ಶುಕ್ರವಾರ, ಫೆಬ್ರವರಿ 10, 2012

ನಿಮ್ಮ ಕರ್ಮಗಳು ಸ್ವೀಕೃತವಾಗಬೇಕೇ? ಹಾಗಾದರೆ...


ಸತ್ಯವಿಶ್ವಾಸಿಗಳು ಸತ್ಕಮ್ರಗಳನ್ನೆಸಗುವುದು ಮತ್ತು ದುಷ್ಕಮ್ರಗಳನ್ನು ವಜ್ರಿಸುವುದು ಅಲ್ಲಾಹನ ಸಂಪ್ರೀತಿಗೋಸ್ಕರವಾಗಿದೆ. ಅವರು ಮಾಡುವ ಕಮ್ರ ಗಳು ಅಲ್ಲಾಹನು ಸ್ವೀಕರಿಸಬೇಕು ಎಂಬ ಅದಮ್ಯ ಬಯಕೆ ಅವರಲ್ಲಿರುತ್ತದೆ. ಆದರೆ ಕೇವಲ ಕೆಲವು ಸತ್ಕಮ್ರಗಳನ್ನು ನಿವ್ರಹಿಸಿದ ಮಾತ್ರಕ್ಕೆ ಅವನನ್ನು ಅಲ್ಲಾಹನು ಸ್ವೀಕರಿಸುತ್ತಾನೆ ಎಂಬ ಭಾವನೆಯು ಹಗಲುಗನಸು ಮಾತ್ರವಾಗಿದೆ. ಸತ್ಕಮ್ರಗಳು ಅಲ್ಲಾಹನ ಬಳಿ ಸ್ವೀಕೃತಗೊಳ್ಳಬೇಕಾ ದರೆ ವಿಶ್ವಾಸಿಗಳ ಜೀವನವು ಪÇತ್ರಿಯಾಗಿ ಅಲ್ಲಾಹನಿಗೆ ಸಮಪ್ರಿತ ವಾಗಿರಬೇಕು. ಸಾಮಾಜಿಕ, ರಾಜಕೀಯ, ಆಥ್ರಿಕ ರಂಗಗಳಲ್ಲಿ ಜೀವನವು ಹೊಲಸಾಗಿದ್ದು ಧಾಮ್ರಿಕ ರಂಗದಲ್ಲಿ ಮಾತ್ರ ಸುಸ್ಥಿತಿಯಲ್ಲಿದ್ದರೆ ಅವನ ಕಮ್ರ ಗಳಿಂದ ಯಾವುದೇ ಪ್ರಯೋಜನವಿಲ್ಲ.
ಮುಖ್ಯವಾಗಿ ಜನರೊಂದಿಗಿನ ಸಂಬಂಧವು ಸರಿ ಯಾಗಿರಬೇಕು. ಇತರರ ಸಂಪತ್ತನ್ನು ಅನ್ಯಾಯವಾಗಿ ಕಬಳಿಸುತ್ತಾ, ಇತರರಿಗೆ ದ್ರೋಹವೆಸಗಿ ಅವರ ಶಾಪಕ್ಕೆ ಗುರಿಯಾಗುತ್ತಾ ಬದುಕುವುದಾದರೆ ಅವನ ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವು ಶೂನ್ಯವಾಗುತ್ತದೆ. ಜನರೊಂದಿಗೆ ಕರುಣೆ ತೋರಬೇಕಾದುದು ಪ್ರತಿ ಯೋವ್ರ ವಿಶ್ವಾಸಿಯ ಕತ್ರವ್ಯವಾಗಿದೆ. ಪ್ರವಾದಿ ಯವರು(ಸ) ಹೇಳಿದರು, “ಯಾರು ಜನರೊಂದಿಗೆ ಕರುಣೆ ತೋರುವುದಿಲ್ಲವೋ ಅವನೊಂದಿಗೆ ಅಲ್ಲಾಹನೂ ಕರುಣೆ ತೋರುವುದಿಲ್ಲ.”
ಜನರು ನಮ್ಮನ್ನು ಇಷ್ಟಪಡಬೇಕಾದರೆ ನಮ್ಮ ವ್ಯಕ್ತಿತ್ವವು ಉತ್ತಮವಾಗಿರಬೇಕು. ನಾವು ಇತರ ರೊಂದಿಗೆ ಹೇಗೆ ಸಂಬಂಧವನ್ನು ಬಲಪಡಿಸಬೇಕು ಎಂಬುದರ ಬಗ್ಗೆ ಇಂದು ಹಲವಾರು ವ್ಯಕ್ತಿತ್ವ ವಿಕಸನ ಪÅಸ್ತಕಗಳು ಲಭ್ಯ. ಇತರರ ಹೃದಯದಲ್ಲಿ ಹೇಗೆ ಸ್ಥಾನಗಳಿಸಬಹುದು ಎಂಬ ಬಗ್ಗೆ ಕುರ್ಆನ್ ಮತ್ತು ಹದೀಸ್ಗಳ ಆಧಾರದಲ್ಲಿ ಕೆಲವು ಮಾಗ್ರೋಪಾಯಗಳು ಇಲ್ಲಿವೆ.
1. ಮುಗುಳ್ನಗಬೇಕು: ಮುಗುಳ್ನಗು ಎಂಬುದು ಅಪರಿಚಿತತೆಯಿಂದ ಪರಿಚಿತತೆಯೆಡೆಗೆ ತಲುಪಿಸು ತ್ತದೆ. ಮುಗುಳ್ನಗುವಿಗೆ ಜನರನ್ನು ಆಕಷ್ರಿಸುವ ಶಕ್ತಿ ಇದೆ. ಅದು ಇತರರೊಂದಿಗೆ ಮಾತಿಗಾರಂಭಿ ಸುವುದಕ್ಕಿರುವ ಮುನ್ನುಡಿಯೂ ಆಗಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಮುಗುಳ್ನಗೆಯು ಪÅಣ್ಯ ಕಮ್ರವಾಗಿದೆ. ಪ್ರವಾದಿಯವರು(ಸ) ಹೇಳಿದರು, “ಮುಗುಳ್ನಗೆಯು ಒಂದು ದಾನವಾಗಿದೆ.” ಆದ್ದರಿಂದ ಜನರನ್ನು ಕಾಣುವಾಗ ಮುಖ ಸಿಂಡರಿಸದೆ ಮುಗುಳ್ನಗಬೇಕು.
2. ಸಲಾಮ್ ಹೇಳಬೇಕು: ಪ್ರಸನ್ನ ವದನ ದೊಂದಿಗೆ ಸಲಾಮ್ ಹೇಳಿ ಕೈಕುಲುಕುತ್ತಾ ಇತರ ರೊಂದಿಗೆ ಮಾತಿಗಾರಂಭಿಸಬೇಕು. ಆಗ ಯಾವುದೇ ಕಠಿಣ ಹೃದಯಿಯೂ ನಮಗೆ ಸ್ಪಂದಿಸುತ್ತಾನೆ. ಸಲಾಮ್ ಒಂದು ಪ್ರಾಥ್ರನೆ ಆಗಿದೆ. ಪರಿಚಯ ವಿಲ್ಲದ ವ್ಯಕ್ತಿಯೊಂದಿಗೆ ‘ನಿನ್ನ ಮೇಲೆ ಶಾಂತಿ ಇರಲಿ’ (ಅಸ್ಸಲಾಮು ಅಲೈಕುಮ್) ಎಂದು ಹೇಳುವಾಗ ನಾವು ಅವನೊಂದಿಗೆ ತೋರುವ ಕಾಳಜಿಗೆ ಅವನು ಮನ ಸೋಲುತ್ತಾನೆ. ಸಲಾಮನ್ನು ವ್ಯಾಪಿಸಲು ಪ್ರವಾದಿಯವರು(ಸ) ಹೇಳಿದ್ದಾರೆ.
3. ಮೌನಿ ಅಥವಾ ಮಿತಭಾಷಿಯಾಗಬೇಕು: ಅಗತ್ಯವಿದ್ದಷ್ಟು ಮಾತ್ರ ಮಾತನಾಡಬೇಕು. ಅನಗತ್ಯವಾಗಿ ಮಾತನಾಡಿದರೆ ನಮ್ಮ ಮತ್ತು ಜನರ ಮಧ್ಯೆ ಉತ್ತಮ ಸಂಬಂಧವೇಪ್ರಡುವುದರ ಬದಲಾಗಿ ಶಿಥಿಲಗೊಳ್ಳುವ ಸಂಭವವಿದೆ. ಮಾತ ನಾಡುವಾಗ ಯೋಚಿಸಿ ಮಾತನಾಡಬೇಕು. ಒಂದು ಅನಗತ್ಯ ಮಾತು ನಾಲಗೆಯಿಂದ ಹೊರಬಿದ್ದ ಬಳಿಕ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಅಲೀ(ರ) ಹೇಳಿದರು, “ತಿಳಿಗೇಡಿಯ ಹೃದಯವು ಅವನ ನಾಲಗೆಯ ಹಿಂದಿರುತ್ತದೆ. ಬುದ್ಧಿವಂತನ ನಾಲಗೆಯು ಅವನ ಹೃದಯದ ಹಿಂದಿರುತ್ತದೆ.” ಅಥ್ರಾತ್ ತಿಳಿಗೇಡಿಯು ಮಾತನಾಡಿದ ಬಳಿಕ ಚಿಂತಿಸುತ್ತಾನೆ. ಬುದ್ಧಿವಂತನು ಚಿಂತಿಸಿದ ಬಳಿಕ ಮಾತನಾಡುತ್ತಾನೆ. ಆದ್ದರಿಂದ ಮಾತನಾಡುವಾಗ ಮಿತವಾಗಿ, ಉತ್ತಮವಾದ ಮಾತುಗಳನ್ನಾಡಬೇಕು. ಪ್ರವಾದಿಯವರು(ಸ) ಹೇಳಿದರು, “ಯಾರು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿರಿಸು ತ್ತಾನೋ ಅವನು ಉತ್ತಮ ಮಾತುಗಳನ್ನಾಡಲಿ. ಇಲ್ಲದಿದ್ದರೆ ಮೌನ ವಹಿಸಲಿ.”
4. ಆಲಿಸುವವರಾಗಬೇಕು: ಯಾರಾದರೂ ಮಾತನಾಡುತ್ತಿರುವಾಗ ಅದರ ಮಧ್ಯೆ ಪ್ರವೇಶಿಸಿ ಮಾತನಾಡಬಾರದು. ಹಾಗೆ ಮಾತನಾಡುವುದು ಪ್ರವಾದಿ ಚಯ್ರೆಗೆ ವಿರುದ್ಧವಾಗಿದೆ. ಪ್ರವಾದಿ ಯವರು(ಸ) ಯಾರಾದರೂ ಮಾತನಾಡಿ ಮುಗಿಯುವುದಕ್ಕಿಂತ ಮುಂಚೆ ಮಧ್ಯೆ ಪ್ರವೇಶಿಸಿ ಮಾತನಾಡುತ್ತಿರಲಿಲ್ಲ. ನಾವು ಇತರರ ಮಾತನ್ನು ಆಲಿಸುವವರಾಗಬೇಕು. ಮನಸ್ಸಿನಲ್ಲಿ ಹಲವಾರು ದುಗುಡಗಳನ್ನು ತುಂಬಿಕೊಂಡು ಓಡಾಡುವವರಿರು ತ್ತಾರೆ. ಅವರು ತಮ್ಮ ಮನೋವೇದನೆಯನ್ನು ಹೇಳಿ ಮನಸ್ಸನ್ನು ಹಗುರಗೊಳಿಸಲು ಪರದಾಡುತ್ತಿರು ತ್ತಾರೆ. ಇಂತಹ ಸಂದಭ್ರಗಳಲ್ಲಿ ಅವರ ಮಾತು ಗಳನ್ನು ಆಲಿಸಿ ಸಾಧ್ಯವಾದರೆ ಅದಕ್ಕೆ ಪರಿಹಾರ ವನ್ನು ಸೂಚಿಸಬೇಕು. ಆಗ ಅವರ ಮನಸ್ಸು ನಿರಾಳವಾಗುತ್ತದೆ. ಮಾತ್ರವಲ್ಲ, ನಮ್ಮ ಮತ್ತು ಅವರ ಮಧ್ಯೆ ಸಂಬಂಧವು ದೃಢವಾಗುತ್ತದೆ.
5. ಪಾರಿತೋಷಕಗಳನ್ನು ನೀಡುತ್ತಿರಬೇಕು: ವಿಶೇಷ ಸಂದಭ್ರಗಳಲ್ಲಿ ಇತರರಿಗೆ ಪಾರಿತೋಷಕ ಗಳನ್ನು ನೀಡಬೇಕು. ಇದು ಪ್ರವಾದಿ ಚಯ್ರೆಯ ಭಾಗವಾಗಿದೆ. ಹೀಗೆ ಸನ್ಮಾನಗಳನ್ನು ನೀಡುವಾಗ ಅವರಲ್ಲಿ ನಮ್ಮ ಬಗ್ಗೆ ಕಾಳಜಿ ಮೂಡುತ್ತದೆ. ಇದು ಸಂಬಂಧ ಸ್ಥಾಪನೆಗೆ ನಾಂದಿಯಾಗುತ್ತದೆ. ಇದು ಹಲವು ವೇಳೆ ನಮ್ಮ ಅನುಭವಕ್ಕೆ ಬಂದ ವಿಚಾರವಾಗಿದೆ.
6. ಯಾರಾದರೂ ಏನಾದರೂ ವಸ್ತುಗಳನ್ನು ನೀಡಿದರೆ ತಿರಸ್ಕರಿಸದೆ ಸ್ವೀಕರಿಸಬೇಕು: ನಾವು ಇತರ ರಿಗೆ ಪಾರಿತೋಷಕಗಳನ್ನು ನೀಡುವಂತೆ ನಮಗೂ ಯಾರಾದರೂ ನೀಡಬಹುದು. ಆಗ ನಾವು ಅದನ್ನು ತಿರಸ್ಕರಿಸದೆ ಸ್ವೀಕರಿಸಬೇಕು. ಹಾಗೆ ತಿರಸ್ಕರಿಸಿದರೆ ಅವರಿಗೆ ಮುಜುಗರವೂ ಬೇಸರವೂ ಉಂಟಾಗ ಬಹುದು. ಅದು ನಮ್ಮ ಮಧ್ಯೆ ಇರುವ ಸಂಬಂಧದ ಮೇಲೂ ಪರಿಣಾಮ ಬೀರಬಹುದು. ಒಮ್ಮೆ ಪ್ರವಾದಿ ಯವರು(ಸ) ಉಮರ್ರಿಗೆ(ರ) ಯಾವುದೋ ಒಂದು ವಸ್ತುವನ್ನು ನೀಡಿದರು. ಆಗ ಉಮರ್ರು(ರ) ತಿರಸ್ಕರಿಸುತ್ತ ಹೇಳಿದರು, “ಇದಕ್ಕೆ ನನಗಿಂತ ಅಹ್ರರು ಬೇರೆಯವರಿದ್ದಾರೆ” ಆಗ ಪ್ರವಾದಿಯವರು(ಸ) ಹೇಳಿದರು, “ನೀವು ಬಯಸದೆ ಅನಿರೀಕ್ಷಿತವಾಗಿ ಯಾರಾದರೂ ಒಂದು ವಸ್ತುವನ್ನು ನೀಡಿದರೆ ಅದನ್ನು ಸ್ವೀಕರಿಸಬೇಕು. ಆದರೆ ಅದರ ಹಿಂದೆ ಬೀಳಬಾರದು.”
7. ಇತರರ ಅವಶ್ಯಕತೆಗಳನ್ನು ಪೂರೈಸಿ ಕೊಡ ಬೇಕು: ಯಾರಾದರೂ ತನ್ನ ಅಗತ್ಯತೆಯನ್ನು ಪÇರೈಸಿಕೊಳ್ಳಲು ನಮ್ಮಲ್ಲಿ ಕೋರಿದಾಗ ಸಾಧ್ಯ ವಾದರೆ ನಾವು ಅದನ್ನು ಪÇರೈಸಿ ಕೊಡಬೇಕು. ಇನ್ನು ಸಾಧ್ಯವಾಗದಿದ್ದರೆ ನಮ್ಮ ಅಸಹಾಯಕತೆ ಯನ್ನು ಅವರಿಗೆ ಮನಗಾಣಿಸಬೇಕು. ಯಾವುದೇ ಪ್ರತಿಕ್ರಿಯೆ ನೀಡದೆ ಅವರನ್ನು ಬರಿಗೈಯಲ್ಲಿ ಕಳಿಸಿದಾಗ ಅವರಿಗೆ ನಮ್ಮ ಮೇಲೆ ದ್ವೇಷ ಉಂಟಾಗಬಹುದು.ಇದರಿಂದಾಗಿ ನಮ್ಮ ಮಧ್ಯೆ ಇದ್ದ ಸಂಬಂಧವು ಮುರಿದು ಹೋಗುವ ಸಾಧ್ಯತೆಯೂ ಇದೆ. ಇತರರಿಗೆ ನೆರವಾಗುವವನನ್ನು ಅಲ್ಲಾಹನು ಇಷ್ಟಪಡುತ್ತಾನೆ. ಪ್ರವಾದಿ ಯವರು(ಸ) ಹೇಳಿದ್ದಾರೆ, “ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಜನರಿಗೆ ಅತೀ ಹೆಚ್ಚು ಉಪಕಾರ ಮಾಡುವವನಾಗಿದ್ದಾನೆ.”
8. ಕ್ಷಮೆಯನ್ನೂ ಸಹನೆಯನ್ನೂ ಮೈಗೂಡಿಸಿಕೊಳ್ಳಬೇಕು: ಕ್ಷಮೆ ಮತ್ತು ಸಹನೆಯು ಓವ್ರ ವಿಶ್ವಾಸಿಯ ಅತಿ ದೊಡ್ಡ ಅಸ್ತ್ರವಾಗಿದೆ. ಇವುಗಳು ಎಂಥ ಕಠಿಣ ಹೃದಯಿಯನ್ನೂ ಶರಣಾಗಿಸುತ್ತದೆ. ಅತ್ಯಂತ ಶಕ್ತಿಶಾಲಿ ವ್ಯಕ್ತಿಯು ಮಲ್ಲಯುದ್ಧದಲ್ಲಿ ಜಯಿಸುವವನಲ್ಲ. ಬದಲಾಗಿ ಪ್ರತಿಕಾರ ತೀರಿಸುವ ಶಕ್ತಿ ಇದ್ದೂ ಕ್ಷಮಿಸುವವನಾಗಿದ್ದಾನೆ ನಿಜವಾದ ಮಲ್ಲ. ಯಾರಾದರೂ ನಮ್ಮನ್ನು ಜನರ ಮುಂದೆ ತಾನು ದೊಡ್ಡ ಶಕ್ತಿವಂತ ಎಂದು ಬಿಂಬಿಸಲು ಅಶ್ಲೀಲವಾಗಿ ಬಯ್ಯುವಾಗ ನಾವು ಅವನಿಗೆ ಪ್ರತ್ಯುತ್ತರ ನೀಡದೆ ಸಹನೆ ವಹಿಸಿ ಅವನ ಕಡೆಗೆ ಒಂದು ಮುಗುಳ್ನಗೆ ಬೀರಿದರೆ ಅವನು ಖಂಡಿತ ವಾಗಿಯೂ ಮುಜುಗರಕ್ಕೊಳಾಗುತ್ತಾನೆ. ಅವನು ಹಾಗೆ ಬೈಯುವಾಗ ಅಲ್ಲಿ ಅವಮಾನಕ್ಕೀಡಾಗುವುದು ನಾವಲ್ಲ. ಬದಲಾಗಿ ಅವನೇ ಆಗಿದ್ದಾನೆ. ಅಲ್ಲಾಹನು ಹೇಳುತ್ತಾನೆ, “ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿವ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.” (ಹಾಮಿಮ್ ಅಸ್ಸಜ್ದ: 34)
9. ಒಳಿತನ್ನು ಬಯಸಬೇಕು: ನವ್ಮೊಂದಿಗೆ ಬೆರೆಯುತ್ತಿರುವ ಜನರಿಗೆ ಒಳಿತು ಸಿಗಬೇಕು ಎಂಬ ಮನಸ್ಸು ನಮ್ಮದಾಗ ಬೇಕು. ಅವನಲ್ಲಿ ಏನಾದರೂ ಅಭಿವೃದ್ಧಿ ಉಂಟಾದರೆ ಅದಕ್ಕೆ ಅಸೂಯೆ ಪಡಬಾರದು. ಬದಲಾಗಿ ಅವನ ಸಂತೋಷದಲ್ಲಿ ಪಾಲ್ಗೊಳ್ಳಬೇಕು. ಮನಸ್ಸಿನೊಳಗೆ ಇತರರ ಬಗ್ಗೆ ಅಸೂಯೆ ತುಂಬಿಕೊಂಡಿದ್ದರೂ ಹೊರಗಡೆ ಕೃತಕ ನಗೆ ಬೀರುವವರಿದ್ದಾರೆ. ಇದು ಸಲ್ಲದು. ಪ್ರವಾದಿಯವರು(ಸ) ಹೇಳಿದ್ದಾರೆ, “ನೀವು ಅಸೂಯೆಯ ಬಗ್ಗೆ ಎಚ್ಚರ ವಹಿಸಿರಿ. ಬೆಂಕಿಯು ಕಟ್ಟಿಗೆಯನ್ನು ತಿನ್ನುವಂತೆ ಅಸೂಯೆಯು ಸತ್ಕಮ್ರಗಳನ್ನು ತಿನ್ನುತ್ತದೆ.”
10. ಕ್ಷಮೆ ಕೇಳುತ್ತಿರಬೇಕು: ನಮ್ಮಲ್ಲಿ ತಪ್ಪು ಸಂಭವಿಸು ವುದು ಸಹಜವಾಗಿದೆ. ಮನುಷ್ಯನಾದ ಮೇಲೆ ತಪ್ಪು ಸಂಭವಿಸಲೇಬೇಕು. ಕೆಲವು ತಪ್ಪುಗಳು ವೈಯಕ್ತಿಕವಾದರೆ ಇನ್ನು ಕೆಲವು ತಪ್ಪು ಗಳು ಇತರರಿಗೆ ದೋಷ ಉಂಟು ಮಾಡುವಂಥವುಗಳಾಗಿವೆ. ಇತರರಿಗೆ ನಮ್ಮಿಂದ ಯಾವುದೇ ತಪ್ಪು ಸಂಭವಿಸಿದರೆ ಅವರೊಂದಿಗೆ ಕ್ಷಮೆ ಕೇಳಬೇಕು. ಅದು ಎಷ್ಟು ಸಣ್ಣದಾದರೂ ಸರಿ. ಪ್ರವಾದಿಯವರು(ಸ) ಹೇಳಿದರು, “ಆದಮರ ಎಲ್ಲಾ ಸಂತತಿಗಳು ತಪ್ಪೆಸಗುವವರಾಗಿ ದ್ದಾರೆ. ಅವರಲ್ಲಿ ಅತ್ಯುತ್ತಮನು ಪಶ್ಚಾತ್ತಾಪ ಪಡುವವನಗಿ ದ್ದಾನೆ.” ನಾವು ಕ್ಷಮೆ ಕೇಳುವಾಗ ಅವರಿಗೆ ನಮ್ಮ ಮೇಲೆ ಗೌರವ ಮೂಡುತ್ತದೆ. ಇದರಿಂದಾಗಿ ನಮ್ಮ ಮತ್ತು ಅವರ ಮಧ್ಯೆ ಬಾಂಧವ್ಯ ಉಂಟಾಗುತ್ತದೆ.
11. ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು: ಓವ್ರನ ವಸ್ತ್ರಧಾರಣೆಯು ಜನರು ಅವನನ್ನು ನೋಡುವ ದೃಷ್ಟಿಕೋನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಸರಳವೂ ಶುಭ್ರವೂ ಆದ ವಸ್ತ್ರ ಧರಿಸಿದ ಓವ್ರ ವ್ಯಕ್ತಿ ಏನಾದರೂ ಹೇಳುತ್ತಾನೆಂದಾದರೆ ಅದನ್ನು ಆಲಿಸಲು ಜನರಿರುತ್ತಾರೆ. ಅವನ ಮಾತಿಗೆ ಮನ್ನಣೆ ಲಭಿಸುತ್ತದೆ. ಜನರು ಅಂಥವರೊಂದಿಗೆ ಸಹವಾಸ ಬೆಳೆಸಲು ಬಯಸುತ್ತಾರೆ. ಶುದ್ಧಿ ಮತ್ತು ಸರಳತೆಗೆ ಇಸ್ಲಾಮ್ ಮಹತ್ವ ನಿಡಿದೆ. ಶುದ್ಧಿಯು ವಿಶ್ವಾಸದ ಅಧ್ರಾಂಶವಾಗಿದೆ.
ಈ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡಿರುವವನು ಖಂಡಿತವಾಗಿಯೂ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಜನರ ವಧ್ಯೆ ಅಂತಹ ವ್ಯಕ್ತಿಗಳ ಪದವಿಯು ಉನ್ನತಿಗೇರಿರು ತ್ತದೆ. ಆದ್ದರಿಂದ ನಾವು ಈ ಗುಣಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೈಗೂಡಿಸಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ