ಮಂಗಳವಾರ, ಫೆಬ್ರವರಿ 28, 2012

ಈ ಅನುಗ್ರಹಗಳು ನಿಮಗೆ ಲಭಿಸಿವೆಯೇ ?


ಅಲ್ಲಾಹನು ಮನುಷ್ಯನಿಗೆ ಹಲವಾರು ವಸ್ತುಗಳನ್ನು ಅನುಗ್ರಹವಾಗಿ ನೀಡಿದ್ದಾನೆ. ಅವನು ಮನುಷ್ಯನನ್ನು ಸೃಷ್ಟಿಸಿರುವುದು ಅವನ ಆರಾಧನೆ ಗೋಸ್ಕರವಾಗಿದೆ. ಅಲ್ಲಾಹನನ್ನು ಆರಾಧಿಸಲಿಕ್ಕಾಗಿ ಮನುಷ್ಯರಿಗೆ ಬೇಕಾಗಿರುವ ಸಕಲ ಏಪ್ರಾಟುಗಳನ್ನೂ ಮಾಡಿದ್ದಾನೆ. ಓವ್ರ ಯಜಮಾನನು ತನ್ನದೇ ಆದ ಸಲಕರಣೆಗಳನ್ನು ಕೆಲಸದಾಳುಗಳಿಗೆ ನೀಡಿ ತನ್ನ ಕೆಲಸಗಳನ್ನು ಮಾಡಿಸುತ್ತಾನೆ. ಕೆಲಸ ದಾಳುಗಳು ಆ ಸಲಕರಣೆಗಳಿಂದ ತನ್ನ ಯಜಮಾನನ ಕೆಲಸಗಳನ್ನು ಮಾಡದೆ ಇನ್ಯಾ ರದೋ ಕೆಲಸಗಳನ್ನು ಮಾಡಿದರೆ ಯಜಮಾನನು ಕೋಪಗೊಳ್ಳುತ್ತಾನೆ. ಕೆಲಸದಾಳುಗಳಿಗೆ ಪಶ್ಚಾತ್ತಾಪ ಪಡುವ ಅವಕಾಶವನ್ನೂ ನೀಡದೆ ಅವರನ್ನು ಶಿಕ್ಷಿಸಲು ಮುಂದಾಗುತ್ತಾನೆ. ಅಲ್ಲಾಹನು ಕೂಡಾ ತನ್ನನ್ನು ಆರಾಧಿಸಲಿಕ್ಕಾಗಿ ತನ್ನ ದಾಸರಿಗೆ ಸಕಲ ವ್ಯವಸ್ಥೆಗಳನ್ನು ಮಾಡಿದ್ದಾನೆ. ಆದರೆ ಮನುಷ್ಯನು ಅವುಗಳಿಂದ ಲಾಭ ಪಡೆದು ಆರಾಧನೆಗೆ ಇತರ ರನ್ನೂ ಅಹ್ರನಾಗಿಸುತ್ತಾನೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ತಪ್ಪಾದ ಮಾಗ್ರದಲ್ಲಿ ಉಪ ಯೋಗಿಸುತ್ತಾನೆ. ಆದರೂ ಅಲ್ಲಾಹನು ತಕ್ಷಣ ಅವರನ್ನು ಶಿಕ್ಷಿಸದೆ ಪಶ್ಚಾತ್ತಾಪ ಪಟ್ಟುಕೊಳ್ಳಲು ಅವಕಾಶ ನೀಡುತ್ತಾನೆ. ಪಶ್ಚಾತ್ತಾಪ ಪಡದವರನ್ನು ಶಿಕ್ಷಿಸಲು ಒಂದು ಅವಧಿಯನ್ನೂ ನಿಶ್ಚಯಿಸಿರುತ್ತಾನೆ. ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ಹೇಳಿದ್ದಾನೆ, “ಅಲ್ಲಾಹನು ಜನರನ್ನು ಅವರ ಅಕ್ರಮಗಳಿಗಾಗಿ ತಕ್ಷಣ ಶಿಕ್ಷಿಸುತ್ತಿದ್ದರೆ ಭೂಮಿಯ ಮೇಲೆ ಒಂದು ಜೀವಿಯನ್ನೂ ಬಿಡುತ್ತಿರಲಿಲ್ಲ. ಆದರೆ ಅವನು ಎಲ್ಲರಿಗೂ ಒಂದು ನಿಶ್ಚಿತ ಸಮಯದ ವರೆಗೆ ಕಾಲಾವಕಾಶ ನೀಡುತ್ತಾನೆ. ಮುಂದೆ ಆ ಸಮಯ ಬಂದು ಬಿಟ್ಟರೆ ಅದರಿಂದ ಒಂದು ಕ್ಷಣವೂ
ಹಿಂದೆ ಮುಂದೆ ಆಗುವುದಿಲ್ಲ.” (ಅನ್ನಹ್್ಲ-61)
ಪ್ರವಾದಿಯವರು(ಸ) ಮನುಷ್ಯರಿಗೆ ಅಲ್ಲಾಹನು ನೀಡಿರುವ ನಾಲ್ಕು ಅನುಗ್ರಹಗಳ ಕುರಿತು ಹೇಳಿದ್ದಾರೆ, “ನಾಲ್ಕು ವಿಷಯಗಳನ್ನು ಹೊಂದಿದವನು ಇಹ-ಪರಗಳಲ್ಲಿ ಉತ್ತಮವಾದುದನ್ನೇ ಗಳಿಸುವನು. ಕೃತಜÕತೆ ತೋರಿಸುವ ಹೃದಯ, ಅಲ್ಲಾಹನನ್ನು ಸ್ಮರಿಸುತ್ತಿರುವ ನಾಲಗೆ, ಪರೀಕ್ಷೆಯ ಸಂದಭ್ರಗಳಲ್ಲಿ ಸಹನೆ ವಹಿಸುವ ಶರೀರ ಮತ್ತು ತನ್ನ ಶರೀರದಲ್ಲೂ ಪತಿಯ ಸಂಪತ್ತಿನಲ್ಲೂ ವಂಚನೆ ಬಯಸದ ಪತ್ನಿ.”
ವೊದಲನೆಯದಾಗಿ ಪ್ರವಾದಿಯವರು(ಸ) ಹೇಳಿರುವುದು ಹೃದಯದ ಕುರಿತಾಗಿದೆ. “ಓವ್ರ ವ್ಯಕ್ತಿಯ ಬೆಳವಣಿಗೆಯಲ್ಲೂ ಸ್ವಭಾವ ಗುಣಗಳಲ್ಲೂ ಹೃದಯದಷ್ಟು ಸ್ವಾದೀನ ಇರುವ ಇನ್ನೊಂದಂಗ ವಿಲ್ಲ. ಸಮಸ್ತ ಶರೀರವನ್ನು ನಿಯಂತ್ರಿಸುವುದು ಹೃದಯವಾಗಿದೆ. ಹೃದಯದ ಆಜಾÕನುಸಾರ ಶರೀರವು ವತ್ರಿಸುತ್ತದೆ. ಶರೀರದ ಅಂಗಾಂಗಗಳಿಗೆ ಆಜೆÕ ಲಭಿಸುವುದು ಹೃದಯದಿಂದಾಗಿದೆ. ಮನುಷ್ಯರ ವತ್ರನೆಗಳು, ಕಮ್ರಗಳು ಹೃದಯದ ತೀಮ್ರಾನಕ್ಕೆ ಹೊಂದಿಕೊಂಡಿರುತ್ತವೆ. ಪ್ರವಾದಿ ಯವರು(ಸ) ಹೇಳಿದರು, “ತಿಳಿಯಿರಿ, ಶರೀರದಲ್ಲಿ ಮಾಂಸದ ಒಂದು ಮುದ್ದೆಯಿದೆ. ಅದು ಉತ್ತಮ ವಾದರೆ ಶರೀರ ಪÇತ್ರಿ ಉತ್ತಮವಾಗುತ್ತದೆ. ಅದು ಕೆಟ್ಟು ಹೋದರೆ ಶರೀರ ಪÇತ್ರಿ ಕೆಟ್ಟು ಹೋಗುತ್ತದೆ. ಅದಾಗಿದೆ ಹೃದಯ.”
ಕೃತಜÕತೆ ಬಯಸುವ ಹೃದಯವು ಮನುಷ್ಯನಿಗೆ ಉತ್ತಮವಾದುದನ್ನು ಗಳಿಸಿಕೊಡುತ್ತದೆ. ಅಲ್ಲಾಹನ ಮಹಿಮೆಯನ್ನು ಅರಿತು ಅವನ ಅನುಗ್ರಹಗಳಿಗೆ ಹೃದಯದಲ್ಲಿ ಕೃತಜÕತಾ ಭಾವ ಮೂಡಿದರೆ ಶರೀರವೂ ಅದನ್ನು ಅನುಸರಿಸುತ್ತದೆ. ಹಾಗೆ ಅವನ ಎಲ್ಲಾ ಕಮ್ರಗಳೂ ಅಲ್ಲಾಹನಿಗೆ ಇಷ್ಟವಾಗಿ ರುವುದೂ, ಸ್ವಗ್ರ ಪ್ರಾಪ್ತಿಗೆ ಅಹ್ರವಾದುದೂ ಆಗುತ್ತದೆ. ಇದರಿಂದಾಗಿ ಈ ಅನುಗ್ರಹಗಳ ಪೈಕಿ ಹೃದಯಕ್ಕೆ ವೊದಲ ಆದ್ಯತೆ ನೀಡಲಾಗಿದೆ.
ಹೃದಯದ ಬಳಿಕದ ಸ್ಥಾನ ನಾಲಗೆಗಾಗಿದೆ. ಓವ್ರನ ವಿಜಯವನ್ನೂ ಪರಾಜಯವನ್ನೂ ನಿಣ್ರಯಿಸುವಲ್ಲಿ ಹೃದಯದಂತೆಯೇ ನಾಲಗೆಗೂ ಪಾಲಿದೆ. ನಾಲಗೆ ಉತ್ತಮವಾಗಿಲ್ಲದಿದ್ದಲ್ಲಿ ಇತರ ಉತ್ತಮ ಗುಣಗಳಿಂದೇನೂ ಪ್ರಯೋಜನವಿಲ್ಲ. ನಾವು ಮಾಡಿರುವ ಉತ್ತಮ ಕಮ್ರಗಳನ್ನು ನಾಲಗೆಯ ಪೆÇೀಲಿತನವು ಅಳಿಸಿ ಹಾಕುತ್ತದೆ. ಪ್ರವಾದಿಯವರು(ಸ) ಹೇಳಿದರು, “ಹೃದಯವು ಸರಿಯಾಗುವ ತನಕ ಯಾವುದೇ ದಾಸನ ವಿಶ್ವಾಸವು ಸರಿಯಾಗಲಿಕ್ಕಿಲ್ಲ. ನಾಲಗೆಯು ಉತ್ತಮ ಗೊಳ್ಳುವ ತನಕ ಹೃದಯವೂ ಉತ್ತಮಗೊಳ್ಳಲಿಕ್ಕಿಲ್ಲ.”
ನಾಲಗೆಯ ಕೆಟ್ಟ ಕೆಲಸಗಳಿಂದಾಗಿ ಹಲವಾರು ಅನಾಹುತಗಳು, ಕೆಟ್ಟ ಕೆಲಸಗಳು ನಡೆಯುತ್ತವೆ. ಅಲಕ್ಷ್ಯ ತೋರಿದರೆ ಕೆಡುಕನ್ನೇ ಉಂಟು ಮಾಡುವ ಈ ಅಂಗಾಂಗವನ್ನು ಒಳಿತಿನ ಹಾದಿಯಲ್ಲಿ ಉಪ ಯೋಗಿಸುವುದು ಇಂದಿನ ಸಮಾಜದಲ್ಲಿ ಕಷ್ಟ ಸಾಧ್ಯವಾದ ಕೆಲಸವಾಗಿದೆ. ಆದ್ದರಿಂದಲೇ ಪ್ರವಾದಿ ವಯ್ರರು(ಸ) ನಾಲಗೆಯ ಬಗ್ಗೆ ಖಾತರಿ ನೀಡಿ ದರೆ ಸ್ವಗ್ರದ ವಾಗ್ದಾನ ನೀಡುತ್ತೇನೆ ಎಂದಿದ್ದರು.
ಮೂರನೆಯದಾಗಿ ಪ್ರಸ್ತಾಪಿಸಲ್ಪಟ್ಟಿರುವ ಅನು ಗ್ರಹ ಪರೀಕ್ಷೆಯ ವೇಳೆಗಳಲ್ಲಿ ಸಹನೆ ವಹಿಸುವ ಶರೀರವಾಗಿದೆ. ಜೀವನವು ಸುಖ-ದುಃಖಗಳ ಸಂಗಮವಾಗಿದೆ. ಜೀವನ ನಡೆಸಲು ತೀಮ್ರಾನಿಸಿ ದವನಿಗೆ ಸುಖ ದುಃಖಗಳನ್ನು ಅನುಭವಿಸಲೇ ಬೇಕು. ಅಲ್ಲಾಹನು ಮನುಷ್ಯರನ್ನು ಪರೀಕ್ಷಿಸುತ್ತಿರು ತ್ತಾನೆ. ಕುರ್ಆನ್ ಹೇಳುತ್ತದೆ “ನಾವು ನಿಮ್ಮನ್ನು ಭಯಾಶಂಕೆ ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳನ್ನು ನಾಶಕ್ಕೊಳಪಡಿಸಿ ಪರೀಕ್ಷಿ ಸಿಯೇ ತೀರುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾತ್ರೆ ನೀಡಿರಿ.” (ಅಲ್ಬಕರ: 155) ಈ ಸಂದಭ್ರ ಗಳಲ್ಲೆಲ್ಲಾ ಸಹನೆ ವಹಿಸಿದರೆ ನಾಳೆ ಪರಲೋಕದಲ್ಲಿ ಸ್ವಗ್ರ ಪ್ರಾಪ್ತಿಗದು ಹೇತುವಾಗಬಹುದು. ಪ್ರವಾದಿಯವರು(ಸ) ಹೇಳಿ ದರು, “ಪರೀಕ್ಷೆಗಳಲ್ಲಿ ತಾಳ್ಮೆ ವಹಿಸುವವನಿಗೆ ಅಲ್ಲಾಹನು ಹೆಚ್ಚು ಹೆಚ್ಚು ಸಹನಾಶೀಲತೆ ನೀಡಿ ಅನುಗ್ರಹಿಸುವನು. ಸಹನೆಯಷ್ಟು ವಿಶಿಷ್ಟವೂ ವಿಶಾಲವೂ ಆದ ಯಾವುದೇ ಅನುಗ್ರಹವನ್ನು ಅಲ್ಲಾಹನು ಯಾರಿಗೂ ನೀಡಿಲ್ಲ.”
ನಾಲ್ಕನೆಯ ಅನುಗ್ರಹ ಸಚ್ಚಾರಿತ್ರ್ಯವಂತೆಯಾದ ಪತ್ನಿಯಾಗಿ ದ್ದಾಳೆ. ಇಂತಹ ಪತ್ನಿಯನ್ನು ಜೀವನ ಸಂಗಾತಿಯಾಗಿ ಪಡೆದ ವನು ಇಹದಲ್ಲೂ ಪರದಲ್ಲೂ ವಿಜಯಿಯಾಗುವನು. ಜೀವನವನ್ನು ಸಂತೋಷದಾಯಕವೂ ಅಥ್ರಪÇಣ್ರವೂ ಆಗಿಸುವಲ್ಲಿ ಪತ್ನಿಗೆ ದೊಡ್ಡ ಪಾತ್ರವಿದೆ. ಜೀವನದಲ್ಲಿ ಸಂತೋಷವನ್ನು ನೀಡದ ದುಃಖವನ್ನೇ ಸನ್ಮಾನಿಸುವ ಸ್ತ್ರೀಯರು ಅಲ್ಲಾಹನ ಶಾಪಕ್ಕೆ ಅಹ್ರರಾಗುವರು. ಪ್ರವಾದಿಯವರು(ಸ) ಮೂರು ವಿಷಯಗಳಲ್ಲಿ ಶಕುನವಿದೆ ಎಂದಿದ್ದಾರೆ. ಅವುಗಳ ಪೈಕಿ ಒಂದು, ಅನುಸರಣೆ ಯಿಲ್ಲದ ಸ್ತ್ರೀಯಾಗಿದ್ದಾಳೆ. ಆದ್ದರಿಂದ ಸ್ತ್ರೀಯರು, ಪ್ರವಾದಿ ವಯ್ರರು(ಸ) ಹೇಳಿರುವಂತೆ ಶಕುನಿಗಳಾಗಬಾರದು.
ಅಲ್ಲಾಹನು ನಮಗೆ ದಯಪಾಲಿಸಿರುವಂತಹ ಎಲ್ಲಾ ಅನುಗ್ರಹಗಳಿಗೆ ಕೃತಜÕತೆ ಅಪ್ರಿಸುತ್ತಾ ಆ ಮೂಲಕ ಶಾಶ್ವತವಾದ ಸ್ವಗ್ರವನ್ನು ಗಳಿಸಲು ನಾವು ಪ್ರಯತ್ನಿಸಬೇಕಾಗಿದೆ. ಸ್ವಗ್ರಕ್ಕಿರುವ ದಾರಿಯನ್ನು ಅಲ್ಲಾಹನು ತೋರಿಸಿಕೊಟ್ಟಿರುವಾಗ ನಾವೇಕೆ ಅಡ್ಡ ದಾರಿ ಹಿಡಿಯುವುದು?

3 ಕಾಮೆಂಟ್‌ಗಳು: