ಶುಕ್ರವಾರ, ಫೆಬ್ರವರಿ 10, 2012

ಕಅಬಾಲಯದಲ್ಲಿ ವಿಗ್ರಹಗಳಿದ್ದಾಗ ಪ್ರವಾದಿ (ಸ ) ಹೆಣ್ಣು ಶಿಶುವಿನ ಬಗ್ಗೆ ಮಾತಾಡಿದ್ದೇಕೆ?


ಎಲ್ಲಾ ಪ್ರವಾದಿಗಳು ಅಲ್ಲಾಹನ ಪ್ರತಿನಿಧಿಗಳಾಗಿ ಈ ಭೂಮಿಗೆ ಆಗಮಿಸಿದ್ದಾರೆ. ಧಮ್ರ ಪ್ರಚಾರ ಎಂಬ ಮಹೋನ್ನತ ಹೊಣೆ ಗಾರಿಕೆಯು ಅವರ ಮೇಲಿತ್ತು. ಧಮ್ರ ಪ್ರಚಾರಕ್ಕಾಗಿ ಅವರು ಆರಿಸಿದ ಮಾಧ್ಯಮವು ಸಂವಾದಗಳಾಗಿದ್ದವು. ಸಂದಭ್ರಕ್ಕೆ ತಕ್ಕಂತೆ ಅವರ ಸಂವಾದಗಳಲ್ಲಿ ಬದಲಾವಣೆಯಾಗುತ್ತಿ ದ್ದವು. ಆದರೆ ಆ ಸಂವಾದಗಳ ಮೂಲ ವಿಷಯಗಳಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ.
ಪ್ರವಾದಿಗಳು ಏಕದೇವತ್ವದೆಡೆಗಿನ ಕರೆಯನ್ನು ತಮ್ಮ ಧಮ್ರಪ್ರಚಾರದ ಮೂಲವನ್ನಾಗಿಸಿದರು. ವಿಶಾಲವೂ ಸಮಗ್ರವೂ ಆದ ಒಂದು ಸಿದ್ಧಾಂತದ ಕಡೆಗೆ ಜನರನ್ನು ಆಹ್ವಾನಿಸಿದರು. (21: 25) ಆದ್ದರಿಂದ ಪ್ರವಾದಿಗಳ ಆಗಮನದ ಉದ್ದೇಶವು ಏನಾಗಿತ್ತೆಂದು ಈ ಸೂಕ್ತವು ತಿಳಿಸುತ್ತದೆ.
ಈ ಭೂಮಿಗೆ ಕಳುಹಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಕೇವಲ ಆರಾಧನಾ ವಿಷಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಜನಪರ ವಾದ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ದ್ದರು. ಅವರು ಆ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ತೌಹೀದನ್ನು (ಏಕದೇವತ್ವ) ಕಂಡಿದ್ದರು. ಪ್ರವಾದಿಗಳ ಕಾಯ್ರ ರಂಗಗಳು ಕೇವಲ ಮಸೀದಿ ಗಳಿಗೆ ಸೀಮಿತವಾಗಿರದೆ ಜನರ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ, ಆಥ್ರಿಕ ರಂಗಗಳನ್ನು ಆವರಿಸಿದ್ದವು. ಜನರ ಜೀವನದ ಯಾವುದಾದರೂ ರಂಗದಲ್ಲಿ ದೇವೇತರ ಶಕ್ತಿಗಳ ಪ್ರಭಾವ ಉಂಟಾದಾಗ ಅದರ ವಿರುದ್ಧ ಧ್ವನಿ ಎತ್ತದ ಯಾವುದೇ ಪ್ರವಾದಿಗಳು ಈ ಜಗತ್ತಿಗೆ ಬರಲಿಲ್ಲ. ಅವರು ಹೆಚ್ಚು ಒತ್ತು ನೀಡಿದ್ದೂ ಈ ರೀತಿಯ ಶಕ್ತಿಗಳ ದಮನಕ್ಕೆ ಆಗಿತ್ತು. ಅದು ಬಹುದೇವ ರಾಧನೆ ಆಗಿರಬಹುದು, ದೇಹೇಚ್ಛೆಯೂ ಅಹಂಕಾರವೂ ಆಗಿರಬಹುದು, ಸಾಮ್ರಾಜ್ಯಶಾಹಿತ್ವವೂ ಪÅರೋಹಿತ ಶಾಹಿಯೂ ಆಗಿರಬಹುದು. ಒಟ್ಟಿನಲ್ಲಿ ದೇವಾರಾಧನೆಯಿಂದ ತಡೆಯುವ ಎಲ್ಲಾ ಸಿದ್ಧಾಂತಗಳೂ ವಿಚಾರಗಳೂ ಪ್ರವಾದಿಗಳ ಹೋರಾಟಗಳಿಗೆ ಗುರಿ ಯಾಗಿದ್ದವು.
ಎಲ್ಲಾ ಕಾಲಗಳಲ್ಲೂ ಒಂದೇ ರೀತಿಯ ಕೆಡುಕುಗಳು ತಾಂಡವ ವಾಡುತ್ತಿರಲಿಲ್ಲ. ಒಂದು ಕಾಲದಲ್ಲಿ ಫಿರ್ಔನನ ಸಾಮ್ರಾಜ್ಯತ್ವವಾದರೆ ಮತ್ತೊಂದು ಕಾಲದಲ್ಲಿ ಆಝರ್ನ ಪÅರೋಹಿತಶಾಹಿಯಾಗಿತ್ತು. ಲೂತ್ ಜನಾಂಗದ ಸಲಿಂಗರತಿಯು ಒಂದು ಕಾಲದಲ್ಲಾದರೆ, ಶುಐಬ್ರ(ಅ) ಜನತೆಯ ಅಳತೆಯಲ್ಲೂ ತೂಕದಲ್ಲೂ ವಂಚಿಸುವ ಸ್ವಭಾವವು ಮಗದೊಂದು ಕಾಲದಲ್ಲಾಗಿತ್ತು. ಈ ಎಲ್ಲಾ ಕೆಡುಕುಗಳ ವಿರುದ್ಧ ಆ ಕಾಲಗಳಲ್ಲಿ ಆಗಮಿಸಿದ ಪ್ರವಾದಿಗಳು ಧ್ವನಿ ಎತ್ತಿದ್ದಾರೆ. ಅವರ ಹೋರಾಟಗಳ ಶೈಲಿಯು ವಿಭಿನ್ನ ವಾಗಿತ್ತು. ಆದರೆ ಅದೆಲ್ಲವೂ ಏಕದೇವ ತ್ವದ ತಳಹದಿಯಲ್ಲಾಗಿತ್ತು.
ಪ್ರವಾದಿ ಇಬ್ರಾಹೀಮ್(ಅ) ಆ ಕಾಲದ ಆಧ್ಯಾತ್ಮಿಕತೆಗೂ ಆಡಳಿತ ವಗ್ರಕ್ಕೂ ನಡುವೆ ಇದ್ದ ಮೈತ್ರಿಯ ವಿರುದ್ಧ ಹೋರಾಡಿದರು. ಬಹು ದೇವಾರಾಧನೆಯನ್ನು ವಿರೋಧಿಸಿ ದಾಗಲೂ ವಿಗ್ರಹಗಳನ್ನು ನಾಶಪಡಿಸಿ ದಾಗಲೂ ನಮ್ರೂದ್ ಕುಪಿತನಾದದ್ದು ಈ ಮೈತ್ರಿಯಿಂದಾಗಿದೆ. ಫಿರ್ಔನ್ನ ಆಡಳಿತಕ್ಕೆ ಕಣ್ಣೋಡಿಸುವುದಾದರೆ ಇದೇ ರೀತಿಯ ಮೈತ್ರಿ ಕಾಣಲು ಸಾಧ್ಯ. ಮೂಸಾರ(ಅ) ವಿರುದ್ಧ ಜನತೆಯನ್ನು ಎತ್ತಿಕಟ್ಟಲು ಫಿರ್ಔನ್ ಮುಂದಾಗಿರುವುದು ಈ ಕಾರಣದಿಂದಾಗಿದೆ. “ಇವನು ನಮ್ಮ ದೇವತೆಯನ್ನು ಹಿಯಾಳಿಸುತ್ತಾನೆ” ಎಂದು ಜನರನ್ನು ಉದ್ರೇಕಿಸಿದನು. ಅಲ್ಲಾಹನು ಹೇಳು ತ್ತಾನೆ. (7:27)
ಜೀವನದ ಭೌತಿಕವಾದ ಸಮಸ್ಯೆ ಗಳನ್ನು ಪರಿಹರಿಸುವುದಕ್ಕಲ್ಲ ಮಹತ್ವ. ಬದಲಾಗಿ ಅವರನ್ನು ನರಕ ಶಿಕ್ಷೆಯಿಂದ ವಿವೋಚನೆಗೊಳಿಸುವುದಕ್ಕೆ ಮಹತ್ವ ನೀಡಬೇಕು. ಅದರ ಬಳಿಕವೇ ಸಾಮಾ ಜಿಕ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು ಎಂಬ ವಾದವು ಅಪ್ರಸ್ತುತ ವಾಗಿದೆ. ಹಾಗಿರುತ್ತಿದ್ದರೆ ಫರೋವರ ಆಡಳಿತದ ದೌಜ್ರನ್ಯಗಳಿಂದ ಜನತೆ ಯನ್ನು ರಕ್ಷಿಸಲು ಕರೆಕೊಟ್ಟದ್ದು ಯಾಕೆ? ಒಟ್ಟಿನಲ್ಲಿ ಪ್ರವಾದಿಗಳ ಹೋರಾಟವು ನಾನಾ ವಿಧದ ಶಿಕ್್ರಗಳ ವಿರುದ್ಧವೇ ಆಗಿತ್ತು. ಇಬ್ರಾಹೀಮ್(ಅ) ಆರಾಧನೆ ಯಲ್ಲಿರುವ ಶಿಕ್್ರನ ವಿರುದ್ಧ ಧ್ವನಿ ಎತ್ತಿದರು. ಪ್ರವಾದಿ ಮೂಸಾ(ಅ) ಆಡಳಿತದಲ್ಲಿರುವ ಶಿಕ್್ರನ ವಿರುದ್ಧ ಹೋರಾಡಿದರು. (79: 18) ಮೂಸಾ(ಅ) ಆರಾಧನಾ ಶಿಕ್್ರಗೆ ಪ್ರಥಮ ಸ್ಥಾನ ನೀಡಬೇಡವೇ ಎಂದು ಅಲ್ಲಾಹನನ್ನು ಪ್ರಶ್ನಿಸಿಲ್ಲ. ಕಾರಣ ಅಲ್ಲಿ ಆರಾಧಿಸಲ್ಪಡುವ ಮೂತ್ರಿಗಳಿಗಿಂತ ಅಪಾಯಕಾರಿ, ಆಡಳಿತ ವಗ್ರವಾಗಿತ್ತು ಎಂದು ಮೂಸಾರಿಗೆ(ಅ) ಅಲ್ಲಾಹನು ಮನವರಿಕೆ ಮಾಡಿಸಿದ್ದನು. (43:51)
ಲೂತ್ರ(ಅ) ಸಮುದಾಯವು ಮಾನವೀಯತೆಗೆ ನಿಲುಕದ ಮತ್ತು ಪ್ರಕೃತಿಗೆ ವಿರುದ್ಧವಾದ ಸಲಿಂಗರತಿ ಎಂಬ ಮಹಾ ಪಾಪದಲ್ಲಿ ಮುಳುಗಿತ್ತು. ಅಂದು ಈ ಪಾಪಕೃತ್ಯ ಸಾಮಾನ್ಯ ವಾಗಿತ್ತು. ಆ ಪಾಪ ಕೃತ್ಯವು ತೌಹೀದಿಗೆ ಮಾತ್ರವಲ್ಲ ಮನುಷ್ಯತ್ವಕ್ಕೂ ವಿರುದ್ಧ ವಾಗಿತ್ತು. ಲೂತ್(ಅ) ಸಲಿಂಗರತಿ ಯಲ್ಲಿ ಶಿಕ್್ರ ಮತ್ತು ತೌಹೀದ್ ಇದೆಯೇ ಎಂದು ಅಲ್ಲಾಹನನ್ನು ಪ್ರಶ್ನಿ ಸಿಲ್ಲ. ಕಾರಣ ಶಿಕ್್ರ, ತೌಹೀದ್ ಆರಾ ಧನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಇಂತಹ ಪಾಪ ಕೃತ್ಯಗಳಿಂದ ಮುಕ್ತಿ ಹೊಂದಿದರೆ ಮಾತ್ರ ಅಲ್ಲಾಹನನ್ನು ಆರಾಧಿಸಲು ಸಾಧ್ಯ ಎಂದು ಲೂತ್(ಅ) ತಿಳಿದಿದ್ದರು. ಆದ್ದರಿಂದ ಅವರು ಈ ಮಹಾ ಕೆಡುಕಿನಿಂದ ಜನರನ್ನು ವಿವೋಚನೆಗೊಳಿಸಲು ಮುಂದಾದರು. (7:80 ಮತ್ತು 84)
ಪ್ರವಾದಿ ಹೂದ್(ಅ), ಸ್ವಾಲಿಹ್(ಅ), ಶುಐಬ್(ಅ) ಇವರೆ ಲ್ಲರೂ ಪ್ರಥಮವಾಗಿ ಏಕದೇವತ್ವದೆಡೆಗೆ ಕರೆ ನೀಡಿದ್ದರು. ಅಲ್ಲಾಹನನ್ನು ಭಯ ಪಟ್ಟು ಅವನ ಆಜೆÕಗಳನ್ನೂ ಆದೇಶ ಗಳನ್ನೂ ಪಾಲಿಸಿ, ಜೀವಿಸಲು ಹೇಳಿ ದರು. ಪ್ರಥಮ ಆದ್ಯತೆ ಆರಾಧನೆಯಲ್ಲಿ ರುವ ಶಿಕ್್ರಗೆ ಆಗಿತ್ತು. ಆದರೆ ಅದೇ ಪ್ರವಾದಿಗಳು, ಬಂಡೆಕೊರೆದು ಮನೆ ಗಳನ್ನು ನಿಮ್ರಿಸುವವರ ವಿರುದ್ಧ, ವ್ಯಾಪಾರದಲ್ಲಿ ವಂಚನೆ ಮಾಡುವವರ ವಿರುದ್ಧ ಧ್ವನಿ ಎತ್ತಿದರು. ಇವುಗಳು ಜನರ ಸಾಮಾಜಿಕ ಸಮಸ್ಯೆಗಳಾಗಿದ್ದವು. ಹಾಗಿರುವಾಗ ಯಾಕೆ ಅವರು ಆರಾಧನೆ ಯಲ್ಲಿನ ಶಿರ್ಕ್ ಗೆ ಪ್ರಥಮ ಆದ್ಯತೆ ನೀಡಲಿಲ್ಲ?
ಜೀವನವನ್ನು ಶುದ್ಧೀಕರಿಸುವ ಒಂದು ಉತ್ತಮ ಆದಶ್ರವನ್ನು ತಂದ ಪ್ರವಾದಿ ಮುಹಮ್ಮದ್ರು(ಸ) ಸಮಾ ಜದ ಎಲ್ಲಾ ಕೆಡುಕುಗಳ ವಿರುದ್ಧವೂ ಧ್ವನಿ ಎತ್ತಿದರು. ಜನಸೇವೆಯು ಪ್ರವಾದಿ ಯವರ(ಸ) ಸಂದೇಶ ಪ್ರಚಾರದ ಒಂದು ಭಾಗವಾಗಿತ್ತು. ಜನರ ಸಮಸ್ಯೆ ಗಳನ್ನು ಪರಿಹರಿಸುವುದನ್ನು ಆರಾಧ ನೆಯ ಭಾಗವಾಗಿ ಅವರು ಪರಿಗಣಿಸಿ ದ್ದರು. ಕಅಬಾದಲ್ಲಿ 360 ವಿಗ್ರಹಗಳಿರು ವಾಗ ನಾಡಿನಲ್ಲಿ ನಡೆಯುತ್ತಿರುವ ವ್ಯಾಪಾರ ವಂಚನೆಯ ವಿರುದ್ಧ (83: 1 ಮತ್ತು 3), ಸಮಾಜವು ಶಿಕ್್ರನಿಂದ ಮುಕ್ತವಾಗುವುದಕ್ಕಿಂತ ವೊದಲೇ ಹೂಳಲ್ಪಡುವ ಹೆಣ್ಣು ಮಕ್ಕಳ ಪರವಾಗಿ (81:19) ಧ್ವನಿ ಎತ್ತಿದ್ದು ಈ ಕಾರಣ ದಿಂದಾಗಿತ್ತು.
ಕೇವಲ ಆರಾಧನೆಯಲ್ಲಿ ನಡೆಯುತ್ತಿರುವ ಶಿರ್ಕ್ ಮಾತ್ರ ಮಹಾ ಪಾಪವಾಗಿರುತ್ತಿದ್ದರೆ ಪ್ರವಾದಿಗಳು ಜನರ ಇತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಜನಸೇವೆಯು ಆರಾಧನೆಯ ಭಾಗ ವಾಗಿದ್ದರಿಂದ ಅವರು ಅದಕ್ಕೆ ಮುಂದಾದರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವರಾದರು. ಈ ಎಲ್ಲಾ ಪುರಾವೆಗಳೂ ಇತಿಹಾಸಗಳೂ ನಮ್ಮ ಕಣ್ಣ ಮುಂದಿರು ವಾಗ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮಸೀದಿಯಲ್ಲೇ ಕಾಲ ಕಳೆಯುವುದರ ಅಥ್ರವಾದರೂ ಏನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ