಲು ಹೇಳಿರುವ, ಪ್ರವಾದಿಯವರು(ಸ) ಕಲಿಸಿರುವ ಕೆಲಸಗಳನ್ನು ಮರಣಕ್ಕಿಂತ ಮುಂಚೆಯೇ ಮಾಡ ಬೇಕು. ಮರಣ ಸವಿೂಪಿಸುವಾಗ ‘ನನಗೆ ಸ್ವಲ್ಪ ಒಳಿತುಗಳನ್ನು ಮಾಡಲಿಕ್ಕಿದೆ’ ಎಂದು ಮರಣ ದೊಂದಿಗೆ ಹೇಳಲು ಸಾಧ್ಯವೇ? ಇನ್ನು ಹಾಗೆ ಹೇಳಿದರೆ ಮರಣವು ಮರಳಿ ಹೋಗಬಹುದೇ?
ಮರಣದ ಸ್ಮರಣೆಯು ಓವ್ರನಲ್ಲಿ ಸದಾ ನೆಲೆಸಿದ್ದರೆ ಅವನ ಕಮ್ರಗಳು ಒಳಿತಿನಿಂದ ಕೂಡಿರುತ್ತವೆ. ಅವುಗಳು ಉತ್ತಮ ಪ್ರತಿಫಲಕ್ಕೆ ಅಹ್ರವಾದ ಕಮ್ರಗಳಾಗಿ ಮಾಪ್ರಡುತ್ತವೆ. ಪ್ರವಾದಿಯವರು(ಸ) ಹೇಳಿದರು, “ಸುಖಭೋಗಗಳ ಹಂತಕನಾದ ಮರಣವನ್ನು ನೀವು ಸದಾ ಸ್ಮರಿಸುತ್ತಿರಬೇಕು. ಸಂಕಷ್ಟದ ಸಂದಭ್ರದಲ್ಲಿ ಓವ್ರನು ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ವಿಶಾಲವಾಗಿ ತೋರುವುದು. ಸುಭಿಕ್ಷೆಯ ಸಂದಭ್ರದಲ್ಲಿ ಮರಣವನ್ನು ಸ್ಮರಿಸಿದರೆ ಜೀವನವು ಅವನಿಗೆ ಇಕ್ಕಟ್ಟಾಗಿ ತೋರುವುದು.” ಮರಣದ ಚಿಂತೆಯು ಮನಸ್ಸಿಗೆ ಬಂದರೆ ಅವನು ಸ್ವಂತ ಅಸ್ತಿತ್ವದ ಕುರಿತು ಪ್ರಜಾÕವಂತನಾಗುತ್ತಾನೆ. ಮರಣ ವನ್ನು ಮರೆತರೆ ಅವನು ತನ್ನನ್ನು ಮರೆಯುತ್ತಾನೆ.
ಇಂದು ಮನುಷ್ಯರಲ್ಲಿ ಮರಣದ ಕುರಿತು ಚಿಂತೆ ಇರುತ್ತಿದ್ದರೆ ಅಕ್ರಮ, ಅಶ್ಲೀಲತೆಗಳು ಕಡಿಮೆಯಾಗು ತ್ತಿದ್ದವು. ಮನುಷ್ಯರಲ್ಲಿ ಮರಣದ ಕುರಿತು ಭಯ ವಿಲ್ಲದಿರುವುದು ಇಂದು ನಡೆಯುತ್ತಿರುವ ಅನಥ್ರ ಗಳಿಗೆ ಕಾರಣವಾಗಿದೆ. ಮರಣ ಹೊಂದಿದವರನ್ನು ನೆನಪಿಸುವುದು ರೋಗಿಗಳನ್ನೂ ಮರಣಾಸನ್ನರನ್ನೂ ಶುಶ್ರೂಷೆ ಮಾಡುವುದು, ಗೋರಿಗಳನ್ನು ಸಂದಶ್ರಿಸು ವುದು ವೊದಲಾದವುಗಳನ್ನು ಮಾಡುವುದರಿಂದ ಮರಣದ ಕುರಿತೂ, ಪರಲೋಕದ ಕುರಿತೂ ಸ್ಮರಣೆ ಹೃದಯದಲ್ಲಿ ದೃಢವಾಗುತ್ತದೆ. ಪ್ರವಾದಿಯವರು(ಸ) ಹೇಳಿದರು, “ನೀನು ಗೋರಿ ಸಂದಶ್ರನ ನಡೆಸ ಬೇಕು. ಅದು ನಿನ್ನಲ್ಲಿ ಪರಲೋಕದ ಕುರಿತು ನೆನಪÅ ಹುಟ್ಟಿಸುತ್ತದೆ. ಮರಣ ಹೊಂದಿದವರನ್ನು ಸ್ನಾನ ಮಾಡಿಸಬೇಕು. ಜೀವವಿಲ್ಲದ ಶರೀರಕ್ಕೆ ಕಮ್ರಗಳನ್ನು ಮಾಡಿಸುವುದು ದೊಡ್ಡ ಉದ್ಬೋಧೆಯಾಗಿದೆ. ನೀನು ಮಯ್ಯತ್ ನಮಾಝ್ ನಿವ್ರಹಿಸಬೇಕು. ಅದು ನಿನ್ನನ್ನು ದುಃಖಕ್ಕೀಡು ಮಾಡಬಹುದು. ಆದರೆ ಅಂತ್ಯ ದಿನದಲ್ಲಿ ದುಃಖಿತನಿಗೆ ಅಲ್ಲಾಹನ ನೆರಳು ಲಭಿಸುತ್ತದೆ. ಸವ್ರ ಒಳಿತುಗಳನ್ನೂ ಅವನ ಮುಂದೆ ಪ್ರದಶ್ರನಕ್ಕಿಡಲಾಗುತ್ತದೆ.”
ಬರ್ರಾಅï ಬಿನ್ ಆಝಿಬ್ರಿಂದ(ರ) ವರದಿ ಯಾಗಿದೆ. “ನಾವು ಅಲ್ಲಾಹನ ಪ್ರವಾದಿಯವ ರೊಂದಿಗೆ(ಸ) ನಡೆಯುತ್ತಿದ್ದೆವು. ಆಗ ಜನರ ಗುಂಪೆÇಂದನ್ನು ನೋಡಿದೆವು. ಆಗ ಪ್ರವಾದಿ ಯವರು(ಸ) ಕೇಳಿದರು, “ಜನರೇಕೆ ಅಲ್ಲಿ ಗುಂಪÅ ಕೂಡಿದ್ದು” ಆಗ ಓವ್ರರು ಹೇಳಿದರು. ಅಲ್ಲಿ ಒಂದು ಗೋರಿ ತೋಡಲಾಗುತ್ತಿದೆ. ಇದನ್ನು ಕೇಳಿದ ಪ್ರವಾದಿಯವರು(ಸ) ವ್ಯಾಕುಲ ಚಿತ್ತರಾದರು. ಅವರು ತಮ್ಮ ಅನುಯಾಯಿಗಳಿಗಿಂತ ವೊದಲೇ ವೇಗವಾಗಿ ಅಲ್ಲಿಗೆ ತಲುಪಿಸಿದರು. ಬಳಿಕ ಗೋರಿಯ ಬಳಿ ಮಂಡಿಯೂರಿದರು. ಕೆಳಗಿರುವ ಮಣ್ಣು ಒದ್ದೆಯಾಗುವಷ್ಟು ಅತ್ತರು. ನಂತರ ತಮ್ಮ ಅನುಯಾಯಿಗಳ ಕಡೆಗೆ ತಿರುಗಿ ಹೇಳಿದರು, “ಸಹೋದರರೇ ಇಂತಹ ಒಂದು ದಿನವನ್ನು ಎದುರಿಸಲಿಕ್ಕಾಗಿ ನೀವು ತಯಾರಿ ನಡೆಸಿರಿ.” ಎಲ್ಲಾ ಪಾಪಗಳಿಂದ ಮುಕ್ತರಾದ ಪ್ರವಾದಿಯವರಿಗೆ(ಸ) ಮರಣದ ಕುರಿತು, ಗೋರಿಯ ಕುರಿತು ಇಷ್ಟು ಭಯವಿದ್ದರೆ ನಮ್ಮ ಕುರಿತು ನಾವು ಸ್ವತಃ ಅವಲೋಕನ ನಡೆಸ ಬೇಕಾಗಿದೆ.
ನಾವು ಸಂಪತ್ತಿನ ಸಂಪಾದನೆಗಾಗಿ ಆಹೋ ರಾತ್ರಿ ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲಾ ಕಷ್ಟಗಳನ್ನೂ ಸಹಿಸುತ್ತೇವೆ. ತಾತ್ಕಾಲಿಕವಾದ ಈ ಲೋಕಕ್ಕೆ ಅವೆಲ್ಲವೂ ಕೇವಲ ಅಲಂಕಾರದ ವಸ್ತುಗಳಾಗಿವೆ. ನಾಳಿನ ಶಾಶ್ವತ ಲೋಕಕ್ಕೆ ಬೇಕಾಗಿರುವ ಏನಾದರೂ ನಾವು ಸಂಪಾದಿಸಿದ್ದೇ ವೆಯೇ? ಮರಣ ಸಂಭವಿಸುವುದಕ್ಕಿಂತ ಮುಂಚೆ ನಾವು ಮಾಡಿದ ಉತ್ತಮ ಕಮ್ರಗಳೇ ನಮಗೆ ನೆರವಾಗುವುದು. ನಮ್ಮ ಸಂಪತ್ತು, ನಮ್ಮ ಸಂತಾನ, ಎಲ್ಲವನ್ನೂ ನಾವು ಬಿಟ್ಟು ಹೋಗುತ್ತೇವೆ. ಮರಣದ ಬಳಿಕ ನವ್ಮೊಂದಿಗೆ ಬರುವುದು ನಮ್ಮ ಕಮ್ರಗಳು ಮಾತ್ರ.
ನಮ್ಮ ಮರಣವು ಯಾವಾಗ, ಹೇಗೆ ಸಂಭವಿಸುವುದೆಂದು ನಮಗೆ ಮುಂಚಿತವಾಗಿ ತಿಳಿಸಲಾಗಿಲ್ಲ. ಆದರೆ ಮರಣ ಸಂಭವಿಸುವುದು ಸತ್ಯ. ಸಂಬಂಧಿಕರ ಭೇಟಿಯ ಬಯಕೆಯಿಂದ ವಿದೇಶದಿಂದ ಹೊರಟು ಬಂದ ವ್ಯಕ್ತಿಯು ಮನೆಗೆ ತಲುಪÅವುದಕ್ಕಿಂತ ಮುಂಚೆ ಮರಣ ಹೊಂದುತ್ತಾನೆ. ಸಂಪಾದಿಸಲು ವಿದೇಶಕ್ಕೆ ಹೊರಟು ಹೋದವನು ಅಲ್ಲಿ ಮರಣ ಹೊಂದುತ್ತಾನೆ. ಬೆಳಿಗ್ಗೆ ಮನೆಯಿಂದ ಹೊರಟವನು ಸಂಜೆ ಇಹಲೋಕ ತ್ಯಜಿಸಿರುತ್ತಾನೆ. ತೊಟ್ಟ ಬಟ್ಟೆಯನ್ನು ನಾವು ಕಳಚಿಬಿಡುವೆವು ಎಂದು ಹೇಳಲೂ ಸಾಧ್ಯವಿಲ್ಲದಂತೆ ಮರಣವು ಬರುತ್ತದೆ.
ಸ್ವತಃ ಸ್ನಾನ ಮಾಡುತ್ತಿದ್ದವನು ಮರಣಿಸಿದರೆ ಇತರರು ಸ್ನಾನ ಮಾಡಿಸುತ್ತ್ತಾರೆ. ಅತ್ಯುತ್ತಮ ದಜ್ರೆಯ ಬಟ್ಟೆ ಧರಿಸಿ ನಡೆಯುತ್ತಿದ್ದವರು ಕಡಿಮೆ ಬೆಲೆಯ ಬಿಳಿ ಬಟ್ಟೆ ತೊಟ್ಟು ಮಲಗಿರುತ್ತಾನೆ. ಊರಿಡೀ ಓಡಾಡಿಕೊಂಡಿದ್ದವನು ಮರಣ ಸಂಭವಿಸಿದರೆ ಅವನನ್ನು ಹೊತ್ತುಕೊಂಡು ಹೋಗುತ್ತಾರೆ. ಈ ಭೂಮಿಗೆ ಅಳುತ್ತಾ ಬರುವ ನಾವು ಹೋಗುವಾಗ ಇತರರನ್ನು ಅಳಿಸುತ್ತಾ ಹೋಗುತ್ತೇವೆ. ಆ ಸಂದಭ್ರದಲ್ಲಿ ನಮಗೆ ಸಹಾಯಕವಾಗುವುದು ಸತ್ಕಮ್ರಗಳು ಮಾತ್ರ ವಾಗಿದೆ. ಈ ನಿಟ್ಟಿನಲ್ಲಿ ನಾಳಿನ ಶಾಶ್ವತ ಜೀವನಕ್ಕೆ ಬೇಕಾಗಿ ಮರಣ ಸಂಭವಿಸುವುದಕ್ಕೆ ಮುಂಚಿತವಾಗಿ ಏನಾದರೂ ಒಳಿತಿನ ಕಾಯ್ರಗಳನ್ನು ನಿವ್ರಹಿಸ ಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ