ಸೋಮವಾರ, ಮಾರ್ಚ್ 19, 2012

ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ


ಇಂದು ಮಾನವನು ಹಲವಾರು ಕರ್ಮಗಳನ್ನು ಮಾಡುತ್ತಿದ್ದಾನೆ. ಕೆಲವರು ಕರ್ಮಗಳನ್ನು ಚಿಂತಿಸಿ ನಿವ್ರಹಿಸಿದರೆ ಇನ್ನು ಕೆಲವರು ಸ್ವೇಚ್ಛೆಯಂತೆ ನಿವ್ರಹಿಸುತ್ತಾರೆ. ಈ ಕರ್ಮಗಳಲ್ಲಿ ಒಳಿತುಗಳು, ಮಹಾಪಾಪಗಳು, ಸಣ್ಣ-ಪುಟ್ಟ ತಪ್ಪುಗಳು ಸೇರಿವೆ. ಮಹಾ ಪಾಪಗಳು ತನ್ನಿಂದ ಸಂಭವಿಸದಂತೆ ಹಲವರು ಪ್ರಯತ್ನಿಸುತ್ತಾರೆ. ಯಾವುದೇ ಸಮುದಾಯದಲ್ಲಾದರೂ ನಿರಂತರ ವಾಗಿ ಮಹಾಪಾಪಗಳನ್ನೆಸಗುವವರು ತೀರಾ ಕಡಿಮೆ ಮಂದಿ ಇರಬಹುದು. ಆದರೆ ಇಂದು ಹೆಚ್ಚಿನವರು ಸಣ್ಣಪುಟ್ಟ ಪಾಪಗಳನ್ನು ಕ್ಷುಲ್ಲಕ ವಿಚಾರವಾಗಿ ಪರಿಗಣಿಸುತ್ತಾರೆ. ಆದ್ದರಿಂದ ಮಹಾಪಾಪಗಳು ಸಂಭವಿಸದಂತೆ ವಹಿಸುವ ಎಚ್ಚರವನ್ನು ಸಣ್ಣ ಪಾಪಗಳ ವಿಚಾರದಲ್ಲಿ ಪಾಲಿಸುವುದಿಲ್ಲ. ಸಣ್ಣ ಪಾಪಗಳನ್ನು ತುಚ್ಛವಾಗಿ ಕಾಣಬಾರದು. ಸಣ್ಣ ಪಾಪಗಳನ್ನು ನಿರಂತರವಾಗಿ ಮಾಡುವಾಗ ಅವು ಮಹಾ ಪಾಪಗಳೆಡೆಗೆ ತಲುಪಿಸುತ್ತವೆ. ಸಣ್ಣ ಪುಟ್ಟ ಪಾಪಗಳ ಕುರಿತು ಪ್ರವಾದಿಯವರು(ಸ) ಎಚ್ಚರ ವಹಿಸಲು ಹೇಳಿದ್ದಾರೆ.
ಅಬ್ದುಲ್ಲಾ ಬಿನ್ ಮಸ್ಊದ್(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ನೀವು ಸಣ್ಣ ಪಾಪಗಳ ವಿಷಯದಲ್ಲಿ ಎಚ್ಚರ ವಹಿಸಿರಿ. ಕಾರಣ ಅವು ಓವ್ರನಲ್ಲಿ ಸಂಗ್ರಹವಾಗಿ ಅವನನ್ನು ನಾಶಪಡಿಸುತ್ತವೆ.” ಮುಂದುವರಿಯುತ್ತಾ ಪ್ರವಾದಿಯವರು(ಸ) ಅದಕ್ಕೆ ಒಂದು ಉಪಮೆ ನೀಡಿದರು. “ಜನರ ಒಂದು ಗುಂಪÅ ಒಂದು ಜಾಗದಲ್ಲಿ ಬಿಡಾರ ಹೂಡುತ್ತದೆ. ಅಡುಗೆ ತಯಾರಿಸಲಿಕ್ಕಾಗಿ ಓವ್ರನು ಕಟ್ಟಿಗೆ ಹುಡುಕುತ್ತಾ ಹೋಗುತ್ತಾನೆ. ಮರದ ಒಂದು ತುಂಡಿನೊಂದಿಗೆ ಅವನು ಮರಳುತ್ತಾನೆ. ಇನ್ನೋವ್ರನು ಹೋಗಿ ಒಂದು ತುಂಡನ್ನು ತರುತ್ತಾನೆ. ಹಾಗೆ ಮರದ ತುಂಡುಗಳ ದೊಡ್ಡ ರಾಶಿ ಅಲ್ಲಿ ನಿಮ್ರಾಣ ವಾಗುತ್ತದೆ. ಹಾಗೆ ಬೆಂಕಿ ಉರಿಸಿ ಅಡುಗೆ ತಯಾರಿಸುತ್ತಾರೆ.
ಮಹಾಪಾಪಗಳಾದರೂ ಸಣ್ಣ ಪುಟ್ಟ ಪಾಪ ಗಳಾದರೂ ಅವು ಪಾಪಗಳ ಸಾಲಿಗೇ ಸೇರುತ್ತವೆ. ಸಣ್ಣದು ಎಂಬ ಕಾರಣಕ್ಕೆ ಅವುಗಳು ಪಾಪವಲ್ಲದ ಸಾಮಾನ್ಯ ಕಮ್ರಗಳಾಗುವುದಿಲ್ಲ. ‘ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ’. ಸಣ್ಣ ಪಾಪಗಳು ಸಣ್ಣದಾಗಿ ತೋರುವುದು ಅವುಗಳನ್ನು ದೊಡ್ಡ ಪಾಪಗಳೊಂದಿಗೆ ಹೋಲಿಕೆ ಮಾಡುವಾಗ ಮಾತ್ರವಾಗಿದೆ. ಅಲ್ಲಾಹನಿಗೆ ಇಷ್ಟವಿಲ್ಲದ ಕಮ್ರಗಳು ಅವು ದೊಡ್ಡದಾದರೂ ಕ್ಷುಲ್ಲಕವಾದರೂ ಪಾಪಗಳೇ ಆಗಿವೆ.
ಓವ್ರನು ಒಂದು ತಪ್ಪೆಸಗುವಾಗ ಅವನು ಅಲ್ಲಾಹನ ಒಂದು ಆಜೆÕಯನ್ನು ಉಲ್ಲಂಘಿಸುತ್ತಾನೆ. ಅಲ್ಲಾಹನ ಆಜೊÕೀಲ್ಲಂಘನೆಯು ಮಹಾಪಾಪ ವಾಗಿದೆ. ಆದ್ದರಿಂದ ತಪÅ್ಪಗಳು ದೊಡ್ಡದಾದರೂ, ಸಣ್ಣದಾದರೂ ಅಲ್ಲಾಹನ ಬಳಿ ಶಿಕ್ಷಾಹ್ರವೇ ಆಗಿವೆ. ಪ್ರವಾದಿಯವರು(ಸ) ಹೇಳಿದರು, “ಓ ಆಯಿಶಾ, ಕ್ಷುಲ್ಲಕ ಹಾಗೂ ಸಾಮಾನ್ಯ ಎಂದು ಭಾವಿಸಲ್ಪಡುವ ಪಾಪಗಳ ಕುರಿತು ಎಚ್ಚರ ವಹಿಸಬೇಕು. ಕಾರಣ ಅಲ್ಲಾಹನ ಬಳಿ ಅವುಗಳ ವಿಚಾರಣೆ ನಡೆಯಲಿಕ್ಕಿದೆ.”
ಸಣ್ಣ ಪಾಪಗಳು ಸಣ್ಣ ಕಟ್ಟಿಗೆಯ ತುಂಡಿನಂತೆ. ಅದು ಒಂದು ತುಂಡು ಸಿಗುವುದಾದರೆ ಅದರಿಂದ ಪ್ರಯೋಜನ ಲಭಿಸುವುದಿಲ್ಲ. ಅಂತಹ ತುಂಡುಗಳು ಧಾರಾಳ ಸಿಕ್ಕಿದರೆ ಅದರಿಂದ ಅಗ್ನಿಕುಂಡವನ್ನೇ ಉಂಟು ಮಾಡಬಹುದು. ಸಣ್ಣ ಪಾಪಗಳ ಸ್ಥಿತಿಯು ಕೂಡಾ ಇದೇ ಆಗಿದೆ. ಒಬ್ಬ ವಿಶ್ವಾಸಿಯು ಸಣ್ಣ ಒಂದು ಪಾಪವನ್ನೆಸಗಿ ಅವನು ಅಲ್ಲಾಹನಲ್ಲಿ ಪ್ರಾಥ್ರಿಸಿದರೆ ಅದು ಕ್ಷಮಿಸಲ್ಪಡಬಹುದು. ಆ ಪಾಪವು ಅವನ ಸ್ವಗ್ರ ಪ್ರವೇಶಕ್ಕೆ ತಡೆಯಾಗಲಿಕ್ಕಿಲ್ಲ. ಆದರೆ ಅವುಗಳನ್ನು ನಿರಂತರವಾಗಿ ಎಸಗಿದರೆ ‘ಹನಿ ಹನಿ ಸೇರಿದರೆ ಹಳ್ಳ’ ಎಂಬಂತೆ ಪಾಪಗಳ ಮಹಾ ಸಂಗಮ ವಾಗುತ್ತದೆ. ನಾಳೆ ಪರಲೋಕದಲ್ಲಿ ಎಲ್ಲಾ ಸಣ್ಣ-ದೊಡ್ಡ ಪಾಪಗಳನ್ನು ಒಂದುಗೂಡಿಸಿ ವಿಚಾರಣೆ ಗೊಳಪಡಿಸುವಾಗ ಸಣ್ಣ ಪಾಪಗಳು ದೊಡ್ಡ ಪಾಪಗಳ ಸಾಲಿಗೆ ಸೇರುವುದು. ಹಾಗೆ ಓವ್ರನ ಒಳಿತುಗಳನ್ನು, ಸತ್ಕಮ್ರಗಳನ್ನು ನಾಶಪಡಿಸಲು ಈ ಪುಟ್ಟ ಪಾಪಗಳು ಕಾರಣವಾಗುತ್ತವೆ.
ಪ್ರವಾದಿಯವರು(ಸ) ಹೇಳಿದರು, “ಇಂದಿನಿಂದ ಅರೇಬಿಯದಲ್ಲಿ ವಿಗ್ರಹಗಳು ಆರಾಧಿಸಲ್ಪಡಬಹುದೇ ಎಂಬ ವಿಷಯದಲ್ಲಿ ಪಿಶಾಚಿಯು ನಿರಾಶೆ ಹೊಂದಿದ್ದಾನೆ. ನೀವು ಸಣ್ಣ ಪಾಪಗಳನ್ನು ನಿರಂತರವಾಗಿ ಮಾಡುತ್ತೀರಿ ಎಂಬ ವಿಷಯದಲ್ಲಿ ಅವನು ಸಂತೃಪ್ತನಾಗಿದ್ದಾನೆ. ಖಂಡಿತವಾಗಿಯೂ ನಾಳೆ ಅಂತ್ಯ ದಿನದಲ್ಲಿ ಸಣ್ಣ ಪಾಪಗಳನ್ನು ದೊಡ್ಡ ಪಾಪಗಳಾಗಿ ಪರಿಗಣಿಸಲಾಗುತ್ತದೆ.” ಅರೇಬಿಯದಲ್ಲಿ ವಿಗ್ರಹಗಳನ್ನು ಆರಾಧಿಸಲಾಗುತ್ತಿತ್ತು. ಇಸ್ಲಾಮಿನ ಆಗಮನದೊಂದಿಗೆ ಅವೆಲ್ಲವೂ ನಿಂತು, ಅಲ್ಲಾಹನನ್ನು ಆರಾಧಿಸಲು ಪ್ರಾರಂಭಿಸಿದಾಗ ಸಕಲ ಪಾಪಗಳ ಪ್ರೇರಕ ಶಕ್ತಿಯಾದ ಶೈತಾನನು ನಿರಾಶೆ ತಾಳಿದರೂ ಜನರನ್ನು ಪಥಭ್ರಷ್ಟಗೊಳಿಸಲಿಕ್ಕಿ ರುವ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ. ಜನರಿಂದ ಸಣ್ಣ ಪಾಪಗಳನ್ನು ಮಾಡಿಸುವುದರ ಮೂಲಕ ತೃಪ್ತಿ ಪಟ್ಟನು. ಸಣ್ಣ ಪಾಪಗಳ ಕುರಿತು ಕ್ಷುಲ್ಲಕ ಭಾವನೆಯನ್ನು ಮೂಡಿಸಿದನು. ಅದು ಇಂದು ಕೂಡಾ ನಡೆಯುತ್ತಿದೆ. ಆದರೆ ನಾವು ಶೈತಾನನ ಕುತಂತ್ರಕ್ಕೆ ಬಲಿಯಾಗಿ ಪರಲೋಕವನ್ನು ಕಳೆದುಕೊಳ್ಳಬಾರದು.
ಪ್ರವಾದಿಯವರು(ಸ) ಪಾಪ ಕೃತ್ಯಗಳ ಸಂಗಮದ ಕುರಿತು ಪ್ರಾಯೋಗಿಕವಾಗಿ ಹೀಗೆ ಎಚ್ಚರಿಸಿದ್ದಾರೆ: ಸಅದ್ ಬಿನ್ ಜುನಾದ(ರ) ವರದಿ ಮಾಡಿದ್ದಾರೆ- ಹುನೈನ್ ಯುದ್ಧ ಕಳೆದು ಮರಳುವಾಗ ನಾವು ಒಂದು ಕಣಿವೆಯಲ್ಲಿ ವಿಶ್ರಾಂತಿ ಪಡೆದೆವು. ಯಾವುದೇ ವಸ್ತುಗಳಿಲ್ಲದ ಒಂದು ಪಾಳು ಭೂಮಿಯಾಗಿತ್ತದು. ಆಗ ಪ್ರವಾದಿ(ಸ) ಹೇಳಿದರು, “ಈ ಕಣಿವೆಯಲ್ಲಿ ನಿಮಗೆ ಏನಾದರೂ ಸಿಕ್ಕಿದರೆ ನನ್ನ ಮುಂದೆ ತನ್ನಿ, ಎಲುಬುಗಳ ತುಂಡೋ ಮೃಗಗಳ ಎಲುಬೋ ಆದರೂ ಸರಿ.” ಸಅದ್ ಹೇಳುತ್ತಾರೆ, “ಸ್ವಲ್ಪ ಹೊತ್ತಿನ ಬಳಿಕ ಹೊಲಸು ವಸ್ತುಗಳ ರಾಶಿಯೇ ನಿಮ್ರಾಣವಾಯಿತು. ಆಗ ಪ್ರವಾದಿ ಯವರು(ಸ) ಕೇಳಿದರು. “ಈಗ ಏನು ತಿಳಿಯುತ್ತದೆ? ತಪ್ಪುಗಳನ್ನು ಒಟ್ಟು ಸೇರಿಸಿದರೆ ಈ ಸ್ಥಿತಿಯಾಗಿರಬಹುದು. ಆದ್ದರಿಂದ ಪ್ರತಿ ಯೋವ್ರನೂ ಅಲ್ಲಾಹನನ್ನು ಭಯಪಡಬೇಕು. ಸಣ್ಣ, ದೊಡ್ಡ ಪಾಪಗಳಿಂದ ದೂರವಿರಬೇಕು. ಯಾಕೆಂದರೆ ತಪ್ಪುಗಳನ್ನು ಒಬ್ಬನ ಮೇಲೆ ಈ ರೀತಿಯಲ್ಲಿ ಒಟ್ಟು ಸೇರಿಸಲಾಗುತ್ತದೆ.”
ಆದ್ದರಿಂದ ನಾವು ನಮ್ಮ ಪ್ರತೀ ಕಮ್ರಗಳನ್ನು ಆಲೋಚಿಸಿ ನಿವ್ರಹಿಸಬೇಕಾಗಿದೆ. ಪಾಪಗಳಿಂದ ದೂರ ಸರಿಯುವುದರ ಮೂಲಕ ನಾಳೆ ಪರ ಲೋಕದ ವಿಚಾರಣೆಗೆ ಸಜ್ಜಾಗಬೇಕಾಗಿದೆ. ಶೈತಾನನು ಪಾಪಗಳ ಕಡೆಗೆ ಆಹ್ವಾನಿಸುವಾಗ ಅವನ ಕರೆಗೆ ಓಗೊಡದೆ ದೃಢಚಿತ್ತರಾಗಿ ಮುಂದೆ ಸಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ