ಗುರುವಾರ, ಫೆಬ್ರವರಿ 09, 2012

ಹೃದಯಕ್ಕೆ ತುಕ್ಕು ಹಿಡಿಯದಿರಲಿ



ವ್ರ ಮನುಷ್ಯನ ಶರೀರದಲ್ಲಿ ಹೃದಯಕ್ಕೆ ಮಹತ್ವದ ಸ್ಥಾನವಿದೆ. ಶಾರೀರಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಅದು ಉನ್ನತ ಸ್ಥಾನವನ್ನು ಪಡೆದಿದೆ. ಮನುಷ್ಯನ ಶರೀರದ ಬಹು ಮುಖ್ಯ ಘಟಕವಾದ ರಕ್ತವನ್ನು ಸಮಸ್ತ ಶರೀರಕ್ಕೆ ತಲುಪಿಸುವ ಕೆಲಸವನ್ನು ಹೃದಯವು ನಿವ್ರಹಿಸುತ್ತದೆ. ಆ ರಂಗದಲ್ಲಿ ಅದು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿವ್ರಹಿಸುತ್ತದೆ. ಇದು ಶಾರೀರಿಕ ಕೆಲಸವಾದರೆ, ಇನ್ನು ಆಧ್ಯಾತ್ಮಿಕ ರಂಗದಲ್ಲಿ ಹಲವಾರು ವಿಚಾರ ದಲ್ಲಿ ಹೃದಯವು ತನ್ನ ಕೆಲಸದಲ್ಲಿ ವಿಫಲವಾಗಿದೆ. ಹೃದಯದ ಶಾರೀರಿಕ ಕೆಲಸವನ್ನು ನಿಯಂತ್ರಿಸುವ ಶಕ್ತಿಯನ್ನು ಅಲ್ಲಾಹನು ಮನುಷ್ಯನಿಗೆ ನೀಡಿಲ್ಲ. ಆದರೆ ಆಧ್ಯಾತ್ಮಿಕ ರಂಗದಲ್ಲಿ ಆ ಶಕ್ತಿ ಯನ್ನು ನೀಡಿದ್ದಾನೆ.
ಅಲ್ಲಾಹನು ಹೇಳುತ್ತಾನೆ, “ನಾವು ಅವನಿಗೆ ಮಾಗ್ರದಶ್ರನ ಮಾಡಿದೆವು. ಅವನು ಕೃತಜÕತೆ ಸಲ್ಲಿಸುವವನಾಗಲಿ ಅಥವಾ ಕೃತಘ್ನನಾಗಲಿ” (ಅದ್ದಹ್್ರ: 3) ಮತ್ತು “ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲವೇ?” (ಅಲ್ ಬಲದ್: 10) ಈ ಎರಡು ಮಾಗ್ರಗಳಲ್ಲಿ ಯಾವುದನ್ನು ಬೇಕಾದರೂ ಹೃದಯವು ಸ್ವೀಕರಿಸುವಂತೆ ಮಾಡಲು ಮನುಷ್ಯನಿಗೆ ಸಾಧ್ಯವಿದೆ. ಆ ಸಾಮಥ್ಯ್ರ ವನ್ನು ಅಲ್ಲಾಹನು ನೀಡಿದ್ದಾನೆ. ಮನುಷ್ಯನ ಸೋಲು-ಗೆಲುವು ಈ ಎರಡು ಮಾಗ್ರಗಳ ಆಯ್ಕೆಗನುಗುಣವಾಗಿರುತ್ತದೆ.
ಹೃದಯವು ಒಳಿತು-ಕೆಡುಕುಗಳ ಉಗಮಸ್ಥಾನವಾಗಿದೆ. ಒಳಿತುಗಳು ಹುಟ್ಟುವುದು ಇಲ್ಲಿಂದಲೇ. ಕೆಡುಕುಗಳು ಜನ್ಮ ಪಡೆದು ತನ್ನ ಪ್ರತಾಪವನ್ನು ತೋರಿಸುವುದು ಕೂಡಾ ಹೃದಯ ದಿಂದಲೇ. ಹೃದಯದಲ್ಲಿ ಕೆಡುಕು-ಒಳಿತುಗಳ ನಡುವೆ ನಡೆಯುವ ಪೈಪೆÇೀಟಿಯಲ್ಲಿ ಮನುಷ್ಯನು ಯಾವುದಕ್ಕೆ ಬೆಂಬಲ ನೀಡುತ್ತಾನೋ ಅದಕ್ಕೆ ಹೊಂದಿಕೊಂಡಿರುತ್ತದೆ ಅವನ ಜೀವನ. ಒಳಿತುಗಳ ಕಡೆಗೆ ಬೆಂಬಲ ನೀಡುವುದು ಕಷ್ಟ ಸಾಧ್ಯವಾದ ಕೆಲಸವಾಗಿದೆ. ಕಾರಣ ಮನುಷ್ಯನ ಆತ್ಮವು ಕೆಡುಕುಗಳ ಕಡೆಗೆ ವಾಲಿಕೊಂಡಿರುತ್ತದೆ. ಮಾತ್ರವಲ್ಲ, ಕೆಡುಕುಗಳನ್ನು ಮಾಡಲು ಶೈತಾನನೂ ಪ್ರೇರೇಪಿಸುತ್ತಿ ರುತ್ತಾನೆ. ಆದರೆ ಒಳಿತುಗಳು ಹಾಗಲ್ಲ. ಒಳಿತುಗಳಿಗೆ ಬೆಂಬಲ ನೀಡಬೇಕಾದರೆ ಮನುಷ್ಯನು ಸ್ವತಃ ಪ್ರಯತ್ನಿಸಬೇಕು. ಕೆಡುಕುಗಳ ಕಡೆಗೆ ವಾಲಿರುವ ಆತ್ಮವನ್ನು ಮತ್ತು ಅದರೆಡೆಗೆ ಪ್ರೇರಣೆ ನೀಡುವ ಪಿಶಾಚಿಯನ್ನು ಮೆಟ್ಟಿ ನಿಂತು ಒಳಿತಿನ ಕಡೆಗೆ ಬೆಂಬಲ ನೀಡುವವನು ಖಂಡಿತವಾಗಿಯೂ ಇಹ-ಪರ ವಿಜಯ ಗಳಿಸುತ್ತಾನೆ.
ಹೃದಯವು ಉತ್ತಮಗೊಳ್ಳುವಾಗ ಮನುಷ್ಯನು ಸಜ್ಜನನಾಗುತ್ತಾನೆ. ಅವನ ಸಾಮಾಜಿಕ, ಆಥ್ರಿಕ, ರಾಜಕೀಯ, ಕೌಟುಂಬಿಕ ವೊದಲಾದ ರಂಗಗಳೆಲ್ಲವೂ ಒಳಿತಿನಿಂದ ಕೂಡಿರುವುದಾಗುತ್ತದೆ. ಅವನು ಅಲ್ಲಾಹನಿಗೂ, ಜನರಿಗೂ, ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗುತ್ತಾನೆ. ಸಮಾಜದ ಸುಧಾರಣೆಯಲ್ಲಿ ಅಂತಹ ಹೃದಯವು ದೊಡ್ಡ ಪಾತ್ರವಹಿಸುತ್ತದೆ.
ಎಲ್ಲಾ ಮನುಷ್ಯರೂ ತಪ್ಪೆಸಗುತ್ತಾರೆ. ಅದು ಅವರ ಪ್ರಕೃತಿ ಯಾಗಿದೆ. ಅಲ್ಲಾಹನ ಸೃಷ್ಟಿಗಳಲ್ಲಿ ಮಲಕ್ಗಳಿಗೆ ಮಾತ್ರ ತಪ್ಪೆಸ ಗುವ ಸಾಮಥ್ಯ್ರವನ್ನು ನೀಡಲಾಗಿಲ್ಲ. ಅವರು ಅಲ್ಲಾಹನ ಆಜೆÕಗಳಿಗೆ ಪÇರಕವಾಗಿ ವತ್ರಿಸಲು ಮಾತ್ರ ಸಾಧ್ಯ. ಆದರೆ ಮನುಷ್ಯನಿಗೆ ಅಲ್ಲಾಹನ ಆಜೆÕಗಳನ್ನು ಅನುಸರಿಸುವ ಮತ್ತು ಧಿಕ್ಕರಿಸುವ ಎರಡೂ ಸಾಮಥ್ಯ್ರಗಳನ್ನು ಅವನು ನೀಡಿದ್ದಾನೆ. “ಆದಮರ(ಅ) ಎಲ್ಲಾ ಸಂತತಿಗಳೂ ತಪ್ಪೆಸಗುತ್ತಾರೆ. ತಪ್ಪೆಸಗು ವವರಲ್ಲಿ ಅತ್ಯುತ್ತಮರು ಪಶ್ಚಾತ್ತಾಪ ಪಡುವವರಾಗಿದ್ದಾರೆ” ಎಂದು ಪ್ರವಾದಿಯವರು(ಸ) ತಿಳಿಸಿದ್ದಾರೆ. ಓವ್ರನು ಒಂದು ತಪ್ಪೆಸಗಿದಾಗ ಅವನ ಹೃದಯದಲ್ಲಿ ಒಂದು ಕಪÅ್ಪ ಚುಕ್ಕೆ ಬೀಳುತ್ತದೆ. ಅವನು ಆ ತಪ್ಪಿನ ಕುರಿತು ಪಶ್ಚಾತ್ತಾಪ ಪಟ್ಟು ಪಾಪ ವಿವೋಚನೆಗಾಗಿ ಪ್ರಾಥ್ರಿಸಿದಾಗ ಅವನ ಹೃದಯವು ಶುಭ್ರವಾಗುತ್ತದೆ. ಆದರೆ ಪಾಪಕೃತ್ಯಗಳನ್ನು ನಿರಂತರವಾಗಿ ಮಾಡುವಾಗ ಹೃದಯದಲ್ಲಿ ಬೀಳುವ ಕಪÅ್ಪ ಚುಕ್ಕೆಗಳು ಹೆಚ್ಚಾಗ ತೊಡಗುತ್ತವೆ. ಅಂತಹವರು ಪಶ್ಚಾತ್ತಾಪ ಪಡದೆ ಮುಂದುವರಿದರೆ ಪಾಪಗಳಿಂದಾಗಿ ಹೃದಯವು ಕಪ್ಪಾಗಿ ಹೋಗುತ್ತದೆ.
ಪ್ರವಾದಿಯವರು(ಸ) ನಾಲ್ಕು ವಿಧದ ಹೃದಯಗಳ ಕುರಿತು ಹೇಳಿದ್ದಾರೆ. 1. ದೀಪದಂತೆ ಪ್ರಕಾಶ ಹರಡುವ ನಿಷ್ಕಳಂಕ ಹೃದಯ 2. ಹೊದಿಕೆಯಿಂದ ಮುಚ್ಚಲ್ಪಟ್ಟ ಹೃದಯ 3. ತಲೆ ಕೆಳಗಾಗಿರುವ ಹೃದಯ 4. ಭಾರ ಕಡಿಮೆ ಇರುವ ಹೃದಯ.
ಒಂದನೇ ವಿಧದ ಹೃದಯವು ಸತ್ಯವಿಶ್ವಾಸಿಗಳದ್ದಾಗಿದೆ. ಅಂತಹ ಹೃದಯವು ನಿಷ್ಕಳಂಕವೂ ಪ್ರಾಮಾಣಿಕವೂ ಕೆಡುಕುಗಳಿಂದ ಮುಕ್ತವೂ ಆಗಿರುತ್ತದೆ. ಅಲ್ಲಾಹನಲ್ಲಿ ವಿಶ್ವಾಸವಿರಿಸಿ, ಪ್ರವಾದಿ(ಸ) ತೋರಿಸಿದ ಹಾದಿಯಲ್ಲಿ ಸಂಚರಿಸಿ ಜೀವನವನ್ನು ಸಂಸ್ಕರಿಸಿದ ಸತ್ಯವಿಶ್ವಾಸಿಗಳಿಗೆ ಮಾತ್ರ ಇಂತಹ ಹೃದಯಗಳಿರಲು ಸಾಧ್ಯ. ಇಂತಹ ಹೃದಯಗಳು ಸ್ವತಃ ಸದ್ಗುಣ ಸಂಪನ್ನವಾಗಿರುತ್ತದೆ ಮತ್ತು ಅಂಧಕಾರದಲ್ಲಿ ಬೆಳಗುವ ದೀಪದಂತೆ ಸುತ್ತ-ಮುತ್ತಲು ತನ್ನ ಪ್ರಕಾಶವನ್ನು ಹರಡಿರುತ್ತದೆ. ಇಂತಹ ಹೃದಯ ಇರುವವ ರೊಂದಿಗೆ ಬೆರೆಯುವವರಿಗೆ ಸತ್ಯದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಈ ಹೃದಯವು ಸ್ವತಃ ಸನ್ಮಾಗ್ರದಲ್ಲಿರುವುದಲ್ಲದೆ ಇತರರನ್ನೂ ಸನ್ಮಾಗ್ರದಲ್ಲಿ ಮುನ್ನಡೆಸುತ್ತದೆ. ಅಬ್ದುಲ್ಲಾ ಬಿನ್ ಅಮ್್ರ(ರ) ವರದಿ ಮಾಡಿದ್ದಾರೆ: “ಒಮ್ಮೆ ಓವ್ರರು ಪ್ರವಾದಿಯವ ರೊಂದಿಗೆ(ಸ) ಕೇಳಿದರು, ಪ್ರವಾದಿವಯ್ರರೇ(ಸ) ಜನರಲ್ಲಿ ಶ್ರೇಷ್ಠ ವ್ಯಕ್ತಿ ಯಾರು?” ಪ್ರವಾದಿಯವರು(ಸ) ಹೇಳಿದರು, “ಶುದ್ಧ ಹೃದಯ ಮತ್ತು ಸತ್ಯಸಂಧ ನಾಲಗೆ ಇರುವವನು.” ಆಗ ಅನುಯಾಯಿಗಳು ಕೇಳಿದರು, “ಸತ್ಯಸಂಧತೆಯ ನಾಲಗೆ ಏನೆಂದು ನಮಗೆ ತಿಳಿದಿದೆ, ಆದರೆ ಶುದ್ಧ ಹೃದಯ ಎಂದರೇನು?” ಪ್ರವಾದಿ(ಸ) ಹೇಳಿದರು, “ದೇವಭಯವೂ ಭಕ್ತಿಯೂ ಇರುವ ಮತ್ತು ಮಾಲಿನ್ಯಗಳಿಂದ ಮುಕ್ತವಾದ ಹೃದಯ.”
ಎರಡನೇ ವಿಧದ ಹೊದಿಕೆಯಿಂದ ಮುಚ್ಚಲ್ಪಟ್ಟ ಹೃದಯವು ಸತ್ಯ ನಿಷೇಧಿಗಳದ್ದಾಗಿದೆ. ವಿಶ್ವಾಸಿಗಳ ಹೃದಯವು ಪ್ರಕಾಶದಿಂದ ಪ್ರಜ್ವಲಿಸುವುದಾದರೆ ಸತ್ಯ ನಿಷೇಧಿಗಳ ಹೃದಯವು ಅಂಧಕಾರದಿಂದ ಕೂಡಿರುತ್ತದೆ. ಅಲ್ಲಾಹನು ಹೇಳುತ್ತಾನೆ, “ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣದು. ಸನ್ಮಾಗ್ರದ ಕಡೆಗೆ ಅದು ಒಮ್ಮೆಯೂ ದೃಷ್ಟಿ ಹರಿಸಲಿಕ್ಕಿಲ್ಲ.” (ಅನ್ನೂರ್: 40
ಅಲ್ಲಾಹನು ಹೇಳುತ್ತಾನೆ, “ಸತ್ಯ ನಿಶೇಧಿಗಳಿಗೆ ನೀವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರಂತು ವಿಶ್ವಾಸವಿಡುವವ ರಲ್ಲ. ಅಲ್ಲಾಹನು ಅವರ ಹೃದಯಗಳ ಹಾಗೂ ಕಿವಿಗಳ ಮೇಲೆ ಮುದ್ರೆಯೊತ್ತಿರುತ್ತಾನೆ. ಅವರ ದೃಷ್ಟಿಗಳ ಮೇಲೆ ಪರದೆ ಬಿದ್ದಿದೆ.
ಅವರಿಗೆ ಘೋರ ಶಿಕ್ಷೆ ಕಾದಿದೆ. (ಅಲ್ಬಕರ: 6-7)
ಮೂರನೇ ವಿಧದ ತಲೆಕೆಳಗಿರುವ ಹೃದಯವು ಕಪಟ ವಿಶ್ವಾಸಿಗಳದ್ದಾಗಿದೆ. ಅವರು ಸಂದಭ್ರಕ್ಕೆ ತಕ್ಕಂತೆ ಸತ್ಯವಿಶ್ವಾಸಿಗಳೂ ಸತ್ಯ ನಿಷೇಧಿಗಳೂ ಆಗುತ್ತಾರೆ. ಅವರ ಹೃದಯವು ಕಾಪಟ್ಯದಿಂದ ತುಂಬಿರುತ್ತದೆ. ಗೋಸುಂಬೆಯಂತೆ ಬಣ್ಣ ಬದಲಿಸುವುದು ಅವರ ಧಮ್ರವಾಗಿದೆ. ಸಂದಭ್ರಕ್ಕೆ ತಕ್ಕಂತೆ ವತ್ರಿಸಿ ಲಾಭಗಳಿಸುವುದು ಅವರ ಜಾಯಮಾನವಾಗಿದೆ. ಲಾಭವಿರುವ ಸಂದಭ್ರದಲ್ಲಿ ‘ಹರಿತವಾದ ನಾಲಗೆ’ಯೊಂದಿಗೆ ನಿಮ್ಮನ್ನು ಸ್ವಾಗತಿಸಲು ಬರುತ್ತಾರೆ ಎಂದು ಕುರ್ಆನ್ ಹೇಳುತ್ತದೆ. (ಅಹ್ಝಾಬ್: 19). ಆದಶ್ರದ ದಿವಾಳಿತನ ಮತ್ತು ಸ್ವಂತ ಧೋರಣೆ ತಾಳಲು ಸಾಧ್ಯವಿಲ್ಲದಿರುವು ದರಿಂದ ಅವರ ಹೃದಯವನ್ನು ‘ತಲೆ ಕೆಳಗಾಗಿರುವ ಹೃದಯ’ ಎಂದು ಪ್ರವಾದಿಯವರು(ಸ) ಬಣ್ಣಿಸಿದ್ದಾರೆ. ನಾಳೆ ಪರಲೋಕದಲ್ಲಿ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಭಾಗದಲ್ಲಾಗಿರುವರು.
ನಾಲ್ಕನೇ ವಿಧದ ಭಾರ ಕಡಿಮೆ ಇರುವ ಹೃದಯವು, ವಿಶ್ವಾಸ ಮತ್ತು ಕಾಪಟ್ಯ ಮಿಶ್ರಿತ ಹೃದಯವಾಗಿದೆ. ಪ್ರವಾದಿ ಯವರು(ಸ) ಇಂತಹ ಹೃದಯ ಹೊಂದಿದವರ ವಿಶ್ವಾಸವನ್ನು ಶುದ್ಧ ನೀರು ಲಭಿಸುವ ಸಸ್ಯಕ್ಕೂ ಕಾಪಟ್ಯವನ್ನು ಕೆಟ್ಟ ರಕ್ತ ಮತ್ತು ಕೀವಿಗೂ ಹೋಲಿಸಿದ್ದಾರೆ. ನೀರು ಲಭಿಸುವ ಸಸ್ಯ ಮತ್ತು ನೀರು ಲಭಿಸದ ಸಸ್ಯವು ರೂಪದಲ್ಲೂ ಬೆಳವಣಿಗೆಯಲ್ಲೂ ಸಮಾನ ವಾಗಿರುವುದಿಲ್ಲ. ನೀರಿನಿಂದ ಬೆಳೆದ ಸಸ್ಯವು ಹಚ್ಚ ಹಸುರಿನಿಂದ ಸುಂದರವಾಗಿ ಕಂಗೊಳಿಸುತ್ತಿರುತ್ತದೆ. ನೀರು ಲಭಿಸದ ಸಸ್ಯವು ಬಾಡಿಹೋಗಿರುತ್ತದೆ. ಸತ್ಯವಿಶ್ವಾಸವು ಕೂಡಾ ಇದೇ ರೀತಿಯಾಗಿದೆ. ಅದು ಹೃದಯಕ್ಕೆ ಹರಿಯುವ ಶುದ್ಧ ನೀರಾಗಿದೆ. ಅದನ್ನು ಹೀರುವ ಹೃದಯವು ಉತ್ತಮವಾಗುತ್ತದೆ ಮತ್ತು ಶಕ್ತಿಯನ್ನು ಗಳಿಸುತ್ತದೆ. ಆದರೆ ಕಾಪಟ್ಯವು ಹಾಗಲ್ಲ. ಅದು ಕೀವು ಮತ್ತು ಕೆಟ್ಟ ರಕ್ತದಂತೆ. ಅದು ಹೃದಯಕ್ಕೆ ಪ್ರವೇಶಿಸಿದರೆ ಹೃದಯವನ್ನು ರೋಗಗ್ರಸ್ಥಗೊಳಿಸುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಹೃದಯವನ್ನು ಪÇತ್ರಿಯಾಗಿ ಆವರಿಸಿ ಅದರ ಕೆಲಸವನ್ನೇ ಸ್ತಬ್ಧಗೊಳಿಸುವ ಸಂಭವವಿದೆ. ಆದ್ದರಿಂದ ಕಾಪಟ್ಯದ ಬಗ್ಗೆ ಎಚ್ಚರವಿರಬೇಕು. ಅದು ಹೃದಯಕ್ಕೆ ಪ್ರವೇಶಿಸದಂತೆ ಜಾಗ್ರತೆ ವಹಿಸಬೇಕು.
ಒಟ್ಟಿನಲ್ಲಿ ಹೃದಯವು ಮನುಷ್ಯನನ್ನು ಮುನ್ನಡೆಸುತ್ತದೆ. ಅವನ ಎಲ್ಲಾ ಕಮ್ರಗಳಿಗೂ ಮುನ್ನುಡಿ ಬರೆಯುತ್ತದೆ. ಪ್ರವಾದಿ ಯವರು(ಸ) ಹೇಳಿದರು, “ಮನುಷ್ಯನ ಹೃದಯವು ಒಂದು ರಾಜನಂತೆ. ಅದಕ್ಕೆ ಕೆಲವು ಸೇನೆಗಳಿವೆ. ರಾಜನು ಉತ್ತಮವಾದರೆ ಸೇನೆಯೂ ಉತ್ತಮಗೊಳ್ಳುತ್ತದೆ. ರಾಜನು ಕೆಟ್ಟರೆ ಸೇನೆಯೂ ಕೆಟ್ಟು ಹೋಗುತ್ತದೆ. ಕಿವಿಗಳು ಲಾಳಿಕೆಯಾಗಿದೆ, ಕಣ್ಣುಗಳು ಶತ್ರು ವನ್ನು ನಿರೀಕ್ಷಿಸುವ ಕಾವಲು ಪಡೆಯಾಗಿದೆ. ನಾಲಗೆಯು ವಿಷಯಗಳನ್ನು ವ್ಯಕ್ತಪಡಿಸುವ ಅನುವಾದಕವಾಗಿದೆ. ಕೈಗಳು ರೆಕ್ಕೆಗಳಾಗಿವೆ. ಕಾಲುಗಳು ಅಂಚೆಯಾಗಿವೆ.”
ಆದ್ದರಿಂದ ಅಲ್ಲಾಹನಲ್ಲೂ ಪರಲೋಕದಲ್ಲೂ ವಿಶ್ವಾಸವಿರಿಸಿರುವ ನಾವು ಯಾವ ಹಾದಿಯನ್ನು ಆರಿಸಬೇಕು ಎಂಬುದರ ಕುರಿತು ಆಲೋಚಿಸಬೇಕಾಗಿದೆ. ಸ್ವಗ್ರವನ್ನು ಬಯಸುವವರಾದ ನಾವು ಆ ಹಾದಿಯಲ್ಲಿ ಮುನ್ನಡೆದರೆ ಮಾತ್ರ ಅಲ್ಲಿಗೆ ತಲುಪಬಹುದು. ಕಾಸರದ ಬೀಜ ಬಿತ್ತಿ ಮಾವುವನ್ನು ಬಯಸಿದರೆ ಏನೂ ಪ್ರಯೋಜವಿಲ್ಲ. ನರಕದ ಹಾದಿಯಲ್ಲಿ ಸಂಚರಿಸಿ ಸ್ವಗ್ರಕ್ಕೆ ತಲುಪಬೇಕೆಂದು ಬಯಸು ವುದು ನಿರಥ್ರಕವಾಗಿದೆ. ಆದ್ದರಿಂದ ಇಹಲೋಕಕ್ಕೂ ಪರಲೋಕಕ್ಕೂ ಪ್ರಯೋಜನ ನೀಡುವ ಹಾದಿಯನ್ನು ನಾವು ಸ್ವೀಕರಿಸಬೇಕು. ಈ ದಾರಿ ಸ್ವೀಕರಿಸುವಲ್ಲಿ ಹೃದಯವು ಬಹು ಮುಖ್ಯ ಪಾತ್ರವಹಿಸುತ್ತದೆ. ಹೃದಯದ ನಿಯಂತ್ರಣವು ನಮ್ಮ ಕೈಯಲ್ಲೇ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ